ವಿದ್ಯಾರ್ಥಿಗಳಿಗೆ ಉಪಯುಕ್ತ ಆಕರ ಗ್ರಂಥ

ಕನ್ನಡನಾಡು ಪ್ರಾರಂಭದಿಂದಲೇ ಸಂಸ್ಕೃತಿ ಮತ್ತು ರಾಜಕೀಯದ ಹೆಜ್ಜೆ ಮೂಡಿಸಿ ಬೆಳೆದುಬಂದಿದೆ. ಆ ಚರಿತ್ರೆಯನ್ನು ಕುರಿತ ಆಹ್ವಾನಿತ ಬರಹಗಳ ಸಂಪಾದಿತ ಕೃತಿ ಇದು. ವಿವಿಧ ಲೇಖಕರು ತಮ್ಮ ಅಪಾರವಾದ ಓದಿನ ಫಲವಾಗಿ ಕನ್ನಡದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವಂತೆ ವಿಷಯ ನಿರೂಪಣೆ ಮಾಡಿದ್ದಾರೆ. ಹೆಚ್ಚಿನ ಲೇಖಕರೆಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗ ಮತ್ತು ಚರಿತ್ರೆಯ ವಿಭಾಗಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದು ಈ ಬೃಹತ್ ಕೃತಿಯನ್ನು ರೂಪಿಸಲು ನೆರವಾಗಿದ್ದಾರೆ. ಹಾಗಾಗಿ ಈ ಲೇಖನಗಳಿಗೆ ಹೆಚ್ಚಿನ ಮೌಲ್ಯವಿದೆ. ಕನ್ನಡನಾಡಿನ ನೆಲ-ಜಲ ಆಡಳಿತಕ್ಕೆ ಇಷ್ಟೊಂದು ವಿಶಾಲ ವ್ಯಾಪ್ತಿ ಇರುವುದು [...]

ಇಂದು ವಿಶ್ವ ಭೂಮಿ ದಿನಕ್ಕೆ 40 ತುಂಬಿತು

ಇಂದು ವಿಶ್ವ ಭೂಮಿ ದಿನಕ್ಕೆ 40 ತುಂಬಿತು. ವಿಶ್ವ ಭೂಮಿ ದಿನ ಅಂದರೆ ಭೂಮಿತಾಯಿಯ ಬಗ್ಗೆ ಪ್ರೀತಿ ವಿಶ್ವಾಸ ಗೌರವವನ್ನು ತೋರಿಸಿ ಆಕೆಯ ಆರೈಕೆ ಮಾಡುವ ಮತ್ತು ನಮ್ಮ ಮಕ್ಕಳು ಇದೇ ದಾರಿಯಲ್ಲಿ ಮುನ್ನಡೆಯುವಂತೆ ಮಾಡುವ ಕರ್ತವ್ಯವನ್ನು ನೆನಪಿಸುವ ದಿನ.  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ. www.earthday.org/earthday2010 , http://www.earthday.org/earthday2010 , http://www.earthday.org/pledges/make-children-habituate-planting-trees-will-save-our-earth-educate-people-use-solar-power ಇತ್ತೀಚೆಗೆ ಭೂಮಿ ತಾಯಿಗೆ ಜ್ವರ ಬರುತ್ತಿದೆ. ಯಾಕೆ ಬರುತ್ತಿರಬಹುದು. ಭೂಮಿ ತಾಯಿಯ ಜ್ವರವನ್ನು ಇಳಿಸಲು ನಾವು ಏನು ಮಾಡಬಹುದು. ಭೂಮಿ ಮತ್ತು [...]

ಪ್ರಶಸ್ತಿಗಾಗಿ ಕಂಗ್ರಾಜುಲೇಶನ್ಸ್ !!!

ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಲಲಿತ ಪ್ರಬಂಧ ವಿಭಾಗದಲ್ಲಿ ಪುಸ್ತಕ ಪ್ರಶಸ್ತಿ ಪಡೆದ ಕೃತಿ. ಒಳ್ಳೆಯ ಕತೆ ಬರೆಯುವವರೆಲ್ಲರೂ ಒಳ್ಳೆಯ ಪ್ರಬಂಧಗಳನ್ನು ಬರೆಯುತ್ತಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. “ಹೊರಗೂ ಮಳೆ ಒಳಗೂ ಮಳೆ” ಎಂಬ ಅತ್ಯುತ್ತಮ ಕಥಾಸಂಕಲನ ಕೊಟ್ಟ ನಮ್ಮ ನಡುವಿನ ಪ್ರತಿಭಾಶಾಲಿ ಕತೆಗಾರ ಚ.ಹ. ರಘುನಾಥ ಒಳ್ಳೆಯ ಪ್ರಬಂಧಗಳನ್ನು ಬರೆದಿದ್ದಾರೆನ್ನುವುದಕ್ಕೆ ಈ ಪ್ರಬಂಧಗಳು ಸಾಕ್ಷಿ. ಇಲ್ಲಿಯ `ರಾಗಿಮುದ್ದೆ’, `ಅಧರಂ ಮಧುರಂ’, `ಮಳೆಯ ಮೂರು ಹನಿ’, `ಜಾತ್ರೆಯೆಂಬ ಕಾಮನಬಿಲ್ಲು’ ಇತ್ಯಾದಿ ಪ್ರಬಂಧಗಳು ತಮ್ಮ ಕ್ಲಾಸಿಕ್ ಲಕ್ಷಣಗಳಿಂದ ಬೆರಗುಗೊಳಿಸುತ್ತವೆ. [...]

ಐವರು ಸಾಹಿತಿಗಳಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ಡಾ.ಶಶಿಕಲಾ ಮೋಳ್ದಿ, ಡಾ.ಗುರುಮೂರ್ತಿ ಪೆಂಡಕೂರು, ಪ್ರೊ.ಕಿ.ರಂ.ನಾಗರಾಜ್, ಡಾ.ಪಿ.ಕೆ.ರಾಜಶೇಖರ್ ಮತ್ತು ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪುಸ್ತಕ ಪ್ರಶಸ್ತಿ ಪುರಸ್ಕೃತರ ವಿವರ: ಕಾವ್ಯ- ಕರ್ಣರಾಗ (ಡಾ.ಎಲ್.ಹನುಮಂತಯ್ಯ), ಕಾದಂಬರಿ- ಉಲ್ಲಂಘನೆ (ಡಾ.ನಾ.ಮೊಗಸಾಲೆ), ಸಣ್ಣಕತೆ- ಊರ ಒಳಗಣ ಬಯಲು (ಡಾ.ವಿನಯಾ) ಇವನು ತಂದ ಮೀನಿಗೆ ನಾ ಮಸಾಲೆ ಮಾಡುವುದು ಎನ್ನುವಂತೆ ಸಲೀಸಾಗಿ ನಾಟಕ- ಅಲ್ಲಮನ ಬಯಲಾಟ (ಲಕ್ಷ್ಮೀಪತಿ [...]

ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ! ಜಗವನೆನಗೆ ಬಿಟ್ಟಿರುವೆ, ಏಕೆ ಕಾಡಲಿ!

ದಿನ ನಿತ್ಯದ ಕಿಟಿಕಿಟಿ ಶ್ರಮದ ನಂತರವೂ ಜೀವನ ಪ್ರೀತಿಯನ್ನು ಮೈ ಮನದಲ್ಲಿ ತುಂಬಿಕೊಳಬಯಸುವವರಿಗೆ ತಮ್ಮ ಕವನಗಳ ಮೂಲಕ ಎಲ್ಲವನ್ನೂ ಕೊಟ್ಟ ಕೆ.ಎಸ್.ನ. ಅವರನ್ನು ಮತ್ತೆ ಏನನ್ನೂ ಬೇಡಬೇಕಾಗಿಲ್ಲ. ನನ್ನವಳು ನನ್ನೆದೆಯ ಹೊನ್ನಾಡನಾಳುವಳು ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ! ಶಾನುಭೋಗರ ಮಗಳು ರತ್ನದಂತಹ ಹುಡುಗಿ; ಗಂಡು ಸಿಕ್ಕುವುದೊಂದು ಕಷ್ಟವಲ್ಲ; ಸರಿಯಾಗಿ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೇನಂತೆ?- ನಷ್ಟವಿಲ್ಲ ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚೆಂದ ನಿನಗಾವುದೆಂದು -   ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ [...]

Follow

Get every new post delivered to your Inbox.