Posted on May 22, 2009 by pusthakapreeethi
ಕೆಳದಿಯ ಅರಸರ ಕಾಲದಲ್ಲಿ ನಿರ್ಮಾಣವಾದ ಮಹಾಮತ್ತಿನ ಮಠಗಳಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೆದುರ್ಗದ ಮಥವೂ ಒಂದು. ಇದು ವೀರಶೈವ ಪರಂಪರೆಗೆ ಸೇರಿದ ಮಠ. ಇಂಥ ಅನೇಕ ಮಥಗಳು ನಿರ್ಮಾನವಾಗಿದ್ದರೂ ಅವುಗಳಲ್ಲಿ ಕೆಲವು ಈಗ ಇಲ್ಲವಾಗಿವೆ. ಈಗ ಬೆಂಗಳೂರು, ತುಮಕೂರು, ಕರಾವಳಿ, ಕೊಡಗಿನಲ್ಲಿರುವ ಮಹತ್ತಿನ ಮಠಗಳ ಬಗ್ಗೆ ನಡೆಸಿದ ಅಧ್ಯಯನ ಈ ಪುಸ್ತಕದಲ್ಲಿದೆ. ಇದನ್ನು ಕವಲೆದುರ್ಗದ ಮಠವೇ ಪ್ರಕಟಿಸಿದೆ.
ಕರ್ನಾಟಕದ ವೀರಶೈವ ಮಠಗಳಲ್ಲಿ ಎರಡು ಪರಂಪರೆಗಳು ಇವೆ. ಒಂದು ರಾಜಾಶ್ರಯ ಪಡೆದು, ನೂರಾರು ಶಾಖೆಗಳನ್ನು ಹೊಂದಿರುವ ಮಹಾಮತ್ತಿನ ಮಠಗಳು. [...]
Filed under: ಸಂಶೋಧನಾ ಸಾಹಿತ್ಯ | Tagged: ಜಯದೇಪ್ಪ ಜೈನಕೇರಿ, ಡಾ.ಜಗದೀಶ, ಪ್ರಜಾವಾಣಿ, ಮರುಳಸಿದ್ದೇಶ್ವರ ವೀರಶೈವ ಅಧ್ಯಯನ ಕೇಂದ್ರ, ಮಹಾಮತ್ತಿನ ಮಠಗಳು - ಒಂದು ಅಧ್ಯಯನ | Leave a Comment »
Posted on May 21, 2009 by pusthakapreeethi
ಉತ್ತರ ಕನ್ನಡದ ಕಾಳಿ ನದಿಯ ದಂಡೆಯಿಂದ ಶರಾವತಿ, ತುಂಗಾ ನದಿಗಳವರೆಗೆ ತಮ್ಮ ವಾಸದ ವ್ಯಾಪ್ತಿಯನ್ನು ಹೊಂದಿರುವ ಮರಾಟಿ ಕುಣಬಿಗಳು ಒಂದು ವಿಶಿಷ್ಟ ಬುಡಕಟ್ಟಾಗಿದೆ. ಮಲೆನಾಡಿನಲ್ಲಿ ಹರಡಿಕೊಂಡಿರುವ ಈ ಬುಡಕಟ್ಟಿನ ಬಗ್ಗೆ ಸೂಕ್ಷ್ಮವಾಗಿ, ವಸ್ತುನಿಷ್ಟವಾಗಿ ಅಧ್ಯಯನ ಮಾಡಿದ್ದಾರೆ ಜೆ.ಕೆ.ರಮೇಶ್.
ಮರಾಟಿ ಕುಣಬಿಗಳು ಗಿರಿಜನರು. ಅವರು ಪ್ರಕೃತಿಯನ್ನು ಅವಲಂಬಿಸಿ ಬದುಕುತ್ತಿರುವವರು. ಅವರು ಮಾಡುತ್ತಿರುವ ವ್ಯವಸಾಯ ಕುಮರಿ ಬೇಸಾಯ. ಇದರೊಂದಿಗೆ ಅವರು ಇಲ್ಲಿ ವಲಸೆ ಬಂದು ಕರ್ನಾಟಕದಲ್ಲಿ ನೆಲೆಯಾದವರು.
ಇಂಥ ಕಾಡಿನ ಜೀವಿಗಳ ಸಂಪ್ರದಾಯ, ಸಾಮಾಜಿಕ ಕಟ್ಟಳೆಗಳು, ಅದರ ಸ್ವರೂಪ, ಕಲೆ, ಹಾಡು ಹಿನ್ನೆಲೆ [...]
Filed under: ಸಂಶೋಧನಾ ಸಾಹಿತ್ಯ | Tagged: ಚಕೋರ ಪ್ರಕಾಶನ, ಜೆ.ಕೆ.ರಮೇಶ್, ಪ್ರಜಾವಾಣಿ, ಮರಾಟಿ ಕುಣುಬಿಗಳು | Leave a Comment »
Posted on July 26, 2008 by pusthakapreeethi
ಈ ವಿಷಯದ ಬಗ್ಗೆ ಇದೇ ಮೊದಲ ಬಾರಿಗೆ ಇಂತಹದೊಂದು ಪುಸ್ತಕ ಹೊರಬಂದಿದೆ. ಎನ್. ಎಸ್. ಮಹಂತೇಶ ಇನ್ನೂ ಯುವಕರಾದರೂ ಆಳವಾದ ಅಧ್ಯಯನ ಹಾಗೂ ಅಗಾಧವಾದ ಕ್ಷೇತ್ರಕಾರ್ಯದ ಮೂಲಕ ಈಗಾಗಲೇ ಚಿತ್ರದುರ್ಗ ಇತಿಹಾಸದ ಬಗ್ಗೆ ಇರುವ ತಕ್ಕ ಮಟ್ಟಿನ ಸಂಶೋಧನಾ ಗ್ರಂಥಗಳ ಜತೆಗೆ ಮತ್ತೊಂದು ಹೊಸ ವಿಷಯವನ್ನು ಸೇರ್ಪಡೆ ಮಾಡಿದ್ದಾರೆ.
ಹುಲ್ಲೂರು ಶ್ರೀನಿವಾಸ ಜೋಯಿಸ, ಲಕ್ಷ್ಮಣ ತೆಲಗಾವಿ, ಬಿ. ರಾಜಶೇಖರಪ್ಪ, ಶ್ರೀ ಶೈಲಾರಾಧ್ಯ – ಮುಂತಾದ ನಾಡಿನ ಹೆಸರಾಂತ ಸಂಶೋಧಕರು ಚಿತ್ರದುರ್ಗದ ಇತಿಹಾಸದ ಬಗ್ಗೆ ಅಪಾರ ಸಂಶೋಧನೆ ಮಾಡಿದ್ದಾರೆ. ಅವರ [...]
Filed under: ಸಂಶೋಧನಾ ಸಾಹಿತ್ಯ | Tagged: ಕೋಟೆ, ಚಿತ್ರದುರ್ಗ, ದೇವಾಲಯ, ಬಿ. ರಾಜಶೇಖರಪ್ಪ, ಲಕ್ಷ್ಮಣ ತೆಲಗಾವಿ, ಶ್ರೀ ಶೈಲಾರಾಧ್ಯ, ಹುಲ್ಲೂರು ಶ್ರೀನಿವಾಸ | Leave a Comment »