ವಿಮರ್ಶೆ : ನಮ್ಮಲ್ಲಿ ಸಸಿ ನೆಟ್ಟ ಕೂಡಲೇ ಒಣಗಿ ಹೋಗುತ್ತಿರುವ ದುರಂತ

adhunika-kannada-vimarshe-1

ವಿಫುಲವಾಗಿ ಒಂದೇ ಸಮನಾಗಿ ವಿಮರ್ಶಾ ಬರವಣಿಗೆಯನ್ನು ಮಾಡಿಕೊಂಡು ಬಂದಿರುವ ಹಿರಿಯ ವಿಮರ್ಶಕ ಜಿ.ಎಸ್.ಆಮೂರ, ತಮ್ಮ ಈ ಸಂಕಲನಕ್ಕೆ `ಪ್ರಕಾರ,ಪ್ರೇರಣೆ, ಪ್ರಯೋಗಎಂಬ ಅಡಿಸಾಲನ್ನು ಕೊಟ್ಟಿದ್ದಾರೆ.

`ಪ್ರಕಾರಗಳುವಿಭಾಗದಡಿ ಸಣ್ಣ ಕತೆ ಒಂದು ವ್ಯಾಖ್ಯೆ ತರದ ಎವರ್ ಗ್ರೀನ್ ವಿಷಯಗಳಿವೆ. ಕಾವ್ಯದಲ್ಲಿ ಆಕೃತಿ ಹಾಗೂ ಆಶಯ, ಕಾದಂಬರಿಯ ಸ್ವರೂಪ, ನಾಟಕ ಕುರಿತ ಲೇಖನಗಳಲ್ಲಿ ಅರಿಸ್ಟಾಟಲ್ ಉಲ್ಲೇಖವಿರುವಂತೆ ಭಾರತೀಯ ಕಾವ್ಯ ಮೀಮಾಂಸೆಯ ಉಲ್ಲೇಖವೂ ಇದೆ.

`ಪ್ರೇರಣೆಗಳುವಿಭಾಗದಲ್ಲಿ ಎಮರ್ಸನ್ ನಲ್ಲಿ ರೂಪದ ಕಲ್ಪನೆ, ಟಿ.ಎಸ್.ಎಲಿಯೆಟ್ ಕಾವ್ಯ ಮೀಮಾಂಸೆ ಜತೆ ತುಸು ಲೇಟೆಸ್ಟ್ ಎನ್ನಬಹುದಾದ ಎಡ್ವರ್ಡ್ ಸೈದ್ ಕುರಿತಾಗಿಯೂ ಬರಹಗಳಿವೆ.

`ಪ್ರಯೋಗಗಳುವಿಭಾಗದಲ್ಲಿ ಆಧುನಿಕ ಕನ್ನಡ ವಿಮರ್ಶೆಯ ಒಲವುಗಳನ್ನು ಡಿ.ಆರ್.ನಾಗರಾಜ್ ವರೆಗೆ ಟ್ರೇಸ್ ಮಾಡಲಾಗಿದೆ. ಆಮೇಲೆ ಶೂನ್ಯ.

ಅದಕ್ಕೆ ಕಾರಣಗಳೇನೆಂಬುದನ್ನು ಲೇಖಕರು ಸಮಾರೋಪದಲ್ಲಿ ಗುರುತಿಸುತ್ತಾರೆ: ಇಂದು ನಮಗೆ ಬೇಕಾದುದು ವಿಮರ್ಶೆಯಲ್ಲ, ಒಳ್ಳೆಯ ಕತೆ, ಕಾದಂಬರಿ, ಕಾವ್ಯ, ನಾಟಕಗಳು ಎನ್ನುವ ವಾದ.

ಸೃಜನಶೀಲ ಸಾಹಿತಿಗಳಲ್ಲಿ ವಿಮರ್ಶಕನ ಕುರಿತು ಉಂಟಾಗಿರುವ ಪ್ರೀತಿ-ದ್ವೇಷಗಳ ಸಂಬಂಧ, ಒಂದು ಘಟ್ಟದಲ್ಲಿ ಅದಕ್ಕೆ ಅಂಟಿಕೊಂಡ ಎಲಿಟಿಸ್ಟ್ ಪ್ರವೃತ್ತಿ…ಪರಿಣಾಮ, ಯುರೋಪ್, ಅಮೇರಿಕಾಗಳಲ್ಲಿ ಹುಲುಸಾಗಿ ಬೆಳೆಯುತ್ತಿರುವ ವಿಮರ್ಶೆ ನಮ್ಮಲ್ಲಿ ಸಸಿ ನೆಟ್ಟ ಕೂಡಲೇ ಒಣಗಿ ಹೋಗುತ್ತಿರುವ ದುರಂತ. ಇಂತಹದೊಂದು ಪ್ರನೌನ್ಸ್ ಮೆಂಟ್ ಆಮೂರರಂಥ ಹಿರಿಯ ವಿಮರ್ಶಾ ವ್ಯವಸಾಯಿಯಿಂದಲೇ ಬಂದಿರುವುದು ಸನ್ನಿವೇಶದ ಗಂಭೀರತೆಯನ್ನು ಮನದಟ್ಟುಮಾಡುತ್ತದೆ.

ಶೀರ್ಷಿಕೆ: ಆಧುನಿಕ ಕನ್ನಡ ವಿಮರ್ಶೆ ಲೇಖಕರು: ಜಿ.ಎಸ್.ಅಮೂರ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು:271 ಬೆಲೆ: ರೂ.130/-

ಕೃಪೆ : ವಿಜಯ ಕರ್ನಾಟಕ

ನಿಮ್ಮ ಟಿಪ್ಪಣಿ ಬರೆಯಿರಿ