ನಾನೊಬ್ಬ ಎ.ಬಿ.ಸಿ.ಡಿ.

ಪ್ರೊ. ಉಷಾ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ `ಹಸಿವೆಂಬೋ ಮಾಯೆ’ಯಲ್ಲಿನ ನಲವತ್ತಾರು ಕವಿತೆಗಳಲ್ಲಿ ಒಡೆದು ಕಾಣುವುದು ಕವಯತ್ರಿಯ ಸಾಹಿತ್ಯಿಕ ಹಸಿವು. ಹಾಸನದ ಎ.ವಿ.ಕೆ. ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುವ ಉಷಾ ಈಗ ನಿವೃತ್ತರು. ವೃತ್ತಿಯಿಂದ ನಿವೃತ್ತರಾಗಿ ಕಾವ್ಯದ ಧ್ಯಾನದಲ್ಲಿ ಮುಳುಗಿರುವ ಅವರ ಕವಿತೆಗಳಲ್ಲಿ ಮಾಗಿದ ಬದುಕು ಪ್ರತಿಫಲಿಸುತ್ತದೆ.
ಪ್ರಾಮಾಣಿಕತೆ ಹಾಗೂ ಸೋಗಿಲ್ಲದ ಜೀವನ ಪ್ರೀತಿ `ಹಸಿವೆಂಬೋ ಮಾಯೆ’ ಸಂಕಲನದಲ್ಲಿ ಎದ್ದು ಕಾಣುವ ಗುಣಗಳು. ಬದಲಾದ ಕಾಲದ ಬಗೆಗಿನ ವಿಷಾದ ಒಡೆದು ಕಾಣುತ್ತದಾದರೂ, ಈ ವಿಷಾದ ಜೀವನ [...]

ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ

‘ಎಳೆಯ ಬೆರಳುಗಳೊಳಗೆ ಯಾವುದೋ ವೀಣೆ ನುಡಿದಿದೆ ಸುಮಧುರ
ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ’
(ನನ್ನ ಮಗು/ಪು.37)
ಎಂದು ಲಯಬದ್ಧವಾಗಿ ಬರೆಯುವ ಛಾಯಾ ಭಗವತಿಯವರ ಮೊದಲ ಸಂಕಲನವಿದು. ತುಂಬಾ ಪುಟ್ಟ ಕವನ ಸಂಗ್ರಹವಾದ ಇದರಲ್ಲಿ 19 ಕವಿತೆಗಳಿವೆ. ರಮ್ಯವಾದ, ಬಾಲ್ಯವನ್ನು ನೆನಪಿಸುವ ಚಿತ್ರಗಳು ಇದರಲ್ಲಿವೆ. ಹೆಣ್ಣಿನ ಬದುಕಿನ ಹಂತಗಳಾದ ಬಾಲ್ಯ, ಹರೆಯ, ಮದುವೆ, ತಾಯ್ತನ ಇಲ್ಲಿ ಕವಿತೆಗಳಾಗಿವೆ.
ಕೆಲವೆಡೆ ಪ್ರಾಸಬದ್ಧವಾಗಿ, ಲಯಬದ್ಧವಾಗಿ ಬರೆಯುವ ಕವಿ ಒಂದು ಸುಂದರ ಚಿತ್ರವನ್ನು ಕಣ್ಣಮುಂದೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಸೀಮಿತ ಅನುಭವದ ಕುರಿತು [...]

… ನಾನು ಮಧ್ಯಬಿಂದುವಿನಂತೆ ತಟಸ್ಥ,

ಇಂದಿರಾ ಸಂತ್ ಮರಾಠಿಯ ಪ್ರಸಿದ್ಧ ಕವಿ. ಭಾವಗೀತೆಯ ಕವಿಯಾಗಿ ಅವರು ಪರಿಚಿತರು. ಅವರ ಮೊದಲ ಕವಿತಾ ಸಂಗ್ರಹ `ಗೊಂಬೆಗಳು’ ಎಂಬುದು. ಬಳಿಕ ಪ್ರಕಟವಾದ `ಗರ್ಭರೇಶಿಮೆ’ ಕವಿತೆಗಳನ್ನು ಸಾಹತ್ಯ ಅಕಾಡೆಮಿ ಮರು ಮುದ್ರಿಸಿದೆ.
ಬದುಕಿನ ದಾರುಣತೆಯನ್ನು ಬಿಂಬಿಸುವ ಕವಿತೆಗಳನ್ನು ಬರೆವ ಇಂದಿರಾ ಸಂತ್ ಬಾಲ್ಯದ ನೆನಪುಗಳು ಹಾಗೂ ದೈನಿಕ ಬದುಕಿನಿಂದ ಕವಿತೆಗಳನ್ನು ಕಟ್ಟಿದವರು. ಹಾಗೂ ನಾವು ನಿತ್ಯ ನೋಡುತ್ತಿರುವ ಸಂಗತಿಗಳಿಂದಲೇ ಕವಿತೆಗಳ ವಸ್ತುಗಳನ್ನು ಅವರು ಆಯ್ದುಕೊಂಡಿರುವುದನ್ನು ಕಾಣಬಹುದು.
… ನಾನು ಮಧ್ಯಬಿಂದುವಿನಂತೆ ತಟಸ್ಥ,
ಮನಮಗ್ನ
ನವಿಲುಗರಿಯ ಮೇಲಿನ ಕಣ್ಣಿನಂತೆ.
(ಮನಮಗ್ನ/ಪು.65)
ಇಂದಿರಾ ಅವರ ದನಿ ಮೆಲು ದನಿಯದು. [...]

ಕೊರಗೆಂದರೆ

ಕೊರಗೆಂದರೆ
ನಾವು ಎಲ್ಲರಂತೆ ಪ್ರೇಮಿಸಲಿಲ್ಲ
ನಿರೀಕ್ಷೆಗಳೆಲ್ಲ ಹುಸಿಯಾದ ಮೇಲೆ
‘ಹುಸಿ‘ ಎಂಬ ಪದಕ್ಕೆ ಅನ್ವರ್ಥವಾಗಿ
ನಿರೀಕ್ಷೆ ಎಂದು ಬರೆದಿಟ್ಟುಕೊಂಡಿದ್ದೇನೆ
ಹೌದು,
ನಮ್ಮಿಬ್ಬರ ಭೇಟಿಗೆ ಬೆಳದಿಂಗಳು ಚೆಲ್ಲುತ್ತಿದ್ದ
ಚಂದಿರ ಈಗಲೂ ನಿಮ್ಮೂರಲ್ಲಿ ನೆಲಸಿದ್ದಾನ?
(ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ-ಪು-೩೬)
ಎಂದು ಸಂಕಲನದ ಮುಖ್ಯ ಕವಿತೆಯಲ್ಲಿ ಚಿತ್ರವತ್ತಾಗಿ ಬರೆಯುವ ಕವಿ ಸಿದ್ದು ದೇವರಮನಿಯವರದು ಒಂದು ರೀತಿಯ ವಿಷಾದಗೀತೆಗಳು. ಇದು ಕವಿಯ ಮೊದಲ ಸಂಕಲನ.
ಇವರ ಕವಿತೆಗಳಲ್ಲಿ ಪ್ರೀತಿಯ ಕನವರಿಕೆಗಳಿವೆ, ಷರೀಫಜ್ಜನಿಗೊಂದು ಪತ್ರವಿದೆ, ಪ್ರಕೃತಿಯ ಕುರಿತಾದ ವ್ಯಾಮೋಹವಿದೆ. ರೋಮ್ಯಾಂಟಿಕ್ ಆಗಿ ಬರೆಯುವ ಕವಿಯ ಸರಳ ಮನಸ್ಸಿನ ಸರಳ ರಚನೆಗಳಿವು. ಸವೆದು ಸವಕಲಾಗಿರುವ ಕವಿಸಮಯಗಳೂ ಇತ್ತೀಚಿನ ಕವಿತೆಗಳಂತೆ [...]

ಸಂಗಾತಿ – ಕವನ ಸಂಕಲನ

ಈ ಕವನ ಸಂಕಲನದಲ್ಲಿ 106 ಕವಿತೆಗಳಿವೆ. ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯನ್ನೇ ಬಳಸಿ ಶಿಕ್ಷಣ, ಸಂಸ್ಕಾರ, ಪರಿಸರ, ನೈತಿಕತೆ, ಸಾಮಾಜಿಕ ಕಳಕಳಿ, ಪ್ರೇಮ, ತ್ಯಾಗ ಮುಂತಾದ ಮೌಲ್ಯಗಳನ್ನು ಸಾರುವ ನಿಟ್ಟಿನಲ್ಲಿ ಕವನಗಳನ್ನು ರಚಿಸಿದ್ದಾರೆ. ಕವಿತೆಗಳಲ್ಲಿ ವೈವಿಧ್ಯತೆಯಿದೆ. ಕವಿಗೆ ಸಂಗೀತದ ಲಯದ ಜ್ಞಾನವಿರುವುದರಿಂದ ಇಲ್ಲಿನ ಬಹುಪಾಲು ಕವಿತೆಗಳು ಹಾಡಲು ಯೋಗ್ಯವಾಗಿವೆ. ಕವಿತೆಗಳ ಸಂಯೋಜನೆಯನ್ನು ರಾಗಕ್ಕೆ ಹೊಂದುವಂತೆ ರಚಿಸಲಾಗಿದೆ. ಶೀರ್ಷಿಕೆ: ಸಂಗಾತಿ ಲೇಖಕರು: ಶಂಕರ ಎಸ್. ಲಮಾಣಿ ಪ್ರಕಾಶಕರು: ಶ್ರೀಲಮಾಣಿ ಪ್ರಕಾಶನ ಜಮಖಂಡಿ ಪುಟ: [...]

ಮತ್ತೆ ಉಮರ್

ಉಮರ್ ಖಯ್ಯಾಮನ ರೂಬಾಯತುಗಳನ್ನು ಡಿವಿಜಿ ಕನ್ನಡಕ್ಕೆ ತಂದಿದ್ದರು. ಕೆಲವು ವರುಷಗಳ ಹಿಂದೆ ಶಾ. ಬಾಲೂರಾವ್ ಕೂಡ ಅವನ್ನು ಅನುವಾದಿಸಿದ್ದರು. ಇದೀಗ ಅವು ಜಗದೀಶ್ ಕೊಪ್ಪ ಅನುವಾದದಲ್ಲಿ ಮತ್ತೆ ಕನ್ನಡಕ್ಕೆ ಕಾಲಿಟಿವೆ.
ಖಯ್ಯಾಮ್ ಕವಿತೆಗಳ ಇಂಗ್ಲೀಷ್ ಅನುವಾದಗಳ ಪೈಕಿ ಅತ್ಯುತ್ತಮ ಎಂದು ಕರೆಸಿಕೊಳ್ಳುವುದು ಪಿಟ್ ಜೆರಾಲ್ಡ್ ಅವರ ಭಾಷಾಂತರ. ಡಿ.ವಿ.ಜಿ ಮತ್ತು ಬಾಲೂರಾವ್ ಕೂಡ ಅದನ್ನೇ ಇಟ್ಟುಕೊಂಡು ಕವಿತೆಗಳನ್ನು ಅನುವಾದ ಮಾಡಿದ್ದರು. ಜಗದೀಶ್ ಕೂಡ ಅದನ್ನೇ ಮುಂದಿಟ್ಟುಕೊಂಡಿದ್ದಾರೆ.
There was the Door to which I found no Key;
There [...]

ಮಡುಗಟ್ಟಿದ ಮಾನವ ಪ್ರೀತಿ

ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವ ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿ ವ್ಯಾವಹಾರಿಕ ಸಂಬಂಧಗಳು ಬಲಗೊಳ್ಳುತ್ತಾ ಭಾವನಾತ್ಮಕ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಿರುವುದನ್ನು ತಡೆಯುವುದು ಅನಿವಾರ್ಯವೆಂಬ ಎಚ್ಚರಿಕೆಯನ್ನು ಗುಂಡಣ್ಣ ಕಲಬುರ್ಗಿ `ಎಲ್ಲಿ ಹೋದಳು ಈಕೆ‘ ಕವನ ಸಂಕಲನದಲ್ಲಿ ನೀಡಿದ್ದಾರೆ. ಬೆಳಗು ಜಗದ ಕತ್ತಲನ್ನು ಕರಗಿಸದಿರುವ ಪರಿಣಾಮದಿಂದ ಹಿರಿಯರು ಹೆಜ್ಜೆ ಇಟ್ಟ ಹೆದ್ದಾರಿ ಇಂದು ತಿರುವು ಪಡೆದು ಹಿಂಸಾಮಾರ್ಗಗಳಾಗಿ ಕವಲೊಡೆದು ಬದಲಾಗಿರುವುದಕ್ಕೆ ಕವಿಮನ ತಲ್ಲಣಿಸಿದೆ.
ಧರ್ಮದ ಹುಟ್ಟಿನ ಉದ್ದೇಶ ಭಾವನೆಗಳನ್ನು ಬೆಸೆದು ಆತ್ಮ ಪರಮಾತ್ಮರ ನಡುವಿನ ಅಂತರವನ್ನು ಕಡಿಮೆ ಮಾಡುವುದಕ್ಕಾಗಿ, ಆದರೆ ಪ್ರಸ್ತುತ ಪರಿಸರದಲ್ಲಿ [...]

ಕಣ್ಣ ಕಣಿವೆ

ರೇಣುಕಾ ನಿಡಗುಂದಿ ದೆಹಲಿಯಂತಹ ಮಹಾನಗರದಲ್ಲಿ ಕುಳಿತು ಕನ್ನಡ ಕವಿತೆ ಬರೆಯುತ್ತಿರುವವರು. ಆದ್ದರಿಂದ, ಸಹಜವಾಗಿ, ಅವರಿಗೆ ಹೀಗೆನಿಸುತ್ತದೆ; ` … ನಮ್ಮದೆನ್ನುವ ಎಲ್ಲದರಿಂದಲೂ ದೂರವಿರುವ ಹೊರನಾಡಿನಲ್ಲಿ ನಮ್ಮ ನೋವು, ನಲಿವುಗಳನ್ನು ಸಂತೈಸಿಕೊಳ್ಳುತ್ತ, ಹೊರಗಿನ ಆರ್ಭಟ, ರೀತಿ ನೀತಿಗಳಿಗೆ ಒಗ್ಗಿಕೊಳ್ಳುತ್ತ ನಮ್ಮ ಸಾಹಿತ್ಯಾಸಕ್ತಿ ಅಮೂರ್ತವಾದ ಅದೇನನ್ನೋ ಕಂಡುಕೊಳ್ಳುವ ನಿರಾಳ ಮನಸ್ಸಿನ ಚಿಂತನೆಯ ಒಂದು ಅಪೂರ್ವ ಹಂತದಲ್ಲಿ ಕಾವ್ಯ ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ’. ಹೀಗೆ ಹುಟ್ಟಿ ಸೂಕ್ಷ್ಮಾಭಿವ್ಯಕ್ತಿಯ ಈ ತುಣುಕು ಗಮನಿಸಿ : ತೋರುತ್ತದೆ ಒಮ್ಮೊಮ್ಮೆ / ವ್ಯಥೆಯೂ ಸಣ್ಣಗೆ / ಕೊರಕಲಿನಲ್ಲಿ [...]

ಕೆ.ಪಿ.ಕವಿತೆ

ಗೆಲ್ಲಲ್ಲಿ ಕೂತ ಮಿಂಚುಳ್ಳಿ
ಪ್ರಾರ್ಥನೆ ಮಾಡುತ್ತಿರುತ್ತದೆ,
ಅದರ ಪ್ರಾರ್ಥನೆ ನನಗೆ ಗೊತ್ತು
ಕೆರೆ ಬತ್ತಬಾರದು,
ಮನುಷ್ಯರು ಮೀನು ತಿನ್ನಬಾರದು.
ಶ್ರೀ
ಬಾವಲಿ ಹಗಲಿಡೀ ತಲೆ ಕೆಳಗಾಗಿ ನೇತಿರುತ್ತದೆ.
ನಾವೂ ಅದರಂತೇ, ಗೆಲ್ಲಲ್ಲಿ ತಲೆಕೆಳಗಾಗಿ ನೇತರೆ
ಹುಲ್ಲು, ಗಿಡ, ನಾಯಿ ಎಲ್ಲ ಬೇರೆ ತರ ಕಾಣಿಸೀತು.
ಇನ್ನೂ ಎತ್ತರದಲ್ಲಿ ನೇತರೆ, ಮನುಷ್ಯರೂ
ಬೇರೆ ತರ ಕಂಡಾರು
ಹೀಗೆ ಶೀರ್ಷಿಕೆ ಇಲ್ಲದೇ ಬರೆಯಲಾದ ಕೆ.ಪಿ.ಸುರೇಶ್ ಕವಿತೆಗಳದು ಒಂದು ವಿಭಿನ್ನ ಪ್ರಯತ್ನ. ಇಲ್ಲಿ ಮನುಷ್ಯರನ್ನು ಅರ್ಥ ಮಾಡಿಕೊಳ್ಳಲು ಕವಿ ಪಶು, ಪಕ್ಷಿ, ಕ್ರಿಮಿ, ಕೀಟಗಳ ಮಾರ್ಗ ಬಳಸಿದ್ದಾರೆ. ಕಪಿ, ಗುಬ್ಬಚ್ಚಿ, ನವಿಲು, ಕೆಂಬೂತ, ಕೊಕ್ಕರೆಗಳನ್ನು, ನಾಯಿ, ಬೆಕ್ಕುಗಳನ್ನು [...]

ಕವಿ ಯೇಟ್ಸ್ ಕನ್ನಡಕ್ಕೆ

`ಮನುಷ್ಯ ಸಾವನ್ನು ಸೃಷ್ಟಿಸಿದ‘ ಎಂದು ಬರೆದವ. `ಅದು ಮುದುಕರಿಗೆ ತಕ್ಕ ನಾಡಲ್ಲ‘ ಎಂದು ಗುಡುಗಿದ್ದವ. ಹಾಗೆಲ್ಲಾ ಹುಚ್ಚು ಹಿಡಿಯುವಂತೆ ಬರೆದು, ಜಗತ್ತಿನ ಎಲ್ಲಾ ಸಾಹಿತ್ಯ ವಲಯವನ್ನೂ ಪ್ರಭಾವಿಸಿಹೋದ ಕವಿ ಡಬ್ಲ್ಯೂ. ಬಿ. ಯೇಟ್ಸ್, ಕವಿತೆ ಎಂಬ ಮೀಸೆ ತರುಣ ಕವಿಗಳ ಮುಖದ ಮೇಲೆ ಮೂಡಿದಾಗಲೆಲ್ಲಾ ಆ ಕವಿಯ ಕವಿತೆಗಳಿಗೆ ಮತ್ತೆ ತಾರುಣ್ಯ ಮೂಡುತ್ತಾ ಹೋಗಿದೆ.
ಕನ್ನಡದಲ್ಲಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಈ ಹಿಂದೆ `ಚಿನ್ನದ ಹಕ್ಕಿ‘ ಹೆಸರಲ್ಲಿ ಯೇಟ್ಸ್ನ ಕವಿತೆಗಳನ್ನು ಅನುವಾದಿಸಿದ್ದರು. ಇದೀಗ ಮತ್ತೆ ಯೇಟ್ಸ್ನ [...]