Posted on November 28, 2009 by pusthakapreeethi
ಹಿರಿಯ ಕವಿ ಜಿ. ಎಸ್. ಶಿವರುದ್ರಪ್ಪ ತಮ್ಮ ಆತ್ಮಕಥೆಯನ್ನು ಪ್ರಕಟಿಸಿದ್ದಾರೆ. ಬಹು ಹಿಂದೆಯೇ ಪ್ರಕಟವಾದ ಈ ಪುಸ್ತಕ ಈಗ ಮೂರನೆಯ ಮುದ್ರಣವನ್ನು ಕಂಡಿದೆ. ಇದನ್ನು ಜಿ. ಎಸ್. ಎಸ್. `ಒಂದು ಅಸಮಗ್ರ ಆತ್ಮಕಥನ’ ಎಂದು ಕರೆದುಕೊಂಡಿದ್ದಾರೆ. ಏಕೆಂದರೆ ಕವಿಗಳೇ ಹೇಳಿಕೊಂಡಂತೆ, `ನನ್ನನ್ನು ಕುರಿತು ನಾನು ನಿಸ್ಸಂಕೋಚವಾಗಿ ಹೇಳಿಕೊಳ್ಳಲಾಗದ ಅನೇಕ ನಿರ್ಬಂಧಗಳಲ್ಲಿ – ಅವು ವೈಯಕ್ತಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಸಾಂಸ್ಕೃತಿಕವಾಗಿರಬಹುದು – ನಾನು ಹಾಗೂ ನನ್ನಂಥವರು ಬದುಕುತ್ತಿದ್ದೇವೆ ಎಂಬ ಕಾರಣದಿಂದ; ಮತ್ತು ಒಬ್ಬ ಸೃಜನಶೀಲ ಲೇಖಕ ವಾಸ್ತವವಾಗಿ ತನ್ನ ಬರಹಗಳಲ್ಲೇ [...]
Filed under: ಆತ್ಮ - ಚರಿತ್ರೆ/ಕಥನ | Tagged: ಚತುರಂಗ, ಜಿ. ಎಸ್. ಶಿವರುದ್ರಪ್ಪ, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಪ್ರಜಾವಾಣಿ | Leave a Comment »
Posted on November 3, 2009 by pusthakapreeethi
ತಮ್ಮ ಹದಿನಾಲ್ಕನೆಯ ವಯಸ್ಸಿಗೇ ಬ್ರಿಟೀಷರ ವಿರುದ್ಧ ಪ್ರತಿಭಟಿಸುವ ಮನೋಭಾವವನ್ನು ಗಟ್ಟಿಗೊಳಿಸಿಕೊಂಡು ಮುಂದಡಿ ಇಟ್ಟ ಮೇಜರ್ ಜೈಪಾಲ್ ಸಿಂಗ್ ರವರ ನೆನಪುಗಳನ್ನು ಮಂಡಿಸುವ ಪುಸ್ತಕ `ವಿಮೋಚನೆಯ ಸಮರದಲ್ಲಿ’. ಜೈಪಾಲ್ ಸಿಂಗ್ ರವರು ಉತ್ತರ ಪ್ರದೇಶದವರು. ಅಲ್ಲಿಯ ಮುಜಾಪುರ್ ನಗರ ಜಿಲ್ಲೆಯ ಒಂದು ಹಳ್ಳಿಯ ಬಡ ಜಾಟ್ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಜೈಪಾಲ್ ಸಿಂಗ್, ಜಾಟ್ ಜನಾಂಗದ ಹುಮ್ಮಸ್ಸು, ಎದೆಗಾರಿಕೆ, ಆಕ್ರೋಶ, ಮೈಕಟ್ಟನ್ನು ಹಾಗೇ ಸ್ವಾಭಿಮಾನವನ್ನು ಪ್ರತಿಬಿಂಬಿಸುವಂತಿದ್ದರು. ಅವರು ಬೆಳೆಯುತ್ತಾ ಬಂದಂತೆ ಆಗಿನ ದಿನಗಳಲ್ಲಿ ಬ್ರಿಟೀಷರನ್ನು ಬಗ್ಗು ಬಡಿಯಲು [...]
Filed under: ಆತ್ಮ - ಚರಿತ್ರೆ/ಕಥನ | Tagged: ಕ್ರಿಯಾ ಪ್ರಕಾಶನ, ಮೇಜರ್ ಜೈಪಾಲ್ ಸಿಂಗ್ ನೆನಪುಗಳು, ಲಂಕೇಶ್ ಪತ್ರಿಕೆ, ವಿಮೋಚನೆಯ ಸಮರದಲ್ಲಿ, ವಿಶ್ವ ಕುಂದಾಪುರ | Leave a Comment »
Posted on March 3, 2009 by pusthakapreeethi
ಮನಸೂರೆ
ಮನಸೂರೆ ಹೋಯಿತೋ
ಹೋ ಇದ್ದಕ್ಕಿದ್ದಂತೆ
ಈ ಗೀತೆ ಹಾಡಿದುದು
ಹೊಸ ಸಪ್ನ ಬಿದ್ದಂತೆ
ಅಂತೆ, ಇಂತೆ, ಎನ್ನುತ್ತಾ
ಮನಮೀರಿ ನಾನಿಂತೆ.
ಕಳಚಿ ಬಿದ್ದಿತು ಗೆಳೆಯ
ಜಗದ ಸಂತೆಯ ಚಿಂತೆ
ಮಲ್ಲಿಕಾರ್ಜುನ ಮನ್ಸೂರರ ಗಾಯನ ಕೇಳಿ ಬೇಂದ್ರೆ ಬರೆದ ಸಾಲುಗಳಿವು. ಈ ಗಾನಜೀವನದ ಮಹೋತ್ಸವದ ಗಳಿಗೆಗಳನ್ನು ಕುರಿತು ಮನ್ಸೂರರು 1983ರಲ್ಲೇ ಬರೆದಿದ್ದರು. ಆ ಅನುಭವದ ಸವಿಬುತ್ತಿಗಂಟಿಗೆ `ನನ್ನ ರಸಯಾತ್ರೆ‘ ಎಂದು ಹೆಸರಿಟ್ಟಿದ್ದರು. ಅದೀಗ 25 ವರುಷಗಳ ನಂತರ ಮರುಮುದ್ರಣ ಕಾಣುತ್ತಿದೆ.
ಮನ್ಸೂರರನ್ನು ಈ ಕೃತಿ ಬರೆಯುವಂತೆ ಒತ್ತಾಯಿಸಿದವರು ಅನಕೃ. ಆಮೇಲೆ ಪುಲ ದೇಶಪಾಂಡೆ, ರಮೇಶ ನಾಡಕರ್ಣಿ ಮತ್ತು ಬಿಎ ಸನದಿಯವರು ಬೆನ್ನು [...]
Filed under: ಆತ್ಮ - ಚರಿತ್ರೆ/ಕಥನ | Tagged: ಅಭಿನವ, ನನ್ನ ರಸಯಾತ್ರೆ, ಮಲ್ಲಿಕಾರ್ಜುನ ಮನ್ಸೂರ್ | Leave a Comment »
Posted on October 21, 2008 by pusthakapreeethi
ಗುಲಾಮ ಪದ್ಧತಿಯ ವಿರುದ್ಧ ಸೆಣಸಿದ ಕಪ್ಪು ಮಹಿಳೆಯರ ಆತ್ಮಕಥೆಗಳ ಸಂಕಲನವೇ ‘ಕಪ್ಪು ಹಕ್ಕಿಯ ಬೆಳಕಿನ ಹಾಡು‘ ಪುಸ್ತಕ. ಇಲ್ಲಿನ ಆತ್ಮಕಥೆಗಳನ್ನು ಎಂ.ಆರ್. ಕಮಲ ಕನ್ನಡಕ್ಕೆ ಅನುವಾದಿಸಿದ್ದಾರೆ. ಗುಲಾಮಗಿರಿಯ ಇತಿಹಾಸ, ಅಂದಿನ ರಾಜಕೀಯ ಸನ್ನಿವೇಶ, ಗುಲಾಮರ ಆತ್ಮಕಥೆಗಳನ್ನು ಒಳಗೊಂಡಿರುವ ಪುಸ್ತಕವೊಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲಬಾರಿಯಾಗಿದೆ. ಇಲ್ಲಿ ಅನುವಾದಿಸಲಾದ ಎಲ್ಲ ಆತ್ಮಕಥೆಗಳು ಹೆಣ್ಣುಮಕ್ಕಳದು ಅನ್ನುವುದು ಈ ಪುಸ್ತಕದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.
ಕಪ್ಪು ಜನಾಂಗ ಸೃಷ್ಟಿಸಿರುವ ಆತ್ಮಕಥೆಗಳು ಐತಿಹಾಸಿಕ ಮಹತ್ವ ಪಡೆದ ಸಾಹಿತ್ಯ-ಸಮಾಜಶಾಸ್ತ್ರೀಯ-ಸಾಂಸ್ಕೃತಿಕ ಸಂವಾದಿ ದಾಖಲೆಗಳಾಗಿವೆ. ಬಿಡುಗಡೆಗಾಗಿ ಅವರು ನಡೆಸಿದ [...]
Filed under: ಆತ್ಮ - ಚರಿತ್ರೆ/ಕಥನ | Tagged: ಎಂ ಆರ್ ಕಮಲ, ಕಥನ ಪ್ರಕಾಶನ, ಕಪ್ಪು ಜನಾಂಗ, ಕಪ್ಪು ಹಕ್ಕಿಯ ಬೆಳಕಿನ , ಗುಲಾಮ ಪದ್ಧತಿ | Leave a Comment »
Posted on October 8, 2008 by pusthakapreeethi
ಶೀರ್ಷಿಕೆ: ರಸೀದಿ ತಿಕೀಟು ಲೇಖಕರು: ಅಮೃತಾ ಪ್ರೀತಂ ಅನು:ಹಸನ್ ನಯೀಂ ಸುರಕೋಡ
ಪ್ರಕಾಶಕರು : ಲೋಹಿಯಾ ಪ್ರಕಾಶನ ಪುಟಗಳು : 206 ಬೆಲೆ:ರೂ.100/-
Filed under: ಆತ್ಮ - ಚರಿತ್ರೆ/ಕಥನ | Tagged: ಅಮೃತಾ ಪ್ರೀತಂ, ರಸೀದಿ ತಿಕೀಟು, ಲೋಹಿಯಾ ಪ್ರಕಾಶನ, ಹಸನ್ ನಯೀಂ ಸುರಕೋಡ | 1 Comment »
Posted on September 19, 2008 by pusthakapreeethi
ವೃತ್ತಿ ರಂಗಭೂಮಿ ಕಲಾವಿದೆಯಾಗಿರುವ ಅನ್ನಪೂರ್ಣ ಸಾಗರ ಅವರ ಆತ್ಮಚರಿತ್ರೆ ಇದು. ನಮ್ಮಲ್ಲಿ ಹೆಣ್ಣುಮಕ್ಕಳು ಆತ್ಮಕಥೆಯನ್ನು ಮುಕ್ತವಾಗಿ ಬರೆಯಲು ಹಿಂಜರಿಯುವ ಹಾಗೂ ಆತ್ಮಕಥೆಗಳೇ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಅನ್ನಪೂರ್ಣರ ಆತ್ಮಚರಿತ್ರೆ ಕುತೂಹಲಕರವಾಗಿದೆ.
ಬಣ್ಣದ ಬದುಕನ್ನೇ ನಂಬಿ ಬದುಕುವವರ ಜೀವನ ಸಮಾನ್ಯವಾದುದಲ್ಲ. ಇಂಥ ಸಂದರ್ಭದಲ್ಲಿ ಹೆಣ್ಣೊಬ್ಬಳು ಹಾದು ಬಂದ ದಾರಿ ಸರಳರೇಖೆಯಿಂದೇನೂ ಇರುವುದಿಲ್ಲ. ಇಂಥದ್ದರಲ್ಲಿ `ಎಚ್ಚರ ತಂಗಿ ಎಚ್ಚರ‘ ಎಂಬ ನಾಟಕದಿಂದ ಮನೆಮಾತಾದ ಅನ್ನಪೂರ್ಣ ತಮ್ಮ ಬದುಕಿನ ಅನೇಕ ಹೃದಯಮುಟ್ಟುವ ಚಿತ್ರಗಳನ್ನು ಕೊಟ್ಟಿದ್ದಾರೆ. ಇದಕ್ಕೆ ಗವೀಶ ಹಿರೇಮಠರ ಸರಳ ನಿರೂಪಣೆ ಕೂಡಾ [...]
Filed under: ಆತ್ಮ - ಚರಿತ್ರೆ/ಕಥನ | Tagged: ಅನ್ನಪೂರ್ಣ ಸಾಗರ, ಗವೀಶ ಹಿರೇಮಠ, ನನ್ನ ಬದುಕಿನ ಪುಟಗಳಿಂ, ಸಂಗಮೇಶ್ವರ ಮಹಿಳಾ ಮಂಡ | 2 Comments »
Posted on August 6, 2008 by pusthakapreeethi
ಕೆಲವು ದಿನಗಳ ಹಿಂದೆ `CHE‘ coming to India ಅಂತ ಒಂದು ಮೈಲ್ ಬಂದಿತ್ತು. `CHE the Golden Palm nominee at Cannes 2008 that won Del Toro the Best Actor Award ಅನ್ನೋ ತಲೆ ಬರಹ ಇರೋ http://dearcinema.com ನಲ್ಲಿ ಬಂದ ಲೇಖನ ಅದಾಗಿತ್ತು. ಅದನ್ನು ಓದಿದ ನಂತರ `CHE‘ ಬಗ್ಗೆ ಅಂತರ್ಜಾಲ ತಾಣಗಳಲ್ಲಿ ಹುಡುಕುತಿದ್ದಾಗ http://kannada-kathe.blogspot.com ನಲ್ಲಿ 2 ವರ್ಷಗಳ ಹಿಂದೆ ಬರೆದ ಲೇಖನ ಸಿಕ್ಕಿತು. ಓದಿ ಖುಷಿಯಾಯಿತು. ಪುಸ್ತಕದ [...]
Filed under: ಆತ್ಮ - ಚರಿತ್ರೆ/ಕಥನ | Tagged: Back to the Road, The African Dream, The Bolivian Diary of Ernesto Che Guevara | Leave a Comment »
Posted on July 31, 2008 by pusthakapreeethi
ಸ್ವತಂತ್ರ ಭಾರತದ ಚರಿತ್ರೆಯ ಕಪ್ಪು ಚುಕ್ಕೆಯಂತಿರುವ ತುರ್ತು ಪರಿಸ್ಥಿತಿ ಕೊನೆಗೊಂಡು ಇಪ್ಪತೈದು ವರ್ಷಗಳಾದರೂ ಅದರ ಕಹಿನೆನಪುಗಳು ಇನ್ನೂ ಮಾಸಿಲ್ಲ. ಅನೇಕ ಅಮಾಯಕರ ಸಾವುನೋವಿಗೆ ಕಾರಣವಾದ ತುರ್ತು ಪರಿಸ್ಥಿತಿ, ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಅಲ್ಲಾಡಿಸಿದ ಕರಾಳ ಸಂದರ್ಭ. ಆ ಕರಾಳ ದಿನಗಳಲ್ಲಿ ಕೇರಳದ ಅಮಾಯಕ ವಿದ್ಯಾರ್ಥಿಯೊಬ್ಬ ವ್ಯವಸ್ಥೆಯ ಕಬಂಧ ಬಾಹುಗಳಿಗೆ ಬಲಿಯಾದದ್ದು, ಮಗ ನಾಪತ್ತೆಯಾಗಿರುವನೆಂದು ತಿಳಿದು ಅವನನ್ನು ಹುಡುಕಲು ವೃದ್ಧ ತಂದೆಯೊಬ್ಬ ಪಟ್ಟ ಪಡಿಪಾಟಲುಗಳ ಕಥನ `ತುರ್ತು ಪರಿಸ್ಥಿತಿಯ ಕರಾಳ ಮುಖ‘ ಕೃತಿ. ಮಗನನ್ನು ಕಳಕೊಂಡ ತಂದೆ (ಈಚರ್ ವಾರಿಯರ್) [...]
Filed under: ಆತ್ಮ - ಚರಿತ್ರೆ/ಕಥನ | Tagged: ತುರ್ತು ಪರಿಸ್ಥಿತಿ, Emergency | Leave a Comment »
Posted on July 16, 2008 by pusthakapreeethi
ಇದು ಶಿಕ್ಷಕನೊಬ್ಬನ ಪ್ರಥಮ ಎನ್ನಬಹುದಾದ ಆತ್ಮಕಥೆ. ಜನಪ್ರಿಯ ಶಿಕ್ಷಕರು, ಹೋರಾಟಗಾರರೂ ಆದ ಕೊಣಂದೂರು ವೆಂಕಪ್ಪಗೌಡರು ಲೋಹಿಯಾ ಸಮಾಜವಾದಿ ಚಿಂತನೆಯಲ್ಲಿ ಗೋಪಾಲಗೌಡರ ಒಡನಾಟದಲ್ಲಿ ಬೆಳೆದು ಬಂದವರು. ಕುವೆಂಪು ಅವರಿಂದ ಪ್ರಭಾವಿತರಾದವರು.
ವೆಂಕಪ್ಪಗೌಡರು ಬೆಳೆದು ಬಂದ ಪರಿಸರವನ್ನು ಮೊದಲ ಭಾಗ ಹೃದಯಸ್ಪರ್ಶಿಯಾಗಿ ಪರಿಚಯಿಸಿದರೆ, ಎರಡನೇ ಭಾಗ ಅವರಿಗಾದ ಅನ್ಯಾಯದ ವಿರುದ್ಧದ ಹೋರಾಟ ರೋಚಕವಾದ ನಿರೂಪಣೆಯಲ್ಲಿ ಸುಧೀರ್ಘವಾಗಿ ಸಾಗುತ್ತದೆ. ಕುವೆಂಪು ಹೆಸರಿನಲ್ಲಿ ವಿದ್ಯಾಸಂಸ್ಥೆಯೊಂದು ನಡೆಸುವ ಅನ್ಯಾಯ-ಅಕ್ರಮವನ್ನು ಬಯಲಿಗೆಳೆದು ಈ ಕಾರಣಕ್ಕೆ ತಮ್ಮ ಉದ್ಯೋಗ ಕಳೆದುಕೊಂಡು ಸುಪ್ರೀಂ ಕೋರ್ಟ್ ವರೆಗೂ ಹೋರಾಟ ಮಾಡಿ ವಿಫಲರಾದ [...]
Filed under: ಆತ್ಮ - ಚರಿತ್ರೆ/ಕಥನ | Tagged: ಆತ್ಮಕಥೆ, ಲೋಹಿಯಾ, ಶಿಕ್ಷಕ | Leave a Comment »
Posted on July 1, 2008 by pusthakapreeethi
ಐದಾರು ವರ್ಷಗಳ ಕೆಳಗೆ ಲ್ಯಾಟಿನ್ ಅಮೇರಿಕಾದ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಆಗ ಮಾರ್ಕ್ವೆಜ್ ನ ಮನಸ್ಥತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಸಾವನ್ನು ಮುಂದೂಡಲೋ ಅಥವಾ ಸಾವಿನ ಆತಂಕದಿಂದ ಪಾರಾಗಲೋ ಆತ ಆತ್ಮಚರಿತ್ರೆ ಬರೆಯಲಾರಂಭಿಸಿದ. ಎರಡು ವರ್ಷಗಳ ಕೆಳಗೆ ಆ ಆತ್ಮಚರಿತ್ರೆ “ಲಿವಿಂಗ್ ಟು ಟೆಲ್ ದಿ ಟೇಲ್” ಪ್ರಕಟವಾಯಿತು. ಬೃಹತ್ ಸಂಪುಟವಾದ ಈ ಆತ್ಮಚರಿತ್ರೆ ಲೇಖಕನ ಬದುಕಿನ ತಾರುಣ್ಯದ ಘಟ್ಟದಲ್ಲಿ ನಿಂತಿದೆ. ಇದಾದ ನಂತರ ಆತ `ಇನ್ನೂ ಎರಡು [...]
Filed under: ಆತ್ಮ - ಚರಿತ್ರೆ/ಕಥನ | Leave a Comment »