ಕನ್ನಡದ ಮನಸ್ಸುಗಳು ಶಿಕ್ಷಣದ ಬಗ್ಗೆ ಹೇಗೆ ಯೋಚಿಸಿವೆ

ಪತ್ರಿಕೆಯೊಂದಕ್ಕೆ ಬರೆದ ಅಂಕಣದ 33 ಲೇಖನಗಳ ಸಂಕಲನ ಇದು. ವಿದ್ಯಾರ್ಥಿ ಅಂಕಣದ ಇಲ್ಲಿನ ಬರಹಗಳು ಸಹಜವಾಗಿ ಶಿಕ್ಷಣ ತಜ್ಞರ, ಸಾಹಿತಿಗಳ, ಅನುಭಾವಿಗಳ ಕುರಿತಾಗಿವೆ. ಪಾಶ್ಚಾತ್ಯ ಚಿಂತಕರ ಜತೆಗೆ ಭಾರತೀಯರು, ಜತೆಗೆ ಕನ್ನಡದ ಮನಸ್ಸುಗಳು ಶಿಕ್ಷಣದ ಬಗ್ಗೆ ಹೇಗೆ ಯೋಚಿಸಿವೆ ಎಂಬುದರ ದಾಖಲೆಯೂ ಇದಾಗಿದೆ.
ಪಿಯಾಜೆ, ಝಾಕಿರ್ ಹುಸೇನ್, ಅಲ್ಲಮ, ಜಿಡ್ಡು, ಬ್ರೂನರ್, ಬೀಚಿ, ಅರವಿಂದ – ಹೀಗೆ ಇವರ ಆಯ್ಕೆ ಕನ್ನಡದಿಂದ ವಿಶ್ವದ ನಾನಾ ಭಾಷೆಗಳ ಚಿಂತಕರವರೆಗೆ ಹರಿದಾಡುತ್ತದೆ. ಅಂಕಣವಾದ್ದರಿಂದ ವಿಸ್ತೃತ ಚಚರ್ೆ, ಬರಹಗಳಿಗೆ ಬದಲಾಗಿ ಪದಗಳ [...]

ಬೆಟ್ಟಕ್ಕೆ ಮೆಟ್ಟಿಲಾದ ಅಂತ್ಯವಿರದ ಏಣಿಯಲ್ಲಿ ಹೆಜ್ಜೆಗಳು ವಿರಮಿಸುವುದಿಲ್ಲ…

ಗಾಳಿಪಟ ವಿನ್ಯಾಸಕಾರನಾಗಿ, ಚಾರಣಿಗನಾಗಿ ಸದಾ ನೆಲದಿಂದ ಮೇಲ ಮೇಲಕ್ಕೆ ಹಾರುವ ಸಾಹಸಿ ಮನಸ್ಸಿನ ದಿನೇಶ್ ಹೊಳ್ಳರ ಇಲ್ಲಿ ಕಥೆಗಳು ನೆಲದ ಮೇಲಿನ ಪ್ರೀತಿಯಿಂದ ಹೊರಹೊಮ್ಮಿವೆ. ಕಥೆ, ಮಿನಿಗಥೆ, ಹನಿಗಥೆ ಸೇರಿದಂತೆ 8 ಕಥೆಗಳ ಈ ಸಂಕಲನ ತನ್ನ ವೈವಿಧ್ಯತೆಯಿಂದಾಗಿ ಗಮನ ಸೆಳೆಯುತ್ತದೆ. ಎಲ್ಲ ಕಥೆಗಳು ಈಗಾಗಲೇ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಸಂಕಲನದ ಮೊದಲ ಕಥೆ `ಹುಲಿಬಲಿ‘ಗೆ ಸಿದ್ದೇಶ್ ಎಂಬ ಬಾಲಕ ಪ್ರೇರಣೆ. ಅವನ ಅಗಾಧ ಪರಿಸರ ಜ್ಞಾನ, ಪ್ಯಾಟಿ ಧಣಿಗಳು ಬಂದು ವನ್ಯಜೀವಿಗಳನ್ನು ಬೇಟೆಯಾಡುವುದರ ಬಗ್ಗೆ ಅವನಿಗಿರುವ ಕೋಪಕ್ಕೆ [...]

ಮಕ್ಕಳ ಪೋಷಣೆಗೆ ಪೂರಕವಾದ ಲೇಖನಗಳು

ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಲಾಲನೆ ಪಾಲನೆಯ ಜವಾಬ್ದಾರಿಯನ್ನು ಆ ಮನೆಯಲ್ಲಿರುವ ಇತರ ಸದಸ್ಯರು, ಅಜ್ಜ-ಅಜ್ಜಿಯರು ವಹಿಸುತ್ತಿದ್ದರು. ಆದರೆ ವಿದ್ಯಾವಂತ ವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಪೋಷಣೆಯೇ ದೊಡ್ಡ ಸಮಸ್ಯೆಯಾಗಿದೆ. ಇದೊಂದು ಅನಿವಾರ್ಯ ಸ್ಥಿತಿ. ಹಾಗಾದರೆ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿ, ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವುದು ಹೇಗೆ? ಈ ಕುರಿತು ಶಿಕ್ಷಣ, ಮನಶ್ಯಾಸ್ತ್ರ, ವೈದ್ಯಕೀಯ ಕ್ಷೇತ್ರಗಳ ತಜ್ಞರು ಅಲ್ಲಲ್ಲಿ ಲೇಖನಗಳನ್ನು ಬರೆದೇ ಇದ್ದಾರೆ. ಮಕ್ಕಳ ಪೋಷಣೆಗೆ ಪೂರಕವಾದ ಇಂತಹ ಹಲವು ಉಪಯುಕ್ತ ಲೇಖನಗಳನ್ನು ಹನುಮಂತಪ್ಪ ಒಂದೆಡೆ ಇಲ್ಲಿ ಕಲೆಹಾಕಿದ್ದಾರೆ. [...]

ವಾತಾವರಣದ ತುಂಬ ಮಧುರತೆ ತುಂಬಿದೆ; ಬಹುಶಃ ನೀನೆಲ್ಲೋ ಮಾತನಾಡುತ್ತಿರಬಹುದು

ಈ ಪುಟ್ಟ ಮೂರು ಕವಿತಾ ಸಂಕಲನಗಳನ್ನು ಅಂದವಾಗಿ ಮುದ್ರಿಸಲಾಗಿದೆ. `ನೀರಜ‘ ಶಿಶು ಪದ್ಯಗಳ ವಸ್ತು ನಿತ್ಯದ ಸಹಜ ಸಂಗತಿಗಳು. ಮಗುವಿಗೆ ಕಥೆಯನ್ನು ಸರಳವಾಗಿ ಹೇಳುವಂತೆ ಇಲ್ಲಿ ಅವನ್ನು ಪುಟ್ಟ ಕವಿತೆ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ನೀರಜ ನೀನು ಬಾಯ್ದೆರೆದೆ/ಅಲ್ಲಿ ಬ್ರಹ್ಮಾಂಡವಿರಲಿಲ್ಲ / ಮಣ್ಣಿತ್ತು, ಕಲ್ಲಿತ್ತು, ನೀರಿತ್ತು, ಕಾಳಿತ್ತು/ – ಇಂತಹ ಚಿಕ್ಕ ಚಿಕ್ಕ ರೂಪಕಗಳು ರೇಖಾ ಚಿತ್ರಗಳೊಂದಿಗೆ ಮಕ್ಕಳ ಗಮನವನ್ನು ಥಟ್ಟನೆ ಸೆಳೆಯುವಂತಿವೆ. ಕವಿತೆಗಳನ್ನು ಮತ್ತಷ್ಟು ಧ್ವನಿ ಪೂರ್ಣವಾಗಿಸಿರುವುದು ಇಲ್ಲಿನ ಶಿವ ಹೂಗಾರರ ರೇಖಾ ಚಿತ್ರಗಳು. ವಾತಾವರಣದ ತುಂಬ [...]

ಸರಳ ಭಾಷೆ, ಜನ ಸಮುದಾಯದ ಆಡು ಭಾಷೆಯ ನುಡಿಗಟ್ಟು ಹದವಾಗಿ ಮೇಳೈಸಿದೆ

ತಮ್ಮ ಕಥೆಗಾರನ ಸೃಜನಶೀಲತೆಯನ್ನು ಮೂರು ದಶಕಗಳ ಕಾಲ `ಪ್ರಜಾವಾಣಿ‘ಗೆ ಧಾರೆ ಎರೆದ ಲಕ್ಷಣ ಕೊಡಸೆ ಅವರು ಪತ್ರಿಕಾ ವೃತ್ತಿಯ ಕೊನೆಯ ದಿನಗಳಲ್ಲಿ ಪ್ರಥಮ ಕಾದಂಬರಿಯನ್ನು ಹೊರತಂದಿದ್ದಾರೆ. ಮೂಲತಃ ಒಳ್ಳೆಯ ಕಥೆಗಾರರಾದ ಕೊಡಸೆ ಹಿಂದಿನಿಂದಲೂ ಕಥೆ ಬರೆಯುತ್ತಿದ್ದರು. ಆದರೆ ಅವರ ಪ್ರಥಮ ಕಥಾ ಸಂಕಲನ ಹೊರಬಂದದ್ದೂ ಇತ್ತೀಚೆಗೆ. ಬಸ್ಸಿನಲ್ಲಿ ಪಯಣಿಸುವ ಕರೇನಾಯ್ಕನ ನೆನಪುಗಳ ಮೂಲಕ ಒಂದು ಕಾಲಘಟ್ಟದ ಸಮುದಾಯದ ಬದುಕನ್ನು ಅದರೆಲ್ಲಾ ಸೂಕ್ಷ್ಮಗಳೊಂದಿಗೆ `ಪಯಣ‘ ಕಾದಂಬರಿಯಲ್ಲಿ ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತಾರೆ. ಪತ್ರಕರ್ತನ ಸರಳ ಭಾಷೆ, ಕಾದಂಬರಿಕಾರ ಬಳಸುವ ಜನ [...]

ಮೋಸ, ವಂಚನೆಯನ್ನು ಪ್ರೀತಿ, ಸ್ನೇಹದಿಂದ ಗೆಲ್ಲುವ ಆಶಯ ಮಾನವೀಯವಾದುದು

ಪೋಲೀಸರಾಗಿರುವ ಗಂಗಾಧರಯ್ಯ ಜಾಲಿಬೆಂಚಿ ರಚಿಸಿರುವ 13 ಕಥೆಗಳ ಸಂಕಲನ ಇದು. ಕೆಲವು ಮಿನಿಕಥೆಗಳಾದರೆ ಮತ್ತೆ ಕೆಲವು ನೀಳ್ಗತೆಗಳು. ಪೋಲೀಸ್ ಇಲಾಖೆಯಲ್ಲಿರುವ ಕಥೆಗಾರರಿಗೆ ವಸ್ತುವಿಗೆ ಕೊರತೆಯಿಲ್ಲ. ಅದೇ ದಾವಂತದಲ್ಲಿ ಕಥೆಗಳನ್ನೂ ರಚಿಸಿದ್ದಾರೆ. ಮೋಸ, ವಂಚನೆಯನ್ನು ಪ್ರೀತಿ, ಸ್ನೇಹದಿಂದ ಗೆಲ್ಲುವ ಇಲ್ಲಿನ ಕಥೆಗಳ ಆಶಯ ಮಾನವೀಯವಾದುದು. ಆದರ್ಶವಾದಿ ನೆಲೆಯಲ್ಲಿ ಇಲ್ಲಿ ಕಥೆಗಳು ಆಕೃತಿ ಪಡೆದಿವೆ. ನಿರಾಳವಾದ ಕಥನ ಕ್ರಮ ಓದಿಸಿಕೊಂಡು ಹೋಗುತ್ತವೆ.
ಕಥೆಗಳ ಜೀವಾಳವೇ ಅನುಭವ. ಅದಿಲ್ಲಿ ಹೇರಳವಾಗಿದೆ, ವೈವಿಧ್ಯಮಯವೂ ಆಗಿದೆ. ಆದರೆ ಕಥೆ ಕಟ್ಟುವ ಕ್ರಮದಲ್ಲಿ ಮತ್ತಷ್ಟು ಕಲಾತ್ಮಕ ಕೌಶಲ್ಯ [...]

ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ

ಕೋಟ್ಯಂತರ ಬೆಲೆ ಬಾಳುವ ಕಬ್ಬಿಣದ ಅದಿರು, ದಟ್ಟವಾದ ಕಾಡು, ಫಲವತ್ತಾದ ಜಮೀನನ್ನು ಹೊಂದಿದ ಸೊಂಡೂರು ಪ್ರದೇಶದ ಭೂಹೋರಾಟ ವಿಶಿಷ್ಟವಾದುದು. ಯಾಕೆಂದರೆ ಇದು ಒಬ್ಬ ಭೂಮಾಲಿಕನ ವಿರುದ್ಧ ಮಾತ್ರವಲ್ಲ. ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ ಆಗಿತ್ತು. ಸ್ವತಂತ್ರ ಪ್ರಾಂತ್ಯವಾಗಿದ್ದ ಸೊಂಡೂರು ಬ್ರಿಟೀಷರು ಭಾರತ ಬಿಟ್ಟುಕೊಟ್ಟ ಬಳಿಕ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ ಪ್ರಾಂತ್ಯವೂ ಹೌದು. ಸೊಂಡೂರು ರಾಜಮನೆತನ ಕಾಂಗ್ರೇಸ್ ಚಳವಳಿಯನ್ನು ನಿಷೇಧಿಸಿತ್ತು. ಮುಂದೆ ಇದೇ ವಂಶದವರು ಅರಸು ಮಂತ್ರಿ ಮಂಡಲದಲ್ಲಿ ದೀರ್ಘಕಾಲ ಅರ್ಥ [...]

ಕವಿತೆಗಳಿಗೆ ಶೀರ್ಷಿಕೆಯ ಬದಲಾಗಿ ರೇಖಾಚಿತ್ರಗಳು

ವಿಶಿಷ್ಟ ಬಗೆಯ 66 ಚಿಕ್ಕ ಪದ್ಯಗಳ ಸಂಕಲನ ಇದು. ಆದರೆ ಇವು ಹನಿಗವಿತೆಗಳಲ್ಲ. ಗಜಲ್ ನಂತಹ ಪದ್ಯಗಳು ಎಂದು ಕವಿಯೇ ಹೇಳಿಕೊಂಡಿದ್ದಾರೆ. ಹನಿಗವಿತೆಗಳಿಂದ ಆರಂಭವಾಗಿ ಗಜಲ್ ನತ್ತ ಬೆಳೆಯುವ ಪದ್ಯಗಳು ಎಂಬ ಕವಿಯ ನಿವೇದನೆಯನ್ನು ಬೆನ್ನುಡಿ ಬರೆದಿರುವ ಮೀರಾ ಸಾಬಿಹಳ್ಳಿ ಶಿವಣ್ಣ ಸಮರ್ಥಿಸಿದ್ದಾರೆ. ಆದ್ದರಿಂದಲೇ ಇವು ಕನ್ನಡ ಕಾವ್ಯ ಪ್ರಪಂಚಕ್ಕೆ ಅಪರೂಪ ಎನಿಸುವ ಹನಿಗವಿತೆ-ಗಜಲ್ ಗಳ ಹದವರಿತ ಮಿಶ್ರಣ.
ನನ್ನ ಕವಿತೆಯ ಸಾಲುಗಳ ಮೇಲೆ ಕೆಂಡ ಸುರಿಸಿದ ಸೂರ್ಯ/ಆಕೆಯ ಕೆನ್ನೆ ಸವರಿ ಗುಲ್ ಮೊಹರ್ ಅರಳಿಸಿದ/ ಆಕೆಯ ದಾವಣಿ [...]

ತೀರಾ ನಿಕೃಷ್ಟಕ್ಕೊಳಗಾದ ಸ್ಥಿತಿ : ಮಾನವೀಯ ನೆಲೆಯಲ್ಲಿ

ಅತ್ಯುತ್ತಮ ಮಾನವೀಯ ಮೌಲ್ಯ ವರದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ 1973 ರಿಂದ ಪ್ರತಿ ವರ್ಷ ಕೊಡುತ್ತ ಬಂದಿರುವ ಪಟೇಲ್ ಭೈರಹನುಮಯ್ಯ ಪ್ರಶಸ್ತಿ ಪುರಸ್ಕೃತರ 39 ಲೇಖನಗಳ ಸಂಕಲನ ಇದು. ಇದರಲ್ಲಿ 5 ಇಂಗ್ಲೀಷ್ ಬರಹಗಳೂ ಇವೆ. ಬರದಿಂದ ಬೆಂದು ಬಂದವರ ಬವಣೆ, ಬೆಂಗಳೂರಿನಲ್ಲಿ 10,000 ವೇಶ್ಯೆಯರು (ಈಗ ಈ ಸಂಖ್ಯೆ ಲಕ್ಷ ಮೀರಿರಬೇಕು) ಭೂಮಿ ನಡುಗಿಸುವ ನರಕ, ಮಧ್ಯಮವರ್ಗದ ಮಹಿಳೆ, ಮಲ ಹೊರುವ ಪದ್ದತಿ ಇನ್ನೂ ಜೀವಂತ – ಮುಂತಾದ ಲೇಖನಗಳು ಕರುಳು ಹಿಂಡುವಂತಿದೆ. ತೀರಾ [...]

ಸ್ವತಃ ದೇವರ ಮೇಲೆ ನಂಬಿಕೆ ಇದೆಯಂತೆ!

`ದೇವರೆಂಬ ಸುಳ್ಳು‘ ಎಂದೇ ತಮ್ಮ ಗ್ರಂಥಕ್ಕೆ ಶೀರ್ಷಿಕೆ ಕೊಟ್ಟಿರುವ ಸೋಮಯಾಜಿ ಅವರಿಗೆ ಸ್ವತಃ ದೇವರ ಮೇಲೆ ನಂಬಿಕೆ ಇದೆಯಂತೆ! ಆದರೆ ಅವರ ದೇವರು ಬೇರೆಲ್ಲರಿಗಿಂತ ಭಿನ್ನ. ಅದು ಅವರೇ ಸೃಷ್ಟಿಸಿಕೊಂಡ ದೇವರು. ಒಂದು ಆದರ್ಶ ಹಾಗೂ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಬಾಳಪರ್ಯಂತ ಹೆಣಗಬೇಕು. ದೇಹವನ್ನೇ ದೇಗುಲವಾಗಿಸಿಕೊಂಡು ಪ್ರೀತಿ, ಸಹನೆ, ಸೌಹಾರ್ದದಿಂದ ನಮ್ಮ ಗುರಿ ಸಾಧನೆಗೆ ಶ್ರಮಿಸಿದರೆ ಆಗ ನಾವೇ ದೇವರಾಗುತ್ತೇವೆ. `ಅಹಂ ಬ್ರಹ್ಮಾಸ್ಮಿ‘, `ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ…‘ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ದೇವರ [...]