ಸ್ವಾತಂತ್ರ್ಯ ಸಮರ ಇತಿಹಾಸದ ಹೊಳೆಯುವ ನಕ್ಷತ್ರ ಭಗತ್ ಸಿಂಗ್

ಶೀರ್ಷಿಕೆ: ಅಮರ ಹುತಾತ್ಮ ಸರದಾರ್ ಭಗತ್ ಸಿಂಗ್ ಲೇಖಕರು:ಜಿತೇಂದ್ರನಾಥ ಸಾನ್ಯಾಲ್ ಅನುವಾದ:ಟಿ.ಜಿ.ಪ್ರಭಾಶಂಕರ ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್  ಪುಟ:೩೨೪ ಬೆಲೆ:ರೂ.೧೩೦/-

ಸಂವಿಧಾನ ಶಿಲ್ಪಿ ಡಾ. ಬಿ.ಆರ‍್.ಅಂಬೇಡ್ಕರ‍್

ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅದರ ಭಾಗವಾದ ಅಸ್ಪೃಶ್ಯತೆಯ ಪ್ರಶ್ನೆ ಮತ್ತೆ- ಮತ್ತೆ ಏಳುತ್ತಾ ಬಂದಿದೆ. ಇದರಲ್ಲಿ ಅಡಕವಾಗಿರುವ ಅಸಮಾನತೆ ಮತ್ತು ಶೋಷಣೆಯ ಅಂಶಗಳ ಮೇಲೆ ಚರ್ಚೆಗಳು, ಆಂದೋಲನಗಳು ನಡೆಯುತ್ತ ಬಂದಿವೆ. ಆಧುನಿಕ ಭಾರತದಲ್ಲಿ ಡಾ. ಅಂಬೇಡ್ಕರ್ ಅವರ ನೇತೃತ್ವದ ಹೋರಾಟ ಇಂತವುಗಳಲ್ಲಿ ಪ್ರಮುಖವಾದದ್ದು. ಈ ಅವಿರತ ಹೋರಾಟಗಾರ ದಲಿತ ವಿಭಾಗಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದರು, ಮೇಲ್ಜಾತಿ ಆಪಾಢಭೂತಿತನಗಳನ್ನು ಬಯಲಿಗೆಳೆದರು, ಸ್ವಾತಂತ್ರ್ಯ ಹೋರಾಟ ಕಾಲದಲ್ಲೂ, ನಂತರವೂ ಕಾಂಗ್ರೆಸ್ ಮತ್ತು ಅದರ ನೀತಿಗಳನ್ನು ಬಯಲಿಗೆಳೆದರು. ಆದರೆ ಅಂತಿಮವಾಗಿ ಹಿಂದೂ [...]

ಬೋಳುವಾರ‍್ ಮಹಮ್ಮದ್ ಕುಞ್ಙಿ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು

Dr U R Anathamurthy will release the English version and Prof G Siddaramaiah, Former Chairman of Kannada Pustaka Pradhikara will release the reprinted Kannada version. Author Bolwar Mahamad Kunhi and Translator Rajagopal Acharya [Arya] will be present. ಕನ್ನಡದಿಂದ ಇಂಗ್ಲೀಷ್ ಗೆ ಅನುವಾದಿಸಲ್ಪಟ್ಟ ವಿಶೇಷ ಪುಸ್ತಕಗಳಲ್ಲೊಂದು ಈ ಪುಸ್ತಕ. ಬೋಳುವಾರ‍್ ಮಹಮ್ಮದ್ ಕುಞ್ಙಿ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು. `ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಇಂಗ್ಲೀಷ್ [...]

ಜ್ಯೋತಿಬಸು ಅಧಿಕೃತ ಜೀವನ ಚರಿತ್ರೆ

ಜ್ಯೋತಿಬಸು ಕೂಡಾ ರಾತ್ರೋರಾತ್ರಿ ರಾಜಕೀಯ ಶಿಖರಕ್ಕೇರಿಲ್ಲ. ಈ ಎತ್ತರದ ಸ್ಥಾನ ಅವರಿಗೆ ಲಭಿಸಿರುವುದರ ಹಿಂದೆ ಅತುಲ ತ್ಯಾಗವಿದೆ; ಸಹನೆ ಸಂಕಟಗಳ ಪರಂಪರೆಯಿದೆ; ರಾಜಕೀಯ ಚತುರತೆಯಿದೆ; ತಾತ್ವಿಕ ಬದ್ಧತೆಯಿದೆ; ಜನತೆಯ ಬಗ್ಗೆ ಅಪಾರ ಪ್ರೀತಿ, ವಿಶ್ವಾಸವಿದೆ. ಎಲ್ಲಕ್ಕೂ ಮಿಗಿಲಾಗಿ, ವಾಸ್ತವದ ಸಮಸ್ಯೆಗಳ ಸಂಕೀರ್ಣತೆಯನ್ನು ಅರಿತು ಅದಕ್ಕನುಗುಣವಾಗಿ ಸೈದ್ಧಾಂತಿಕ ನಿಲುವುಗಳನ್ನು ಅನ್ವಯಿಸಿ ಆಚರಿಸುವ ಔಚಿತ್ಯ ಪ್ರಜ್ಞೆಯಿದೆ; ಸಂಘಟನಾ ನಿಪುಣತೆಯಿದೆ. ಅವರೊಬ್ಬ ಅಚಲ ನಿರ್ಧಾರದ ಮನುಷ್ಯ. ಶ್ಲಾಘನೀಯ ನಮ್ರತೆ, ಜಿದ್ದಿನ ಜಿಗುಟುತನ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿವೆ. ಯಾರ ಮೇಲೂ ದಬ್ಬಾಳಿಕೆ [...]

ವಿಶ್ವದಲ್ಲಿ ಅನ್ಯಾಯವಾದ ಪ್ರತಿಯೊಂದು ಸಲ ನೀವು ಕೋಪದಿಂದ ಕಂಪಿಸಬಲ್ಲಿರಾದರೆ…

ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಪಡೆದ ಪಕ್ವ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ವಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ, ಬಿಡುವಿಲ್ಲದೆ ದುಡಿದು, ಮಾನವ ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ. “……..ದಾರಿದ್ರದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ. ಹಸಿವೆ [...]

ವಸ್ತುನಿಷ್ಟ ವ್ಯಕ್ತಿ ಚಿತ್ರಣ.

ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯವನ್ನು ತಮ್ಮ ವೈವಿಧ್ಯಮಯ ಬರವಣಿಗೆಗಳಿಂದ ಶ್ರೀಮಂತಗೊಳಿಸಿದವರಲ್ಲಿ ಪಿ.ಲಂಕೇಶ್ ಅವರೂ ಒಬ್ಬರು. ಭಾರತದ ಸಾಹಿತ್ಯ ಅಕಾಡೆಮಿಯು `ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆ‘ಯಲ್ಲಿ ಲಂಕೇಶ್ ಅವರ ಸಮಗ್ರ ವ್ಯಕ್ತಿತ್ವ ಹಾಗೂ ಬರವಣಿಗೆಯನ್ನು ಕುರಿತು ಪ್ರಕಟಿಸಿದ ಪರಿಚಯ ರೂಪದ ಪುಸ್ತಕ ಇದು. ಲಂಕೇಶ್ ಅವರು ಅಧ್ಯಾಪಕರಾಗಿ, ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ, ಪತ್ರಕರ್ತರಾಗಿ ಕ್ರಿಯಾಶೀಲರಾಗಿದ್ದ ಸುದೀರ್ಘ ಅವಧಿಯಲ್ಲಿ ಅವರ ಒಡನಾಡಿಯಾಗಿದ್ದ ಕೆ.ಮರುಳಸಿದ್ದಪ್ಪ ಅವರು ಈ ಕೃತಿಯನ್ನು ಬರೆದಿದ್ದಾರೆ. ಅತಿ ಪರಿಚಯದಿಂದ ವಸ್ತುನಿಷ್ಠತೆಗೆ ಭಂಗ ಬರಬಹುದೆಂಬ ಆಕ್ಷೇಪಕ್ಕೆ ಆಸ್ಪದವೇ ಇಲ್ಲದಂತೆ [...]

ಕಾರ್ನಾಡರ ಕುರಿತ ಎತ್ತರದ ಚರ್ಚೆ

ಸ್ವಾತಂತ್ರ್ಯೋತ್ತರ ಭಾರತದ ಮುಖ್ಯ ನಾಟಕಕಾರರಲ್ಲಿ ಗಿರೀಶ್ ಕಾರ್ನಾಡರು ಪ್ರಮುಖರು. ಅವರ ತುಘಲಕ್ ಮತ್ತು ನಾಗಮಂಡಲ ನಾಟಕಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿವೆ. ಇಷ್ಟಿದ್ದರೂ ಕನ್ನಡ ವಿಮರ್ಶೆ ಎಲ್ಲೋ ಒಂದು ಕಡೆ ಅವರನ್ನು ನಿರ್ಲಕ್ಷಿಸಿಕೊಂಡು ಬಂದಿದೆ ಎಂಬ ಭಾವ ನನ್ನಂಥವರಲ್ಲಿ ನಿಧಾನವಾಗಿ ಮೂಡುತ್ತಿವೆ. ಇದೀಗ 70 ದಾಟಿರುವ (ಜನನ: ಮೇ 19, 1938) ಅವರ ಎಲ್ಲಾ ಕೃತಿಗಳನ್ನು ಸಮಗ್ರವಾಗಿ ವಿಶ್ಲೇಷಿಸುವ, ಪರಿಚಯಿಸುವ (ಕನಿಷ್ಠ ಅಭಿನಂದನಾ ಗ್ರಂಥ ರೂಪದಲ್ಲಾದರೂ) ಒಂದಾದರೂ ಮಹತ್ವದ ಗ್ರಂಥವೊಂದನ್ನು ನಮಗೆ ಇದುವರೆಗೆ ಹೊರತರಲಾಗಲಿಲ್ಲ. ಸಾಮಾನ್ಯ ಬರಹಗಾರರ [...]

ವಸಂತಕುಮಾರ ಸಂಭವ

ನನ್ನ ಪ್ರೀತಿಯ ಕವಿತೆ ಬೆರೆಸಿ ಆತ್ಮೀಯತೆ ಹೇಳಿದಳು ಒಂದು ಮುಂಜಾನೆ ಸಪ್ತಸಾಗರದಾಚೆ ಇದೆ ನನ್ನ ವೀಣೆ ಹೋಗಿ ತರಲೇನು ಹೊತ್ತು ಮೇನೆ? ವಸಂತಕುಮಾರ ಪೆರ್ಲರ `ರಂಗಸ್ಥಳ‘ ಕವನ ಸಂಕಲನದ `ನನ್ನ ಪ್ರೀತಿಯ ಕವಿತೆ‘ಯ ಸಾಲುಗಳಿವು. ಇಲ್ಲಿರುವ ಮುಂಜಾನೆ, ಮೇನೆ, ವೀಣೆಗಳೆಲ್ಲ ಕವಿತೆಯನ್ನು ಸಿಂಗರಿಸಿವೆ. ಭಾವಗೀತೆ, ಗಂಭೀರ ಕವಿತೆ, ಪುರಾಣದ ರೂಪಕ – ಇವೆಲ್ಲ ಈ ಕವಿತೆಗಳಲ್ಲಿವೆ. ಒಂದಷ್ಟು ಹನಿಗವಿತೆಗಳು ಕೊನೆಗಿವೆ. ವೇಣುನಾದದಿ ತೇಲಿಸು, ಸೊದೆಯನೀಂಟಲು ತೋಯಿಸು ಮುಂತಾದ ಅಪರೂಪದ ಸಾಲುಗಳಿವೆ. ಗೋವಿಂದ ಪೈ ಸೈನ್ಯವಿರದ ಗಡಿ ರಾಜ್ಯಗಳ [...]

ರಾಜಕೀಯದ ಬೆಳಕಿಗೆ ಬರಲಿಚ್ಛಿಸುವವರು ಓದಬಹುದಾದ ಪುಸ್ತಕ

ಕುಗ್ರಾಮದಲ್ಲಿ ಎಮ್ಮೆ ಮೇಯಿಸುತ್ತಿದ್ದ ಬಾಲಕನೊಬ್ಬ ಸಂಪುಟ ಸಚಿವನಾಗುವ ಮಟ್ಟಕ್ಕೆ ಬೆಳೆದ ರಾಮೇಗೌಡರ ವಿಕಾಸ ಕಥನವೇ `ಬಚ್ಚಳ್ಳಿಯ ಬೆಳಕು‘. ವರ್ತಮಾನದಲ್ಲಿ ಭೂತ ಉಳಿಸಿರುವ ಅಸ್ಪಷ್ಟ ಹೆಜ್ಜೆ ಗುರುತುಗಳ ಜಾಡು ಹಿಡಿವ ಕಾರ್ಯವನ್ನು ಮಾಡಿದ್ದಾರೆ. ಎಂ.ಜಿ.ಚಂದ್ರಶೇಖರಯ್ಯ. ರಾಮೇಗೌಡರನ್ನು ನಿಕಟವಾಗಿ ಬಲ್ಲ ಹತ್ತಾರು ಮಂದಿ ತಮ್ಮ ನೆನಪನ್ನು ಕೆದಕಿರುವುದು ಇಲ್ಲಿ ಪುಸ್ತಕವಾಗಿದೆ. ದಶಕಗಳ ಹಿಂದೆ ಸಂದುಹೋದ ವ್ಯಕ್ತಿಯೊಬ್ಬನ ನಡವಳಿಕೆ, ಗುಣಸಂಪನ್ನತೆ, ಮಾಡಿರುವ ಕೆಲಸಗಳನ್ನು ಇಲ್ಲಿ ಸ್ಮರಿಸಲಾಗಿದೆ. ಸಾರ್ವಜನಿಕರ ನೆನಪು ಅಲ್ಪಾಯು. `ಆ ಕ್ಷಣ‘ವೇ ಮುಖ್ಯ ಎಂಬ ನಂಬಿಕೆ ಪ್ರಬಲವಾಗಿರುವ ಕಾಲಘಟ್ಟವಿದು ಎಂದು [...]

ಭಾರತ ರತ್ನ ಭೀಮಸೇನ ಜೋಶಿ

ಭಾರತರತ್ನ ಭೀಮಸೇನ ಜೋಶಿ ಅವರನ್ನು ಕುರಿತು ವಸಂತ ಪೋತದಾರು ಮರಾಠಿಯಲ್ಲಿ ಬರೆದಿರುವ `ಭೀಮಸೇನ‘ ಎಂಬ ಜೀವನಚರಿತ್ರೆಯ ಕನ್ನಡ ಭಾಷಾಂತರವನ್ನು ಧಾರವಾಡದ ಮನೋಹರ ಗ್ರಂಥಮಾಲೆ ಪ್ರಕಟಿಸಿದೆ. (2006). ಈ ಪುಸ್ತಕವನ್ನು ನಾನು ಸಪ್ಟೆಂಬರ್ 23, 2007ರ `ಪುಸ್ತಕ ಪ್ರೀತಿ‘ ಅಂಕಣದಲ್ಲಿ ಪರಿಚಯಿಸಿದ್ದೆ. `ಗಾಯಕ ಒಬ್ಬ ಕಳ್ಳನಿರಬೇಕು. ಪ್ರತಿಯೊಬ್ಬ ಗಾಯಕ ಎಲ್ಲರಿಂದ ಉತ್ತಮವಾದುದನ್ನು ತೆಗೆದುಕೊಂಡು ತನ್ನದೇ ರಸಾಯನ ಸಿದ್ಧಗೊಳಿಸಬೇಕು‘ ಎನ್ನುವ ಭೀಮಸೇನ ಜೋಶಿಯವರ ಜೀವ ಚರಿತ್ರೆ ಒಂದು ಯಶಸ್ವೀ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಪಂಡರಪುರದಲ್ಲಿ ಕಾನಡಿ ವಿಠ್ಠಲ, ಪೂನಾದಲ್ಲಿ ಕನ್ನಡ [...]

Follow

Get every new post delivered to your Inbox.