ನಾಚಿಕೆಯಿಂದ ತಲೆತಗ್ಗಿಸುವ ದಿನ

ಡಿಸೆಂಬರ‍್ 6, 1992. ತಮ್ಮ ಜಾತ್ಯಾತೀತ ಸಂವಿಧಾನದ ಬಗ್ಗೆ ಹೆಮ್ಮೆ ಪಡುವಂತಹ ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವ ದಿನ. ಈ ದಿನದಂದು ಭಾರತೀಯರ ಹೆಮ್ಮೆಯ ಜಾತ್ಯಾತೀತ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಿಷ್ಟೆಯ ಮಹಾ ಗೋಪುರಗಳು ನೆಲಕಚ್ಚಿದ ದಿನ. ರೇಡಿಯೋ ಅಂಗಡಿಯಿಂದ ಆಕಸ್ಮಿತವಾಗಿ ವ್ಯಂಗ್ಯಲೋಕಕ್ಕೆ ಜಿಗಿದ ಪಿ. ಮಹಮ್ಮದ್ ಇಂದು ನಮ್ಮೊಂದಿಗಿನ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯ ಮಹಮ್ಮದ್ ಇಂದು ಪರಿಚಿತ ಹೆಸರು. `ಸಂಯುಕ್ತ ಕರ್ನಾಟಕ’, `ಮುಂಗಾರು’ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ದುಡಿದಿರುವ ಮಹಮ್ಮದ್  ಖ್ಯಾತ ಆಂಗ್ಲ ದೈನಿಕ [...]

ರಾಮಬಾಣ

ಕರುಣಾಳು ಬಾ ಬೆಳಕೆ ಮಸುಕಿದೀ ಪಬ್ಬಿನಲಿ ಕೈ ಹಿಡಿದು ಕುಡಿಸೆನ್ನನು ವೈ.ಎನ್.ಕೆ. ಬರೆದ ಈ ಅಣಕವಾಡು ಸಾರ್ವಕಾಲಿಕ. ಕನ್ನಡದ ಹಿರಿಯ ಕವಿಗಳೂ ಅಣಕವಾಡು ಬರೆದಿದ್ದಾರೆ. ಹಿರಿಯ ಕವಿಗಳ ಕವಿತೆಗಳೂ ಸೊಗಸಾದ ಅಣಕವಾಡುಗಳಾಗಿ ರಂಜಿಸಿವೆ. ಬ್ರಹ್ಮಮುರಾರಿ ಸದಾಶಿವ ಲಿಂಗಂ ಎಂಬ ಲಿಂಗಾಷ್ಟಕದ ಸಾಲುಗಳನ್ನೂ ಬುದ್ದಿವಂತರು ಅಣಕು ಮಾಡಿದ್ದಾರೆ: ಮೋಹಿನಿ ಮೋಹಕ ಮಾದಕ ಲಂಚಮ್ ಮಡದಿಯ ಕೋಪ ನಿವಾರಕ ಲಂಚಮ್ ಮಂತ್ರಿಯ ಮನವನು ಗೆಲ್ಲುವ ಲಂಚಮ್ ತತ್ಪ್ರಣಮಾಮಿ ಸದಾಪ್ರಿಯ ಲಂಚಮ್ ಇಂಥ ಸೊಗಸಾದ ಅಣಕವಾಡುಗಳನ್ನು ಬರೆಯುತ್ತಾ ಬಂದಿರುವವರು ಎನ್.ರಾಮನಾಥ್. ‘ಹಗಲು [...]

ಈ 73 ಹಾಸ್ಯಲೇಖನಗಳು ಕನ್ನಡದಲ್ಲಿ ವಿಶಿಷ್ಟವಾದದ್ದು

ಕಲಾಕ್ಷೇತ್ರದ ಮೆಟ್ಟಿಲಿನೊಂದಿಗೆ ಸೂತ್ರಧಾರ ನಡೆಸುವ ಸಂಭಾಷಣೆಯ ರೂಪದಲ್ಲಿರುವ ಇಲ್ಲಿನ 73 ಹಾಸ್ಯಬರಹಗಳು ಕಳೆದ ಒಂದು ದಶಕದ ರಂಗಚಟುವಟಿಕೆಯನ್ನು ಮೆಚ್ಚುಗೆ, ವ್ಯಂಗ್ಯೋಕ್ತಿ, ಟೀಕೆ-ಟಿಪ್ಪಣಿಗಳೊಂದಿಗೆ ದಾಖಲಿಸುತ್ತದೆ. ಮೆಟ್ಟಿಲನ್ನು ರಂಗ ವ್ಯವಸ್ಥೆಯ ಪ್ರತೀಕವಾಗಿಸಿಕೊಂಡು ಸೂತ್ರಧಾರ ಒಟ್ಟು ರಂಗ ಚಟುವಟಿಕೆಯ ಸಾಕ್ಷಿಪ್ರಜ್ಞೆಯಂತೆ `ಪನ್‘ ಮಾಡುತ್ತ ಹೋಗುವ ಇಲ್ಲಿನ ಬರಹಗಳು ಕನ್ನಡದಲ್ಲಿ ವಿಶಿಷ್ಟವಾದವುಗಳು. ಎರಡು ದಶಕಗಳ ಹಿಂದೆ ರಂಗಭೂಮಿಗೆ ಮೀಸಲಾದ `ಸೂತ್ರಧಾರ ವಾರ್ತಾಪತ್ರ‘ಕ್ಕೆ ಈ ತರಹದ ಬರಹವನ್ನು ಆರಂಭಿಸಿದ ರಾಮಯ್ಯ ಅದರಿಂದ ಎಷ್ಟು ಪ್ರಸಿದ್ಧರಾದರೆಂದರೆ ಅವರಿಗೆ ಸೂತ್ರಧಾರ ರಾಮಯ್ಯ ಎಂಬ ಹೆಸರೇ ಗಟ್ಟಿಯಾಯಿತು. ಮಧ್ಯೆ [...]

ಸಂತೆಯಲ್ಲಿ ಸುಬ್ರಹ್ಮಣ್ಯ

ಎನ್ಕೆ ಸುಬ್ರಹ್ಮಣ್ಯರ ಹಾಸ್ಯ ಬರಹಗಳ ಸಂಕಲನ `ಸಂತೆಯಲ್ಲಿ ಸುಬ್ರಹ್ಮಣ್ಯ‘. ಒಬ್ಬ ಮಧ್ಯಮ ವರ್ಗದ ವ್ಯಕ್ತಿಯ ಅನುಭವವನ್ನು ಒಳಗೊಂಡ ಬರಹಗಳಿವು. ಮಧ್ಯಮವರ್ಗದ ಕನಸು ಹಾಗೂ ಜೀವನದ ವಿವರಗಳು ಇಲ್ಲಿ ಬರಹದ ರೂಪವನ್ನು ತಾಳಿವೆ. ಹಾಗೆಂದು ಇಲ್ಲಿನ ಹದಿನೇಳು ಬರಹಗಳು ಸೀಮಿತ ಅನುಭವದ ಲೋಕದ ಒಳಗಷ್ಟೇ ಓಡಾಡುವುದಿಲ್ಲ. ಇಲ್ಲಿ ಸಂತೆ, ಕಂಪ್ಯೂಟರ್, ವಿಂಬಲ್ಡನ್, ಹೋಗಬೇಕಾದ ಅಮೆರಿಕಾ ಯಾತ್ರೆ, ಗುಜರಿ ಬಜಾರ್ ಬಗ್ಗೆಯೂ ಲೇಖನಗಳಿವೆ. ಲೇಖಕರು ಆಸಕ್ತಿಯಿಂದ ಓದಿಸಿಕೊಳ್ಳುವಂತೆ, ಲವಲವಿಕೆಯಿಂದ, ತಮಾಷೆಯಾಗಿ ಬರೆಯುತ್ತಾರೆ. ಇದಕ್ಕೆ ಹರಿಣಿ ಅವರ ವ್ಯಂಗ್ಯಚಿತ್ರಗಳು ಪುಟಕೊಟ್ಟಿವೆ. ಶೀರ್ಷಿಕೆ: [...]

ಮನುಷ್ಯ ಸ್ವಭಾವದ ವಕ್ರತೆಗೆ ಹಿಡಿದ ಕನ್ನಡಿ

ಹಿರಿಯ ವ್ಯಂಗ್ಯಚಿತ್ರಕಾರ ವಿ. ಗೋಪಾಲ್ ರ ಎರಡನೆಯ ವ್ಯಂಗ್ಯಚಿತ್ರಗಳ ಸಂಕಲನ ಇದು. `ಪಾಕೆಟ್ ಕಾರ್ಟೂನ್‘ ಗಳೆಂದು ಕರೆಯಲ್ಪಡುವ ವ್ಯಂಗ್ಯಚಿತ್ರಗಳನ್ನು ಅವರು ಇಲ್ಲಿ ಪ್ರಕಟಿಸಿದ್ದಾರೆ. ಹಾಗೆ ನೋಡಿದರೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಇಂಥ ವ್ಯಂಗ್ಯ ಚಿತ್ರಗಳಿಗೆ ಆಯುಸ್ಸು ಕಡಿಮೆ. ಕಾಲದ ಪ್ರವಾಹದಲ್ಲಿ ಬದುಕಿ ಉಳಿಯುವುದು ಎಲ್ಲೋ ಕೆಲವಷ್ಟು ಮಾತ್ರ. ಹೀಗಿದ್ದಾಗಲೂ ಗೋಪಾಲ್ ದೈನಿಕದ ಬದುಕಿನಲ್ಲಿ ಹೊಮ್ಮುವ ಹಾಸ್ಯವನ್ನು ತಮ್ಮ ಗೆರೆಗಳಲ್ಲಿ ಹಿಡಿದಿಟ್ಟಿದ್ದಾರೆ. ಕೇವಲ ನಗಿಸುವ ವ್ಯಂಗ್ಯಚಿತ್ರಗಳಾಗದೆ ಮನುಷ್ಯ ಸ್ವಭಾವದ ವಕ್ರತೆಗೆ ಹಿಡಿದ ಕನ್ನಡಿ ಈ ಚಿತ್ರಗಳು. ಮುನ್ನುಡಿಯಲ್ಲಿ ಎಂ.ಎಸ್.ನರಸಿಂಹಮೂರ್ತಿಯವರು ಗುರುತಿಸಿರುವಂತೆ [...]

A case for humour

Kefa, the pen name of A. V. Keshavamurthy, is a familiar name for those who have been reading humorous writings published in Kannada period­icals. He was popular in the 70s and 80s. For unknown reasons, he receded to oblivion without much recognition. This is a col­lection of his select writings re­spectfully edited by one of [...]

Follow

Get every new post delivered to your Inbox.