ಡಾ| ವಿನಯಾ ಅವರು ಈಗಾಗಲೇ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ `ಊರ ಒಳಗಣ ಬಯಲು‘ ಎಂಬ ಅವರ ಈ ಮೊದಲ ಕಥಾ ಸಂಕಲನದಲ್ಲಿ ಹನ್ನೊಂದು ಕತೆಗಳಿವೆ. ಈ ಕತೆಗಳೆಲ್ಲವೂ ಸ್ವಾರಸ್ಯಕರವಾಗಿ ಓದಿಸಿಕೊಳ್ಳುವಂತಿದೆ. ಇಲ್ಲಿನ ಹೆಚ್ಚಿನ ಕತೆಗಳು ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಾಗೂ ಪಟ್ಟಣಗಳ ಜೀವನದ ಗತಕಾಲದ ನೆನಪುಗಳನ್ನು ಆಧರಿಸಿ ನಿರೂಪಿತವಾಗಿರುವ ಈ ಕತೆಗಳಲ್ಲಿ ಪಾತ್ರಗಳ ವ್ಯಕ್ತಿತ್ವ, ಅವುಗಳ ಬದುಕಿನ ಸನ್ನಿವೇಶಗಳನ್ನು ಹಾಗೂ ಅನುಭವಗಳನ್ನು ದಟ್ಟವಾಗಿ ವಿವರಗಳ ಮೂಲಕ ಓದುಗರ ಕಣ್ಣ ಮುಂದೆ ಚಿತ್ರಗಳನ್ನಾಗಿ ಮೂಡಿಸಲಾಗಿದೆ. [...]
Filed under: ಕಥಾ ಸಂಕಲನ | Tagged: ಊರ ಒಳಗಣ ಬಯಲು, ಗಿರೀಶ್ ವಿ. ವಾಘ್, ಛಂದ ಪುಸ್ತಕ, ಡಾ| ವಿನಯಾ | Leave a Comment »



