ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್

`ವಿಮರ್ಶಕ ಜಿ.ಎಚ್.ನಾಯಕರು ಶೋಷಕ ವರ್ಗದಿಂದ ಬಂದವರು. ಅವರ ಹೆಸರೇ ಜಾತಿ ಸೂಚಿತವಾದದ್ದು. ಅವರು ಸವರ್ಣೀರಾದ್ದರಿಂದ ಅವರು ಎಂದೂ ಅವರ ಜನಾಂಗದ ಬಗ್ಗೆ ಹೇಳುವುದಿಲ್ಲ. ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್‘

`ಹಣದ ವಿಚಾರದಲ್ಲಿ ದೇವನೂರು ಮಹಾದೇವ ಪ್ರಾಮಾಣಿಕನಲ್ಲ. ಆತ ಪಡೆದ ಹಣಕ್ಕೆ ಲೆಕ್ಕವಿಲ್ಲ. ಶಿಸ್ತು ಮೊದಲೇ ಇಲ್ಲ. ಈ ವ್ಯಕ್ತಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ತನ್ನ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ದೇವನೂರು ಮಹಾದೇವ ಎಷ್ಟು ದಲಿತರಿಂದ ಹಣ ಪಡೆದುಕೊಂಡಿದ್ದಾರೆ ಎಂಬುದನ್ನು ಆತ್ಮವಿಮರ್ಶೆ [...]

ಅಂಬೆಡ್ಕರ್

ಅಂಬೆಡ್ಕರ್ ಸಂವೇದನೆ
ಡಾ. ಅಂಬೇಡ್ಕರರ ತತ್ವ ಚಿಂತನೆಗಳ ಹಿನ್ನೆಲೆಯಲ್ಲಿ ಡಾ. ಎಚ್. ಟಿ. ಪೋತೆ ಅವರು ಬರೆದ 11 ಲೇಖನಗಳ ಸಂಕಲನ ಇದು. `ಅಂಬೇಡ್ಕರ್ : ಸಾಮಾಜಿಕ ಚಳುವಳಿ‘, `ಅಂಬೆಡ್ಕರ್ ಮತ್ತು ಮಹಿಳೆ‘, `ಅಂಬೆಡ್ಕರ್-ಗಾಂಧಿ:ಮುಖಾಮುಖಿ‘ … ಹೀಗೆ, ಇಲ್ಲಿನ ವಿಷಯಗಳು ತೆರೆದುಕೊಳ್ಳುತ್ತದೆ. ಡಾ. ಪೋತೆ ಅವರು ಬಾಬಾ ಸಾಹೇಬರನ್ನು ಮೈ-ಮನ ತುಂಬಾ ತುಂಬಿಕೊಂಡವರಂತೆ ಮಾತನಾಡುವುದು ಈ ಬರಹಗಳಲ್ಲಿ ಸುಲಭವಾಗಿ ಗಮನಕ್ಕೆ ಬರುತ್ತದೆ. ಬಹಳ ವೇಳೆ ಸಂಗತಿಗಳನ್ನು ತೀರಾ ಸರಳೀಕರಿಸಿದ ನೆಲೆಗೆ ಕೊಂಡೊಯ್ಯುವುದೂ ಇದೆ. ಒಬ್ಬ ಬರಹಗಾರ ವರ್ಷದಲ್ಲಿ ಎಷ್ಟು [...]