Posted on July 17, 2009 by pusthakapreeethi
ಸಣ್ಣಕತೆ ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಪ್ರಕಾರವಾಗಿ ರೂಪುಗೊಂಡಿದ್ದರೂ ಕತೆಯನ್ನು ಹೇಳುವ ಪರಂಪರೆ ಹೊಸದೇನೂ ಅಲ್ಲ. ಇಂಗ್ಲೀಷ್ ಸಾಹಿತ್ಯದ ಪರಿಚಯದಿಂದ ಸಣ್ಣಕತೆಯ ಮಾದರಿ ಹುಟ್ಟಿಕೊಂಡಿದೆ ಎಂದು ವಿಮರ್ಶಕರು ಪರಿಭಾವಿಸಿಕೊಂಡು ಬಂದಿದ್ದಾರೆ. ಅಂಥ ಗ್ರಹಿಕೆಯಿಂದ ಇಪ್ಪತ್ತನೆಯ ಶತಮಾನದ ಆರಂಭದಿಂದ ಇದುವರೆಗೆ ಬಂದಿರುವ ಕಥಾ ಸಾಮಾಗ್ರಿಯನ್ನು ನೋಡಲಾಗುತ್ತಿದೆ. ಗಿರಡ್ಡಿ ಗೋವಿಂದರಾಜ ಅವರ ವಿಮರ್ಶಾ ಲೇಖನಗಳ ಸಂಗ್ರಹ `ಕಲ್ಪಿತ ವಾಸ್ತವ: ಕನ್ನಡ ಸಣ್ಣಕತೆ’ ಇದೇ ಜಾಡಿನಲ್ಲಿ ಸಾಗಿರುವ ಚಿಂತನೆ. ಗಿರಡ್ಡಿ ಗೋವಿಂದರಾಜ `ಇಂದಿನ ಸಣ್ಣ ಕತೆ ನಮ್ಮ ಪ್ರಾಚೀನ ಕಥಾಪರಂಪರೆಯ ಸಹಜ ಬೆಳವಣಿಗೆಯ [...]
Filed under: ವೈಜ್ಞಾನಿಕ ಸಾಹಿತ್ಯ | Tagged: ಕಲ್ಪಿತ ವಾಸ್ತವ: ಕನ್ನಡ ಸಣ್ಣ ಕತೆ, ಗಿರಡ್ಡಿ ಗೋವಿಂದರಾಜ, ಪ್ರಜಾವಾಣಿ, ಸಾಹಿತ್ಯ ಪ್ರಕಾಶನ | Leave a Comment »
Posted on December 16, 2008 by pusthakapreeethi
`ಸಾಗರಕ್ಕೆ ಸಾವುಂಟೇ?’ ಎಂಬ ಪುಸ್ತಕದ ಶೀರ್ಷಿಕೆಯೇ ಮಹಾ `ಬೋರ್-ಗರೆತ‘ ಎನ್ನಿಸುತ್ತದೆ. ಕರ್ನಾಟಕ ವಿಜ್ಞಾನ ಪರಿಷತ್ತು ಇಂಥ ಕಡಲತೀರಕ್ಕೆ ಕೈ ಹಾಕಲು ಡಾ. ವಿ.ಎನ್.ನಾಯಕ್ ರಿಗೆ ಅಪ್ಪಣೆ ಕೊಟ್ಟಿದೆ. ಸಮುದ್ರ ಮತ್ತು ತೀರಪ್ರದೇಶಗಳ ಪರಿಸರ ಸಂರಕ್ಷಣೆಯ ಕಾಳಜಿಯನ್ನು ನಾಯಕರ ಬರವಣಿಗೆಯಲ್ಲಿ ಕಾಣಬಹುದು.
ಕಡಲಜೀವಶಾಸ್ತ್ರದ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾಗಿರುವ ಅವರ `ಸಾಗರಕ್ಕೆ ಸಾವುಂಟೇ‘ ಯಾರಿಗಾಗಿ ಎಂಬ ವೈಜ್ಞಾನಿಕ ಪ್ರಶ್ನೆ ಏದ್ದೇಳುತ್ತದೆ. ಆದರೆ ಶಾಲಾಕಾಲೇಜಿನ ಮಕ್ಕಳನ್ನು ಈ ಪುಸ್ತಕಗಳು ತಲುಪಬೇಕೆಂಬುದು ವಿಜ್ಞಾನ ಪರಿಷತ್ತಿನ ಮಹದಾಸೆಯಾಗಿದೆ. ಆದ್ದರಿಂದ ಅದು ಈಡೇರಿದೆ ಎಂಬುದನ್ನು ಖಂಡಿತಾ ಒಪ್ಪಬಹುದು.
ಶೀರ್ಷಿಕೆ: [...]
Filed under: ವೈಜ್ಞಾನಿಕ ಸಾಹಿತ್ಯ | Tagged: ಕನ್ನಡ ಪ್ರಭ, ಕರ್ನಾಟಕ ರಾಜ್ಯ ವಿಜ್ಞ, ಡಾ.ವಿ.ಎನ್.ನಾಯಕ್, ಸಾಗರಕ್ಕೆ ಸಾವುಂಟೇ? | Leave a Comment »
Posted on December 9, 2008 by pusthakapreeethi
ವಡ್ಡಗೆರೆ ನಾಗರಾಜಯ್ಯ ಅವರ ವಿಮರ್ಶಾ ಬರಹಗಳ ಸಂಕಲನ `ಬುದ್ಧನೆಡೆಗೆ‘. ಕೋಟಿಗಾನಹಳ್ಳಿ ರಾಮಯ್ಯನವರ ಪ್ರಕಾರ ವಡ್ಡಗೆರೆ, ದಲಿತ ಚಳವಳಿಯ ಮೇಣಿಹಾಲು ಕುಡಿದು ಬೆಳೆದವರು. ದಲಿತ ಚಳವಳಿಗೆಯ ಅನುಭವ ಮತ್ತು ಕಾಣ್ಕೆಗಳೇ ಅವರ ಆಲೋಚನಾ ಕ್ರಮವನ್ನು ರೂಪಿಸಿ ಮುನ್ನಡೆಸುತ್ತಿರುವುದು ಇಲ್ಲಿನ ಎಲ್ಲಾ ಲೇಖನಗಳಲ್ಲೂ ಸ್ಪಷ್ಟ.
ತಂಗ್ನಿಟ್ಟಿನ್ ಈರನಾಗನ ಮೊಮ್ಮಗ ವಡ್ಡಗೆರೆ ನಾಗರಾಜಯ್ಯ ಮುನ್ನುಡಿಯಲ್ಲಿ ಅವರ ಪೂರ್ವೇತಿಹಾಸವನ್ನು ನೆನಪಿಸಿಕೊಂಡಿದ್ದಾರೆ. `ಅಸಾದಿ‘ ಖಂಡಕಾವ್ಯದಿಂದ ಜನಪ್ರಿಯರಾದ ನಾಗರಾಜಯ್ಯ, ನಾಲ್ಕೈದು ವರುಷಗಳ ಅವಧಿಯಲ್ಲಿ ಬರೆದ ವಿಮರ್ಶಾ ಲೇಖನಗಳನ್ನೆಲ್ಲ ಸಂಗ್ರಹಿಸಿ ಈ ಕೃತಿ ಹೊರತಂದಿದ್ದಾರೆ. ಮೊನ್ನೆ [...]
Filed under: ವೈಜ್ಞಾನಿಕ ಸಾಹಿತ್ಯ | Tagged: ಕನ್ನಡ ಪ್ರಭ, ಕರ್ನಾಟಕ ಸಾಹಿತ್ಯ ಪರಿ, ಬುದ್ಧನೆಡೆಗೆ, ವಡ್ಡಗೆರೆ ನಾಗರಾಜಯ್ಯ | Leave a Comment »
Posted on August 19, 2008 by pusthakapreeethi
ಈ ಪುಸ್ತಕದ ಮುಖಪುಟ ನೋಡಿ ಶೀರ್ಷಿಕೆ ಓದುತ್ತಿದ್ದಂತೆ ನನ್ನ ಮೊದಲ ಯೋಚನೆ ನನ್ನ 10 ವರ್ಷ ವಯಸ್ಸಿನ ಮಗನ ಈ ಹುಟ್ಟುಹಬ್ಬದ ಉಡುಗೊರೆಯ ಪಟ್ಟಿಯಲ್ಲಿ ಇದನ್ನು ಸೇರಿಸಬೇಕು ಎಂಬುದು.
ಇದು 1994ರಲ್ಲಿ ಮುದ್ರಣಗೊಂಡ ಎ ಎನ್ ಕೊಠಾರಿ ಮತ್ತಿತರರು ಬರೆದ Of Science and Scientists ದ ಕನ್ನಡ ರೂಪ.
ನ್ಯಾಷನಲ್ ಬುಕ್ ಟ್ರಸ್ಟನ ಸುಮಾರು 14 ಪುಸ್ತಕ ಮಾಲಿಕೆಗಳಲ್ಲೊಂದಾದ ಜನಪ್ರಿಯ ವಿಜ್ಞಾನ ಮಾಲೆ ಯ ಒಂದು ಬಿಡಿ ಜನಪ್ರಿಯ ವಿಜ್ಞಾನ ಹೊತ್ತಿಗೆ ಇದು.
ಪುಸ್ತಕದ ಮೊದಲ ಮಾತಿನಲ್ಲಿ [...]
Filed under: ವೈಜ್ಞಾನಿಕ ಸಾಹಿತ್ಯ | Tagged: ಎಂ. ಏ. ಸೇತುರಾವ್, ಎಂ. ಪಿ. ನವಲ್ಕರ್, ಎಸ್. ಎಂ. ಪರೇಖ್, ಏ. ಎನ್. ಕೊಠಾರಿ, ಪ್ರಾಚೀನ ಒಳ ನೋಟಗಳು ಮತ, ವಿಜ್ಞಾನ ಮತ್ತು ವಿಜ್ಞ, ಸುದಾಂಶು ಎಸ್. ಪಾಲ್ ಸುಲ | Leave a Comment »
Posted on July 9, 2008 by pusthakapreeethi
ನಿದ್ದೆಯ ಸಮಯದಲ್ಲಿ ಕನಸುಗಳು ಮೂಡುವ ಹಾಗೂ ಕೆನಸುಗಳ ಮೂಲಕ ಮನುಷ್ಯ ತನ್ನ ಆಸೆ ಆಕಾಂಕ್ಷೆ ಮತ್ತು ಸಮಸ್ಯೆಗಳ ಪರಿಹಾರ ಸೂಚಿಸುವ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಿದೆ. ಕನಸುಗಳು ಯಾವ ರೀತಿ ಸೃಷ್ಟಿಯಾಗುತ್ತವೆಂಬುದನ್ನು ವಿಶ್ಲೇಷಿಸಿ ಕನಸುಗಳಲ್ಲಿ ಮೂಡುವ ಸಂಕೇತಗಳನ್ನು ವೈಜ್ಞಾನಿಕವಾಗಿ ವಿವರಿಸಲು ಲೇಖಕರು ಪ್ರಯತ್ನಿಸಿದ್ದಾರೆ.
ಈ ಕಿರು ಹೊತ್ತಿಗೆ ಕನಸುಗಳ ಬಗ್ಗೆ ವೈಜ್ಞಾನಿಕವಾಗಿ ವಿಷಯಗಳನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಸಹಾಯಕವಾಗಲಿದೆ.
ಈ ಪುಸ್ತಕ ಈಗ ಅಂತರ್ಜಾಲದಲ್ಲಿ ಲಭ್ಯವಿದೆ
http://www.archive.org/download/KannadaEbook-KanasembaMayaloka/KanasembaMayaloka.pdf
ಶೀರ್ಷಿಕೆ : ಕನಸೆಂಬ ಮಾಯಾಲೋಕ ಲೇಖಕರು : ಡಾ. ಜೆ. [...]
Filed under: ವೈಜ್ಞಾನಿಕ ಸಾಹಿತ್ಯ | Tagged: ಕನಸು, ವೈಜ್ಞಾನಿಕ | Leave a Comment »