ಆಹಾ! ವಿಶ್ವ ಕಥಾ ಕೋಶ ಮತ್ತೆ ಕನ್ನಡಿಗರಿಗೆ ಲಭ್ಯವಾಗಲಿದೆ!!!

ಈ ಕಥಾಸಂಕಲನದ ಸಂಕಲನದ ಆಕರ್ಷಣೆ ಇದರ ಸಂಪಾದಕ ನಿರಂಜನ ಎಂಬುದರಲ್ಲಿದೆ. ಅಷ್ಟೇ ಅಲ್ಲ ಇದರ ಎಲ್ಲಾ ಸಂಪುಟಗಳು ನಿರಂಜನ ಅವರ ಪ್ರಾಸ್ತಾವಿಕ ಮಾತುಗಳನ್ನು ಹೊಂದಿದೆ. ಈ ಪ್ರಸ್ತಾವನೆಗಳು ಆ ಸಂಪುಟ ಯಾವ ದೇಶಗಳ ಕತೆಗಳಿಗೆ ಸಂಬಂಧಿಸಿದ್ದೋ ಆ ದೇಶಗಳ ಭೂಗೋಳ, ಇತಿಹಾಸ ಎಲ್ಲಾ ಚುಟಕಾದರೂ ಮಾಹಿತಿ ಭರಿತವಾಗಿವೆ. ಈ ಮೇಲಿನ ಸಂಪುಟಗಳನ್ನು ಹೊಂದಿರುವ ಈ ವಿಶ್ವ ಕಥಾ ಕೋಶದಲ್ಲಿ ಮೇಲೆ ಪಟ್ಟಿಮಾಡಿದ ಶೀರ್ಷಿಕೆಗಳಡಿಯಲ್ಲಿ ಭಾರತ (ಎರಡು ಸಂಪುಟ – ಧರಣಿ ಮಂಡಲ ಮಧ್ಯದೊಳಗೆ ಕನ್ನಡದ ಕತೆಗಳಾದರೆ ಸುಭಾಷಿಣಿ [...]

ಇಂಡೋನೇಶಿಯಾದ ಎಳೆಯ ಬರಹಗಾರ್ತಿಯ ಸರಳ ಕತೆಗಳು

ಶೀರ್ಷಿಕೆ: ಅಮ್ಮನಿಗೆ ಹಜ್ ಬಯಕೆ ಲೇಖಕರು : ಆಸ್ಮಾ ನಾಡಿಯಾ  ಅನುವಾದ:ಎಚ್. ಎನ್. ಗೀತಾ; ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ ಪುಟ:೧೧೧  ಬೆಲೆ: ರೂ.70/-

ಗ್ರಾಮೀಣ ಬದುಕಿನ ಆಳ-ವಿಸ್ತಾರ ಹೊಂದಿರುವ ಕತೆಗಳು

ದ.ರಾ. ಬೇಂದ್ರೆ ಕಾವ್ಯ ಪುರಸ್ಕಾರ ಗಳಿಸಿದ ಕವನ ಸಂಕಲನ `ಕನಸು ಮಾರುವ ಹುಡುಗಿ’ ಕಥಾಸಂಕಲನಗಳಾದ `ಮೂಕ ಹಕ್ಕಿ ನಕ್ಕಾಗ’, `ಬಾರಪ್ಪಾ ಬಾರೋ ಮಳೆರಾಯ’ ಹಾಗೂ ಕಾದಂಬರಿ `ಸಪ್ನ ಗೆಜ್ಜೆ’ ಗಳ ಮೂಲಕ ಈಗಾಗಲೇ ಸಾರಸ್ವತ ಲೋಕದಲ್ಲಿ ಯುವ ಬರಹಗಾರರಾಗಿ ಗುರುತಿಸಿಕೊಂಡು ಗಟ್ಟಿ ಹೆಜ್ಜೆಯನ್ನಿಟ್ಟಿರುವ ವೈ.ಎಸ್.ಹರಗಿಯವರ ಈ ಮೂರನೇ ಕಥಾಸಂಕಲನ `ದೇವ್ರು ಬರ್ತಾನೆ ದಾರಿಬಿಡಿ’. ಸಣ್ಣ ಕತೆಗಳ ಲಕ್ಷಣ ಏನೆಲ್ಲಾ ಒಳಗೊಂಡ ಇಲ್ಲಿಯ ಕಥೆಗಳು ಗ್ರಾಮೀಣ ಬದುಕಿನ ಆಳ-ವಿಸ್ತಾರವನ್ನು ಕಂಡು, ಉಂಡು ಅನುಭವದ ರಸಘಟ್ಟಿಯಾಗಿ ಹುಟ್ಟಿಕೊಂಡಿವೆ. ಇದರಿಂದಾಗಿಯೇ ಈ [...]

ವರ್ಧಮಾನ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು

ಕನ್ನಡದ ಮುಖ್ಯ ವಿಮರ್ಶಕರಾದ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ತಮ್ಮ `ತರು ತಳೆದ ಪುಷ್ಪ’ ವಿಮರ್ಶಾ ಕೃತಿಗೆ ವರ್ಧಮಾನ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಉದಯೋನ್ಮುಖ ಲೇಖಕ ವಸುದೇಂದ್ರ ತಮ್ಮ `ಯುಗಾದಿ’ ಕಥಾ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಿಬ್ಬರಿಗೂ ನಮ್ಮ ಪ್ರೀತಿಪೂರ್ವಕ, ಗೌರವಪೂರ್ವಕ ಅಭಿನಂದನೆಗಳು. `ನನಗೆ ಭಾವನೆಗಳಿಲ್ಲದ ಲೋಕದಲ್ಲಿ ನಂಬಿಗೆಯಿಲ್ಲ, ನಾವು ದ್ವೀಪಗಳಾಗುವುದು ಬೇಡ, ಗೋಡೆ ಕಟ್ಟುವುದು ಬೇಡ, ನಾವು ಸೇತುವೆ ಕಟ್ಠೋಣ ದೀಪ ಹಚ್ಚೋಣ. ‘ ಇದು ಖ್ಯಾತ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ಮೂಡುಬಿದಿರೆಯ [...]

ಸತ್ಯಕ್ಕಿಂತ ಅನುಕಂಪವೇ ದೊಡ್ಡದು

ಶೀರ್ಷಿಕೆ: ಕ್ರೌಂಚ ಪಕ್ಷಿಗಳು  ಲೇಖಕರು:ವೈದೇಹಿ ಪ್ರಕಾಶಕರು:ಅಕ್ಷರ ಪ್ರಕಾಶನ  ಪುಟಗಳು:96  ಬೆಲೆ:ರೂ.60/- ಕೃಪೆ: ದೇಶ ಕಾಲ ವಿಶೇಷ

ಸಾಮಾನ್ಯರಲ್ಲಿ ಸಾಮಾನ್ಯರೂ ಪ್ರತಿಭಟನೆಯ ಮೂಲಕ ತಮ್ಮದೇ ಆದ ಅಸ್ಮಿತೆಯನ್ನು ಕಾಣುವುದು

ಶೀರ್ಷಿಕೆ: ಜಯಂತ ಕಾಯ್ಕಿಣಿ  ಲೇಖಕರು:ಕಥಾ ಸಂಕಲನ  ಪ್ರಕಾಶಕರು:ಅಂಕಿತ ಪುಸ್ತಕ  ಪುಟಗಳು:124  ಬೆಲೆ:ರೂ.60/- ಕೃಪೆ: ದೇಶ ಕಾಲ ವಿಶೇಷ

ಕನ್ನಡದಲ್ಲಿ ಕಾಳೀಪಟ್ನಂ ರಾಮಾರಾವ್

ಆಂಧ್ರಪ್ರದೇಶದ ಶ್ರೀಕಾಕುಳಂ ಚಿಲ್ಲೆಯ ಮುರಪಾಕದವರಾದ ಕಾಳೀಪಟ್ನಂ ರಾಮಾರಾವ್ ತೆಲುಗಿನ ಪ್ರಸಿದ್ಧ ಕಥಾಲೇಖಕ. `ಕಾ.ರಾ.ಮಾಸ್ಟಾರು‘ ಎಂದೇ ಆಂಧ್ರದ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುವ ರಾಮಾರಾವ್ ಈವರೆಗೆ ಬರೆದದ್ದು ಕಡಿಮೆ. ೨೫ ಕಥೆಗಳನ್ನಷ್ಟೇ ಅವರು ಬರೆದಿರುವುದು. `ರಾಗಮಾಯಿ‘, `ಅಭಿಮಾನಾಲು‘ ಅವರ ಕಾದಂಬರಿಗಳು. ಮಾಕ್ಸ್೯ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ಈ ಲೇಖಕ ತಾವು ನೆಲಸಿರುವ ಶ್ರೀಕಾಕುಳಂ ಜಿಲ್ಲೆಯ ಕಥನವನ್ನೇ ತಮ್ಮ ಕಥೆಗಳಲ್ಲಿ ಬರೆದಿದ್ದಾರೆ. ಈ ಲೇಖಕನ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಕವಿ, ಕಥೆಗಾರ ಚಿದಾನಂದ ಸಾಲಿ. ಈ ಸಂಕಲನದಲ್ಲೂ ಕಾಳೀಪಟ್ನಂ ರಾಮಾರಾವ್ 25 ಕಥೆಗಳಲ್ಲಿ [...]

ಒಡೆದ ಕೋಟೆ, ಅಗ್ನಿ ಪರ್ವತ ಇತ್ಯಾದಿ

ತಮಿಳಿನ ಮುಖ್ಯ ಲೇಖಕರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಪಾ.ಶ. ಶ್ರೀನಿವಾಸ. ಈ ಸಂಕಲನದಲ್ಲಿ ಕಲ್ಕಿ, ಅಖಿಲನ, ಜಯಕಾಂತನ್, ಇಂದುಮತಿ ಮೊದಲಾದ ಕತೆಗಾರರ ಎಂಟು ಕತೆಗಳು ಇವೆ. ಕಲ್ಕಿಯವರ ‘ಒಡೆದ ಕೋಟೆ’, ಅಖಿಲನ್ ಅವರ ‘ಅಗ್ನಿ ಪರ್ವತ’, ಜಯಕಾಂತನ್ ಅವರ ‘ಉಪವಾಸ ವ್ರತ’, ಇಂದುಮತಿ ಅವರ ‘ಮೆರವಣಿಗೆ”, ಮಾಲನ ಅವರ ‘ಜಾಗ’, ಇಲ್ಲಿನ ಮುಖ್ಯ ಕಥೆಗಳಾಗಿವೆ. ಇವೆಲ್ಲವನ್ನೂ ಶ್ರೀನಿವಾಸ ಮೂಲದ ಅಂದಗೆಡದಂತೆ ಅನುವಾದಿಸಿದ್ದಾರೆ. ಭಾರತೀಯ ಭಾಷೆಗಳ ಕತೆಗಳ ಬಗ್ಗೆ ಕುತೂಹಲ ಇರುವವರಿಗೆ ಇದೊಂದು ಒಳ್ಳೆಯ ಓದಾಗುತ್ತದೆ. ಇದರೊಂದಿಗೆ ತಮಿಳು [...]

ಸಂಕ್ರಮಣ

ಸರಳ ಭಾಷೆ, ನಿರೂಪಣೆ, ನೇರ ಶೈಲಿಯಿಂದ ಗಮನ ಸೆಳೆಯುವ ಲೇಖಕಿ ವಸುಮತಿ ಉಡುಪ. ಕಾದಂಬರಿ, ಕಥಾಸಂಕಲನ, ಪ್ರಬಂಧ . . . ಹೀಗೆ ಗುರುತಿಸಿಕೊಂಡಿರುವ ವಸುಮತಿ ಉಡುಪ ಅವರು ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಅವರ ಕಥೆಗಳ ಸಂಗ್ರಹ ‘ಸಂಕ್ರಮಣ’ ಈಗ ಹೊರಬಂದಿದೆ. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು. ಈ ಸಂಕಲನದ ಬೆಲೆ ೯೫ ರೂಪಾಯಿ. ೧೭ ಕಥೆಗಳ ಓದಿಗೆ ಇದೇನೂ ಹೆಚ್ಚೆನಿಸುವುದಿಲ್ಲ [...]

ಅಂತರಂಗದ ಪಿಸುನುಡಿ

ಇದು ವಸುಮತಿ ಉಡುಪ ಅವರ ಇತ್ತೀಚಿನ ಕತೆಗಳ ಸಂಕಲನ. ಶುದ್ಧ ಸಾಂಸಾರಿಕ ಕತೆಗಳು ಎನ್ನಬಹುದಾದವು ಇಲ್ಲಿವೆಯಾದೂ ಲೇಖಕಿ ಕಾಲ ದೇಶಕ್ಕೆ ತಕ್ಕಂತೆ ಸಾಂಸಾರಿಕ ಕತೆಗಳ ಹಂದರದಲ್ಲೇ ಹತ್ತು ಹಲವು ಸಮಸ್ಯೆಗಳನ್ನು ಹೆಣೆಯುತ್ತಾರೆ. ಅದು ಅತ್ಯಾಚಾರಕ್ಕೊಳಗಾದ ಮಹಿಳೆಯ ವಿವಾಹ ಕುರಿತಂತೆ ಇರಬಹುದು, ಕಷ್ಟಜೀವಿ ಅಮಾಯಕ ತಮ್ಮನಿಗೆ, ಆತನ ಸುಶಿಕ್ಷಿತ, ಸ್ಫುರದ್ರೂಪಿ, ಚಾಲಾಕಿ ಅಣ್ಣ ಮತ್ತು (ತಮ್ಮನ ಹೆಂಡತಿಯಾಗಿ ಮನೆ ಸೇರುವ) ಆತನ ಪ್ರೇಯಸಿ ಮಾಡುವ ಘೋರ ವಿದ್ರೋಹ ಇರಬಹುದು, ತಾನು ಬಹುವಾಗಿ ಮೆಚ್ಚುವ ಪತಿ, ತನ್ನ ಮಾತು, ಧೋರಣೆಗಳಲ್ಲಿಯಾದರೂ [...]

Follow

Get every new post delivered to your Inbox.