Posted on September 25, 2009 by pusthakapreeethi
ಕವಿ, ಜಾನಪದ ಸಂಶೋಧಕ ವಿ.ಗ. ನಾಯಕ ಆಗಾಗ ಬರೆದ ತಮ್ಮ ಅಂಕಣ ಬರಹಗಳನ್ನು `ಕರಿಕೆಯ ಕುಡಿ‘ ಯಲ್ಲಿ ಕೊಟ್ಟಿದ್ದಾರೆ. 37 ಕುಡಿಗಳು ಇಲ್ಲಿವೆ. ಉತ್ಸಾಹಿಗಳೂ, ಸೂಕ್ಷ್ಮಮತಿಗಳೂ ಜೊತೆಗೆ ವಿನಯವಂತರೂ ಆದ ಲೇಖಕರು `ಇಲ್ಲಿನ ಬರಹ ಹೆಮ್ಮರವೂ ಅಲ್ಲ, ಮರ, ಗಿಡ, ಹೂ, ಬಳ್ಳಿಗಳ ಸಾಲಿಗೆ ಸೇರುವಂಥದ್ದೂ ಅಲ್ಲ. ಒಂದೊಂದೂ ಕರಿಕೆಯ ಕುಡಿ‘ ಎಂದಿದ್ದಾರೆ. ಕರಿಕೆಯ ಕುಡಿ ದೇವರ ಪೂಜೆಗೆಂದು ಬಳಸುವ ಹುಲ್ಲಿನ ಜಾತಿ. ಅಂದರೆ, ಪುಟ್ಟದಾದರೂ ಅದರ ಮಹತ್ವ ಅದಕ್ಕಿದ್ದೇ ಇದೆ.
ಲೇಖಕರು ಸಾಹಿತ್ಯ, ಸಂಸ್ಕೃತಿ, ವ್ಯಕ್ತಿ, ಜಾತಿ [...]
Filed under: ವೈಚಾರಿಕ ಸಾಹಿತ್ಯ | Tagged: ಕರಿಕೆಯ ಕುಡಿ, ವಿ.ಗ. ನಾಯಕ, ಸ್ಮೃತಿ ಪ್ರಕಾಶನ | Leave a Comment »
Posted on September 21, 2009 by pusthakapreeethi
ಹಿರಿಯ ವಿದ್ವಾಂಸರಾದ ಎಲ್. ಬಸವರಾಜು ಬರೆದ ತಾತ್ವಿಕ ಚಿಂತನೆಗಳನ್ನು ಇಲ್ಲಿನ ಪುಟ್ಟ ಬರಹಗಳು ಒಳಗೊಂಡಿವೆ. ಸುಮಾರು ೧೭೦ ಬರಹಗಳನ್ನು ಒಳಗೊಂಡಿರುವ ಈ ಪುಸ್ತಕ ಬದುಕು ಹಾಗೂ ಜಗತ್ತಿನ ಕುರಿತಾಗಿ ತಾತ್ವಿಕವಾಗಿ ಚಿಂತಿಸುತ್ತದೆ ಮತ್ತು ಓದಿದವರನ್ನು ಯೋಚನೆಗೆ ಹಚ್ಚುತ್ತದೆ. ಇಲ್ಲೆಲ್ಲ ಎಲ್.ಬಿ. ಅವರ ಅಗಾಧ ಪಾಂಡಿತ್ಯ, ಜೀವನಾನುಭವ ತಿಳಿಜಲದಂತೆ ಪ್ರವಹಿಸುವುದನ್ನು ಕಾಣಬಹುದು.
ಇಲ್ಲಿ ಲೇಖಕರು ಮುಟ್ಟದ ವಿಷಯವೇ ಇಲ್ಲ ಎನ್ನಬಹುದು. ಪ್ರೀತಿಯಿಂದ, ಯೋಗದವರೆಗೆ, ಚಟದಿಂದ ದೇವರ ಬಗ್ಗೆ, ಅಂಬಿಗನಿಂದ ಬುದ್ಧನವರೆಗೆ ಅವರು ಚಿಂತನೆಯ ಒರೆಗೆ ಹಚ್ಚದ ವಿಷಯವೇ ಇಲ್ಲ. ಸಾಮಾನ್ಯ [...]
Filed under: ವೈಚಾರಿಕ ಸಾಹಿತ್ಯ | Tagged: ಕತ್ತಲೆ ರಾಕ್ಷಸರಿಗೆ ಬೆಳಕು, ಡಾ. ಎಲ್. ಬಸವರಾಜು, ತಾತ್ವಿಕ ಚಿಂತನ ಬರಹಗಳು, ರೂಪ ಪ್ರಕಾಶನ | Leave a Comment »
Posted on September 13, 2009 by pusthakapreeethi
‘ಅವಧೇಶ್ವರಿ’, `ಗಂಗವ್ವ ಗಂಗಾಮಾಯಿ’,`ನಟ ನಾರಾಯಣ’ ದಂಥ ಕನ್ನಡದ ಪ್ರಮುಖ ಕಾದಂಬರಿಗಳನ್ನು ಬರೆದ ಶಂಕರ ಮೊಕಾಶಿ ಪುಣೇಕರ ಅನನ್ಯ ಒಳನೋಟಗಳ ವಿಮರ್ಶಕರೂ ಆಗಿದ್ದರು. ಅವರು ಭಾರತೀಯ ಸಂಸ್ಕ್ರತಿಯನ್ನು ಅಭ್ಯಸಿಸಿ ಬರೆದ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು ತಮ್ಮ ವಿಶಿಷ್ಠ ಒಳನೋಟಗಳಿಂದಾಗಿಯೇ ಗಮನ ಸೆಳೆಯುತ್ತವೆ.
ಇಂಥ ಲೇಖಕನ ಲೇಖನಗಳನ್ನು ಒಂದೆಡೆ ತಂದಿದ್ದಾರೆ ಜಿ.ಬಿ.ಹರೀಶ್. ಇದರೊಂದಿಗೆ ಸುಮತೀಂದ್ರ ನಾಡಿಗ್, ಮಲ್ಲೇಪುರಂ ಜಿ. ವೆಂಕಟೇಶ್, ರಹಮತ್ ತರೀಕೆರೆಯವರು ಮಾಡಿದ ಅವರ ವ್ಯಕ್ತಿತ್ವವನ್ನು ಇಡಿಯಾಗಿ ಪ್ರಕಟಿಸುವ [...]
Filed under: ವೈಚಾರಿಕ ಸಾಹಿತ್ಯ | Tagged: ಜಿ.ಬಿ.ಹರೀಶ, ನೀರಬೆಳಗು, ಪ್ರಜಾವಾಣಿ, ಶಂಕರ ಮೊಕಾಶಿ ಪುಣೇಕರ, ಸಪ್ನ ಬುಕ್ ಹೌಸ್ | Leave a Comment »
Posted on June 15, 2009 by pusthakapreeethi
2006ರ ಸಪ್ಟೆಂಬರ್ 29ರಂದು ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಸುರೇಖಾ ಭೋತ್ಮಾಂಗೆ ಮತ್ತವರ ಮಗಳು ಪ್ರಿಯಾಂಕ ಭೋತ್ಮಾಂಗೆಯವರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ ಸತತವಾಗಿ ಅತ್ಯಾಚಾರ ನಡೆಸಿ ಕೊಲ್ಲಲಾಯಿತು. ಸುರೇಖಾರ ಮಕ್ಕಳಾದ ರೋಷನ್ ಮತ್ತು ಸುಧೀರ್ ರನ್ನು ಕೊಚ್ಚಿ ಕೊಲ್ಲಲಾಯಿತು. ಈ ಭೀಕರ ಹತ್ಯಾಕಾಂಡದಲ್ಲಿ ಇಡೀ ಹಳ್ಳಿಯೇ ತೊಡಗಿಕೊಂಡಿತ್ತು. ಭೋತ್ಮಾಂಗೆಗಳು ದಲಿತರಾಗಿದ್ದರು. ಭೋತ್ಮಾಂಗೆಗಳನ್ನು ಈಗ ಮರೆತುಬಿಡಲಾಗಿದೆ. ಏಕೆಂದರೆ, ಹೇಗಿದ್ದರೂ ಈ ದೇಶದಲ್ಲಿ ದಿನಕ್ಕೆರಡು ದಲಿತರ ಕೊಲೆಯಾಗುತ್ತಲೇ ಇದೆ.
ಡಾ. ಆನಂದ್ ತೇಲ್ ತುಂಬ್ಡೆಯವರು ಸ್ವಾತಂತ್ರೋತ್ತರ ಭಾರತದ ಅತ್ಯಂತ ಹೀನಾಯ ಜಾತಿ ದೌರ್ಜನ್ಯವೊಂದನ್ನು ಈ [...]
Filed under: ವೈಚಾರಿಕ ಸಾಹಿತ್ಯ | Tagged: ಅರುಂಧತಿ ರಾಯ್, ಆನಂದ್ ತೇಲ್ ತುಂಬ್ಡೆ, ಖೆರ್ಲಾಂಜಿ, ದಿ ಟೆಲಿಗ್ರಾಫ್, ಲಂಕೇಶ್ ಪ್ರಕಾಶನ, ಶಿವಸುಂದರ್ | 1 Comment »
Posted on April 15, 2009 by pusthakapreeethi
ಈ ಪುಸ್ತಕದಲ್ಲಿ ಸಾಗುವ ದೀರ್ಘ ಸ್ವಗತ (ಸಹಜವಾಗಿಯೇ) ಮಹಾಭಾರತದ ಮುಖ್ಯ ಪಾತ್ರ ಕುಂತಿಯದ್ದು. ಪುಟಗಟ್ಟಲೆ ಇದು ಹರಿಯುತ್ತದೆ ಮತ್ತು ಈಗಾಗಲೇ ಕುಂತಿಯ ಕುರಿತು ಗೊತ್ತಿರುವ (ಇನ್ನಿತರರು ಬರೆದ ಪುಸ್ತಕಗಳಿಂದಾಗಿ) ಹಲವು ಸಂಗತಿ, ಭಾವನೆ, ತಲ್ಲಣ, ಇಬ್ಬಂದಿಗಳನ್ನು ತನ್ನದೇ ಶೈಲಿಯಲ್ಲಿ ನಿರೂಪಿಸುತ್ತದೆ. ಇದಕ್ಕಾಗಿ ಲೇಖಕಿ ಸಾಕಷ್ಟು ಹೋಮ್ ವರ್ಕ್ ಸಹ ಮಾಡಿದ್ದಾರೆ. ಓದುತ್ತಾ ಓದುತ್ತಾ ನಮಗೆ ಕಾಣಿಸುವ ಅಸಂಬದ್ಧತೆ, ಅಭಾಸ, ತರ್ಕವಲ್ಲದ ತರ್ಕ, ಸೂಕ್ತವೆನಿಸದ ವಿವರಣೆ ಬರೆದಿಟ್ಟುಕೊಂಡರೆ ಮುಂದೊಮ್ಮೆ ನಾವೂ `ಕುಂತಿಯ ಅಂತರಾಳ‘ ಕುರಿತು ಕಿರು ಪುಸ್ತಕ ಬರೆಯಬಹುದು!
ಶೀರ್ಷಿಕೆ: [...]
Filed under: ವೈಚಾರಿಕ ಸಾಹಿತ್ಯ | Tagged: ಕುಂತಿಯ ಅಂತರಾಳ, ತಾರಾ ಮೂರ್ತಿ, ಬಿ.ಎಮ್.ಶ್ರೀ ಪ್ರತಿಷ್ಠಾನ, ವಿಜಯ ಕರ್ನಾಟಕ | Leave a Comment »
Posted on April 1, 2009 by pusthakapreeethi
ದಾಮೋದರ ಧರ್ಮಾನಂದ ಕೊಸಾಂಬಿಯವರು ಆಧುನಿಕ ಭಾರತದ ಕೆಲವೇ ಶ್ರೇಷ್ಠ ವಿದ್ವಾಂಸರಲ್ಲಿ ಪ್ರಮುಖರು (1907-1966). ಅವರ ಬರವಣಿಗೆ ವೈಜ್ಞಾನಿಕ, ವಸ್ತುನಿಷ್ಠ ಪರಿಶೀಲನೆಗೆ ಹೆಸರಾಗಿದೆ. ವಿಜ್ಞಾನ, ಪುರಾತತ್ವ ಶಾಸ್ತ್ರ, ಸಾಹಿತ್ಯ, ಭಾಷಾ ಶಾಸ್ತ್ರ, ಸಂಸ್ಕೃತಿ – ಹೀಗೆ ಜ್ಞಾನದ ಹಲವು ಕ್ಷೇತ್ರಗಳಲ್ಲಿ ಆಳವಾದ ಅರಿವನ್ನು ಸಂಪಾದಿಸಿ ಅದನ್ನು ತಮ್ಮ ಅನೇಕ ಲೇಖನಗಳ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಕೊಸಾಂಬಿಯವರ `ದಿ ಕಲ್ಚರ್ ಅಂಡ್ ಸಿವಿಲೈಸೇಷನ್ ಆಫ್ ಏನ್ಶಿಯೆಂಟ್ ಇಂಡಿಯಾ ಇನ್ ಹಿಸ್ಟೋರಿಕಲ್ ಔಟ್ಲೈನ್ ನ `ದಿ ಆರ್ಯನ್’ ಎಂಬ ಅಧ್ಯಾಯದ ಕನ್ನಡಾನುವಾದ ಈ [...]
Filed under: ಐತಿಹಾಸಿಕ, ವೈಚಾರಿಕ ಸಾಹಿತ್ಯ | Tagged: ಆರ್ಯರು, ಡಿ.ಡಿ.ಕೊಸಾಂಬಿ, ಬೆಳ್ಳಿಚುಕ್ಕಿ ಪ್ರಕಾಶನ | 1 Comment »
Posted on February 24, 2009 by pusthakapreeethi
ಕವಿ ಚೆನ್ನವೀರ ಕಣವಿಯವರ ಮುನ್ನುಡಿ, ಬೆನ್ನುಡಿಗಳನ್ನು ಹಾಗೂ ಕೆಲವು ಹಿರಿಯರು, ಕಿರಿಯರ ಕುರಿತಾದ ಸಾಂದರ್ಭಿಕವಾಗಿ ಬರೆದ ಲೇಖನಗಳನ್ನು ಒಳಗೊಂಡ ಸಂಗ್ರಹ ಇದು. ಈ ಮೊದಲು ಅವರ ಮುನ್ನುಡಿಗಳದೇ ಒಂದು ಸಂಗ್ರಹ `ಶುಭ ನುಡಿಯೆ ಹಕ್ಕಿ‘ ಪ್ರಕಟವಾಗಿತ್ತು.
ಸ.ಸ.ಮಾಳವಾಡ, ಬೆಟಗೇರಿ ಕೃಷ್ಣಶರ್ಮ, ಬಸವರಾಜ ಸಾದರ ಮುಂತಾದ ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅಷ್ಟೇನೂ ಪ್ರಸಿದ್ಧರಲ್ಲದ ಲೇಖಕರಿಗೂ ಬೆನ್ನುತಟ್ಟಿ ಅವರು ಮುನ್ನುಡಿಗಳನ್ನು ಬರೆದಿರುವುದನ್ನು ನೋಡಬಹುದು.
ಇಲ್ಲಿ ಕುತೂಹಲಕಾರಿಯಾಗಿರುವುದು ಶೆ.ಗೋ.ಕುಲಕರ್ಣಿಯವರ `ನಾ ಕಂಡ ಗೆಳೆಯರ ಗುಂಪು‘ ಪುಸ್ತಕಕ್ಕೆ ಬರೆದ ಬೆನ್ನುಡಿ. ಈ ಪುಸ್ತಕ ಮೂರು [...]
Filed under: ವೈಚಾರಿಕ ಸಾಹಿತ್ಯ | Tagged: ಚೆನ್ನವೀರ ಕಣವಿ, ಪ್ರಜಾವಾಣಿ, ಸಂವಹನ, ಸದ್ಭಾವ | Leave a Comment »
Posted on February 16, 2009 by pusthakapreeethi
ಮೂಲತಃ ಪ್ರಾಣಿಯಾದ ಮನುಷ್ಯ `ಮಾನವೀಯತೆ‘ಯನ್ನು ರೂಢಿಸಿಕೊಂಡಿದ್ದರಿಂದ ಪ್ರಾಣಿಗಳಿಗಿಂತ ಭಿನ್ನನಾಗಿ ಮಾನವನೆಂದು ಕರೆಸಿಕೊಂಡ. ಪ್ರತಿಯೊಬ್ಬರ ಆಳದಲ್ಲಿರುವ ಸಹಜ ಕ್ರೌರ್ಯ, ಹಿಂಸಾತ್ಮಕ ಸ್ವಭಾವವನ್ನು ಮೀರುತ್ತಲೇ ವ್ಯಕ್ತಿತ್ವವನ್ನು ಕಟ್ಟಿಕೊಂಡ. ಹಿಂಸೆ ತ್ಯಜಿಸಿ ಸದ್ವ್ಯಕ್ತಿಯಾಗುವುದೇ ಸಮಾಜದ ಪುರೋಗಾಮಿ ಚಿಂತನೆ.
ಮನುಷ್ಯನ ಆಳದಲ್ಲಿರುವ ಪ್ರಾಣಿ ಸಹಜ ಹಿಂಸಾ ಮನೋವಿಕಾರ ಕೆಲವೊಮ್ಮೆ ರಕ್ಕಸ ಕುಣಿತ ಮಾಡಿಬಿಡುತ್ತದೆ. ದೇಶಗಳ ಮಧ್ಯದ ಯುದ್ಧದಲ್ಲಿ, ಪೋಲೀಸ್ ದೌರ್ಜನ್ಯದಲ್ಲಿ, ಜಾತಿ ವೈಷಮ್ಯದಲ್ಲಿ, ಕೋಮು ಗಲಭೆಯಲ್ಲಿ ಮನುಷ್ಯ ಮತ್ತೆ ಕಾಡು ಮೃಗಗಳನ್ನೂ ಮೀರಿಸುವ ಹಿಂಸಾಪ್ರವೃತ್ತಿ ಪ್ರದರ್ಶಿಸಿಬಿಡುತ್ತಾನೆ.
ಹೀಗೆ ಕೌರ್ಯ ವಿಜೃಂಭಿಸಿದಾಗೆಲ್ಲಾ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುತ್ತದೆ. ಸಹವತ್ರಿಗಳ [...]
Filed under: ವೈಚಾರಿಕ ಸಾಹಿತ್ಯ | Tagged: ಉದಯವಾಣಿ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ, ಡಾ.ರೇವಯ್ಯ ಒಡೆಯರ್, ಮಾನವ ಹಕ್ಕುಗಳು | Leave a Comment »
Posted on January 30, 2009 by pusthakapreeethi
ವಿಶ್ವ ದಿಗಂತದಲ್ಲಿ ಗಾಂಧೀಜಿಯದು ಎದ್ದು ಕಾಣಿಸುವಂತಹ ವ್ಯಕ್ತಿತ್ವ. ಈ ವ್ಯಕ್ತಿತ್ವ ಬರೀ ಪಾಂಡಿತ್ಯದಿಂದ ಬಂದುದಲ್ಲ; ಸತ್ಯ ಮತ್ತು ಅಹಿಂಸೆಯ ಅನುಷ್ಟಾನದಿಂದ ಬಂದದ್ದು.
ಅವರದು ವಿಶ್ವಮಾನ ದೃಷ್ಟಿ. ಇಡೀ ಮನುಕುಲ ಒಂದು ಪರಿವಾರ. ಅದರ ವಿಕಾಸ, ಅದರ ಉಳಿವಿಗಾಗಿ ಅವರು ಪ್ರಯತ್ನಸಿದರು. ಯಾವುದೇ ಜಾತಿ, ಯಾವುದೇ ಪಂಥ, ಯಾವುದೇ ಪೀಠಕ್ಕೆ ಅವರು ತಮ್ಮನ್ನು ಕಟ್ಟಿ ಹಾಕಿಕೊಳ್ಳಲಿಲ್ಲ.
ಅವರದು ತೆರೆದ ಹೃದಯ, ತೆರೆದ ಮನಸ್ಸು. ಯಾವುದೇ ಸಮಾಜ, ರಾಷ್ಟ್ರ ವಿಕಾಸ ಹೊಂದಬೇಕಾದರೆ ಮಾನವೀಯ ಗುಣ ಅತಿ ಮುಖ್ಯ. ಈ ಗುಣದ ಮೆಟ್ಟಿಲು [...]
Filed under: ವೈಚಾರಿಕ ಸಾಹಿತ್ಯ | Tagged: ಪಿ.ವೆಂಕೋಬರಾವ್, ಬಿಲ್ವಶ್ರೀ ಪ್ರಕಾಶನ, ಮನುಗಾಂಧಿ, ಮೊಮ್ಮಗಳಿಗೆ ಗಾಂಧೀಜಿಯ ಹಿತವಚನ | Leave a Comment »
Posted on January 4, 2009 by pusthakapreeethi
ಸಾಹಿತ್ಯದ ಕುರಿತ ಬರಹಗಳು, ವ್ಯಕ್ತಿಚಿತ್ರಗಳು, ಭಾಷಣಗಳು, ಅನುಭವ ಬರಹಗಳು, ಪುಸ್ತಕ ಪ್ರತಿಕ್ರಿಯೆ, ಸಾಮಾಜಿಕ-ಸಾಂಸ್ಕೃತಿಕ ಚಿಂತನೆಗಳು, ಸಂದರ್ಶನಗಳು – ಹೀಗೆ ವಿವಿಧ ಸ್ವರೂಪದ ನಲವತ್ತು ಬರಹಗಳ ಸಂಕಲನ `ಸೃಜನಶೀಲ ವೈಚಾರಿಕತೆ‘. ಇವುಗಳನ್ನೆಲ್ಲ ವಿಮರ್ಶಾ ಲೇಖನಗಳು ಎಂದು ಪುಸ್ತಕದ ಮುಖಪುಟದಲ್ಲಿ ಕರೆಯಲಾಗಿದೆ.
ಸಂಕಲನದ ಬಹುತೇಕ ಲೇಖನಗಳು ಲೇಖಕರ ಒಡನಾಟಕ್ಕೆ ದೊರಕಿದ ಸಾರಸ್ವತ ಲೋಕದ ಗಣ್ಯರ ಕುರಿತ ನುಡಿಚಿತ್ರಗಳಿಗೆ ಮೀಸಲಾಗಿವೆ. ವೈಕಂ ಮಹಮದ್ ಬಷೀರ್, ಗೋರೂರು, ಕರೀಂಖಾನ್, ಬೆಸಗರಹಳ್ಳಿ ರಾಮಣ್ಣ, ವಿಜಯಾದಬ್ಬೆ, ಕೆಂಗಲ್, ಕುವೆಂಪು, ಪೂರ್ಣಚಂದ್ರ ತೇಜಸ್ವಿಯಿಂದ ಹಿಡಿದು ಕಿರಿಯ ಗೆಳೆಯರ ಕುರಿತು [...]
Filed under: ವೈಚಾರಿಕ ಸಾಹಿತ್ಯ | Tagged: ಪ್ರಜಾವಾಣಿ, ಪ್ರೊ. ಕಾಳೇಗೌಡ ನಾಗವಾರ, ಸಪ್ನ ಬುಕ್ ಹೌಸ್, ಸೃಜನಶೀಲ ವೈಚಾರಿಕತೆ | Leave a Comment »