Posted on May 24, 2009 by pusthakapreeethi
ಇಟೆಲಿಯ ಪತ್ರಕರ್ತ, ಬರಹಗಾರ ಇಟಾಲೋ ಕಾಲ್ವಿನೋನ ‘ಬ್ಯಾರನ್ ಇನ್ ದಿ ಟ್ರೀಸ್’ ಕಾದಂಬರಿಯನ್ನು ಕೆ.ಪಿ.ಸುರೇಶ ಕನ್ನಡಕ್ಕೆ ತಂದಿದ್ದಾರೆ. ಹನ್ನೆರಡು ವರುಷದ ಹುಡುಗನೊಬ್ಬನ ಸಾಕ್ಷೀ ಪ್ರಜ್ಞೆಯಲ್ಲಿ ನಿರೂಪಿತವಾಗಿರುವ ಕತೆ ಇದು.
‘ಕಾಡು ಮತ್ತು ನಾಡುಗಳ ಮಧ್ಯೆ ಚಲಿಸುತ್ತಾ ಎರಡರಿಂದಲೂ ಬೆಳೆಯುತ್ತಿರುವ ಕನ್ನಡ ಕವಿ’ ಕೆ.ಪಿ.ಸುರೇಶ್ ಅನುವಾದವನ್ನು ಎಚ್.ಎಸ್. ರಾಘವೇಂದ್ರರಾವ್ ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ‘ಕನ್ನಡ ಕಾದಂಬರಿಗಳ ಈಚಿನ ಚಪಲಗಳನ್ನು ಮೀರಿ, ಬರವಣಿಗೆಯ ಹೊಸ ಸಾಧ್ಯತೆಗಳನ್ನು ಶೋಧಿಸುವ ಈ ಅನುವಾದ ನನಗೆ ಖುಷಿ ಕೊಟ್ಟದೆ‘ ಎಂದಿದ್ದಾರೆ. ಈಚಿನ ಚಪಲಗಳ ಬಗ್ಗೆ ಅವರೊಂದಷ್ಟು ವಿವರವಾಗಿ [...]
Filed under: ಕಾದಂಬರಿ | Tagged: ಅಭಿನವ, ಕನ್ನಡ ಪ್ರಭ, ಕೆ.ಪಿ.ಸುರೇಶ್, ಕೊಸಿಮೊ | Leave a Comment »
Posted on May 20, 2009 by pusthakapreeethi
1981 ರಲ್ಲಿ ಪ್ರಕಟವಾದ ‘ಗಂಡುಗಲಿ ಮದಕರಿನಾಯಕ‘ ಕಾದಂಬರಿಯನ್ನು ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಮಿತ್ತ, ಮರುಮುದ್ರಣ ಮಾಡಿದ್ದಾರೆ. ಇದು ನಾಲ್ಕನೆಯ ಮುದ್ರಣ. ಸಾಹಿತ್ಯ ಸಮ್ಮೇಳನದಲ್ಲಿ ಈ ಕಾದಂಬರಿಯ 748 ಪ್ರತಿಗಳು ಮಾರಾಟವಾಗಿವೆ ಎನ್ನುತ್ತಾರೆ ಪ್ರಕಾಶಕರು.
ದಲಿತ, ಬಂಡಾಯ, ಸಸ್ಪೆನ್ಸ್, ಪಾಲಿಟಿಕ್ಸ್, ಡೀಪ್ ಲವ್, ಐತಿಹಾಸಿಕ, ಕೌಟುಂಬಿಕ, ಸಂಗೀತ, ನೃತ್ಯ- ಯಾವ ಪ್ರಕಾರವನ್ನೇ ಆರಿಸಿಕೊಂಡರೂ ಅಧ್ಯಯನ ಮಾಡಿ ವಸ್ತುನಿಷ್ಟವಾಗಿಯೂ ಬರೆವ ವೇಣು ಯಾವುದೇ ಲೇಬಲ್ ಅಂಟಿಸಿಕೊಳ್ಳದ ಸೃಜನಶೀಲ ಬರಹಗಾರರು. ಐತಿಹಾಸಿಕ ಕಾದಂಬರಿಗಳ ಅವನತಿಯ ಕಾಲದಲ್ಲಿ ಓಯಸ್ಸಿಸ್ ನಂತೆ ದುರ್ಗದ ಇತಿಹಾಸ ಕುರಿತಂತೆ [...]
Filed under: ಐತಿಹಾಸಿಕ, ಕಾದಂಬರಿ | Tagged: ಕನ್ನಡ ಪ್ರಭ, ಗಂಡುಗಲಿ ಮದಕರಿನಾಯಕ, ಗೀತಾಂಜಲಿ ಶಿವಮೊಗ್ಗ, ಬಿ.ಎಲ್.ವೇಣು | Leave a Comment »
Posted on April 21, 2009 by pusthakapreeethi
“ಈಗ ನೀನು ಈ ಶಾಲೆಯ ವಿದ್ಯಾರ್ಥಿನಿ” ಎಂದು ಮುಖ್ಯೋಪಧ್ಯಾಯರು ಹೇಳಿದ ಮೇಲೆ ತೊತ್ತೊ-ಚಾನ್ ನಾಳೆ ಬೆಳಗಾಗುವುದನ್ನೇ ಕಾಯ್ದಳು. ಈ ಮೊದಲು ಆಕೆ ಎಂದೂ ಹಾಗೆ ಕಾಯ್ದಿರಲಿಲ್ಲ.
ಪುಟ್ಟ ತೊತ್ತೊ-ಚಾನ್ ತೊಮೊಯೆ ಗಾಕುಯೆನ್ ಶಾಲೆಯ ವಾತಾವರಣ ತಾನು ಹಾಗೂ ತನ್ನ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಇಷ್ಟವಾಗಬೇಕು ಹಾಗೂ ಸಮವಸ್ತ್ರ ಮತ್ತು ಪಠ್ಯಕ್ರಮಕ್ಕಿಂತ ಮಕ್ಕಳಿಗೆ ಬೇಕಾದ ಸ್ವಾದಿಷ್ಟ ಊಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮುಖ್ಯೋಪದ್ಯಾಯರು ಇರಬೇಕು ಎಂದು ಆಶಿಸಿದ್ದಳು. ಅಲ್ಲಿ ಎಲ್ಲ ಮಕ್ಕಳು ಸಂಗೀತ ಕಲಿಯುತ್ತಿದ್ದರು, ಆಟವಾಡುತ್ತಿದ್ದರು, ಬೇಸಿಗೆಯಲ್ಲಿ ಹೊರಗೆ [...]
Filed under: ಕಾದಂಬರಿ | Tagged: ಕನ್ನಡ ಪ್ರಭ, ತೆತ್ಸುಕೊ ಕುರೋಯಾನಾಗಿ, ತೊತ್ತೊ-ಚಾನ್, ನ್ಯಾಷನಲ್ ಬುಕ್ ಟ್ರಸ್ಟ್, ವಿ.ಗಾಯತ್ರಿ | 3 Comments »
Posted on January 28, 2009 by pusthakapreeethi
ಹೊಸ ಪೀಳಿಗೆಯಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಕ ವೃತ್ತಿಗೆ ಹೊರತಾದ ವಿಭಿನ್ನ ಕ್ಷೇತ್ರಗಳಲ್ಲಿದ್ದು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡಿರುವ ಯುವಕರ ಬರವಣಿಗೆಗಳನ್ನು ಐದು ವರ್ಷಗಳಿಂದ ಪ್ರಕಟಿಸುತ್ತಿರುವ ಛಂದ ಪುಸ್ತಕ ಹೊರತಂದ ಕೃತಿ ಇದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಹುದ್ದೆಯಲ್ಲಿದ್ದು ಸದ್ಯ ಪೂರ್ವ ಆಫ್ರಿಕಾದ ತಾಂಜಾನಿಯದಲ್ಲಿ ವಾಸವಿರುವ ಪ್ರಶಾಂತ್ ಬೀರೂರು ಚಿಕ್ಕಣ್ಣ ದೇವರು (ಪ್ರಶಾಂತ್ ಬೀಚಿ) ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಮೂಲ ಲೇಖಕ ಹೆನ್ರಿ ಆರ್. ಓಲೆ ಕುಲೆಟ್ ಕೀನ್ಯಾ ದೇಶದ ಜನಪ್ರಿಯ ಕಾದಂಬರಿಕಾರ. ಆಫ್ರಿಕಾದ ಬುಡಕಟ್ಟುಗಳಲ್ಲಿ ಒಂದಾದ [...]
Filed under: ಕಾದಂಬರಿ | Tagged: ಛಂದ ಪುಸ್ತಕ, ಪ್ರಜಾವಾಣಿ, ಪ್ರಶಾಂತ್ ಬೀಚಿ, ಲಕ್ಷ್ಮಣ ಕೊಡಸೆ, ಲೇರಿಯೋಂಕ, ಹೆನ್ರಿ ಆರ್. ಓಲೆ ಕುಲೆಟ್ | 2 Comments »
Posted on January 10, 2009 by pusthakapreeethi
`ಅದೃಷ್ಟಕ್ಕೆ ಎಂಬಂತೆ ನಮಗೆ ದಕ್ಕಿದ ಈ `ಕಾಫಿ ನಾಡಿನ ಕಿತ್ತಳೆ‘ಯಲ್ಲಿ ಮಲೆನಾಡಿನ ಬದುಕಿನ ನವರಸಗಳೆಲ್ಲ ಮೇಳವಿಸಿವೆ. ಕವಿ ವಿ.ಜಿ.ಭಟ್ಟರ ಕಲ್ಪನೆಯ ಹತ್ತನೆಯ ರಸ (ಶುಷ್ಕರಸ) ಇಲ್ಲಿ ಲವಲೇಶವೂ ಕಾಣುತ್ತಿಲ್ಲ. ಕೆಲವೆಡೆ ಸಾಕ್ಷ್ಯಚಿತ್ರದಂತೆ, ಕೆಲವೆಡೆ ಕಾಲ್ಪನಿಕ ಕತೆಯಂತೆ, ಇನ್ನು ಕೆಲವೆಡೆ ಹಾಸ್ಯದ ಲಹರಿಯಂತೆ ಈ ಕೃತಿ ಪ್ರತಿ ಪುಟದಲ್ಲೂ ರೂಪ ಲಕ್ಷಣಗಳನ್ನು ಬದಲಾಯಿಸಿಕೊಳ್ಳುತ್ತಾ, ಮಲೆನಾಡಿನ ಮಳೆಗಾಲದ ಹಳ್ಲಗಳಂತೆ ಒಮ್ಮೆ ಧಾವಿಸುತ್ತಾ, ಒಮ್ಮೆ ನಿಧಾನಕ್ಕೆ ಜುಳುಜುಳಿಸುತ್ತ, ಮರುಕ್ಷಣವೇ ಧುಮ್ಮಿಕ್ಕುತ್ತ, ಮತ್ತೆ ಕೆಲವೊಮ್ಮೆ ಅನಿರೀಕ್ಷಿತವಾಗಿ ಹ್ರಸ್ವವಾಗುತ್ತ ಸಾಗುತ್ತದೆ. ಆರ್.ಕೆ.ನಾರಾಯಣರ `ಮಾಲ್ಗುಡಿ ಡೇಯ್ಸ್‘ [...]
Filed under: ಕಾದಂಬರಿ | Tagged: ಕನ್ನಡ ಪ್ರಭ, ಕಾಫಿ ನಾಡಿನ ಕಿತ್ತಳೆ, ಗಿರಿಮನೆ ಶ್ಯಾಮರಾವ್ | Leave a Comment »
Posted on January 8, 2009 by pusthakapreeethi
ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಆಳವಾದ ಪರಿಶ್ರಮ ಹೊಂದಿರುವವರು, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಪಕಿ, ಪ್ರವೃತ್ತಿಯಲ್ಲಿ ಲೇಖಕಿ ಮತ್ತು ಗಾಯಕಿ ಎಂದು ಪರಿಚಯವಿರುವ ಯಾರಾದರೂ ಡಾ.ಅನಸೂಯಾದೇವಿಯವರನ್ನು ಗುರುತಿಸಬಹುದು. ಅವರ ಕೃತಿಯೇ `ಕಾಳ ಬೆಳದಿಂಗಳು‘.
ಬದುಕು ಎಸೆಯುವ ಸಂಕೀರ್ಣಮಯ ಸವಾಲುಗಳಿಗೆ ಒಡ್ಡಿಕೊಂಡು ಕಣ್ಣಂಚಿನಲ್ಲಿಯ ಕಂಬನಿಯೊಂದಿಗೇ ಹೋರಾಟದಲ್ಲಿ ತೊಡಗಿ ತಮ್ಮದೇ ಆದ ಧೀಶಕ್ತಿಯಲ್ಲಿ ಎದ್ದುನಿಲ್ಲುವ ಇಲ್ಲಿನ ಸ್ತ್ರೀ ಪಾತ್ರಗಳು ನಮ್ಮ ಮನ ಕಲಕುತ್ತವೆ. ಓದಲು ಕೈಗೆತ್ತಿಕೊಂಡರೆ ಕೆಳಗಿಡಲಾಗದಂತೆ ಚಿತ್ತಾಪಹಾರಿಯಾಗಿರುವ ಕೃತಿ `ಕಾಳ ಬೆಳದಿಂಗಳು‘ ಎಂದು ಪ್ರಕಾಶಕರು ಅಭಿಪ್ರಾಯ ಪಡುತ್ತಾರೆ.
ಡಾ.ಅನಸೂಯಾದೇವಿಯವರ ಲೇಖನಿಯಿಂದ ಮತ್ತಷ್ಟು ಕೃತಿಗಳು ಮೂಡಿ [...]
Filed under: ಕಾದಂಬರಿ | Tagged: ಕನ್ನಡ ಪ್ರಭ, ಕಾಳ ಬೆಳದಿಂಗಳು, ಡಾ. ಅನಸೂಯಾದೇವಿ, ಸಹನಾ ಪ್ರಕಾಶನ | Leave a Comment »
Posted on January 7, 2009 by pusthakapreeethi
ಶಾಂತಾರಾಮ ಸೋಮಯಾಜಿ ಕತೆಗಳಲ್ಲಿ ಹೊಸಲೋಕವಿರುತ್ತದೆ. ವಿನೂತನವಾದ ಬರಹ ಶೈಲಿಯಲ್ಲಿ ಕತೆ ಹೇಳುವ ಶಾಂತಾರಾಮರ ಮೂರನೆಯ ಕಾದಂಬರಿ `ಕುರುಡ ಕುರುಡಿ‘. ಇಲ್ಲಿಯೂ ಕೂಡಾ ಹೊಸತೇನನ್ನೋ ಹೇಳುವ ಕೆಲಸ ನಡೆದಿದೆ. ಹೊಸ ಕಥಾವಸ್ತು. ಓದುಗರನ್ನು ಹಿಡಿದಿಟ್ಟುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಶಾಂತಾರಾಮರ ವೈಚಾರಿಕ ವಿಷಯಗಳೂ ಇವೆ.
ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಜನಮೆಚ್ಚುಗೆ ಗಳಿಸಿದ `ಕುರುಡ ಕುರುಡಿ‘ಯನ್ನು ಬೆಳಕಿಗೆ ತಂದಿದ್ದಾರೆ ಪ್ರಕಾಶಕ ನಾರಾಯಣ ಮಾಳ್ಕೋಡ್. ಮುಖಪುಟದ ಕೆಟ್ಟ ವಿನ್ಯಾಸವನ್ನು ಕಣ್ಣುಮುಚ್ಚಿ ಕ್ಷಮಿಸಿದರೆ ಪುಸ್ತಕ `ಸುಮುಖ‘.
ಶೀರ್ಷಿಕೆ: ಕುರುಡ ಕುರುಡಿ ಲೇಖಕರು: ಶಾಂತಾರಾಮ ಸೋಮಯಾಜಿ [...]
Filed under: ಕಾದಂಬರಿ | Tagged: ಕನ್ನಡ ಪ್ರಭ, ಕುರುಡ ಕುರುಡಿ, ಶಾಂತಾರಾಮ ಸೋಮಯಾಜಿ, ಸುಮುಖ ಪ್ರಕಾಶನ | 1 Comment »
Posted on December 25, 2008 by pusthakapreeethi
ಅಬ್ಬಾಸರ ಈ ಕಾದಂಬರಿಯಲ್ಲಿ ಹೆಜ್ಜೆಹೆಜ್ಜೆಗೆ ಹಿಂಸೆಯ ಬೀಜಗಳಿವೆ. ಒಂದಿಷ್ಟು ಅವಕಾಶ ಸಿಕ್ಕರೂ ಸಾಕು, ಈ ಬೀಜಗಳು ಮೊಳಕೆಯೊಡೆದು ಎಲ್ಲೆಲ್ಲೂ ಹಿಂಸೆಯ ರುದ್ರನರ್ತನ ಈ ಕಾದಂಬರಿಯ ತುಂಬ ರಂಗುರಂಗಾಗಿ ಕಾಣಿಸಿಬಿಡಬಹುದು. ಆದರೆ ಕಾದಂಬರಿ ಉದ್ದಕ್ಕೂ ಹಿಂಸೆಯನ್ನು ಗೆಲ್ಲಲು ನೋಡುತ್ತದೆ. ಅಬ್ಬಾಸ್ ಅವರ ನಂಬಿಕೆ ಅಹಿಂಸೆಯಲ್ಲಿ, ಪ್ರೀತಿಯಲ್ಲಿ, ಮಾನವತೆಯಲ್ಲಿ, ವ್ಯಕ್ತಿ ಘನತೆಯಲ್ಲಿ, ಮೊಹಲ್ಲಾದ, ಊರಿನ, ದೇಶದ ಹಿತದಲ್ಲಿ‘ ಎಂಬ ಭಾಷಣರೂಪಿ ಮುನ್ನುಡಿ ಬರೆದಿರುವುದು ಜಿ.ಪಿ.ಬಸವರಾಜು.
ಅಬ್ಬಾಸ ಉತ್ತಮ ಕತೆಗಳನ್ನು ಓದಿದವರು ಈ `ಜನ್ನತ್ ಮೊಹಲ್ಲಾ‘ ಪ್ರವೇಶಿಸಲೇಬೇಕು. ಕತೆ ಹೇಳುವ ಶೈಲಿ, ಪಾತ್ರವನ್ನು [...]
Filed under: ಕಾದಂಬರಿ | Tagged: ಅಬ್ಬಾಸ್ ಮೇಲಿನಮನಿ, ಕನ್ನಡ ಪ್ರಭ, ಜನ್ನತ್ ಮೊಹಲ್ಲಾ, ಲಕ್ಷ್ಯ ಪ್ರಕಾಶನ | Leave a Comment »
Posted on December 24, 2008 by pusthakapreeethi
ಅರ್ಧ ಶತಮಾನಕ್ಕೂ ಹಿಂದಿನ ಕಾಲದ ಉತ್ತರ ಕನ್ನಡದ ಹವ್ಯಕ ಪರಿಸರಕ್ಕೆ ಸಂಬಂಧಿಸಿದ ಕಾದಂಬರಿ `ನಂಬಿಕೆಯ ನೆರಳು‘. ಅಂದಿನ ಜೀವನ ಪದ್ಧತಿ, ಸಂಪ್ರದಾಯದಲ್ಲಿ ಇಂದು ಅನೇಕ ಬದಲಾವಣೆಗಳನ್ನು ಕಾಣಬಹುದಾದರೂ, ಆ ಜನರ ಜೀವನ ಜೀವನಮೌಲ್ಯ, ಶ್ರದ್ಧೆ ಮತ್ತು ನಂಬಿಕೆಗಳು ಇಂದಿಗೂ ಮುಂದುವರೆದಿವೆ. ಡಿ.ವಿ.ಹೆಗಡೆಯವರ ಈ ಕಾದಂಬರಿ ಓದಿದ ನಂತರ ಮನಸ್ಸಿನಲ್ಲಿ ಉಳಿಯುವುದಲ್ಲದೇ ಅನೇಕ ಬಿಂಬಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ.
ಕಾದಂಬರಿಯ ಮುಖ್ಯ ಪಾತ್ರ ರಾಮಣ್ಣನ ಮೂಲಕ ಡಿ.ವಿ.ಹೆಗಡೆಯವರು ಇಡೀ ಉತ್ತರ ಕನ್ನಡದ ಪರಿಸರವನ್ನು ಅತ್ಯಂತ ಸರಳವಾಗಿ ಕಟ್ಟಿಕೊಡುತ್ತಾರೆ. ಅದು ವಿಸ್ತೃತವಾದಂತೆ ಅತ್ಯಂತ [...]
Filed under: ಕಾದಂಬರಿ | Tagged: ಅಕ್ಷಯ ಪ್ರಕಾಶನ, ಕನ್ನಡ ಪ್ರಭ, ಡಿ.ವಿ.ಹೆಗಡೆ, ನಂಬಿಗೆಯ ನೆರಳು | Leave a Comment »
Posted on December 8, 2008 by pusthakapreeethi
ಟಿಪ್ಪು ಸುಲ್ತಾನ, ಗಿರೀಶ್ ಕಾರ್ನಾಡರ ಪ್ರಕಾರ ಟಿಪೂ, ಕನ್ನಡದ ಬುದ್ಧಿಜೀವಿಗಳನ್ನೂ ಕಾದಂಬರಿಕಾರರನ್ನೂ ಕಾಡುತ್ತಲೇ ಇರುವ ದೊರೆ. ಅವನನ್ನು ದ್ವೇಷಿಸುವವರೂ, ಟೀಕಿಸುವವರೂ ಕಾಲದ ಹಾದಿಯಲ್ಲಿ ಅಲ್ಲಲ್ಲಿ ಎದುರಾಗುತ್ತಾರೆ. ಟಿಪ್ಪು ಕನ್ನಡತನ, ಕನ್ನಡ ವಿರೋಧಿ ನಿಲುವು, ಸಾಧನೆ, ಬಾಧೆ, ಜನಹಿತ ಎಲ್ಲವೂ ಸಾಹಿತ್ಯದಲ್ಲಿ ವಿವಿಧ ರೂಪಗಳಲ್ಲಿ ಬಂದು ಹೋಗಿವೆ. ಶಿವಪ್ರಕಾಶ್ ಬರೆದ ನಾಟಕ, ಸೀತಾರಾಮಶಾಸ್ತ್ರಿಗಳ ಕಾದಂಬರಿ, ಕನ್ನಡದ ಅನೇಕ ಸಿನಿಮಾಗಳಲ್ಲಿ ಟಿಪ್ಪು ಕಾಣಿಸಿಕೊಳ್ಳುತ್ತಾನೆ.
ಟಿ. ಗುರುರಾಜ್ ಇದೀಗ `ಟಿಪ್ಪು‘ ವನ್ನಿಟ್ಟುಕೊಂಡು ಚಾರಿತ್ರಿಕ ಕಾದಂಬರಿ ಬರೆದಿದ್ದಾರೆ. ಅವರ ಪ್ರಕಾರ ಹಿಂದು ಮುಸ್ಲಿಮರಿಬ್ಬರನ್ನೂ [...]
Filed under: ಕಾದಂಬರಿ | Tagged: ಕನ್ನಡ ಪ್ರಭ, ಟಿ. ಗುರುರಾಜ್, ಟಿಪ್ಪು, ಸಪ್ನ ಬುಕ್ ಹೌಸ್ | Leave a Comment »