ಜುಲೈ ೫ ರಂದು ಬಿಡುಗಡೆಯಾದ ಕೆಲವು ಪುಸ್ತಕಗಳು

ಶೀರ್ಷಿಕೆ:ನೂರೆಂಟು ಸುಭಾಷಿತಗಳು ಲೇಖಕರು:ಮಹಾಬಲ ಸೀತಾಳಭಾವಿ ಪ್ರಕಾಶನ:ಅಂಕಿತ ಪುಸ್ತಕ
ಶೀರ್ಷಿಕೆ:ಆಂಟನ್ ಚೆಕಾಫ್ ಕಥೆಗಳು ಪ್ರಕಾಶನ:ಅಂಕಿತ ಪುಸ್ತಕ
ಶೀರ್ಷಿಕೆ:ಪಟ್ಟದ ಗೊಂಬೆಯೂ ಪರದೇಶವೂ ಲೇಖಕರು:ಶಾಂತಾ ನಾಗರಾಜ್ ಪ್ರಕಾಶಕರು:ಅಂಕಿತ ಪುಸ್ತಕ

ಶೀರ್ಷಿಕೆ:ನನ್ನ ಅಜ್ಜಿಯ ಜಗತ್ತು ಲೇಖಕರು:ರಜನೀ ನರಹಳ್ಳಿ ಪ್ರಕಾಶಕರು:ಸುಮುಖ ಪ್ರಕಾಶನ

ಶೀರ್ಷಿಕೆ:ಘಳಿಗೆಗೊಂದು ಗುಳಿಗೆ ಲೇಖಕರು:ಸಿ.ಎನ್.ಕೃಷ್ಣಮಾಚಾರ‍್ ಪ್ರಕಾಶಕರು:ಸುಮುಖ ಪ್ರಕಾಶನ
ಕೃಪೆ: ಉದಯವಾಣಿ

ಸ್ವಾಮಿ ಅಂಡ್ ಹಿಸ್ `ಫೆಂಡ್ಸ್’!

ಕನ್ನಡದಲ್ಲಿ ವ್ಯಂಗ್ಯಚಿತ್ರಗಳ ಸಂಗ್ರಹಗಳು ಕಡಿಮೆ. ಆದರೆ ಈಗ ಹಿರಿಯ ವ್ಯಂಗ್ಯಚಿತ್ರಕಾರ ಕೆ ಆರ್ ಸ್ವಾಮಿಯವರ ಕಾರ್ಟೂನುಗಳು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಿವೆ. ಒಂದಲ್ಲ, ಎರಡು ಪುಸ್ತಕಗಳು. ಮೊದಲ ಪುಸ್ತಕದ ಹೆಸರು `ಬ್ರಹ್ಮಗಂಟು-ನಗೆ ನೂರೆಂಟು‘. ಇಲ್ಲಿನ ವ್ಯಂಗ್ಯಚಿತ್ರಗಳೆಲ್ಲಾ ವೈವಾಹಿಕ ಬದುಕಿನತ್ತ ಬೀರಿದ ನಗೆನೋಟಗಳು. ಹೆಚ್ಚಿನವು ಮದುವೆ ಮಂಟಪದಲ್ಲೇ ನಡೆಯುವ ಮೋಜಿನ ಪ್ರಸಂಗಗಳು. ಉಬ್ಬು ಹಲ್ಲು, ಕಪ್ಪು ಹುಡುಗಿ, ವರದಕ್ಷಿಣೆಯಂಥ ಹಳೆಯ ಸಂಗತಿಗಳಿಂದ ಹಿಡಿದು ವೆಬ್ ಕ್ಯಾಮರಾ ಮುಂದೆ ಕುಳಿತು ನಡೆಸುವ ಮದುವೆಗಳವರೆಗೂ ಇಲ್ಲಿನ ಕಾರ್ಟೂನುಗಳ ವ್ಯಾಪ್ತಿ ಇದೆ. ಸ್ವಾಮಿ [...]

`ಪದ್ಮ ಪಾಣಿ’, `ಕಪಿಲಿಪಿಸಾರ’ ಲೋಕಾರ್ಪಣೆ

ಅಂಕಿತ ಪುಸ್ತಕ:  ಕೆ.ಎನ್.ಗಣೇಶಯ್ಯ ಅವರ `ಕಪಿಲಿಪಿಸಾರ’ ಕಾದಂಬರಿ  ಹಾಗೂ `ಪದ್ಮಪಾಣಿ’ ಕಥಾಸಂಕಲನ ಲೋಕಾರ್ಪಣೆ ಸಮಾರಂಭ.
ಅತಿಥಿಗಳು: ನಾಗೇಶ ಹೆಗಡೆ, ನೇಮಿಚಂದ್ರ, ರಮೇಶ್ ಅರವಿಂದ್
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ. 6, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ,
ದಿನಾಂಕ:25-01-2009      ಸಮಯ : ಬೆಳಿಗ್ಗೆ 10:30

ಆಹ್ವಾನ ಪತ್ರಿಕೆ – ಚಿಂತನ ಪುಸ್ತಕ

ಸಂಪರ್ಕಿಸಿ chinthanapusthaka.wordpress.com

ಪುಸ್ತಕ ಬಿಡುಗಡೆಯ – ಚಿತ್ರ-ಕತೆ ಜಗತ್ತಿನ ಸಿನಿಮಾಗಳ ಅವಲೋಕನ

ವಿವರಗಳಿಗಾಗಿ ನೋಡಿ http://chinthanapusthaka.wordpress.com/

`ಬೆಳ್ಳಕ್ಕಿ ಹಿಂಡು’ ಬಿಡುಗಡೆ ಸಮಾರಂಭ

`ಬೆಳ್ಳಕ್ಕಿ ಹಿಂಡು‘ ಬಿಡುಗಡೆ ಸಮಾರಂಭದಲ್ಲಿ ಡಾ. ಅನಂತಮೂರ್ತಿ
`ಕನ್ನಡ ಕಾವ್ಯ ಕ್ಷೇತ್ರದ ಸಮರ್ಪಣಾ ಭಾವದ ಭಕ್ತ ಕವಿ ಸು.ರಂ.ಎಕ್ಕುಂಡಿ‘ ಎಂದು ಸಾಹಿತಿ ಡಾ. ಯು.ಆರ್.ಅನಂತಮೂರ್ತಿ
ಇಲ್ಲಿ ಅಭಿಪ್ರಾಯ ಪಟ್ಟರು. ಸೆಂಟ್ರಲ್ ಕಾಲೇಜಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಸಂಚಯ ಪ್ರಕಾಶನ ಹೊರತಂದಿರುವ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರ ಸಮಗ್ರ ಕಾವ್ಯ `ಬೆಳ್ಳಕ್ಕಿ ಹಿಂಡು‘ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
`ಕನ್ನಡದ ಅತ್ಯಂತ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕವಿ ಪು.ತಿ.ನ. ಅವರು ಕೂಡಾ ಭಕ್ತ ಕವಿ. ಎಕ್ಕುಂಡಿ ಕೇವಲ ಭಕ್ತ [...]

ಪುಸ್ತಕ ಬಿಡುಗಡೆ

ಜುಲೈ ೨೦ರಂದು ಸಂಜೆ ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ‘ವೆಬ್ ವಿಹಾರ‘ ಹಾಗೂ ‘ಅವಕಾಶ ಅಪಾರ‘ ಹೊಸ ಪುಸ್ತಕಗಳು ಬಿಡುಗಡೆಯಾಗಲಿವೆ.
ಬಿಡುಗಡೆಯಾಗುತ್ತಿರುವ ಪುಸ್ತಕಗಳ ಪರಿಚಯ ಹೀಗಿದೆ:
೧. ವೆಬ್ ವಿಹಾರ – ಅಂತರಜಾಲ ಲೋಕಕ್ಕೊಂದು ಬೆಳಕಿಂಡಿ
ಇದು ಅಂತರಜಾಲ (ಇಂಟರ್ ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (WWW) ಸಂಕ್ಷಿಪ್ತ ಪರಿಚಯ ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಪುಸ್ತಕ. ಮಾಹಿತಿ ಎಂದರೇನು ಎಂಬಲ್ಲಿಂದ ಪ್ರಾರಂಭಿಸಿ ಗಣಕ ಜಾಲಗಳು, ಅಂತರಜಾಲದ ಹುಟ್ಟು, ವಿಶ್ವವ್ಯಾಪಿ ಜಾಲ ಬೆಳೆದ [...]

ಕೇಳುವ ಕಾದಂಬರಿ ಬಿಡುಗಡೆ ಸಮಾರಂಭ

ಅನಕೃ ಶತಮಾನೋತ್ಸವ ಸಂದರ್ಭದಲ್ಲಿ ಅನಕೃ ರವರ ಸಂಧ್ಯಾರಾಗ ಓದುವ ಕಾದಂಬರಿಯನ್ನು, ಕೇಳುವ ಕಾದಂಬರಿಯಾಗಿ ಪರಿವರ್ತಿಸಿ ಅನಕೃ ಪ್ರತಿಷ್ಟಾನದವರು ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಕಾಣಿಕೆಯನ್ನು ಪ್ರಥಮವಾಗಿ ನೀಡಿದ್ದಾರೆ.
ಇದೇ ಜೂನ್ 25 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ಬಿ.ವಿ.ರಾಜಾರಾಂ ಅವರು ಸರಳವಾಗಿ ಸುಂದರವಾಗಿ ನಡೆಸಿಕೊಟ್ಟ ಬಿಡುಗಡೆ ಸಮಾರಂಭದಲ್ಲಿ 95 ವರ್ಷ ವಯಸ್ಸಿನ ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಮತ್ತು ಅನಕೃ ಪ್ರತಿಷ್ಠಾನದ ಅಧ್ಯಕ್ಷ ಹಾರ್ನಳ್ಳಿ ರಾಮಸ್ವಾಮಿಯವರು ಮುಖ್ಯ ಅತಿಥಿಗಳಾಗಿದ್ದರು. ಸಿಡಿ ಬಿಡುಗಡೆಯನ್ನು ಶ್ರೀ ವಿ. ಲಕ್ಷ್ಮಿನಾರಾಯಣ್, [...]

ಅನಕೃ ಶತಮಾನೋತ್ಸವ, `ಮುಖ್ಯಮಂತ್ರಿ’ ಗೆ ಅಭಿನಂದನೆ

`ಕಲಾಗಂಗೋತ್ರಿ‘ ರಂಗತಂಡ ಜೂನ್ 25 ಮತ್ತು 26 ರಂದು ಎರಡು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಮಯ ಸಂಜೆ 6 ಗಂಟೆಗೆ.
ಕೇಳುವ ಕಾದಂಬರಿ : ಜೂನ್ 25 ರಂದು ನಡೆಯುವ ಅನಕೃ ಶತಮಾನೋತ್ಸವ ಸಮಾರಂಭದಲ್ಲಿ ಅನಕೃ ಕಾದಂಬರಿ `ಸಂಧ್ಯಾರಾಗ‘ ಕೇಳುವ ಕಾದಂಬರಿಯಾಗಿ, ಅಂದರೆ ಸಿ.ಡಿ. ರೂಪದಲ್ಲಿ ಬಿಡುಗಡೆಗೊಳ್ಳಲಿದೆ. ನಂತರ ಅನಕೃ ಅವರ ಚೊಚ್ಚಲ ನಾಟಕ `ಮದುವೆಯೋ ಮನೆಹಾಳೋ‘ ನಾಟಕದ ಪ್ರದರ್ಶನವಿದೆ.
`ಮುಖ್ಯಮಂತ್ರಿ‘ ಗೆ ಅಭಿನಂದನೆ: ಜೂನ್ 26 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೊಸ ಅಧ್ಯಕ್ಷ [...]