ಕನ್ನಡದಲ್ಲಿ ಕಾಳೀಪಟ್ನಂ ರಾಮಾರಾವ್

ಆಂಧ್ರಪ್ರದೇಶದ ಶ್ರೀಕಾಕುಳಂ ಚಿಲ್ಲೆಯ ಮುರಪಾಕದವರಾದ ಕಾಳೀಪಟ್ನಂ ರಾಮಾರಾವ್ ತೆಲುಗಿನ ಪ್ರಸಿದ್ಧ ಕಥಾಲೇಖಕ. `ಕಾ.ರಾ.ಮಾಸ್ಟಾರು‘ ಎಂದೇ ಆಂಧ್ರದ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುವ ರಾಮಾರಾವ್ ಈವರೆಗೆ ಬರೆದದ್ದು ಕಡಿಮೆ. ೨೫ ಕಥೆಗಳನ್ನಷ್ಟೇ ಅವರು ಬರೆದಿರುವುದು. `ರಾಗಮಾಯಿ‘, `ಅಭಿಮಾನಾಲು‘ ಅವರ ಕಾದಂಬರಿಗಳು.
ಮಾಕ್ಸ್೯ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ಈ ಲೇಖಕ ತಾವು ನೆಲಸಿರುವ ಶ್ರೀಕಾಕುಳಂ ಜಿಲ್ಲೆಯ ಕಥನವನ್ನೇ ತಮ್ಮ ಕಥೆಗಳಲ್ಲಿ ಬರೆದಿದ್ದಾರೆ. ಈ ಲೇಖಕನ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಕವಿ, ಕಥೆಗಾರ ಚಿದಾನಂದ ಸಾಲಿ.
ಈ ಸಂಕಲನದಲ್ಲೂ ಕಾಳೀಪಟ್ನಂ ರಾಮಾರಾವ್ 25 ಕಥೆಗಳಲ್ಲಿ ಆಯ್ದ ಒಂಬತ್ತು [...]

ಒಡೆದ ಕೋಟೆ, ಅಗ್ನಿ ಪರ್ವತ ಇತ್ಯಾದಿ

ತಮಿಳಿನ ಮುಖ್ಯ ಲೇಖಕರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಪಾ.ಶ. ಶ್ರೀನಿವಾಸ. ಈ ಸಂಕಲನದಲ್ಲಿ ಕಲ್ಕಿ, ಅಖಿಲನ, ಜಯಕಾಂತನ್, ಇಂದುಮತಿ ಮೊದಲಾದ ಕತೆಗಾರರ ಎಂಟು ಕತೆಗಳು ಇವೆ.
ಕಲ್ಕಿಯವರ ‘ಒಡೆದ ಕೋಟೆ’, ಅಖಿಲನ್ ಅವರ ‘ಅಗ್ನಿ ಪರ್ವತ’, ಜಯಕಾಂತನ್ ಅವರ ‘ಉಪವಾಸ ವ್ರತ’, ಇಂದುಮತಿ ಅವರ ‘ಮೆರವಣಿಗೆ”, ಮಾಲನ ಅವರ ‘ಜಾಗ’, ಇಲ್ಲಿನ ಮುಖ್ಯ ಕಥೆಗಳಾಗಿವೆ. ಇವೆಲ್ಲವನ್ನೂ ಶ್ರೀನಿವಾಸ ಮೂಲದ ಅಂದಗೆಡದಂತೆ ಅನುವಾದಿಸಿದ್ದಾರೆ. ಭಾರತೀಯ ಭಾಷೆಗಳ ಕತೆಗಳ ಬಗ್ಗೆ ಕುತೂಹಲ ಇರುವವರಿಗೆ ಇದೊಂದು ಒಳ್ಳೆಯ ಓದಾಗುತ್ತದೆ.
ಇದರೊಂದಿಗೆ ತಮಿಳು ಕತೆಗಳ ಬಗ್ಗೆ [...]

ಸಂಕ್ರಮಣ

ಸರಳ ಭಾಷೆ, ನಿರೂಪಣೆ, ನೇರ ಶೈಲಿಯಿಂದ ಗಮನ ಸೆಳೆಯುವ ಲೇಖಕಿ ವಸುಮತಿ ಉಡುಪ. ಕಾದಂಬರಿ, ಕಥಾಸಂಕಲನ, ಪ್ರಬಂಧ . . . ಹೀಗೆ ಗುರುತಿಸಿಕೊಂಡಿರುವ ವಸುಮತಿ ಉಡುಪ ಅವರು ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಅವರ ಕಥೆಗಳ ಸಂಗ್ರಹ ‘ಸಂಕ್ರಮಣ’ ಈಗ ಹೊರಬಂದಿದೆ. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು. ಈ ಸಂಕಲನದ ಬೆಲೆ ೯೫ ರೂಪಾಯಿ. ೧೭ ಕಥೆಗಳ ಓದಿಗೆ ಇದೇನೂ ಹೆಚ್ಚೆನಿಸುವುದಿಲ್ಲ
ಶೀರ್ಷಿಕೆ: [...]

ಅಂತರಂಗದ ಪಿಸುನುಡಿ

ಇದು ವಸುಮತಿ ಉಡುಪ ಅವರ ಇತ್ತೀಚಿನ ಕತೆಗಳ ಸಂಕಲನ. ಶುದ್ಧ ಸಾಂಸಾರಿಕ ಕತೆಗಳು ಎನ್ನಬಹುದಾದವು ಇಲ್ಲಿವೆಯಾದೂ ಲೇಖಕಿ ಕಾಲ ದೇಶಕ್ಕೆ ತಕ್ಕಂತೆ ಸಾಂಸಾರಿಕ ಕತೆಗಳ ಹಂದರದಲ್ಲೇ ಹತ್ತು ಹಲವು ಸಮಸ್ಯೆಗಳನ್ನು ಹೆಣೆಯುತ್ತಾರೆ. ಅದು ಅತ್ಯಾಚಾರಕ್ಕೊಳಗಾದ ಮಹಿಳೆಯ ವಿವಾಹ ಕುರಿತಂತೆ ಇರಬಹುದು, ಕಷ್ಟಜೀವಿ ಅಮಾಯಕ ತಮ್ಮನಿಗೆ, ಆತನ ಸುಶಿಕ್ಷಿತ, ಸ್ಫುರದ್ರೂಪಿ, ಚಾಲಾಕಿ ಅಣ್ಣ ಮತ್ತು (ತಮ್ಮನ ಹೆಂಡತಿಯಾಗಿ ಮನೆ ಸೇರುವ) ಆತನ ಪ್ರೇಯಸಿ ಮಾಡುವ ಘೋರ ವಿದ್ರೋಹ ಇರಬಹುದು, ತಾನು ಬಹುವಾಗಿ ಮೆಚ್ಚುವ ಪತಿ, ತನ್ನ ಮಾತು, ಧೋರಣೆಗಳಲ್ಲಿಯಾದರೂ [...]

ಮಂಗಳೂರಿನಲ್ಲಿ ಮಿನಿ ಕತೆಗಳ ಮಿನಿ ಪುಸ್ತಕದ ಬಿಡುಗಡೆ.

ರಾಜ್ಯದ ಸಾಹಿತಿಗಳು, ಕಲಾವಿದರು, ಚಿಂತಕರು ಕೂಡಿ, ನಮ್ಮ ಕಡಲ ನಾಡು, ಮಂಗಳೂರಿನಲ್ಲಿ ಆಯೋಜಿಸಿದ ಸೌಹಾರ್ದ ನಡಿಗೆ, ಸೌಹಾರ್ದ ಸಮಾವೇಶದಲ್ಲಿ ಕೆ.ಎಸ್. ರವಿಕುಮಾರ್ ಅವರ ಬಿ ನೆಗೆಟಿವ್ – ನೋವಿನದೊಂದು ಮೂಟೆ ಪುಸ್ತಕ ಬಿಡುಗಡೆಯಾಗಲಿದೆ.
ರಂಗ ನಿರ್ದೇಶಕರಾದ ಪ್ರಸನ್ನ, ಸಾಹಿತಿಗಳಾದ ರಂಜಾನ್ ದರ್ಗಾ, ಡಾ. ಮೀನಾಕ್ಷಿ ಬಾಳಿ, ಸಮುದಾಯ ಸಂಘಟನೆಯ ಅಧ್ಯಕ್ಷರಾದ ಪ್ರೊಫೆಸರ್ ಆರ್ ಕೆ ಹುಡಗಿ, ಟೀವೀ ಧಾರಾವಾಹಿ ನಿರ್ದೇಶಕರಾದ ಬಿ. ಸುರೇಶ್ ಮುಂತಾದ ವಿವಿಧ ರಂಗದ ದಿಗ್ಗಜರ ಸಮ್ಮುಖದಲ್ಲಿ ಈ ಪುಸ್ತಕ ಇಂದು (14-3-2009) ಸಂಜೆ [...]

ಇವನು ತಂದ ಮೀನಿಗೆ ನಾ ಮಸಾಲೆ ಮಾಡುವುದು ಎನ್ನುವಂತೆ ಸಲೀಸಾಗಿ

ಡಾ| ವಿನಯಾ ಅವರು ಈಗಾಗಲೇ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ `ಊರ ಒಳಗಣ ಬಯಲು‘ ಎಂಬ ಅವರ ಈ ಮೊದಲ ಕಥಾ ಸಂಕಲನದಲ್ಲಿ ಹನ್ನೊಂದು ಕತೆಗಳಿವೆ. ಈ ಕತೆಗಳೆಲ್ಲವೂ ಸ್ವಾರಸ್ಯಕರವಾಗಿ ಓದಿಸಿಕೊಳ್ಳುವಂತಿದೆ. ಇಲ್ಲಿನ ಹೆಚ್ಚಿನ ಕತೆಗಳು ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಾಗೂ ಪಟ್ಟಣಗಳ ಜೀವನದ ಗತಕಾಲದ ನೆನಪುಗಳನ್ನು ಆಧರಿಸಿ ನಿರೂಪಿತವಾಗಿರುವ ಈ ಕತೆಗಳಲ್ಲಿ ಪಾತ್ರಗಳ ವ್ಯಕ್ತಿತ್ವ, ಅವುಗಳ ಬದುಕಿನ ಸನ್ನಿವೇಶಗಳನ್ನು ಹಾಗೂ ಅನುಭವಗಳನ್ನು ದಟ್ಟವಾಗಿ ವಿವರಗಳ ಮೂಲಕ ಓದುಗರ ಕಣ್ಣ ಮುಂದೆ ಚಿತ್ರಗಳನ್ನಾಗಿ ಮೂಡಿಸಲಾಗಿದೆ. [...]

ಹಳ್ಳಿ, ಪೇಟೆಯ ನಡುವಣ ಸೇತುವೆ

ಎಲ್.ಸಿ.ಸುಮಿತ್ರಾ ಮಲೆಯ ತಡಿಯಲ್ಲಿ ನೆಲೆಸಿ ಮಲೆನಾಡಿನ ನಾಡನ್ನೂ ಅಲ್ಲಿನ ಕಾಡನ್ನೂ ಅರಿತವರಾಗಿ ಅವುಗಳ ನಡುವೆ ಒಂದು ಬಗೆಯ ಸಮನ್ವಯ ಸಾಧಿಸುವುದನ್ನು ಕೇಂದ್ರಬಿಂದುವಾಗಿಸಿ ಕತೆ ಬರೆದವರು. `ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ‘ ಅವರ ಒಂದು ಕತೆಯಾಗಿದ್ದರೂ ಇಡೀ ಸಂಕಲನದ ಜವಾಬ್ದಾರಿ ಹೊತ್ತುನಿಂತ ಶೀರ್ಷಿಕೆಯದು. `ಎಂತಹ ಕಡು ಬೇಸಿಗೆಯಲ್ಲಾದರೂ ಹಕ್ಕಿಗಳು ಕುಡಿಯುವಷ್ಟಾದರೂ ನೀರಿರುತ್ತದೆ ಎಂದು ಗುಬ್ಬಿಹಳ್ಳಿಯ ಹಳ್ಳಕ್ಕೆ ಬರುತ್ತವೆ. ಅಗತ್ಯ ಮುಗಿದಾಗ ನಗರಕ್ಕೆ ಮುಖಮಾಡುತ್ತವೆ! ಅಂತೆಯೇ ಇಲ್ಲಿನ ಕತೆಗಳ ಪಾತ್ರಗಳೂ.
`ಗುಡಿಯೊಳಗೆ‘ ಕತೆಯ ರಾಮ, ನಿಮ್ನ ಜಾತಿಯವ. ಹೇಗೋ ವಿದ್ಯಾಭ್ಯಾಸ ಪಡೆದು ನಗರ [...]

ರೂಪ, ರಸ, ಗಂಧ, ಸ್ಪರ್ಶ, ನಾದಗಳ ಮೂಲಕ ಗ್ರಹಿಸಿದ್ದು ಸಾಹಿತ್ಯವಾಗುತ್ತದೆ

ಮನುಷ್ಯ ಸುತ್ತಲಿನ ಜಗತ್ತನ್ನು, ಬದುಕನ್ನು ಗ್ರಹಿಸುವುದೇ ಪಂಚೇಂದ್ರಿಗಳ ಮೂಲಕ. ರೂಪ, ರಸ, ಗಂಧ, ಸ್ಪರ್ಶ, ನಾದಗಳ ಮೂಲಕ ಗ್ರಹಿಸಿದ್ದು ಸಾಹಿತ್ಯವಾಗುತ್ತದೆ ಎಂಬ ಮೂಲಭೂತ ಗ್ರಹಿಕೆಯನ್ನಿಟ್ಟುಕೊಂಡು ಈ `ಪಂಚಬಳ್ಳಿಯ ಕಥೆಗಳು‘ ಪುಸ್ತಕದಲ್ಲಿ ಐದು ಕಥೆಗಳನ್ನು ಸವಿತಾ ಶ್ರೀನಿವಾಸ್ ಕೊಟ್ಟಿದ್ದಾರೆ.
ಲೇಖಕಿಯೇ ಹೇಳುವಂತೆ ಇಲ್ಲಿನ ಕಥೆಗಳು `ಅಸಾಮಾಜಿಕವೇ‘. ಅವರು ಇಲ್ಲಿ ಫ್ಯಾಂಟಸಿ, ವಿಜ್ಞಾನ, ಮನಶಾಸ್ತ್ರ, ಪೌರಾಣಿಕ ವಿಷಯಗಳನ್ನು ಬಳಸಿದ್ದಾರೆ. ಹಾಗೆ ನೋಡಿದರೆ ಇಲ್ಲಿನ ಕಥೆಗಳು ಬಳಸುವ ಭಾಷೆ ನಾವು ಕೇಳುವ ನಿತ್ಯದ ಕನ್ನಡದಂತಿಲ್ಲ.
ಒಂದು ಉದಾಹರಣೆಯನ್ನು ನೋಡಬಹುದು.
`ಏನು ಪ್ರಿಯವರ, ಸರಿಯಾದ ಸಮಯಕ್ಕೆ [...]

ದುರ್ಬಲ ಕ್ಷಣವೊಂದರ ಹಠಮಾರಿತನ ಬಾಳಿಗೆ ಮುಳುವಾಗುವ ದುರಂತ

ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆಗಳ ಮೂಲಕ ಜನಪ್ರಿಯತೆ ಪಡೆಯುವ ಕಥೆಗಾರರ ಒಂದು ವರ್ಗವಿದೆ. ಇಂಥ ಕಥೆಗಾರರಲ್ಲಿ ಎಚ್.ಎನ್.ಸತ್ಯನಾರಾಯಣ ರಾವ್ ಒಬ್ಬರು. `ಕರೀವಜ್ರ‘ ಕಥಾ ಸಂಕಲನ ನಂತರ ಇದೀಗ `ಹೊನ್ನೆಲ್ಲಿ ಮತ್ತು ಇತರ ಕಥೆಗಳು’ ಎನ್ನುವ ಎರಡನೇ ಸಂಕಲನವನ್ನು ಅವರು ಪ್ರಕಟಿಸಿದ್ದಾರೆ. ಹದಿನೈದು ಕಥೆಗಳ ಸಂಕಲನದಲ್ಲಿ ಕಥೆಗಾರರ ಜೀವನ ಪ್ರೇಮ ಹಾಗೂ ಅನುಭವ ಎದ್ದುಕಾಣುತ್ತದೆ. ತಂತ್ರ ಹಾಗೂ ಭಾಷೆಯ ಸೂಕ್ಷ್ಮಗಳನ್ನು ಒಳಗೊಳ್ಳುವ ದೃಷ್ಟಿಯಿಂದ ಸತ್ಯನಾರಾಯಣ ಅವರ ಕಥೆಗಳು ಗಮನ ಸೆಳೆಯುವುದಿಲ್ಲ. ಇಲ್ಲಿನ ಕಥೆಗಳನ್ನು ಅವುಗಳೊಳಗಿನ ಜೀವನ ಸೌಂದರ್ಯದ ಮೂಲಕ ಗ್ರಹಿಸುವುದು [...]

ಪ್ರಾದೇಶಿಕ ವಸ್ತು ಸಿನಿಮಿಕ್ ತಂತ್ರ

ಸುತ್ತಮುತ್ತಲಿನ ಪರಿಸರದಲ್ಲಿ ಘಟಿಸಿದ ಘಟನೆಗಳನ್ನು ಕಥೆಗಳನ್ನಾಗಿಸುವ ಪ್ರಯತ್ನದ ಪ್ರತಿಫಲದಿಂದ ಮೂಡಿದ ಒಂಭತ್ತು ಕಥೆಗಳು `ಆಯಿತಾರ ಅಮಾಸೆ‘ ಚೊಚ್ಚಿಲ ಸಂಕಲನದಲ್ಲಿದೆ. ತಳವರ್ಗದ ಪಾತ್ರಗಳು ಪರಿಶ್ರಮದ ಮೆಟ್ಟಿಲೇರುತ್ತಾ ಮೇಲ್ವರ್ಗದವರು ಮುಟ್ಟಿದ ಮೇಲ್ದರ್ಜೆಯ ಮಟ್ಟಕ್ಕೆ ತಲುಪುವ ಆಶಯ ಹೊಂದಿದ ಕಥೆಗಳೆ ಈ ಕೃತಿಯ ಜೀವಾಳ. ಪ್ರೀತಿ ಪ್ರೇಮದ ಪ್ರಸಂಗ, ಶೋಷಣೆಯ ಪರಿಸರ, ಬಡತನದ ನೋವುಂಡು ಸಿರಿತನದ ಸುಖಪಡೆದ ಯುವ ಪೀಳಿಗೆಯ ಸಾಧನೆ, ನಂಬಿದ ಸಂಪ್ರದಾಯದ ಸಂಕೋಲೆ ಕಳಚಿಕೊಳ್ಳದೆ ಪ್ರಗತಿಪರ ಪ್ರಜ್ಞೆಯಿಂದ ಬಾಹಿರವಾಗಿ ಬದುಕುವವರ ಸ್ಥಿತಿಗತಿಗಳು, ಮಹಾಂತಪ್ಪ ನಂದೂರರು ಹೆಣೆದಿರುವ ಕಥೆಗಳ ಎಳೆಗಳು. [...]