Posted on October 7, 2008 by pusthakapreeethi
ಬಿ.ಎಸ್. ಕೇಶವರಾವ್, ಚಿಕ್ಕದಾಗಿ, ಬಿ.ಎಸ್.ಕೆ. ಹಾಗೆಂದರೆ `ಬಿಟ್ಟರೆ ಸಿಗದ ಕೇಡಿ‘ ಎಂದು ವೈ.ಎನ್.ಕೆ. ಹೇಳುತ್ತಿದ್ದರಂತೆ. ವೈ.ಎನ್.ಕೆ. ಕುರಿತು ಬಿ.ಎಸ್.ಕೆ. ಬರೆಯುತ್ತಾರೆ:`ಪೂರ್ವದಿಂದಲೂ ಅಷ್ಟೇ, ಪದಗಳೊಡನೆ ಫನ್ ಮಾಡುವುದರಲ್ಲಿ ಪಾಖಡಾ ಎನ್ನುವಂತೆ ತಮ್ಮ ಪೆನ್ ಬಳಸಿ ಪ್ರಖ್ಯಾತರಾಗಿದ್ದ ವೈ.ಎನ್.ಎ. ಇತ್ತೀಚೆಗೆ ವಿಮಾನದಲ್ಲಿ ಹಾರುತ್ತಿರುವಾಗ ಹೃದಯಾಘಾತಕ್ಕೊಳಗಾಗಿ ಯಾರೊಬ್ಬರಿಗೂ ಚಿಕಿತ್ಸೆ ನೀಡುವ ಅವಕಾಶ ಕೊಡದೇ ಆಕಾಶದಲ್ಲೇ ಅಸುನೀಗಿ ಅದೃಶ್ಯರಾಗಿ ಹೋದರು.‘
ಇದು ಅವರ ಪ್ರಾಸಭರಿತ ಶೈಲಿಗೊಂದು ಸಣ್ಣ ಉದಾಹರಣೆ. ಪ್ರಾಣ ಹೋದರೂ ಪ್ರಾಸ ಬಿಡುವುದಿಲ್ಲ ಎನ್ನುವ ಹೊಸಗಾದೆಯನ್ನೂ ಅವರಿಗೋಸ್ಕರ ಸೃಷ್ಟಿಸಬಹುದು. ಎಂದೋ ಬರೆದ [...]
Filed under: ವ್ಯಕ್ತಿ ಚಿತ್ರಣ | Tagged: ಐ.ಬಿ.ಎಚ್. ಪ್ರಕಾಶನ, ಬಿ.ಎಸ್. ಕೇಶವರಾವ್, ಮರೆಯಲಾಗದವರು | Leave a Comment »
Posted on September 24, 2008 by pusthakapreeethi
ಅತ್ಯುತ್ತಮ ಕತೆ ಕಾದಂಬರಿ ಬರೆದು, ವಿಮರ್ಶಾ ಮಾರ್ಗವನ್ನು ರೂಪಿಸಿ, ಸಂಸ್ಕೃತಿ ಚಿಂತನೆಗೆ ಹೊರಳಿ ಅಲ್ಲಿ ಗಟ್ಟಿಯಾಗಿ ನಿಲ್ಲಲು ಅನಂತಮೂರ್ತಿಯವರು ಹವಣಿಸಿದ್ದು ಚಲಾವಣೆಯ ಒತ್ತಡವೇ?
ಸಮಾಜವಾದಿಯಾಗಿ ಸಾಹಿತ್ಯಲೋಕ ಪ್ರವೇಶಿಸಿ, ಸಂಸ್ಕೃತಿ ಚಿಂತಕರಾಗಿ ಬೆಳೆದು ಈಗ `ಸಮಾಜವಾದಿ‘ ಎಂದು ಕೇವಲ ಹೇಳಿಕೊಳ್ಳಬೇಕಾದ ತಮ್ಮ ಬೆಳವಣಿಗೆಯನ್ನು ಅನಂತಮೂರ್ತಿ ನೇರವಾಗಿ ಎದುರಿಸಿದ್ದಾರೆಯೇ
ಇಂಥ ಪ್ರಶ್ನೆಗಳನ್ನು ಕೇಳುತ್ತಿರುವವರು ಜಿ.ಕೆ.ರವೀಂದ್ರಕುಮಾರ್. ಅನಂತಮೂರ್ತಿಯವರು ತಮ್ಮ ಏಕಾಂತವನ್ನು ಕಳೆದುಕೊಂಡಿದ್ದಾರೆ. ಗಾಂಧೀಜಿಯನ್ನು ಹೆಜ್ಜೆಹೆಜ್ಜೆಗೂ ಜ್ಞಾಪಿಸಿಕೊಳ್ಳುವ ಅವರು ಗಾಂಧೀಜಿಯ ಮೌನವನ್ನು ಬಲವಂತವಾಗಿ ಆದರೂ ಒಂದು ವ್ರತದಂತೆ ಕಾಣಬೇಕಾಗಿದೆ ಎಂದೂ ರವೀಂದ್ರಕುಮಾರ್ ಅಭಿಪ್ರಾಯ.
ಚೇತನ ಸಾಹಿತ್ಯ [...]
Filed under: ವ್ಯಕ್ತಿ ಚಿತ್ರಣ | Tagged: ಚೇತನ ಪ್ರಿಂಟರ್ಸ್, ಜಿ. ಕೆ. ರವೀಂದ್ರ ಕುಮಾರ, ಜುಗಲಬಂದಿ ಚಿಂತಕ ಯು. ಆರ | Leave a Comment »