ಅವು ಯಾವ ದೇವತೆಗಳಿಗೆ ಸೇರಿದ್ದು?

ಸೋಮನಾಥಪುರವನ್ನು ನೋಡದಿರುವವರಾರು? ಆದರೆ ಇತಿಹಾಸಜ್ಞ ಸಂಶೋಧಕ ಷ.ಶೆಟ್ಟರ್ ಬರೆದಿರುವ ಈ ಸಚಿತ್ರ ಪುಸ್ತಿಕೆಯ ಗುರಿ, ಪ್ರೌಢ ಓದುಗ ಮತ್ತು ಪ್ರಬುದ್ಧ ಸಂದರ್ಶಕರಿಗಾಗಿ ಬೇಕಾದ ಮಾಹಿತಿ ಒದಗಿಸುವುದು. ಪುಸ್ತಕ ತಿರುವಿಹಾಕಿದಾಗ ದೊರೆಯುವ ಅನೇಕ `ಮಾಹಿತಿ ಮುತ್ತು‘ಗಳಲ್ಲಿ ಕೆಲವು ಹೀಗಿವೆ:
- ಸೋಮನಾಥಪುರ ಒಂದು ಪರಿಪೂರ್ಣ ದೇವಾಲಯ ನಗರ, ಮಧ್ಯಕಾಲೀನ ಅಗ್ರಹಾರ ಕೇಂದ್ರವಾಗಿರುವುದರಿಂದ ಇದರ ವಿವರಗಳು ಮಧ್ಯಕಾಲೀನ ನಗರ ಬೆಳವಣಿಗೆಯ ಬಗ್ಗೆ ಆಸಕ್ತಿ ಹೊಂದಿರುವವರಿಗೂ ಉಪಯುಕ್ತ ಮಾಹಿತಿ.
- ಈ ಶೈಲಿಯ ಪ್ರಮುಖ ವಾಸ್ತು ಮತ್ತು ಶಿಲ್ಪ ಕಲಾಂಶಗಳು ಚಾಳುಕ್ಯರಿಂದ, ಹೊಯ್ಸಳರಿಗೆ ಬಳುವಳಿಯಾಗಿ [...]

ಕಲೆ ಎಂದರೇನು?

`ಸಮಗ್ರವಾಗದಿದ್ದರೂ ಸಂಕ್ಷಿಪ್ತವಾಗಿಯಾದರೂ, ಪ್ರಪಂಚದ ದೃಶ್ಯಕಲೆಯ ಬಗ್ಗೆ ಪುಸ್ತಕ ಬರೆಯಬೇಕು ಎನ್ನುವುದು ನನ್ನ ಬಹುದಿನದ ಕನಸು‘ ಎಂದು ಮೊದಲ ಮಾತಿನಲ್ಲಿ ಹೇಳಿಕೊಂಡಿರುವ ಕಲಾವಿದ ಮರಿಶಾಮಾಚಾರ್ ಅವರ ಇಪ್ಪತ್ತನೆಯ ಪುಸ್ತಕ ಇದು. ಅವರದೇ ರಕ್ಷಪುಟ ಹಾಗೂ ಒಳಪುಟ ವಿನ್ಯಾಸದೊಂದಿಗೆ ಸುಂದರವಾಗಿ ಸಜ್ಜಾಗಿದೆ ಹಾಗೂ ಕಲಾವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಅಲಭ್ಯವಾಗಿರುವ ಪುಸ್ತಕಗಳ ಕೊರತೆಯನ್ನು ತುಂಬಿಕೊಡುವಂತಿದೆ.
`ಕಲೆ ಎಂದರೇನು? ಕಲೆಯ ಹುಟ್ಟಿಗೆ ಮುನ್ನ ಇದ್ದ ದೃಶ್ಯ ಸೃಷ್ಟಿಗಳಾವುವು? `ಕಲೆಯ ಸಾವಿನ‘ ನಂತರ ದೃಶ್ಯಕಲೆ ಹಾಗೂ ಅದರ ವ್ಯಾಖ್ಯೆ-ವಾಚ್ಯಾರ್ಥಗಳು ಬೆರೆತ ತತ್ವಾಧಾರಿತ ಕಲೆಯ ವಿಶ್ವರೂಪವು ಹೇಗೆ ಮಾನವಶಾಸ್ತ್ರೀಯ [...]

ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ

ಹೆಸರಾಂತ ಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಅವರ ಈ ಪುಸ್ತಕ ಹಲವು ಮೌಲಿಕ ಲೇಖನಗಳನ್ನು ಒಳಗೊಂಡಿದೆ. ಅವರ ಭಾಷೆ ಆಧುನಿಕವಾಗಿ ಅಚ್ಚುಕಟ್ಟಾಗಿದೆ. ಕಲಾ ವಿಮರ್ಶೆ ಕುರಿತು ಸಾಮಾನ್ಯ ಓದುಗರಿಗೆ ಇರುವ ಭಯ ಕಸಿವಿಸಿಗಳನ್ನೆಲ್ಲಾ ತೊಡೆದುಹಾಕುವಷ್ಟು ತಿಳಿಯಾಗಿ ಬರೆಯುತ್ತಾರೆ, ಸುಬ್ರಹ್ಮಣ್ಯಂ.
ಕಲೆ ಕುರಿತು ಕನ್ನಡ ಮೂಲ ಕೃತಿಗಳು ಹೊರಬರುವುದು ಅಪರೂಪ. ಈ ಪುಸ್ತಕ ಅದನ್ನು ತುಂಬಿಕೊಡಲೆತ್ನಿಸುವುದಷ್ಟೇ ಅಲ್ಲ, ಮಾಮೂಲಿಯಂತೆ ಶಿಲ್ಪಕಲೆಯ ಇತಿಹಾಸ ಇತ್ಯಾದಿ ಚರ್ವಿತ ಚರ್ವಣಗಳಲ್ಲಿ ಕಳೆದುಹೋಗದೆ ನೇರವಾಗಿ ಸಮಕಾಲೀನ ಪರಿಸರಕ್ಕೆ ಧಾವಿಸಿ ಓದುವಿಕೆಯನ್ನು ಚುರುಕುಗೊಳಿಸುತ್ತದೆ. ಉದಾಹರಣೆಗೆ ಇತ್ತೀಚೆಗೆ ಸಂಚಲನ [...]