Posted on July 15, 2009 by pusthakapreeethi
ಆನಂದ ಋಗ್ವೇದಿಯವರು ಕವಿ, ಕಥೆಗಾರ ಹಾಗೂ ನಾಟಕಕಾರರೂ ಆಗಿದ್ದಾರೆ. ಅವರು ಬರೆದ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಇದು. ಇದು ಕೇವಲ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಮಾತ್ರವಾಗಿಲ್ಲ. ಇಲ್ಲಿ ಕನ್ನಡ ಲೇಖಕರ ಕುರಿತಂತೆ ನುಡಿ ಚಿತ್ರಗಳೂ ಇವೆ. ಈ ಭಾಗದಲ್ಲಿ ಅಕಾಲಿಕ ನಿಧನ ಹೊಂದಿದ ವಿಭಾ ತಿರಕಪಡಿ, ಮುದೇನೂರು ಸಂಗಣ್ಣ, ಚಿ.ಶ್ರೀನಿವಾಸರಾಜು ಅವರ ಕುರಿತ ನುಡಿಚಿತ್ರಗಳು ಆಪ್ತವಾಗಿವೆ. ಇವೆಲ್ಲವೂ ಅವರ ವೈಯಕ್ತಿಕ ಸಂಬಂಧ ಹಾಗೂ ನೆನಪುಗಳಿಂದ ಕಟ್ಟಿದ ನುಡಿಚಿತ್ರಗಳಾಗಿವೆ.
`ಹಾದಿ ಒಂದು’ ಎಂಬ ಭಾಗದಲ್ಲಿ ಹಿ.ಚಿ.ಬೋರಲಿಂಗಯ್ಯ, ಬಾಳಾಸಾಹೇಬ ಲೋಕಾಪುರ, [...]
Filed under: ವಿಮರ್ಶೆ | Tagged: ಆನಂದ ಋಗ್ವೇದಿ, ತಳಮಳದ ಹಾದಿ (ಸಾಹಿತ್ಯ ಅಭ್ಯಾಸಿಯ ವಿಮರ್ಶಾತ್ಮಕ ಟಿಪ್ಪಣಿಗಳು), ಪಲ್ಲವ ಪ್ರಕಾಶನ, ಪ್ರಜಾವಾಣಿ | Leave a Comment »
Posted on March 30, 2009 by pusthakapreeethi
ಕತೆಗಾರ, ಅನುವಾದಕ ಎ.ಎನ್.ಪ್ರಸನ್ನ ನಾಟಕ, ಕಿರುತೆರೆ, ಸಿನಿಮಾರಂಗದಲ್ಲೂ ತಮ್ಮ ಆಸಕ್ತಿ ಹರಿಯಬಿಟ್ಟವರು. ಅವರ `ಚಿತ್ರ-ಕತೆ’ ಪುಸ್ತಕ ಜಾಗತಿಕ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳಲ್ಲಿ ಒಂದು.
ಸಿನೆಮಾ ಒಂದು ಭಾಷೆ ಎಂದು ಹೇಳುತ್ತಲೇ ಅದೊಂದು ಕಲಾಪ್ರಕಾರ ಎನ್ನುವ ಲೇಖಕರು ಪುಸ್ತಕದಲ್ಲಿ ಅದನ್ನು ವಿವರಿಸಿದ್ದಾರೆ. ಸಿನೆಮಾ ಭಾಷೆಯ ರೀತಿ ಕೆಲಸ ಮಾಡುತ್ತದೆ. ಅದು ಹಾಗೆ ಕೆಲಸ ಮಾಡುವುದರಿಂದ ಕತೆಯನ್ನು ಪ್ರಸ್ತುತಪಡಿಸುವುದಿಲ್ಲ. ಕತೆಯನ್ನು ಹೇಳುತ್ತದೆ. ಅದರಿಂದಲೇ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದು ಸುಲಭ ಎಂಬುದು ಅವರ ಅಭಿಪ್ರಾಯ. ಅಲ್ಲದೆ ಸಿನಿಮಾವನ್ನು ನೋಡುವುದಕ್ಕಿಂತ ನೋಡದ ಭಾಗದಿಂದಲೇ [...]
Filed under: ವಿಮರ್ಶೆ | Tagged: ಎ.ಎನ್.ಪ್ರಸನ್ನ, ಚಿಂತನ ಪುಸ್ತಕ, ಚಿತ್ರ-ಕತೆ, ಪ್ರಜಾವಾಣಿ | Leave a Comment »
Posted on January 9, 2009 by pusthakapreeethi
ಟಿ.ಪಿ.ಅಶೋಕ ಕಳೆದ 15 ವರ್ಷಗಳಲ್ಲಿ ಬರೆದ 37 ವಿಮರ್ಶಾತ್ಮಕ ಲೇಖನಗಳ ಸಂಕಲನ `ಸಾಹಿತ್ಯ ಸಂಬಂಧ‘. ಆಧುನಿಕ ಕನ್ನಡ ಸಾಹಿತ್ಯದ ಅನೇಕ ಮುಖ್ಯ ಲೇಖಕರು, ಕೃತಿಗಳು ಮತ್ತು ಅನುಭವಗಳ ಸುತ್ತ ಹೆಣೆದಿರುವ ಬರಹಗಳಿವು. ಕಂಬಾರರಿಂದ ಶಂಕರ ಮೊಕಾಶಿಯವರೆಗೆ, ಚಿನು ಅಚಿಬೆಯಿಂದ ಚದುರಂಗರವರೆಗೆ ಈ ಪುಸ್ತಕ ವಿಸ್ತರಿಸುತ್ತದೆ.
ಕವಿತೆ, ಕತೆ, ಕಾದಂಬರಿ, ನಾಟಕ, ವಿಮರ್ಶೆ ಈ ವಿಭಾಗಗಳಲ್ಲಿ ಟಿ.ಪಿ.ಚಿಂತನೆಯ ಬೀಜ ಬಿತ್ತಿದ್ದಾರೆ. `ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಓದುಗರೊಡನೆ ಅವರು ನಡೆಸಿರುವ ನೇರ ಸಂವಾದಗಳಿಂದ ಚೋದಿತವಾಗಿರುವ ಇಲ್ಲಿನ ಬಹಳಷ್ಟು ಬರಹಗಳು ತೋಂಡಿ ಮತ್ತು [...]
Filed under: ವಿಮರ್ಶೆ | Tagged: ಅಕ್ಷರ ಪ್ರಕಾಶನ, ಕನ್ನಡ ಪ್ರಭ, ಟಿ.ಪಿ.ಅಶೋಕ, ಸಾಹಿತ್ಯ ಸಂಬಂಧ | Leave a Comment »
Posted on December 13, 2008 by pusthakapreeethi
ಜಿ.ಎನ್.ಆರ್. ಅವರ ಈ ವಿಮರ್ಶಾ ಕೃತಿಯ ವೈಶಿಷ್ಟ್ಯವೆಂದರೆ, ಅನಂತಮೂರ್ತಿಯವರ `ಭವ್ಯ‘, ಕುಂವೀ ಅವರ `ಅರಮನೆ‘ಯಂತಹ ಲೇಟೆಸ್ಟ್ ಕೃತಿಗಳ ಕುರಿತು ಬರಹಗಳಿರುವುದು. ಯಾವ ತೂಕದ ವಿಮರ್ಶಾ ಕೃತಿ ತೆಗೆದುಕೊಂಡರೂ ಅದರಲ್ಲಿನ್ನೂ ಯಶೋಧರನ ಜನ್ನ ಚರಿತ್ರೆ, ಆನಂದಕಂದರ ಕತೆಗಳು ಮುಂತಾದ ತಲೆಬರಹಗಳನ್ನೂ ನೋಡಿ ಬೇಜಾರು ಬರುತ್ತಿರುವಾಗ ಇಂತಹದೊಂದು ಪ್ರಸ್ತುತತೆ ಅವಶ್ಯ.
ರಂಗನಾಥರಾವ್ ಪತ್ರಿಕೆಯೊಂದರ ಪುರವಣಿ ಸಂಪಾದಕರೂ ಆಗಿದ್ದ ಕಾರಣ ಹೀಗೆ ಪ್ರೆಸ್ ನಿಂದ ಹೊರಬೀಳುವ ಗರಿ ಗರಿ ಕಾದಂಬರಿಗಳ ಕಡೆ ಅವರ ಗಮನ ಹರಿದಿದ್ದೀತು. ಆದರೆ ಅವರ ಶೈಲಿ ಮಾತ್ರ [...]
Filed under: ವಿಮರ್ಶೆ | Tagged: ಅನ್ಯೋನ್ಯ, ಜಿ.ಎನ್.ರಂಗನಾಥ ರಾವ್, ವಿಜಯ ಕರ್ನಾಟಕ, ಸಪ್ನ ಬುಕ್ ಹೌಸ್ | Leave a Comment »
Posted on December 5, 2008 by pusthakapreeethi
ವಿಫುಲವಾಗಿ ಒಂದೇ ಸಮನಾಗಿ ವಿಮರ್ಶಾ ಬರವಣಿಗೆಯನ್ನು ಮಾಡಿಕೊಂಡು ಬಂದಿರುವ ಹಿರಿಯ ವಿಮರ್ಶಕ ಜಿ.ಎಸ್.ಆಮೂರ, ತಮ್ಮ ಈ ಸಂಕಲನಕ್ಕೆ `ಪ್ರಕಾರ,ಪ್ರೇರಣೆ, ಪ್ರಯೋಗ‘ ಎಂಬ ಅಡಿಸಾಲನ್ನು ಕೊಟ್ಟಿದ್ದಾರೆ.
`ಪ್ರಕಾರಗಳು‘ ವಿಭಾಗದಡಿ ಸಣ್ಣ ಕತೆ ಒಂದು ವ್ಯಾಖ್ಯೆ ತರದ ಎವರ್ ಗ್ರೀನ್ ವಿಷಯಗಳಿವೆ. ಕಾವ್ಯದಲ್ಲಿ ಆಕೃತಿ ಹಾಗೂ ಆಶಯ, ಕಾದಂಬರಿಯ ಸ್ವರೂಪ, ನಾಟಕ ಕುರಿತ ಲೇಖನಗಳಲ್ಲಿ ಅರಿಸ್ಟಾಟಲ್ ಉಲ್ಲೇಖವಿರುವಂತೆ ಭಾರತೀಯ ಕಾವ್ಯ ಮೀಮಾಂಸೆಯ ಉಲ್ಲೇಖವೂ ಇದೆ.
`ಪ್ರೇರಣೆಗಳು‘ ವಿಭಾಗದಲ್ಲಿ ಎಮರ್ಸನ್ ನಲ್ಲಿ ರೂಪದ ಕಲ್ಪನೆ, ಟಿ.ಎಸ್.ಎಲಿಯೆಟ್ ಕಾವ್ಯ ಮೀಮಾಂಸೆ ಜತೆ ತುಸು ಲೇಟೆಸ್ಟ್ ಎನ್ನಬಹುದಾದ [...]
Filed under: ವಿಮರ್ಶೆ | Tagged: ಆಧುನಿಕ ಕನ್ನಡ ವಿಮರ್ಶ, ಜಿ.ಎಸ್.ಅಮೂರ, ವಿಜಯ ಕರ್ನಾಟಕ, ಸಪ್ನ ಬುಕ್ ಹೌಸ್ | Leave a Comment »
Posted on November 20, 2008 by pusthakapreeethi
ಎಲ್ಲ ಭಾರತೀಯ ಭಾಷೆಗಳು ಜೀವಂತವಾಗಿ ತಮ್ಮ ಶಕ್ತಿ-ಸಾಮಥ್ರ್ಯವನ್ನು ಪ್ರಕಟಿಸಲು ಸಜ್ಜಾಗುವುದೆಂದರೆ ಸೃಜನಶೀಲತೆಯನ್ನು ಸಾಮಾಜಿಕ ಸನ್ನಿವೇಶದಲ್ಲಿ, ಜಾಗತಿಕ ಇಕ್ಕಟ್ಟಿನಲ್ಲಿ ಎಚ್ಚರಾಗಿಸಿಕೊಳ್ಳುವುದೆಂದೇ ಅರ್ಥ. ಇಂದಿನ ಅತ್ಯಂತ ಆಳವಾದ ಬಿಕ್ಕಟ್ಟಿನ `ಕನ್ನಡ ಕಾವ್ಯ‘ ತನ್ನ ಸೃಜನಮುಖವನ್ನು ಪ್ರಖರವಾಗಿಸಿಕೊಳ್ಳಲು ಮೈಯೆಲ್ಲಾ ಕಾಲು, ನಾಲಿಗೆಯಾಗಿಸಿಕೊಳ್ಳಬೇಕಾಗಿದೆ. ಈ ಪ್ರಯತ್ನದ ಹಾದಿಯಲ್ಲಿ ಕವಿಗಳು ತಮ್ಮ ಸೃಷ್ಟಿಕ್ರಿಯೆಗಳನ್ನು ಪ್ರಶ್ನಿಸಿಕೊಳ್ಳುತ್ತಾ ಸಾಗಿದಾಗ ಮಾತ್ರ ಬಾಳಿನ ಬಿಕ್ಕಟ್ಟುಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.
`ಜಾಗತೀಕರಣದ ಎದುರಲ್ಲಿ: ಕವಿತೆ‘ ಲೇಖನದಲ್ಲಿರುವ ಮೇಲಿನ ಸಾಲುಗಳು ಡಾ.ಗುಂಡಣ್ಣ ಕಲಬುರ್ಗಿಯವರ `ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ‘ ಕೃತಿಯ ಒಟ್ಟಾರೆ ಉದ್ದೇಶದಂತೆಯೂ [...]
Filed under: ವಿಮರ್ಶೆ | Tagged: ಡಾ. ಗುಂಡಣ್ಣ ಕಲಬುರ್ಗಿ, ತುಂಬಿ ಬಂದಡೆ ಪರಿಮಳ ಓಡ, ಪ್ರಜಾವಾಣಿ, ಸೌಜನ್ಯ ಪ್ರಕಾಶನ | Leave a Comment »
Posted on November 19, 2008 by pusthakapreeethi
ಪ್ರೀತಿ ಶುಭಚಂದ್ರ ತಮ್ಮ ವಿಮರ್ಶಾ ಬರಹಗಳನ್ನು ಈ ಪುಸ್ತಕದಲ್ಲಿ ಸಂಕಲಿಸಿದ್ದಾರೆ. ಸೃಷ್ಟಿಕ್ರಿಯೆಯ ಹುಟ್ಟನ್ನು ಕವಿ ಬೇಂದ್ರೆ `ಸೃಜನದ ಮೂಡು‘ ಎಂದು ಕರೆದಿದ್ದಾರೆ. ಅದು ಲೇಖಕಿಯ ಸೃಷ್ಟಿಯ ನಿರಂತತೆಯ ಕಾರಣದಿಂದಾಗಿ ತಮ್ಮ ಪುಸ್ತಕಕ್ಕೆ ಈ ಹೆಸರನ್ನು ಅವರು ನೀಡಿದ್ದಾರೆ.
ಇಲ್ಲಿನ ಲೇಖನಗಳ ಹಾಗೂ ಅಧ್ಯಯನದ ವ್ಯಾಪ್ತಿ ವಿಸ್ತಾರವಾಗಿದೆ. ಜನಪದ ಸಾಹಿತ್ಯ, ವಡ್ಡಾರಾಧನೆ, ಬೇಂದ್ರೆ ಕಾವ್ಯ, ಜೈನ ಸಾಹಿತ್ಯ, ಬಂಧುವರ್ಮ- ಹೀಗೆ ವೈವಿಧ್ಯಮಯವಾದ ಲೇಖನಗಳು ಇಲ್ಲಿವೆ. ಸಹಜವಾಗಿ ಲೇಖಕಿ ಸ್ತ್ರೀವಾದಿ ದೃಷ್ಟಿಕೋನದಿಂದ ನೋಡಿರುವುದರಿಂದ ಬಹುಪಾಲು ಲೇಖನಗಳಲ್ಲಿ ಮಹಿಳೆಯರು, ಅವರ ಕುರಿತ ಚಿಂತನೆಯೇ [...]
Filed under: ವಿಮರ್ಶೆ | Tagged: ಪ್ರಜಾವಾಣಿ, ಪ್ರೀತಿ ಶುಭಚಂದ್ರ, ರೂಪ ಪ್ರಕಾಶನ, ಸೃಜನೆಯ ಮೂಡು | 1 Comment »
Posted on October 8, 2008 by pusthakapreeethi
ನಮ್ಮ ನಡುವಿನ ಅತ್ಯುತ್ತಮ ಕತೆಗಾರರಲ್ಲಿ ಒಬ್ಬರಾದ ಟಿ.ಜಿ.ರಾಘವ, ಅಷ್ಟೇ ಒಳ್ಳೆಯ ವಿಮರ್ಶಕ ಕೂಡಾ. ಅವರ ವಿಮರ್ಶೆಯಲ್ಲಿ, ಚಿಂತನೆಯಲ್ಲಿ ಥಟ್ಟನೆ ಗಮನ ಸೆಳೆಯುವುದು ಸ್ವಂತಿಕೆ. ಯಾವುದೇ ವಿಚಾರದ ಕುರಿತು, ಯಾವ ಪ್ರಭಾವಕ್ಕೂ ಒಳಗಾಗದೇ ಚಿಂತನೆ ಮಾಡುವುದು ಅವರ ಗುಣ ವಿಶೇಷ.
ಅವರ ಲೇಖನಗಳ ಸಂಗ್ರಹ `ಪರಿಗ್ರಹ‘ ಇಲ್ಲಿನ ಒಂದೊಂದು ಪ್ರಬಂಧಗಳಲ್ಲೂ ಅವರ ದಿಟ್ಟ ನಿಲುವು ಕಾಣಬಹುದು. ಇಂಗ್ಲೀಷ್ ಮಾಧ್ಯಮದ ಕುರಿತು, ಸಂಸ್ಕೃತ ಯಾಕೆ ಕೂಡದು ಎನ್ನುವ ಬಗ್ಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಟಿ.ಜಿ. ರಾಘವ ಯಾವ ಮುಲಾಜೂ ಇಟ್ಟುಕೊಳ್ಳದೆ ಬರೆಯುತ್ತಾರೆ. [...]
Filed under: ವಿಮರ್ಶೆ | Tagged: ಆನಂದಕಂದ ಗ್ರಂಥಮಾಲೆ, ಟಿ.ಜಿ.ರಾಘವ, ಪರಿಗ್ರಹ | Leave a Comment »
Posted on June 4, 2008 by kandhakanmani
ಲೇಖಕರು : ಪಿ. ಲಂಕೇಶ್
ಪ್ರಕಾಶಕರು : ಲಂಕೇಶ್ ಪ್ರಕಾಶನ
ಪುಟಗಳು : 496
ಬೆಲೆ: ರೂ.300.00
ಕೃಪೆ : ಪ್ರಜಾವಾಣಿ
Filed under: ವಿಮರ್ಶೆ | Leave a Comment »