Posted on May 20, 2009 by pusthakapreeethi
1981 ರಲ್ಲಿ ಪ್ರಕಟವಾದ ‘ಗಂಡುಗಲಿ ಮದಕರಿನಾಯಕ‘ ಕಾದಂಬರಿಯನ್ನು ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಮಿತ್ತ, ಮರುಮುದ್ರಣ ಮಾಡಿದ್ದಾರೆ. ಇದು ನಾಲ್ಕನೆಯ ಮುದ್ರಣ. ಸಾಹಿತ್ಯ ಸಮ್ಮೇಳನದಲ್ಲಿ ಈ ಕಾದಂಬರಿಯ 748 ಪ್ರತಿಗಳು ಮಾರಾಟವಾಗಿವೆ ಎನ್ನುತ್ತಾರೆ ಪ್ರಕಾಶಕರು.
ದಲಿತ, ಬಂಡಾಯ, ಸಸ್ಪೆನ್ಸ್, ಪಾಲಿಟಿಕ್ಸ್, ಡೀಪ್ ಲವ್, ಐತಿಹಾಸಿಕ, ಕೌಟುಂಬಿಕ, ಸಂಗೀತ, ನೃತ್ಯ- ಯಾವ ಪ್ರಕಾರವನ್ನೇ ಆರಿಸಿಕೊಂಡರೂ ಅಧ್ಯಯನ ಮಾಡಿ ವಸ್ತುನಿಷ್ಟವಾಗಿಯೂ ಬರೆವ ವೇಣು ಯಾವುದೇ ಲೇಬಲ್ ಅಂಟಿಸಿಕೊಳ್ಳದ ಸೃಜನಶೀಲ ಬರಹಗಾರರು. ಐತಿಹಾಸಿಕ ಕಾದಂಬರಿಗಳ ಅವನತಿಯ ಕಾಲದಲ್ಲಿ ಓಯಸ್ಸಿಸ್ ನಂತೆ ದುರ್ಗದ ಇತಿಹಾಸ ಕುರಿತಂತೆ [...]
Filed under: ಐತಿಹಾಸಿಕ, ಕಾದಂಬರಿ | Tagged: ಕನ್ನಡ ಪ್ರಭ, ಗಂಡುಗಲಿ ಮದಕರಿನಾಯಕ, ಗೀತಾಂಜಲಿ ಶಿವಮೊಗ್ಗ, ಬಿ.ಎಲ್.ವೇಣು | Leave a Comment »
Posted on April 1, 2009 by pusthakapreeethi
ದಾಮೋದರ ಧರ್ಮಾನಂದ ಕೊಸಾಂಬಿಯವರು ಆಧುನಿಕ ಭಾರತದ ಕೆಲವೇ ಶ್ರೇಷ್ಠ ವಿದ್ವಾಂಸರಲ್ಲಿ ಪ್ರಮುಖರು (1907-1966). ಅವರ ಬರವಣಿಗೆ ವೈಜ್ಞಾನಿಕ, ವಸ್ತುನಿಷ್ಠ ಪರಿಶೀಲನೆಗೆ ಹೆಸರಾಗಿದೆ. ವಿಜ್ಞಾನ, ಪುರಾತತ್ವ ಶಾಸ್ತ್ರ, ಸಾಹಿತ್ಯ, ಭಾಷಾ ಶಾಸ್ತ್ರ, ಸಂಸ್ಕೃತಿ – ಹೀಗೆ ಜ್ಞಾನದ ಹಲವು ಕ್ಷೇತ್ರಗಳಲ್ಲಿ ಆಳವಾದ ಅರಿವನ್ನು ಸಂಪಾದಿಸಿ ಅದನ್ನು ತಮ್ಮ ಅನೇಕ ಲೇಖನಗಳ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಕೊಸಾಂಬಿಯವರ `ದಿ ಕಲ್ಚರ್ ಅಂಡ್ ಸಿವಿಲೈಸೇಷನ್ ಆಫ್ ಏನ್ಶಿಯೆಂಟ್ ಇಂಡಿಯಾ ಇನ್ ಹಿಸ್ಟೋರಿಕಲ್ ಔಟ್ಲೈನ್ ನ `ದಿ ಆರ್ಯನ್’ ಎಂಬ ಅಧ್ಯಾಯದ ಕನ್ನಡಾನುವಾದ ಈ [...]
Filed under: ಐತಿಹಾಸಿಕ, ವೈಚಾರಿಕ ಸಾಹಿತ್ಯ | Tagged: ಆರ್ಯರು, ಡಿ.ಡಿ.ಕೊಸಾಂಬಿ, ಬೆಳ್ಳಿಚುಕ್ಕಿ ಪ್ರಕಾಶನ | 1 Comment »
Posted on February 20, 2009 by pusthakapreeethi
‘People’s History of India’ ಯೋಜನೆ ಪ್ರೊ. ಇರ್ಫಾನ್ ಹಬಿಬ್ ರ ನೇತೃತ್ವದಲ್ಲಿ ಆರಂಭವಾಗಿ ಈಗಾಗಲೇ ಅದರ ಅಡಿಯಲ್ಲಿ ಆರು ಸಂಪುಟಗಳು ಪ್ರಕಟಗೊಂಡಿವೆ. ಈ ಮಾಲಿಕೆಯ ಮೊದಲ ಕೃತಿ, ಹಬೀಬರೇ ರಚಿಸಿರುವ Pre History ಕನ್ನಡಕ್ಕೆ ಅನುವಾದಗೊಂಡಿದೆ. ಪ್ರದೀಪ್ ಬೆಳಗಲ್ ಅನುವಾದಿತ ಕೃತಿ ‘ ಪೂರ್ವೇತಿಹಾಸ ‘ ವನ್ನು ‘ಚಿಂತನ ಪುಸ್ತಕ‘ ಪ್ರಕಾಶಕರು ಕನ್ನಡದ ಓದುಗರ ಕೈಗಿತ್ತಿದ್ದಾರೆ.
ಪೀಪಲ್ಸ್ ಹಿಸ್ಟರಿ ಸಂಪುಟಗಳು ಹೆಸರೇ ಸೂಚಿಸುವಂತೆ ‘ಜನರ‘ ಚರಿತ್ರೆಯನ್ನು ಹೇಳುವ ಉದ್ದೇಶವನ್ನು ಹೊಂದಿರುತ್ತವೆ. ಹಲವು ದೇಶಗಳಲ್ಲಿ ಆಯಾ ದೇಶದ [...]
Filed under: ಐತಿಹಾಸಿಕ | Tagged: ಇರ್ಫಾನ್ ಹಬಿಬ್, ಉದಯವಾಣಿ, ಚಿಂತನ ಪುಸ್ತಕ, ಪೂರ್ವೇತಿಹಾಸ, ಭಾರತದ ಜನ ಇತಿಹಾಸ, Irfan Habib, People’s History of India, Prehistory, Tulika | Leave a Comment »
Posted on January 27, 2009 by pusthakapreeethi
ಒಂದೊಂದು ಯುಗವೂ, ಒಂದೊಂದು ರಾಜಕೀಯ ಶಕ್ತಿಯೂ ತನ್ನ ಇತಿಹಾಸವನ್ನು ಮತ್ತು ತನಗೆ ಸಂಬಂಧ ಪಟ್ಟವರ ಇತಿಹಾಸವನ್ನು ತನ್ನ ರಾಜಕೀಯ ಆಶೋತ್ತರಗಳು, ಉದ್ದೇಶಗಳ ದೃಷ್ಟಿಯಿಂದ ಮರುಪರಿಶೀಲನೆ ಮಾಡುತ್ತದೆ. ಇಂತಹ ಮರುಪರಿಶೀಲನೆ ಮಾನವ ಪ್ರವೃತ್ತಿಗಳಲ್ಲಿ ಒಂದು. ಹಿಂದೆ ಬ್ರಿಟೀಷರು ಭಾರತದ ಇತಿಹಾಸದ ಅಧ್ಯಯನ ಮಾಡಿದುದು ಈ ದೃಷ್ಟಿಯಿಂದಲೇ. ಭಾರತವನ್ನೆಲ್ಲ ತಮ್ಮ ಸಾರ್ವಭೌಮತ್ವಕ್ಕೆ ಒಳಪಡಿಸಿಕೊಳ್ಳುವ ಉದ್ದೇಶದಿಂದ, ಆ ಉದ್ದೇಶಕ್ಕೆ ಅನುಕೂಲವಾಗುವಂತೆ ಅವರು ನಮ್ಮ ಇತಿಹಾಸವನ್ನು ವ್ಯಾಖ್ಯಾನಿಸಿದರು. ಅದರಿಂದ ಅವರು ಕಂಡುದು ಹಿಂದು, ಮುಸಲ್ಮಾನ ಯುಗಗಳು. ಬ್ರಿಟೀಷರಿಗಿಂತ ಮುಂಚೆ ಭಾರತಕ್ಕೆ ದಾಳಿ ಇಟ್ಟ [...]
Filed under: ಐತಿಹಾಸಿಕ | Tagged: ಎಚ್.ಎಸ್.ದೊರೆಸ್ವಾಮಿ, ಎನ್.ಪಿ. ಶಂಕರನಾರಾಯಣರಾವ್, ಎಲ್. ಶ್ರೀಕಂಠಯ್ಯ, ಎಸ್.ವಿ.ದೇಶಿಕಾಚಾರ್, ಡಾ.ಜಿ.ರಾಮಕೃಷ್ಣ, ನವಕರ್ನಾಟಕ ಪ್ರಕಾಶನ, ವ್ಯಾಸರಾಯ ಬಲ್ಲಾಳ, ಸ್ವಾತಂತ್ರ್ಯ ಗಂಗೆಯ ಸಾವಿರಾರು ತೊರೆಗಳು - ರಾಷ್ಟ್ರೀಯ ಚಳುವಳಿಯ ಸಮಗ್ರ ಪರಿಚಯ | Leave a Comment »
Posted on December 1, 2008 by pusthakapreeethi
ಪ್ರೊ. ಇರ್ಫಾನ್ ಹಬಿಬ್ ಬರೆದ `ಎ ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ‘ ಯೋಜನೆಯ ಮೊದಲ ಪ್ರಕಟಣೆಯಾಗಿ `ಪೂರ್ವೇತಿಹಾಸ‘ ಕನ್ನಡಕ್ಕೆ ಬಂದಿದೆ. ಈ ಮಾಲಿಕೆಯಲ್ಲಿ ಪ್ರಕಟವಾಗಿರುವ ಇನ್ನೂ ಐದು ಕೃತಿಗಳನ್ನು ಕನ್ನಡಕ್ಕೆ ತರುವ ಆಶಯವೂ ಪ್ರಕಾಶಕರಿಗಿದೆ. ಸಿಂಧೂನಾಗರೀಕತೆ, ವೈದಿಕ ಯುಗ, ಕಬ್ಬಿಣ ಮತ್ತು ಧಾರ್ಮಿಕ ಕ್ರಾಂತಿಗಳ ಯುಗ, ಮೌರ್ಯ ಕಾಲದ ಭಾರತ ಮತ್ತು ಭಾರತೀಯ ಆರ್ಥಿಕ-ಈ ಸರಣಿಯ ಇನ್ನೈದು ಕೃತಿಗಳು. ಇವನ್ನು ಪ್ರಧೀಪ್ ಬೆಳಗಲ್ ಕನ್ನಡಕ್ಕೆ ತಂದಿದ್ದಾರೆ.
ಜ್ಞಾನವನ್ನು ಹಂಚುವ, ಸೃಷ್ಟಿಸುವ ಮತ್ತು ವಿಸ್ತರಿಸುವ ಕೃತಿಗಳ ಸಂಖ್ಯೆ ಕಡಿಮೆ. [...]
Filed under: ಐತಿಹಾಸಿಕ | Leave a Comment »
Posted on November 14, 2008 by pusthakapreeethi
ಪಂಡಿತ ಜವಾಹರಲಾಲ ನೆಹರೂರವರ ಸರ್ವ ಶ್ರೇಷ್ಟ ಗ್ರಂಥವಾದ `Glimpses of World History` ಯೇ`ಜಗತ್ಕಥಾವಲ್ಲರಿ` ಪುಸ್ತಕ. ಇದು ಬೇರೆ ಬೇರೆ ಸೆರೆಮನೆಗಳಲ್ಲಿ ಬೇರೆ ಬೇರೆ ಕಾಲದಲ್ಲಿ 1930 ಅಕ್ಟೋಬರ್ ನಿಂದ 1933 ಆಗಸ್ಟ್ ವರೆಗೆ ಮೂರು ವರುಷಗಳಲ್ಲಿ ಬರೆದ ಪುಸ್ತಕ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜವಾಹರಲಾಲರಿಗೆ ಶಿಕ್ಷೆಯಾಗಿತ್ತು. ಆಗ ಈ ಬಿಡುವಿನ ದಿನಗಳಲ್ಲಿ ಪಂಡಿತ ನೆಹರು ಇದನ್ನು ಬರೆದರು. ತಮ್ಮ ಮಗಳಿಗೆ ಬರೆದ ಪತ್ರಗಳ ರೂಪದಲ್ಲಿ ಬರೆದರು.
1934 ಫೆಬ್ರುವರಿಯಲ್ಲಿ ಮತ್ತೆ ರಾಜದ್ರೋಹಕ್ಕಾಗಿ ಪಂಡಿತರು ಸೆರೆಯಾದರು. ಅದಕ್ಕೆ ಮೊದಲು [...]
Filed under: ಐತಿಹಾಸಿಕ | Tagged: ಅರುಣ ಪ್ರಕಾಶನ ಹುಬ್ಬಳ, ಜಗತ್ ಕಥಾವಲ್ಲರಿ, ಜವಾಹರಲಾಲ ನೆಹರೂ, ಸಿದ್ದವನಹಳ್ಳಿ ಕೃಷ್ಣಶ | 1 Comment »
Posted on September 15, 2008 by pusthakapreeethi
Prehistory by Irfan Habib describes the earliest ages of human life in India, long before the existence of written records.
It is part of a larger project, a People’s History of India, but is also intended to stand alone as an independent monograph. In this monograph, as well as others in the series which [...]
Filed under: ಐತಿಹಾಸಿಕ | Tagged: Aligarh Historian Society, Irfan Habib, Prehistory, Tulika | Leave a Comment »
Posted on August 18, 2008 by pusthakapreeethi
1931ರ ಮಾರ್ಚನಲ್ಲಿ ಕಾನ್ಪುರದಲ್ಲಿ ನಡೆದ ಗಲಭೆಯನ್ನು ಕುರಿತು ವಿಚಾರಣೆ ನಡೆಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಕರಾಚಿ ಅಧಿವೇಶನ 1931) ನೇಮಿತವಾದ ಸಮಿತಿಯ ವರದಿಯ ಪುಸ್ತಕ ರೂಪದ ಕನ್ನಡ ಆವೃತ್ತಿ ಇದು. ಕಾನ್ಪುರ ಗಲಭೆ ವಿಚಾರಣಾ ಸಮಿತಿಯ ಕಾರ್ಯದರ್ಶಿ ಸುಂದರಲಾಲ ಅವರು 1933 ರಲ್ಲಿ ಇದನ್ನು ಇಂಗ್ಲೀಷ್ ನಲ್ಲಿ ಮೊದಲು ಪ್ರಕಟಿಸಿದ್ದರು. ಅವರ ಅಭಿಪ್ರಾಯದಂತೆ : ಈ ವರದಿಯನ್ನು ಸಕಾಲದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಿಗೆ ಅಕ್ಟೋಬರ್ 1931 ರಲ್ಲಿ ಸಲ್ಲಿಸಲಾಯಿತು. ಅಖಿಲ ಭಾರತ [...]
Filed under: ಐತಿಹಾಸಿಕ | Tagged: ಕಾನ್ ಪುರ ಗಲಭೆ ವಿಚಾರಣ | Leave a Comment »
Posted on July 5, 2008 by pusthakapreeethi
2003 ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕದ ಪರಿಷ್ಕೃತ ಆವೃತ್ತಿ ಇದು. ಜೆಪಿ ಇನ್ನೂ ಬದುಕಿದ್ದಾಗ, ಅವರ ಸಂಪೂರ್ಣ ಕ್ರಾಂತಿಯ ಕಾವು ಇನ್ನೂ ಆರದಿದ್ದಾಗ, ದಿಲ್ಲಿಯಲ್ಲಿದ್ದ ಕಾರಣ ಅವರ ಚಳುವಳಿಯ ಸ್ವರೂಪವನ್ನು ಕಣ್ಣಾರೆ ಕಂಡು ಪ್ರಭಾವಿತರಾಗಿದ್ದ ಲೇಖಕರು ಇದೀಗ ಈ ಪುಸ್ತಕವನ್ನು ತಮ್ಮ ತಲೆಮಾರಿನವರು ಹಳೆಯ ನೆನಪುಗಳನ್ನು ಮೆಲುಕು ಹಾಕಲು, ತಮ್ಮ ಹೋರಾಟ-ಹಾರಾಟದ ದಿನಗಳನ್ನು ಪುನರ್ರಚಿಸಿಕೊಳ್ಳಲು ಹಾಗೂ ಈ ತಲೆಮಾರಿನವರು ತಮ್ಮ ಹಿಂದಿನ ತಲೆಮಾರಿನವರು ಒಂದು ರಾಷ್ಟ್ರವನ್ನು ಕಟ್ಟಲು ಏನೆಲ್ಲಾ ಆದರ್ಶಗಳನ್ನು ರೂಪಿಸಿಕೊಂಡಿದ್ದರು, ಮೌಲ್ಯಗಳನ್ನು ರೂಢಿಸಿಕೊಂಡಿದ್ದರು… ಮುಂತಾಗಿ ತಿಳಿಯಲು [...]
Filed under: ಐತಿಹಾಸಿಕ | Tagged: ಜೆ.ಪಿ., ದಿ.ಎಸ್. ನಾಗಭೂಷಣ್, ಸಂಪೂರ್ಣ ಕ್ರಾಂತಿ | Leave a Comment »
Posted on June 27, 2008 by pusthakapreeethi
ಪಂಡಿತ ಜವಾಹಾರಲಾಲಾ ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ ಉದ್ಗ್ರ0ಥ(ಎರಡು ಭಾಗಗಳಲ್ಲಿದೆ) ದ
ಮೊದಲ ಭಾಗದ ಸರಳ ಅನುವಾದ ಇದು. ಪ್ರಪಂಚದ ಮಹಾನ್ ರಾಜಕಾರಣಿಗಳಲ್ಲಿ ಒಬ್ಬರು, ಸುಸಂಸ್ಕ್ರತ ಭಾವನಾಜೀವಿ,
ಧ್ಯೇಯ ನಿಷ್ಠೆಗಳನ್ನು ಮೈ ಗೂಡಿಸಿಕೊಂಡವರೂ ಆದ ಜವಾಹರರ ಫ್ರೌಢ ಇಂಗ್ಲೀಶ್ ಶೈಲಿ ಹಲವು ಓದುಗರಿಗೆ ಅಡ್ಡಿಯಾಗಿರಲಿಕ್ಕೂ ಸಾಕು.
ಎಸ್. ಕೃಷ್ಣಮೂರ್ತಿರಾವ್ ಅವರ ಈ ಅನುವಾದ ಇದನ್ನು ಪರಿಹರಿಸಿ, ಭಾರತದ ಇತಿಹಾಸ, ಸಾಹಿತ್ಯ ಕಲೆ ಮತ್ತು ಸಂಸ್ಕೃತಿಗಳ ಮೇಲೆ ಹೊಸ
ಬೆಳಕನ್ನು ಚೆಲ್ಲಿದ ನೆಹರೂ ವಿಚಾರಧಾರೆಯನ್ನು ಕನ್ನಡ [...]
Filed under: ಐತಿಹಾಸಿಕ | Leave a Comment »