ಅಂಬೆಡ್ಕರ್ ಜಯಂತಿಯ ಶುಭಾಶಯಗಳು

ಈ ಪುಸ್ತಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಆನಂದ ತೇಲ್ ತುಂಬ್ಡೆ ಅವರ In and for the Post-Ambedkar Dalit Movement ನ ಅನುವಾದ ಮಾತ್ರವಲ್ಲ ಕನ್ನಡದ ಕವಿ ಸಿದ್ಧಲಿಂಗಯ್ಯ ಅವರ ಮಹರಾಷ್ಟ್ರದ ಮಣ್ಣಿನಲ್ಲಿ ಮೂಡಿ ಬಂದ ಗುಡುಗು ಸಿಡಿಲೆ ಮಳೆಯನೇಕೆ ತಾರಲಿಲ್ಲ ಮಿಂಚು ಮಾಯ ಅಷ್ಟೆಯೇ ಎಂದು ಕೇಳುತ್ತಿರುವ ಕವನ `ಅಂಬೆಡ್ಕರ್’ ದ ಪೂರ್ಣ ಪಾಠ, ಪ್ರೊ.ಲಕ್ಷ್ಮಣ್ ತೆಲಗಾವಿ ಅವರ `ಕರ್ನಾಟಕದಲ್ಲಿ ದಲಿತ ಸಂಘರ್ಷ:ದಲಿತ ಚಳುವಳಿಯ ವಿಕಾಸ-ಸವಾಲುಗಳು-ಸಾಧ್ಯತೆಗಳು, ದಲಿತರ ಸಮಸ್ಯೆಗಳ ಕುರಿತು ಭಾರತ ಕಮ್ಯೂನಿಸ್ಟ್ ಪಕ್ಷ [...]

ಹಿಂದುತ್ವ ಮತ್ತು ದಲಿತರು

ಈ ಗ್ರಂಥದಲ್ಲಿ ಸೇರ್ಪಡೆಯಾಗಿರುವ ಲೇಖನಗಳು ಹಿಂದುತ್ವ ಶಕ್ತಿಗಳು ದಲಿತರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಪ್ರಕ್ರಿಯೆಯ ಬಗ್ಗೆ ತಾತ್ವಿಕವೂ ಅನುಭವಜನ್ಯವೂ ಆದ ವಿಶ್ಲೇಷಣೆಗಳ ಮೂಲಕ ಸಾಕಷ್ಟು ಬೆಳಕು ಚೆಲ್ಲುತ್ತವೆ. ಕ್ರಿಯಾಶೀಲ ಚಳವಳಿಗಾರರು ಮತ್ತು ವಿದ್ವಾಂಸರುಗಳು ಬರೆದಿರುವ ಲೇಖನಗಳು ಈ ಗ್ರಂಥದಲ್ಲಿ ಸೇರ್ಪಡೆಯಾಗಿವೆ. ಈ ಲೇಖನಗಳಲ್ಲಿ ದಲಿತರ ಸಾಮಾಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮತ್ತು ರಾಜಕೀಯ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಜೊತೆಗೆ ಅವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಮುನ್ನೋಟದ ಬಗ್ಗೆ ಬೆಳಕು ಹರಿಸುವ ಲೇಖನಗಳೂ ಇಲ್ಲಿವೆ. ಇತ್ತೀಚಿನ ವಿದ್ಯಮಾನಗಳು ಸೃಷ್ಟಿಸಿರುವ [...]

ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್

`ವಿಮರ್ಶಕ ಜಿ.ಎಚ್.ನಾಯಕರು ಶೋಷಕ ವರ್ಗದಿಂದ ಬಂದವರು. ಅವರ ಹೆಸರೇ ಜಾತಿ ಸೂಚಿತವಾದದ್ದು. ಅವರು ಸವರ್ಣೀರಾದ್ದರಿಂದ ಅವರು ಎಂದೂ ಅವರ ಜನಾಂಗದ ಬಗ್ಗೆ ಹೇಳುವುದಿಲ್ಲ. ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್‘ … `ಹಣದ ವಿಚಾರದಲ್ಲಿ ದೇವನೂರು ಮಹಾದೇವ ಪ್ರಾಮಾಣಿಕನಲ್ಲ. ಆತ ಪಡೆದ ಹಣಕ್ಕೆ ಲೆಕ್ಕವಿಲ್ಲ. ಶಿಸ್ತು ಮೊದಲೇ ಇಲ್ಲ. ಈ ವ್ಯಕ್ತಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ತನ್ನ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ದೇವನೂರು ಮಹಾದೇವ ಎಷ್ಟು ದಲಿತರಿಂದ ಹಣ ಪಡೆದುಕೊಂಡಿದ್ದಾರೆ [...]

ಅಂಬೆಡ್ಕರ್

ಅಂಬೆಡ್ಕರ್ ಸಂವೇದನೆ ಡಾ. ಅಂಬೇಡ್ಕರರ ತತ್ವ ಚಿಂತನೆಗಳ ಹಿನ್ನೆಲೆಯಲ್ಲಿ ಡಾ. ಎಚ್. ಟಿ. ಪೋತೆ ಅವರು ಬರೆದ 11 ಲೇಖನಗಳ ಸಂಕಲನ ಇದು. `ಅಂಬೇಡ್ಕರ್ : ಸಾಮಾಜಿಕ ಚಳುವಳಿ‘, `ಅಂಬೆಡ್ಕರ್ ಮತ್ತು ಮಹಿಳೆ‘, `ಅಂಬೆಡ್ಕರ್-ಗಾಂಧಿ:ಮುಖಾಮುಖಿ‘ … ಹೀಗೆ, ಇಲ್ಲಿನ ವಿಷಯಗಳು ತೆರೆದುಕೊಳ್ಳುತ್ತದೆ. ಡಾ. ಪೋತೆ ಅವರು ಬಾಬಾ ಸಾಹೇಬರನ್ನು ಮೈ-ಮನ ತುಂಬಾ ತುಂಬಿಕೊಂಡವರಂತೆ ಮಾತನಾಡುವುದು ಈ ಬರಹಗಳಲ್ಲಿ ಸುಲಭವಾಗಿ ಗಮನಕ್ಕೆ ಬರುತ್ತದೆ. ಬಹಳ ವೇಳೆ ಸಂಗತಿಗಳನ್ನು ತೀರಾ ಸರಳೀಕರಿಸಿದ ನೆಲೆಗೆ ಕೊಂಡೊಯ್ಯುವುದೂ ಇದೆ. ಒಬ್ಬ ಬರಹಗಾರ ವರ್ಷದಲ್ಲಿ [...]

Follow

Get every new post delivered to your Inbox.