ಪ್ರಜಾವಾಣಿ ’ಬ್ಲಾಗಿಗರ ಲೋಕ’ದಲ್ಲಿ ಪುಸ್ತಕ ಪ್ರೀತಿ !

http://prajavani.net/include/story.php?news=7737&section=56&menuid=13 `ಪುಸ್ತಕ ಪ್ರೀತಿ’ಯ ಕೊಡುಕೊಳ್ಳು! `ನೀವು ಪುಸ್ತಕ ಪ್ರೀತಿಸುತ್ತೀರಾ? ಪುಸ್ತಕ ಮತ್ತು ಅದರ ಪ್ರೀತಿಯನ್ನು ಹಂಚುವ ಆಸೆ ಹೊತ್ತವರ `ಒನ್ ಸ್ಟಾಪ್ ಶಾಪ್` ಇದು. ಇತ್ತೀಚೆಗೆ ಪ್ರಕಟವಾದ ಪುಸ್ತಕಗಳ ಪರಿಚಯ, ವಿಮರ್ಶೆ ಇಲ್ಲಿ ಸಿಗುವಂತೆ ಮಾಡುವುದು ನಮ್ಮ ಆಶಯ. ಇದು, ನಮ್ಮ ಪತ್ರಿಕೆಗಳಲ್ಲಿ ಬರುವ ಪುಸ್ತಕ ಪರಿಚಯ-ವಿಮರ್ಶೆಯ ಡೈಜೆಸ್ಟ್ ಸಹ. ನೀವು ಓದಿದ, ಮೆಚ್ಚಿದ, ಎಲ್ಲರೂ ಓದಲೇಬೇಕೆಂದು ನೀವು ಬಯಸುವ ಪುಸ್ತಕದ ಬಗ್ಗೆ ಬರೆಯಿರಿ. ನಿಮಗೆ ಸಿಗದ ಪುಸ್ತಕ ಎಲ್ಲಿ ಸಿಗಬಹುದು ಎಂಬ ಬಗ್ಗೆ ಪ್ರಶ್ನೆ ಕೇಳಿ. [...]

ದಯವಿಟ್ಟು ಬನ್ನಿ

ಸಂಸ್ಕೃತಿ-ಸಾಮರಸ್ಯ ಸಮುದಾಯ ರಂಗಸಂಗಮ

ಹೇಳತೇನ ಕೇಳ…ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಪ್ರಶಸ್ತಿ

ಕನ್ನಡದ ಹಿರಿಯ ಕವಿ ಚಂದ್ರಶೇಖರ ಕಂಬಾರರಿಗೀಗ ಜ್ಞಾನಪೀಠ ಪ್ರಶಸ್ತಿಯ ಸಂಭ್ರಮ. ಹದಿಮೂರು ವರ್ಷಗಳ ಅಂತರದ ನಂತರ ಕಂಬಾರರ ಮೂಲಕ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ದೊರೆಯುವುದರೊಂದಿಗೆ, ಕನ್ನಡದ `ಜ್ಞಾನಪೀಠ ಸಪ್ತರ್ಷಿ ಮಂಡಲ`ದ ಪುನರ‌್ರಚನೆಯಾಗಿದ್ದು, ಆ ಸಂಖ್ಯೆ ಎಂಟಕ್ಕೇರಿದೆ. ಕನ್ನಡದ ಜ್ಞಾನಪೀಠಿಗಳದೀಗ `ಅಷ್ಟ ದಿಕ್ಪಾಲಕ` ಪಡೆ. ಏಳು ಲಕ್ಷ ರೂಪಾಯಿ ನಗದು, ಸರಸ್ವತಿ ದೇವಿಯ ಕಂಚಿನ ಪ್ರತಿಮೆ ಹಾಗೂ ಬಿನ್ನವತ್ತಳೆ ಹೊಂದಿರುವ ಜ್ಞಾನಪೀಠ ಪ್ರಶಸ್ತಿ ಭಾರತೀಯ ಸಾಹಿತ್ಯಕ್ಷೇತ್ರದಲ್ಲಿ ಅತ್ಯುನ್ನತ ಗೌರವ. ಈ ಮೇರುಮನ್ನಣೆಗೆ ಕಂಬಾರರು ಪಾತ್ರ. ಅನೇಕ ವರ್ಷಗಳಿಂದ ಜ್ಞಾನಪೀಠ [...]

ಅಕ್ಷರ ಕರ್ನಾಟಕ ಪುಸ್ತಕ ಮಳಿಗೆಗೆ ಬನ್ನಿ ಪುಸ್ತಕ ಖರೀದಿಸಿರಿ

ವಿಜಯನಗರದ ಸುತ್ತಮುತ್ತ ವಾಸಿಸುವವ ಸಾಹಿತ್ಯಾಸಕ್ತರಿಗೆ, ಓದುಗರಿಗೆ ಒಂದು ಸಂತೋಷದ ಸುದ್ದಿ. ಸಾಹಿತ್ಯಕ್ಕೆ ಸಂಬಂಧಪಟ್ಟ ಸಂವಾದ ಕಾರ್ಯಕ್ರಮವನ್ನು ತಿಂಗಳಿಗೊಂದು ಬಿಡದಂತೆ ನಡೆಸಿಕೊಂಡು ಬರುತ್ತಿದ್ದಾರೆ ಅಕ್ಷರ ಕರ್ನಾಟಕ ಪುಸ್ತಕ ಮಳಿಗೆ, ವಿಜಯನಗರ ಇವರು. ಇದರ ಸಾರಥ್ಯ ವಹಿಸಿದವರು ಖ್ಯಾತ ಪತ್ರಕರ್ತೆ ಆರ‍್.ಪೂರ್ಣಿಮಾ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ.ವೀರಣ್ಣ ಅವರು. ಪ್ರತೀ ತಿಂಗಳು ಎರಡನೇ ಶನಿವಾರ ಅಥವಾ ಭಾನುವಾರ ಈ ಕಾರ್ಯಕ್ರಮ ಇರುತ್ತದೆ. ಡಾ. ಸಿದ್ದಲಿಂಗಯ್ಯ ಮತ್ತು ಮುಖ್ಯಮಂತ್ರಿ ಚಂದ್ರು ಅವರಿಂದ ಆರಂಭವಾದ ಈ ಕಾರ್ಯಕ್ರಮದಲ್ಲಿ ಇದುವರೆಗೆ [...]

ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2009ನೇ ಸಾಲಿನ ಪುಸ್ತಕ ಬಹುಮಾನ ಮತ್ತು 2010ನೇ ಸಾಲಿನ ಗೌರವ ಪ್ರಶಸ್ತಿಗಳು ಪ್ರಕಟವಾಗಿವೆ.

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2009ನೇ ಸಾಲಿನ ಪುಸ್ತಕ ಬಹುಮಾನ ಮತ್ತು 2010ನೇ ಸಾಲಿನ ಗೌರವ ಪ್ರಶಸ್ತಿಗಳು ಪ್ರಕಟವಾಗಿವೆ. ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ, ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರ ರಾವ್, ಲೇಖಕರಾದ ಡಾ.ಶ್ರೀಕಂಠ ಕೂಡಿಗೆ, ಕವಯತ್ರಿ ಪ್ರೊ.ಸ. ಉಷಾ ಮತ್ತು  ಲೇಖಕರಾದ ಕೋಟಿಗಾನಹಳ್ಳಿ ರಾಮಯ್ಯ ಅವರ ಜೀವಮಾನದ ಸಾಧನೆಯನ್ನು ಗುರುತಿಸಿ 2010ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಲ್ಲಿನ `ಕನ್ನಡ ಭವನ’ದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ [...]

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅನುವಾದ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಗಳು ಪ್ರಕಟ

  ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನೀಡುವ 2009-2010, 2010-2011ನೇ ಸಾಲಿನ ಅನುವಾದ ಪ್ರಶಸ್ತಿ ಮತ್ತು 2008, 2009ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗಳು ಪ್ರಕಟವಾಗಿವೆ. 2009-2010ನೇ ಸಾಲಿನಲ್ಲಿ ಡಾ. ಸಿ.ಪಿ. ಕೃಷ್ಣಕುಮಾರ್, ಡಾ. ಕೆ.ಎಲ್. ಗೋಪಾಲಕೃಷ್ಣ ರಾವ್, ಡಾ. ಉಮಾ ವಿರೂಪಾಕ್ಷ ಕುಲಕರ್ಣಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಮತ್ತು ಪ್ರೊ.ಕೆ.ಎಸ್. ಭಗವಾನ್ ಅವರು ಅನುವಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2010-2011ನೇ ಸಾಲಿನಲ್ಲಿ ಅನುವಾದ ಪ್ರಶಸ್ತಿಗೆ ಡಾ. ಸದಾನಂದ ಕನವಳ್ಳಿ, ಡಾ.ಜಿ. ರಾಮಕೃಷ್ಣ, ಜಿ.ಎನ್. ರಂಗನಾಥ [...]

ಪುಸ್ತಕ ಹಬ್ಬ ಆಚರಿಸೋಣ. ಅರಮನೆ ಮೈದಾನಕ್ಕೆ ಬನ್ನಿ.

ಇದು ನಮ್ಮ ಸ್ಟಾಲ್. ಅರಮನೆ ಮೈದಾನದಲ್ಲಿ ಪುಸ್ತಕ ಪ್ರೀತಿಯದೂ ಒಂದು ಸ್ಟಾಲ್ ಇದೆ. ಎಲ್ಲಾ ಸ್ಟಾಲ್ ಗಳನ್ನು ನೋಡಿ ಹೋಗುವಾಗ ಕೊನೆಯಲ್ಲಿ (ಕೊನೆಯ ಸ್ಟಾಲೇ ಪುಸ್ತಕಪ್ರೀತಿ ಯದು) ಪುಸ್ತಕ ಪ್ರೀತಿಯನ್ನು ಮರೆಯದೇ ಸಂದರ್ಶಿಸಿರಿ ತಮ್ಮ ಆಯ್ಕೆಯ ಪುಸ್ತಕ ಖರೀದಿಸಲು ಈ ಮೂಲಕ ಕೇಳಿಕೊಳ್ಳುತ್ತೇವೆ.

ಮಕ್ಕಳ ದಿನದ ಶುಭಾಶಯಗಳು

ಮಕ್ಕಳ ಪುಸ್ತಕ ಹೇಗಿರಬೇಕು? ನ.ರವಿಕುಮಾರ ಮಕ್ಕಳಿಗಾಗಿ ಬರೆಯುವುದು ಒಂದು ಮನೋಧರ್ಮ. ಈ ಮನೋಧರ್ಮದ ಕಾರಣಕ್ಕಾಗಿಯೇ ಬರೆದವರು ಮಾತ್ರ ಯಶಸ್ವಿಯಾಗಿದ್ದಾರೆ. ಉದ್ದೇಶಕ್ಕೆ ಬರೆದದ್ದು ಸಾಹಿತ್ಯವೆ? ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಒಮ್ಮೆ ಮಾತನಾಡುತ್ತಾ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಸಿಂಗರ್‌ನ ಸಂದರ್ಶನವನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ಸಂದರ್ಶಕ ಸಿಂಗರ್ ಕುರಿತು `ನೀವು ದೊಡ್ಡವರಿಗೂ ಬರೆದಿದ್ದೀರಿ. ಮಕ್ಕಳಿಗೂ ಬರೆದಿದ್ದೀರಿ. ನಿಮಗೆ ಮಕ್ಕಳಿಗೆ ಬರೆಯುವುದು ಕಷ್ಟವೋ? ದೊಡ್ಡವರಿಗೆ ಬರೆಯುವುದು ಕಷ್ಟವೂ?’ ಎಂದು ಕೇಳುತ್ತಾನೆ. ಅದಕ್ಕೆ ಸಿಂಗರ್ ಉತ್ತರಿಸುತ್ತಾರೆ: `ಮಕ್ಕಳಿಗೆ ಬರೆಯುವುದೇ ತುಂಬ ಕಷ್ಟ. ಕಾರಣ-ದೊಡ್ಡವರ [...]

Follow

Get every new post delivered to your Inbox.