ಸಾಹಿತ್ಯ ವಿಮರ್ಶೆಯ ಲೋಕದರ್ಶನ

ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಸಾಮಾಜಿಕ ಅಧ್ಯಯನ, ಮುಂತಾಗಿ ಕನ್ನಡ ಸಾಹಿತ್ಯ ವಲಯದ ಅನೇಕ ಮುಖ್ಯ ಕ್ರಿಯಾಶೀಲ ಬರಹಗಳ ಜೊತೆ ಅಷ್ಟೇ ಕ್ರಿಯಾಶೀಲವಾಗಿ ಒಡನಾಡುತ್ತ ಬಂದ ಅಧ್ಯಯನಶೀಲನ ಟಿಪ್ಪಣಿಗಳಿವು.


ಇದು ಕಳೆದ ನಲವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದ ಮೂವತ್ತೆಂಟು ಮುನ್ನುಡಿ ಮತ್ತು ಪ್ರಸ್ತಾವನೆಗಳ ಸಂಗ್ರಹ. ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಸಾಮಾಜಿಕ ಅಧ್ಯಯನ, ಮುಂತಾಗಿ ಕನ್ನಡ ಸಾಹಿತ್ಯ ವಲಯದ ಅನೇಕ ಮುಖ್ಯ ಕ್ರಿಯಾಶೀಲ ಬರಹಗಳ ಜೊತೆ ಅಷ್ಟೇ ಕ್ರಿಯಾಶೀಲವಾಗಿ ಒಡನಾಡುತ್ತ ಬಂದ ಅಧ್ಯಯನಶೀಲನ ಟಿಪ್ಪಣಿಗಳಿವು.

ಅಂದಿನಿಂದ ಇಂದಿನವರೆಗೆ ಉಳಿದುಕೊಂಡು ಬಂದಿರುವ ಕೆಲವು ನಂಬಿಕೆಗಳು, ಲಕ್ಷಣಗಳ ಜೊತೆಯಲ್ಲೇ ಒಟ್ಟು ಪರಿಸರದಲ್ಲಿ ಆಗಿರುವ ಬದಲಾವಣೆಗಳನ್ನೂ ಅವರು ಸಾವಧಾನದಿಂದ ಪರಿಶೀಲಿಸುತ್ತಾರೆ. ಗುರಿಯಿಲ್ಲದ ಹಿಂಸಾಪರತೆ, ಜಾಗತೀಕರಣ, ವ್ಯಾಪಾರೀಕರಣಗಳ ಅವಕಾಶವಾದ, ಹುಸಿ ಮತ್ತು ದಿಟಗಳ ನಡುವಿನ ಅಂತರವನ್ನೇ ಅಳಿಸಿಹಾಕಿರುವ ಕಲುಷಿತ ಅಲೋಚನಾಕ್ರಮ, ಸೂಕ್ಷ್ಮವಾಗಿ ಮೊಳಕೆ ಒಡೆಯುತ್ತಿರುವ ಜಾತೀಯತೆ…

ಇವೆಲ್ಲ ಹುಟ್ಟಿಸುತ್ತಿರುವ ಆತಂಕ, ಕಳವಳ ಈ ಲೇಖಕರ ಬರಹಗಳ ಹಿಂದಿದೆ. ಅವರ ದೃಷ್ಟಿಯಲ್ಲಿ ವಿಮರ್ಶಕನೂ ಸೃಷ್ಟಿಶೀಲ ಸಾಹಿತಿಗಳ ದಾರಿಯಲ್ಲೇ ನಡೆಯುತ್ತಿರುವ ಪಯಣಿಗ. ಅವರು, `ವಿಮರ್ಶೆ ನಮ್ಮ ಸುತ್ತಲಿನ ಬದುಕು ಮತ್ತು ಸಮಾಜಗಳನ್ನು ಕಾಣುವ, ತಿಳಿದುಕೊಳ್ಳುವ, ಅದರ ಒಳಸುಳಿಗಳನ್ನು ಗ್ರಹಿಸುವ ಉಪಕರಣ’ವೆಂದು ತಿಳಿಯುತ್ತಾರೆ.

ಸಾಹಿತ್ಯ ಚರಿತ್ರೆಯ ಕೃತಕ ನಿರ್ಮಾಣಗಳಿಗಿಂತ ಭಿನ್ನವಾಗಿ ವಾಸ್ತವದ ಸಾಂಸ್ಕೃತಿಕ ಲೋಕದ ಸ್ವರೂಪ ಹೇಗಿದ್ದೀತೆಂಬ ಕುತೂಹಲದ ಹುಡುಕಾಟ `ಇಪ್ಪತ್ತನೆಯ ಶತಮಾನದ ಕಾವ್ಯ’ದ ಪ್ರಸ್ತಾವನೆಯಲ್ಲಿದೆ. ಭಾಷೆಯನ್ನು ಅವರು `ನಿತ್ಯಮದುವಣಗಿತ್ತಿ’ ಎಂದು ವರ್ಣಿಸುತ್ತಾರೆ.

ಆಧುನಿಕಗೊಳ್ಳುವಾಗಲೂ ಸಾತತ್ಯವನ್ನು ಕಾಪಾಡಿಕೊಳ್ಳುವ ಯತ್ನದಲ್ಲಿ ಅಥವಾ ಸಾತತ್ಯ ಉಳಿಸಿಕೊಳ್ಳುತ್ತಲೇ ಆಧುನಿಕಗೊಳ್ಳುವ ತಹತಹದಲ್ಲಿ ಗಳಿಸಿದ್ದೆಷ್ಟು, ಕಳೆದದ್ದೆಷ್ಟು? ಅಕ್ಷರಲೋಕದ ಅಂಚಿನ ಸುಪ್ತ ಜಾನಪದದ ಲೋಕದರ್ಶನದಲ್ಲಿ ಒಟ್ಟು ಸಮುದಾಯದ ಅನುಭವದ ಎದೆಬಡಿತ ಕೇಳಬಹುದೆಂಬ ನಿರೀಕ್ಷೆ ಅವರದು. ಸಾಹಿತ್ಯ ಚರಿತ್ರೆಯ ರಚಿತ ಆಕೃತಿಗಿಂತ ಬೇರೆಯೇ ಆಗಿರಬಹುದಾದ ನಿಜ ಜೀವನದರ್ಶನವನ್ನು ಅನುಸಂಧಾನಗೈವ ಅಪೇಕ್ಷೆ ಇಲ್ಲಿಯ ಬರಹಗಳ ಹಿಂದಿದೆ.

ಇದು ಎಚ್.ಎಸ್.ಆರ್. ಕ್ರಿಯಾಶೀಲವಾಗಿ ವಿಮರ್ಶಾ ಬರಹಗಳಲ್ಲಿ ತೊಡಗಿಕೊಂಡ ಕಾಲಘಟ್ಟದಲ್ಲಿ- ಅಂದರೆ ಸರಿಸುಮಾರು ಕಳೆದ ನಾಲ್ಕು ದಶಕಗಳಲ್ಲಿ- ಒಟ್ಟಾರೆಯಾಗಿ ಕನ್ನಡ ಸಾಹಿತ್ಯ ತುಂಬ ಆಸಕ್ತಿಯಿಂದ ಪರಿಶೀಲಿಸಿದ ಮಹತ್ವದೊಂದು ಸವಾಲು. ಲೇಖಕರೇ ಹೇಳುವಂತೆ- `ವಿಮರ್ಶೆಯು ಸಂಸ್ಕೃತಿ- ಸಮಾಜ ಕೇಂದ್ರಿತವಾದ ನೆಲೆಗಳನ್ನು ವಿಪುಲವಾಗಿ ಪಡೆದುಕೊಂಡಿದ್ದು ಈ ಅವಧಿಯಲ್ಲಿಯೇ’. ಇಲ್ಲಿಂದ ಮುಂದೆ ಎಚ್.ಎಸ್.ಆರ್ ಇನ್ನೊಂದು ಮುಖ್ಯ ಪ್ರಶ್ನೆ ಕೇಳಿಕೊಳ್ಳುತ್ತಾರೆ:

`ಕನ್ನಡ ಸೃಜನಶೀಲ ಸಾಹಿತ್ಯವು ಎದುರಿಸಿದ, ಬಿಡಿಸಿದ ಸಾಮಾಜಿಕ- ಸಾಂಸ್ಕೃತಿಕ ಸವಾಲುಗಳನ್ನು ಅಷ್ಟೇ ಸಂಕೀರ್ಣವಾಗಿ, ವೈವಿಧ್ಯಮಯವಾಗಿ ವಿಮರ್ಶೆಯು ಅನುಸಂಧಾನ ಮಾಡಿದೆಯೇ?’. ಕನ್ನಡ ವಿಮರ್ಶೆಯಲ್ಲಿ ಅಂಥ ಅಪರೂಪದ ಹೊಳಹುಗಳಿರುವುದಾದರೂ ಸ್ವಯಂಪೂರ್ಣವಾದ ಲೋಕದರ್ಶನ ಮೂಡಿರುವ ಕುರಿತು ಅವರು ಸಂಶಯ ತಾಳುತ್ತಾರೆ. ವಾಸ್ತವಿಕವಾಗಿ ಸ್ವತಃ ರಾಘವೇಂದ್ರರಾವ್ ಅವರ ಬರಹಗಳು ಆ ನಿಟ್ಟಿನಲ್ಲಿ ಸಾಕಷ್ಟು ದೂರ ನಡೆದಿವೆ.

`ವಿಮರ್ಶೆಯು ಸಹಪ್ರಯಾಣ ಮಾತ್ರವಾಗದೆ ಸ್ವತಂತ್ರವಾದ ಹುಡುಕಾಟವೂ ಆಗಿರುತ್ತದೆ’ ಚಂಪಾ ಕಾವ್ಯ ಕುರಿತ ಲೇಖನ. ಕೆ.ಎಸ್.ನ. ಕಾವ್ಯದ ಕುರಿತು ಬರೆಯುವಾಗ ಅವರು ಆಡುವ ಮಾತುಗಳನ್ನು ಗಮನಿಸಿ: `…ಅವರು ಜನಪದದ ಅರ್ಕವನ್ನು ಮಧ್ಯಮವರ್ಗದ ಭಾಷೆ ಮತ್ತು ಮೌಲ್ಯಸಂಹಿತೆಯ ನೆಲೆಗಟ್ಟಿಗೆ ಪರಿವರ್ತಿಸಿದರು…

ಇಪ್ಪತ್ತನೆಯ ಶತಮಾನದ ಕನ್ನಡ ಜನಪದದ ಚಲನಶೀಲತೆಯನ್ನು ಅವರ ಹಾಗೆ  ಹಿಡಿದಿಟ್ಟಿರುವವರು ಬಹಳ ಕಡಿಮೆ’. ಸಂವಹನಶೀಲವಲ್ಲದ ಬಿಗಿ ಆಕೃತಿಗಿಂತ ಸರಳ ನುಡಿಗಟ್ಟುಗಳು ಮುಖ್ಯವೆಂಬ ಕವಿಯ (ಕೆಎಸ್‌ನ) ನಿಲುವಿಗೂ, ಸಮಾಜದ ಅಪೇಕ್ಷೆಗಳಿಗೂ ಇರಬಹುದಾದ ಸಂಬಂಧದ ಕುರಿತು ಈ ಲೇಖನ ಯೋಚಿಸಲು ತೊಡಗಿಸುತ್ತದೆ.

ರಾಮಚಂದ್ರ ಶರ್ಮರ `ಸಮಗ್ರಕಾವ್ಯ’ಕ್ಕೆ ಬರೆದ ಮುನ್ನುಡಿಯಲ್ಲಿ ಆಧುನಿಕ ಕನ್ನಡ ಕಾವ್ಯಸೃಷ್ಟಿಯ ಸಾಂಸ್ಕೃತಿಕ ಸನ್ನಿವೇಶದ ಅಪೇಕ್ಷೆಗಳಿಂದ, ಅವಶ್ಯಕತೆಗಳಿಂದ ಭಿನ್ನವಾಗಿಯೇ ಉಳಿದ ಅವರ ಕಾವ್ಯಭಾಷೆ, ಅನುಭವ ಪ್ರಪಂಚಗಳ ಬಿಕ್ಕಟ್ಟನ್ನು ಕುರಿತು ಈ ವಿಮರ್ಶಕರು ಮಾಡಿರುವ ಪರಿಶೀಲನೆ; ಮನೆ ಜಗಳ ಮತ್ತು ಹೊರಗಿನ ಮಾರಿಗಳೆರಡನ್ನೂ ಏಕಕಾಲಕ್ಕೆ ಎದುರಿಸಬೇಕಾಗಿರುವ ದಲಿತ ಕಾವ್ಯದೆದುರಿಗಿರುವ ಪಂಥಹ್ವಾನದ ಕುರಿತ ವಿವೇಚನೆ (ಮಾಲಗತ್ತಿ ಕಾವ್ಯ ಚರ್ಚೆ)- ಇವು ರಾಘವೇಂದ್ರರಾವ್ ಅವರ ವಿಮರ್ಶಾ ಬರಹಗಳು ಕೃತಿಸಮೀಕ್ಷೆಯ ಒಟ್ಟೊಟ್ಟಿಗೇ ಇಡಿಯ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಮಾಜದ ಸಂಕೀರ್ಣ ಸಮಸ್ಯೆಗಳನ್ನು ಎದುರುಗೊಳ್ಳುವ ಬಗೆಯನ್ನು ತೋರುವ ಎರಡು ಉದಾಹರಣೆಗಳು.

ಹೊಸದಾಗಿ ಕಾವ್ಯರಚನೆಗೆ ತೊಡಗಿದ ಹುಡುಗನಿಂದ ಹಿಡಿದು ಹಿರಿಯ ಮುಖ್ಯಲೇಖಕರ ಕೃತಿಗಳವರೆಗೂ ಇಲ್ಲಿ ಮುನ್ನುಡಿ ಬರಹಗಳ ಹರಹು ಇದೆ. ಆ ಎಲ್ಲ ಬರಹಗಳ ಹಿಂದೆ ಶಿಕ್ಷಣದ ಶ್ರದ್ಧೆ, ಶಿಸ್ತಿನಿಂದ ರಾಘವೇಂದ್ರರಾವ್ ತಮ್ಮ ವಿಮರ್ಶೆಯ ಮುಖ್ಯ ಕಾಳಜಿಗಳೊಂದಿಗೆ ಕಾರ್ಯಪ್ರವೃತ್ತರಾಗಿರುವುದು ಕಂಡು ಬರುತ್ತದೆ.

ವಯೋಮಾನದ ದೃಷ್ಟಿಯಿಂದ ಮಾತ್ರವಲ್ಲ, ಪಂಥ ಪ್ರವೃತ್ತಿಗಳ ನೆಲೆಗಳಿಂದಲೂ ಇಲ್ಲಿಯ ಮುನ್ನುಡಿಗಳನ್ನು ಪಡೆದವರು ವಿವಿಧ ವಿಭಾಗಗಳಲ್ಲಿ ಹಂಚಿ ಹೋಗುವವರು. ಎಚ್.ಎಸ್.ಆರ್. ಅವರ ವಿಮರ್ಶನ ಪ್ರಜ್ಞೆಯು ಈ ಎಲ್ಲ ವೈವಿಧ್ಯಗಳನ್ನೂ ಸಹಜ ಕುತೂಹಲ ಮತ್ತು ವಿನಯದಿಂದ ಮುಟ್ಟಲು, ಅರಿಯಲು ಬಯಸುತ್ತದೆ ಎಂಬುದು ಅದರ ಸ್ಥಾನವನ್ನು ವಿಶಿಷ್ಟಗೊಳಿಸಿದೆ.

ಲೇಖಕರು ವಿಮರ್ಶಕರ ಆತ್ಮೀಯರಾದಾಗಲೂ (ಚಿ.ಶ್ರೀನಿವಾಸರಾಜು, ಎಸ್.ಜಿ.ಸಿದ್ದರಾಮಯ್ಯ, ಶೂದ್ರ ಶ್ರೀನಿವಾಸ, ಕೆ ಮರುಳಸಿದ್ದಪ್ಪ…)  ಒಲವಿನ ನೆನಕೆಯೊಂದಿಗೇ ರಾಘವೇಂದ್ರರಾವ್ ಮುಂಭಾಗಗಳಲ್ಲಿ ವಿಮರ್ಶನೋದ್ಯಮದಲ್ಲಿ ನಿರಾತಂಕವಾಗಿ ತಲ್ಲೆನರಾಗುತ್ತಾರೆ. ಪ್ರತ್ಯಕ್ಷ ಒಡನಾಟವಿಲ್ಲದ ಲೇಖಕರ ವಿಷಯದಲ್ಲೂ ಅವರದು ವಿಶ್ವಾಸಪೂರ್ಣ ದೃಷ್ಟಿಯೇ. ಈ ಮಾತನ್ನು ಇಷ್ಟು ವಿವರವಾಗಿ ಹೇಳಿದುದಕ್ಕೆ ಕಾರಣವಿದೆ.

ಎಚ್.ಎಸ್.ಆರ್. ಅವರದು ನಿರ್ಮಮ ಧೋರಣೆಯಲ್ಲ. ಅದು ಒಟ್ಟಾರೆಯಾಗಿ ಸೃಷ್ಟಿಶೀಲವಾದ ಎಲ್ಲ ಕೃತಿಗಳನ್ನೂ, ಕೃತಿಕಾರರನ್ನೂ ಪ್ರೀತಿ, ಆದರಗಳಿಂದ ಕಾಣುವಂಥದು. ಒಟ್ಟು ಕನ್ನಡ ಸಾಹಿತ್ಯದ ಗತಿ, ಕ್ರಿಯಾಶೀಲತೆಗಳನ್ನು ತಾಯ ಪ್ರೇಮದಿಂದ ಕಾವು ಕೊಟ್ಟು ಪೊರೆಯುವ ಅಂತಃಕರಣ ಈ ಬರಹಗಳೊಳಗೆ ಮಿಡಿಯುತ್ತಿದೆ. ಇದಕ್ಕೆ ಅಪವಾದ ಎನ್ನಬಹುದಾದ ಒಂದು ಸಾಲನ್ನೂ ನಾನು ಕಾಣಲಿಲ್ಲ.

`ವಿಮರ್ಶೆಯು ಯಾವಾಗಲೂ ಸಾಹಿತ್ಯ ಕೃತಿಗಳ ವಿಶ್ಲೇಷಣೆ, ವಿಮರ್ಶೆಗಳಿಗೆ ಮೀಸಲಾದ ಪರಾವಲಂಬೀ ಚಟುವಟಿಕೆಯಾಗಿಲ್ಲ. ಬದಲಾಗಿ ಒಂದು ಸಂಸ್ಕೃತಿಯು ಸ್ವಾಭಿಮುಖವಾಗಿ ತೊಡಗಿಕೊಂಡು ಜ್ಞಾನಸೃಷ್ಟಿ ಮಾಡುವ ಜವಾಬ್ದಾರಿ ಹೊತ್ತುಕೊಂಡಾಗ ನಡೆಯುವ ಎಲ್ಲ ಪವಾಡಗಳೂ ಸಾಹಿತ್ಯ ವಿಮರ್ಶೆಯಲ್ಲಿಯೂ ಒಂದು ಮಿತಿಯೊಳಗೆ ನಡೆದಿವೆ’ (ಶತಮಾನದ ಸಾಹಿತ್ಯ ವಿಮರ್ಶೆ) ಎಂದು ಹೇಳುವಾಗಲೂ ಎಚ್.ಎಸ್.ಆರ್. ಅದರ ಮಿತಿಯತ್ತಲೂ ಗಮನ ಸೆಳೆಯಲು ಮರೆಯುವುದಿಲ್ಲ:

`ಜೀವಂತವಾದ ಕೃತಿಯು ಓದುಗನ ಮನಸಿನಲ್ಲಿ ಅಸಂಖ್ಯ ಸಾಧ್ಯತೆಗಳನ್ನು ಕಂಡುಕೊಳ್ಳುತ್ತದೆ. ಆದ್ದರಿಂದಲೇ ವಿಮರ್ಶೆ-ವಿಶ್ಲೇಷಣೆಗಳಿಗೆ ಅಲ್ಪಾಯುಷ್ಯದ ಶಾಪವಿರುತ್ತದೆ. ಅವು ತಾವು ರಚಿತವಾಗುತ್ತಿರುವ ಕಾಲದ ಒತ್ತಡಗಳಿಗೆ ಹಿಡಿದ ಕನ್ನಡಿಗಳು’ (`ಭೃಂಗಮಾರ್ಗ’ದ ಪ್ರಸ್ತಾವನೆ). ಸಾಹಿತ್ಯದ ಯಾವ ನೆಲೆಗಳು ಯಾಕೆ ಮುನ್ನೆಲೆಗೆ ಬರುತ್ತವೆ ಎಂಬುದಕ್ಕೂ, ಅದನ್ನು ಯಾವಾಗ ಯಾರು ಓದುತ್ತಾರೆ ಎಂಬುದಕ್ಕೂ ನಿಕಟ ಸಂಬಂಧವಿದೆ ಎಂದು ಎಚ್.ಎಸ್.ಆರ್. ಪ್ರತಿಪಾದಿಸುತ್ತಾರೆ.

ಕಳೆದ ಸರಿಸುಮಾರು ನೂರು ವರ್ಷಗಳಲ್ಲಿ ನಮ್ಮ ಸಂಸ್ಕೃತಿಗಳು ಗಳಿಸಿಕೊಂಡಿದ್ದು, ಕಳೆದುಕೊಂಡಿದ್ದು, ಬೇಕೆಂದೇ ಬದಿಗೆ ತಳ್ಳಿದ್ದು ಎಲ್ಲವನ್ನೂ ಮತ್ತೊಮ್ಮೆ ನೋಡುವ, ಕಾಪಾಡಿಕೊಳ್ಳುವ ಕೆಲಸವು ಈಗಾಗಲೇ ಮೊದಲಾಗಿದೆ ಮತ್ತು ರಾಘವೇಂದ್ರರಾವ್ ಅವರೂ ಕೂಡ ತಮ್ಮೆಲ್ಲ ವಿಮರ್ಶಾ ಸಾಹಿತ್ಯದೊಡನೆ ಆ ಕೆಲಸದಲ್ಲಿ ಪ್ರೀತಿಯಿಂದ ತೊಡಗಿಕೊಂಡಿದ್ದಾರೆ.

`ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇದು ನಿಧಿಧ್ಯಾಸದ ಕಾಲ’- ಇದೂ ಲೇಖಕರದೇ ಮಾತು. ನಮ್ಮ ಲೋಕದೃಷ್ಟಿಯೇ ನಮ್ಮ ಲೋಕದರ್ಶನವನ್ನೂ ರೂಪಿಸುವುದಾದರೂ ಕನ್ನಡಕ ಕಡಿವಾಣವಾಗಬಾರದು ಎಂಬ ಆತಂಕ ಅವರದು. ಎಂಥ ಖಚಿತವಾದ ಧೋರಣೆಯೂ, ತನಗಿರುವ ವಿನಯದ ಮೂಲಕವೇ ಲೋಕವನ್ನು ಸಮೀಪಿಸಬೇಕೆಂಬ, ಅದರಿಂದಲೇ ಅದು ಮುಕ್ತತೆಯನ್ನು ಪಡೆಯಲು ಸಾಧ್ಯವೆಂಬ ಎಚ್.ಎಸ್.ಆರ್. ಅವರ ತಾತ್ತ್ವಿಕ ನಿಲುವಿಗೆ ಅವರ ಬರಹಗಳೇ ಸಾರ್ಥಕ ನಿದರ್ಶನಗಳಾಗಿವೆ.

-ಡಾ. ಚಿಂತಾಮಣಿ ಕೊಡ್ಲೆಕೆರೆ

ಶೀರ್ಷಿಕೆ: ಸಂಗಡ ಲೇಖಕರು : ಡಾ.ಎಚ್.ಎಸ್.ರಾಘವೇಂದ್ರರಾವ್; ಪ್ರಕಾಶಕರು:  ಕನ್ನಡ ವೇದಿಕೆ, ಜೈನ್ ವಿ.ವಿ., ಬೆಂಗಳೂರು ಪುಟ:        ಬೆಲೆ: ರೂ. 200/-

ಕೃಪೆ:ಪ್ರಜಾವಾಣಿ ಸಾಪ್ತಾಹಿಕ ಪುರವಣಿ

ವಿಳಾಸವಿಲ್ಲದವರ ಹುಡುಕುತ್ತಾ – ಪುಸ್ತಕ ಬಿಡುಗಡೆಗೆ ಶುಭಾಶಯಗಳು

ವನಿತಾ ಚಿಂತನ ಮಾಲೆ – ಪುಸ್ತಕಗಳ ಬಿಡುಗಡೆಗೆ ಬನ್ನಿ

ಪುಸ್ತಕ ಹಬ್ಬ ಆಚರಿಸೋಣ. ಅರಮನೆ ಮೈದಾನಕ್ಕೆ ಬನ್ನಿ.



ಇದು ನಮ್ಮ ಸ್ಟಾಲ್.
ಅರಮನೆ ಮೈದಾನದಲ್ಲಿ ಪುಸ್ತಕ ಪ್ರೀತಿಯದೂ ಒಂದು ಸ್ಟಾಲ್ ಇದೆ. ಎಲ್ಲಾ ಸ್ಟಾಲ್ ಗಳನ್ನು ನೋಡಿ ಹೋಗುವಾಗ ಕೊನೆಯಲ್ಲಿ (ಕೊನೆಯ ಸ್ಟಾಲೇ ಪುಸ್ತಕಪ್ರೀತಿ ಯದು) ಪುಸ್ತಕ ಪ್ರೀತಿಯನ್ನು ಮರೆಯದೇ ಸಂದರ್ಶಿಸಿರಿ ತಮ್ಮ ಆಯ್ಕೆಯ ಪುಸ್ತಕ ಖರೀದಿಸಲು ಈ ಮೂಲಕ ಕೇಳಿಕೊಳ್ಳುತ್ತೇವೆ.

ಮಕ್ಕಳ ದಿನಾಚರಣೆಯ ಶುಭಾಶಯಗಳು

ಪೇಟೆಯಲ್ಲಿರುವ ಮಕ್ಕಳ ಪುಸ್ತಕ

ಶಕ್ತಿಯ ಬಳಕೆಯಲ್ಲಿ ಯುಕ್ತಿ
ಲೇ: ಡಾ. ಬಿ.ಎಸ್. ಸಿದ್ಧರಾಮಯ್ಯಬೆ: ರೂ 35

ಜೋಡಿ ಪದಕೋಶ
ಲೇ: ಡಾ. ನಾಗರಾಜ ಹೊಸೂರಕರ್‌ಬೆ: ರೂ 25

ನಂದಿಕೋಲು
ಲೇ: ಎ.ಕೆ. ರಾಮೇಶ್ವರ, ಬೆ: ರೂ 25

ಭಾರತದ ಜನಪದ ಕಥೆಗಳು
ಲೇ: ತ್ರಿಮೂರ್ತಿ,  ಬೆ: ರೂ 30

ಡಾ. ಬಿ.ಆರ್. ಅಂಬೇಡ್ಕರ್
ಲೇ: ಡಾ. ಎಚ್.ಟಿ. ಪೋತೆ, ಬೆ: ರೂ 17

ದ್ರಾವಿಡ ಸಂಸ್ಕೃತಿ ಚಿಂತಕ ಪೆರಿಯಾರ್
ಲೇ: ಡಾ. ಎಚ್.ಟಿ. ಪೋತೆ, ಬೆ: ರೂ 14

ಮಹಾತ್ಮ ಜ್ಯೋತಿಬಾ ಫುಲೆ
ಲೇ: ಡಾ. ಎಚ್.ಟಿ. ಪೋತೆ, ಬೆ: ರೂ 24

ಡಾ. ಆಲ್ಬರ್ಟ್ ಷ್ವೈಟ್ಜರ್
ಲೇ: ಬೆ.ಗೋ. ರಮೇಶ್, ಬೆ: ರೂ 16

ಸತೀಶ್ ಧವನ್
ಲೇ: ರಾಜೇಶ್ವರಿ ಕೃಷ್ಣ,  ಬೆ: ರೂ 16

ಪ್ರಪಂಚದ ವಿಚಿತ್ರ ನಿಗೂಢಗಳು
ಲೇ: ಬೆ.ಗೋ. ರಮೇಶ್,  ಬೆ: ರೂ 35

ಮುಲ್ಲಾನ ಕಥೆಗಳು
ಲೇ: ಬೆ.ಗೋ. ರಮೇಶ್, ಬೆ: ರೂ 30

ಸಂಧ್ಯಾಮಾಮಿ ಹೇಳಿದ ಜಾನಪದ ಕತೆಗಳು-2
ಲೇ: ಸಂಧ್ಯಾ, ಬೆ: ರೂ 30

ಭಾರತೀಯ ಸಾಂಸ್ಕೃತಿಕ ಮೌಲ್ಯಗಳು
ಲೇ: ಡಾ. ಮ. ರಾಮಜೋಯಿಸ್‌ಬೆ: ರೂ 24

ಸಾಧು ಸಂತರ ಹಾಗೂ ಸಿದ್ಧಪುರುಷರ ಕತೆಗಳು
ಲೇ: ಪ್ರೇಮಾ ಭಟ್, ಬೆ: ರೂ 24

ಮಕ್ಕಳಿಗಾಗಿ ಹತ್ತಾರು ಕಥೆಗಳು
ಲೇ: ಡಾ. ಕೆ. ಸುಂದರೇಶನ್‌ಬೆ: ರೂ 24

ಭಾರತದ ಅರಸರ ಮತ್ತು ಶ್ರೀ ಸಾಮಾನ್ಯರ ಕಥೆಗಳು
ಲೇ:ಜೆ.ಮಾರ್ಟಿನ್, ಬೆ: ರೂ 24

ಗಗನ ಸಾಹಸ
ಲೇ: ವೀಣಾ ನಾಗಪಾಲ್,  ಬೆ: ರೂ 24

ಬರಾಕ್ ಹುಸೇನ್ ಒಬಾಮಾ
ಲೇ: ಪ್ರೊ. ಕೆ. ಭೈರಪ್ಪ, ಬೆ: ರೂ 40

ಅಂಕಿ-ಸಂಖ್ಯೆಗಳ ಬಗ್ಗೆ ನಾವು ಹೇಗೆ ಅರಿತೆವು
ಲೇ: ಐಸಾಕ್ ಅಸಿಮೋವ್, ಬೆ: ರೂ 20

ಬೆಳಕು
ಲೇ: ಪ್ರೊ. ಎ.ಆರ್. ಬಳೂರಗಿಬೆ: ರೂ 60

ಬ್ರಹ್ಮಾಂಡ ರಹಸ್ಯಗಳು
ನಮ್ಮ ಭೂಮಿ
ಎರಡೂ ಕೃತಿಗಳ ಲೇ: ಅಮೃತ್ ಜೋಗಿ, ಬೆ: ತಲಾ ರೂ 25

ಭೂಮಿ ಗುಂಡಗಿದೆಯೆಂದು ನಾವು ಹೇಗೆ ಅರಿತೆವು
ಲೇ:ವಿ.ಎಸ್.ಎಸ್. ಶಾಸ್ತ್ರಿ, ಬೆ: ರೂ 20

ಗಾಳಿ ಮತ್ತು ಅನಿಲಗಳು
ಲೇ: ಡಾ. ಹೆಚ್. ರಾಮಚಂದ್ರಸ್ವಾಮಿಬೆ: ರೂ 60

ಯೋಚನೆ ಬಿಡಿ ಯೋಜನೆ ಮಾಡಿ
ಲೇ: ಆರ್.ಬಿ. ಗುರುಬಸವರಾಜಬೆ: ರೂ 25
ಈ ಮೇಲಿನ ಎಲ್ಲಾ ಪುಸ್ತಕಗಳ ಪ್ರಕಾಶಕರು: ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09

ಪಕ್ಷಿಗಳ ಚಿತ್ರ ಬಿಡಿಸಿರಿ
ಪ್ರಾಣಿಗಳ ಚಿತ್ರ ಬಿಡಿಸಿರಿ
ಮನುಷ್ಯರ ಚಿತ್ರ ಬಿಡಿಸಿರಿ
ವಾಹನಗಳ ಚಿತ್ರ ಬಿಡಿಸಿರಿ
ಈ ನಾಲ್ಕೂ ಪುಸ್ತಕಗಳ ಚಿತ್ರ-ಪಠ್ಯ: ಪುಂಡಲೀಕ ವಜೆ  (ಅನು: ಬಾಬು ಜತ್ತಕರ್), ಬೆಲೆ ಕ್ರಮವಾಗಿ ರೂ 50, ರೂ 40. ರೂ 40. ರೂ 40.

ಜೀವ ಜಗತ್ತಿನ ಕೌತುಕಗಳು-ಹುಟ್ಟು ಸಾವು
ಜೀವ ಜಗತ್ತಿನ ಕೌತುಕಗಳು-ನಿದ್ರೆ ವಿಶ್ರಾಂತಿ
ಎರಡೂ ಕೃತಿಗಳ ಲೇಖಕರು ಡಾ.ಎನ್.ಎಸ್.ಲೀಲಾಬೆ: ತಲಾ ರೂ 75.

ಖಗೋಳ ವಿಜ್ಞಾನದ ಕಥೆ
ಲೇ: ಉದಯ್ ಪಾಟೀಲ್ (ಅನು: ಪಿ.ಆರ್. ವಿಶ್ವನಾಥ್), ಬೆ: ರೂ 40

ಆಹಾ, ಎಷ್ಟೊಂದು ಚಟುವಟಿಕೆಗಳು
ಲೇ: ಅರವಿಂದ್ ಗುಪ್ತ(ಅನು: ವಿ.ಎಸ್.ಎಸ್. ಶಾಸ್ತ್ರಿ), ಬೆ: ರೂ 50

ಮಾಡಿ ಕಲಿ
ಲೇ: ಅರವಿಂದ್‌ಗುಪ್ತ (ಅನು: ವಿ.ಎಸ್.ಎಸ್. ಶಾಸ್ತ್ರಿ), ಬೆ: ರೂ 50

ಬಾಯಿ ಇದ್ದವರು ಬರದಲ್ಲೂ ಬದುಕುತ್ತಾರೆ
ಲೇ: ಜಿ.ಎಸ್. ರುಕ್ಕಮ್ಮ, ಎಸ್.ಆರ್. ರಂಗಮಣಿ
ಚಿಟ್ಟೆ ಹಾಡು ಮತ್ತು ಇರುವೆ ಮದುವೆ
ದೇಶ ವಿದೇಶಗಳ ವಿನೋದ ಕಥೆಗಳು
ಎರಡೂ ಕೃತಿಗಳ ಲೇ: ಶಾಂತಾರಾಮ ಸೋಮಯಾಜಿ, ಬೆ: ತಲಾ ರೂ 40.

ಸರ್ವರಿಗೂ ಸಮಪಾಲು
ಚೀನಾದ ಚಿಟ್ಟೆ ಕಥೆಗಳು
ಎರಡೂ ಕೃತಿಗಳ ಲೇ: ಬೇದ್ರೆ ಮಂಜುನಾಥ, ಬೆ: ತಲಾ ರೂ 40.

ನೀತಿ ನಡತೆಯ ಕಥೆಗಳು
ಲೇ: ವಿವಿಧ ಲೇಖಕರು, ಬೆ: ರೂ 40

ಪುಟಾಣಿ ಪದ್ಯಗಳು
ಲೇ: ಡಾ. ಪಿ. ನಾರಾಯಣ ಭಟ್,  ಬೆ: ರೂ 30

ಗಾಳಿ ಮತ್ತು ಅನಿಲಗಳು
ಲೇ: ಡಾ.ಎಚ್. ರಾಮಚಂದ್ರಸ್ವಾಮಿಬೆ: ರೂ 60

ಅಣು, ಪರಮಾಣು ಮತ್ತು ಸಂಯುಕ್ತಗಳು
ಲೇ: ಡಾ.ಎಚ್.ರಾಮಚಂದ್ರಸ್ವಾಮಿಬೆ: ರೂ 60

ಇಂಧನಗಳು
ಲೇ: ಡಾ. ಎಚ್. ರಾಮಚಂದ್ರಸ್ವಾಮಿ ಬೆ: ರೂ 50

ಪರಿಸರ ಅಧ್ಯಯನ
ಲೇ: ಡಾ. ಎಚ್. ರಾಮಚಂದ್ರಸ್ವಾಮಿಬೆ: ರೂ 60

ನೀರು
ಜೈವಿಕ ತಂತ್ರಜ್ಞಾನ
ಎರಡೂ ಕೃತಿಗಳ ಲೇ: ಡಾ. ಎನ್.ಎಸ್. ಲೀಲಾ, ಬೆ: ತಲಾ ರೂ 50.

ಜೀವಕೋಶ ಮತ್ತು ಸೂಕ್ಷ್ಮ ಜೀವಿಗಳು
ಲೇ: ಡಾ. ಪಿ.ಕೆ. ರಾಜಗೋಪಾಲ್ ಬೆ: ರೂ 60

ಮಾನವ ದೇಹ
ಲೇ: ಡಾ. ಸಿ.ಆರ್. ಚಂದ್ರಶೇಖರ್‌ಬೆ: ರೂ 60

ಸಸ್ಯಗಳು
ಪ್ರಾಣಿಗಳು
ಎರಡೂ ಕೃತಿಗಳ ಲೇ: ಸುಮಂಗಲ ಎಸ್. ಮುಮ್ಮಿಗಟ್ಟಿ,  ಬೆ: ತಲಾ ರೂ 50.

ಸಂತಾಲರ ಜಾನಪದ ಕಥೆಗಳು
ಲೇ: ಆಯ್ಕೆ (ಅನು: ಎಚ್.ಎಸ್. ಮಂಜುನಾಥ),  ಬೆ: ರೂ 40

ವಿಚಿತ್ರ ಸತ್ಯಗಳು; ಕುತೂಹಲಕಾರಿ ಕತೆಗಳು
ಲೇ: ಜಿ.ವಿ. ಗಣೇಶಯ್ಯ, ಬೆ: ರೂ 100
ಈ ಮೇಲಿನ ಎಲ್ಲಾ ಕೃತಿಗಳ ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-01

ಮರವೇ ಮರ್ಮರವೇ
(ಮಕ್ಕಳಿಗಾಗಿ ಜಾನಪದ ಕಥೆಗಳು) ಲೇ: ಡಾ. ಚಂದ್ರಶೇಖರ ಕಂಬಾರಪು: 160. ಬೆ: ರೂ 80

ಬಾರೋ ಬಾರೋ ಮಳೆರಾಯ
(ಮಕ್ಕಳ ಪದ್ಯಗಳು) ಲೇ: ಎಚ್.ಎಸ್. ವೆಂಕಟೇಶಮೂರ್ತಿ. ಪು: 192ಬೆ: ರೂ 120

ಪಾಪು ಪದ್ಯಗಳು
ಲೇ: ಎನ್. ಶ್ರೀನಿವಾಸ್ ಉಡುಪಪು: 48, ಬೆ: ರೂ 20

ಭಾರತದ ಸ್ವಾತಂತ್ರ್ಯ ಹೋರಾಟಗಾರರು
ಲೇ: ವೈ.ಎನ್. ಗುಂಡೂರಾವ್‌ಪು: 104, ಬೆ: ರೂ 50

ಕ್ವಿಜ್ ಕರ್ನಾಟಕ
ಲೇ: ಸಂಪಟೂರು ವಿಶ್ವನಾಥ್‌ಪು: 152, ಬೆ: ರೂ 60

ಗಣಿತದ ಆಟಗಳು
ಲೇ: ಡಾ. ಎಸ್. ಎನ್. ಗಣನಾಥಪು: 48 ಬೆ: ರೂ 25

ಮರಳಿ ಯತ್ನವ ಮಾಡು
(ಮಕ್ಕಳ ಕಥೆಗಳು)
ಲೇ: ಜಿ.ಎ. ನರಸಿಂಹಮೂರ್ತಿಪು 56. ಬೆ: ರೂ 25

ಬೆಳಕು ನೀಡುವ ಕಥೆಗಳು
ಲೇ: ನಾರಾಯಣೀ ದಾಮೋದರ್‌ಪು: 128, ಬೆ: ರೂ 80
ಈ ಮೇಲಿನ ಎಲ್ಲಾ ಕೃತಿಗಳ ಪ್ರಕಾಶಕರು: ಅಂಕಿತ ಪುಸ್ತಕ, ನಂ. 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯ ರಸ್ತೆ. ಬಸವನಗುಡಿ. ಬೆಂಗಳೂರು.

ಪೂರ್ಣನ ಗರಿಗಳು
ಲೇ: ಪೂರ್ಣಪ್ರಜ್ಞ, ಪು: 72 ಬೆ: ರೂ 30

ಹುಲಿರಾಯ
ಲೇ: ಕೀರ್ತಿರಾಜ್, ಪು: 136ಬೆ: ರೂ 80.

ಹಲೋ ಹಲೋ ಛಂದಮಾಮ
ಲೇ: ರಾಧೇಶ ತೋಳ್ಪಾಡಿ, ಪು: 72 ಬೆ: ರೂ 50
ಈ ಮೂರೂ ಕೃತಿಗಳ ಪ್ರಕಾಶಕರು: ಛಂದ ಪುಸ್ತಕ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-76

ಹಕ್ಕಿಗೊಂದು ಗೂಡು ಕೊಡಿ
(ಮಕ್ಕಳ ಕಾದಂಬರಿ)
ಲೇ: ನಾ, ಡಿಸೋಜ,  ಬೆ: ರೂ 50

ಮುಳುಗಡೆ ಊರಿಗೆ ಬಂದವರು (ಮಕ್ಕಳ ಕಾದಂಬರಿ)
ಲೇ: ನಾ. ಡಿಸೋಜ,  ಬೆ: ರೂ 40

ಕೊಕ್ಕರೆ ತಾತ
(ಮಕ್ಕಳ ಕತೆಗಳು)
ಲೇ: ಆರ್ಯ , ಬೆ: ರೂ 50

ಆಧುನಿಕ ಜಗತ್ತಿಗೆ ಒಂದು ಹಳೆ ಕತೆ
(ಮಕ್ಕಳ ಕತೆಗಳು)
ಲೇ: ಮೂಲ: ಬದರಿನಾರಾಯಣ, ಅನು: ಕೀರ್ತಿನಾಥ ಕುರ್ತಕೋಟಿ, ಬೆ: ರೂ 40

ಕೀಟ ಕಥೆಗಳು
ಲೇ: ಪಿ. ಶಿವರಾಮ ರೈ, ಬೆ: ರೂ 40

ಮೋಡರಾಜ
ಮಕ್ಕಳ ನಾಟಕ
ಲೇ: ಆರ್ಯ, ಬೆ: ರೂ 35

ಉಪ್ಪಿನಕಾಯಿಯ ಅತ್ತೆ
ಲೇ: ಆರ್.ಕೆ. ಶಾನುಭೋಗಬೆ: ರೂ 40

ಸೋಮಾರಿ ಓಲ್ಯಾ
ಲೇ: ವೈದೇಹಿ, ಬೆ: ರೂ 25

ಬಾಲದ ಕತೆ
ಲೇ: ಬಂದಗದ್ದೆ ರಾಧಾಕೃಷ್ಣ, ಬೆ: ರೂ 15

ಪ್ರಸ್ತುತಿ
ಲೇ: ರಾಧಾ ಕುಲಕರ್ಣಿ, ಬೆ: ರೂ 30

ಅಂತೂ ಕಣ್ಣು ತೆರೆದವು
ಲೇ: ರಾಧಾ ಕುಲಕರ್ಣಿ, ಬೆ: ರೂ 30
ಈ ಮೇಲಿನ ಎಲ್ಲಾ ಕೃತಿಗಳ ಪ್ರಕಾಶಕರು: ಜಡಭರತ ಪ್ರಕಾಶನ, ಲಕ್ಷ್ಮೀ ಭವನ, ಸುಭಾಸ ರೋಡ, ಧಾರವಾಡ- 580001

ಕೃಪೆ : ಪ್ರಜಾವಾಣಿ ಸಾಪ್ತಾಹಿಕ ಪುರವಣಿ – 14.11.2010

ಮಕ್ಕಳ ದಿನದ ಶುಭಾಶಯಗಳು

ಮಕ್ಕಳ ಪುಸ್ತಕ ಹೇಗಿರಬೇಕು?

ನ.ರವಿಕುಮಾರ
ಮಕ್ಕಳಿಗಾಗಿ ಬರೆಯುವುದು ಒಂದು ಮನೋಧರ್ಮ. ಈ ಮನೋಧರ್ಮದ ಕಾರಣಕ್ಕಾಗಿಯೇ ಬರೆದವರು ಮಾತ್ರ ಯಶಸ್ವಿಯಾಗಿದ್ದಾರೆ. ಉದ್ದೇಶಕ್ಕೆ ಬರೆದದ್ದು ಸಾಹಿತ್ಯವೆ?

ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಒಮ್ಮೆ ಮಾತನಾಡುತ್ತಾ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಸಿಂಗರ್‌ನ ಸಂದರ್ಶನವನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ಸಂದರ್ಶಕ ಸಿಂಗರ್ ಕುರಿತು `ನೀವು ದೊಡ್ಡವರಿಗೂ ಬರೆದಿದ್ದೀರಿ. ಮಕ್ಕಳಿಗೂ ಬರೆದಿದ್ದೀರಿ. ನಿಮಗೆ ಮಕ್ಕಳಿಗೆ ಬರೆಯುವುದು ಕಷ್ಟವೋ? ದೊಡ್ಡವರಿಗೆ ಬರೆಯುವುದು ಕಷ್ಟವೂ?’ ಎಂದು ಕೇಳುತ್ತಾನೆ. ಅದಕ್ಕೆ ಸಿಂಗರ್ ಉತ್ತರಿಸುತ್ತಾರೆ: `ಮಕ್ಕಳಿಗೆ ಬರೆಯುವುದೇ ತುಂಬ ಕಷ್ಟ. ಕಾರಣ-ದೊಡ್ಡವರ ಮುಂದೆ ನಾನು ಬರೆದ ಪದ್ಯವನ್ನು ಓದಿದಾಗ ಅವರು ದಾಕ್ಷಿಣ್ಯಕ್ಕೋ, ಶಿಷ್ಟಾಚಾರಕ್ಕೋ ತಲೆ ಅಲ್ಲಾಡಿಸಿ ಭೇಷ್ ಎನ್ನಬಹುದು. ಆದರೆ ಮಕ್ಕಳ ಮುಂದೆ ನಾನು ಬರೆದ ಪದ್ಯವನ್ನು ಓದಿದಾಗ ಅವರಿಗೆ ಇಷ್ಟವಾದರೆ ಪೂರ್ತಿ ಕೇಳುತ್ತಾರೆ; ಇಲ್ಲದಿದ್ದರೆ ಆಕಳಿಸಿಬಿಡುತ್ತಾರೆ’ ಎಂದು. ಮಕ್ಕಳಿಗೆ ಬರೆಯುವುದೇ ಕಷ್ಟವಿರುವಾಗ ಮಕ್ಕಳಿಗಾಗಿ ಪುಸ್ತಕ ಪ್ರಕಟಿಸುವುದು ಇನ್ನೂ ಕಷ್ಟದ ಕೆಲಸ.

ಮಕ್ಕಳ ಸಾಹಿತ್ಯದಲ್ಲಿ `ಮಕ್ಕಳೇ ಬರೆದ ಪುಸ್ತಕಗಳು’ ಒಂದು ಬಗೆಯವು. `ಮಕ್ಕಳಿಗಾಗಿ ಬರೆದವು’ ಮತ್ತೊಂದು ಬಗೆಯವು. ಮಕ್ಕಳು ಬರೆವಾಗ ಅವರಿಗೆ ಭಾಷೆಯ, ನಿರೂಪಣೆಯ ತಂತ್ರ, ವಿಧಾನಗಳು ಗೊತ್ತಿರುವುದಿಲ್ಲ. ಅವರು ತಮ್ಮ ಅನುಭವಗಳನ್ನು ತಮಗೆ ತೋಚಿದಂತೆ ಬರೆದುಬಿಡುತ್ತಾರೆ. ಕೆಲವೊಮ್ಮೆ ಅವರಿಗರಿವಿಲ್ಲದೆಯೇ ಉತೃಷ್ಟವಾದದ್ದನ್ನು ಬರೆದುಬಿಡಬಹುದು. ಹೀಗಾಗಿ ಪಾಶ್ವಾತ್ಯರಲ್ಲಿ ಮಕ್ಕಳು ಬರೆದ ಬರಹಗಳನ್ನು ಕೂಡ ಮುಖ್ಯವಾಹಿನಿಯ ಸಾಹಿತ್ಯದ ಜೊತೆಗೇ ನೋಡುವ ಪರಿಪಾಠ ಇದೆ.

ಈ ಹೊತ್ತು ಮಕ್ಕಳಿಗಾಗಿ ಬರೆವ ದೊಡ್ಡವರ ಪುಸ್ತಕಗಳಲ್ಲಿ ಮಕ್ಕಳ ಮೆದುಳಿನ ವಿಕಾಸಕ್ಕೆ ಬೇಕಾದಂತಹ ಪುಸ್ತಕಗಳೇ ಹೆಚ್ಚು. ಹೃದಯ ವಿಕಾಸಕ್ಕೆ ಬೇಕಾದ ಪುಸ್ತಕಗಳು ತೀರಾ ಕಡಿಮೆ. ದೇಹದ ರಚನೆ-ವಿನ್ಯಾಸ, ರೋಗಗಳು-ಗುಣಪಡಿಸುವ ವಿಧಾನಗಳು, ರಾಷ್ಟ್ರೀಯ ಹಬ್ಬಗಳು, ರಾಷ್ಟ್ರಪತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಕ್ವಿಜ್, ಸಮಯ ಪಾಲನೆ, ಹವ್ಯಾಸ, ವ್ಯಕ್ತಿತ್ವ ವಿಕಾಸ ಮುಂತಾದ ವಿಷಯಗಳ ಬಗೆಗೇ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತವೆ. ಇವೆಲ್ಲವೂ ಬೇಕು ನಿಜ. ಆದರೆ ಇವೆಲ್ಲ ಮಕ್ಕಳ ಪಠ್ಯಕ್ರಮದ ವಿಸ್ತರಣೆ ಮಾತ್ರ.

ಇದರಿಂದ ಮಕ್ಕಳ ಬೌದ್ಧಿಕ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯಕಾರಿಯೇ ಹೊರತು ಅವರ ಭಾವನಾತ್ಮಕ ವ್ಯಕ್ತಿತ್ವದ ಬೆಳವಣಿಗೆಗಲ್ಲ. ಕರ್ತವ್ಯದ ಬಗೆಗೋ, ಸಮಯ ಪಾಲನೆಯ ಕುರಿತಾಗಿಯೋ, ಸತ್ಯದ ಮಹತ್ವವನ್ನು ತಿಳಿಸಲೋ ಪುಟಗಟ್ಟಲೆ ದಪ್ಪ ದಪ್ಪ ಅಕ್ಷರಗಳಲ್ಲಿ ಮುದ್ರಿಸಿಕೊಟ್ಟರೆ ಅದರ ಪರಿಣಾಮ ಅಷ್ಟಕ್ಕಷ್ಟೇ. ಆದರೆ ಸತ್ಯ ಹರಿಶ್ಚಂದ್ರನ ಕಥೆಯೋ, ಶ್ರವಣಕುಮಾರನ ಮಾತಾ ಪಿತೃಭಕ್ತಿಯ ಕಥೆಯೋ (ಇವು ಗಾಂಧೀಜಿಯವರ ಬದುಕನ್ನೇ ರೂಪಿಸಿದವೆಂಬುದನ್ನು ನೆನಪಿಸಿಕೊಳ್ಳಿ), ಆಲಿ ಬಾಬನ ಕಥೆಯೋ, ಕಿಂದರಜೋಗಿಯ ಕಥೆಯೋ ಬೀರುವ ಪರಿಣಾಮ ಹೆಚ್ಚಿನದು. ಕಥೆ ಕೇಳುತ್ತಾ ಕೇಳುತ್ತಾ ಅವರ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳು, ಬೆಳೆಯುವ ಭಾವನೆಗಳ ಲೋಕ ವಿಸ್ತಾರದ್ದು.

ಹೀಗಾಗಿ ಎಲ್ಲರೂ ಮಕ್ಕಳಿಗಾಗಿ ಬರೆಯಲಾರರು. ಮಕ್ಕಳಿಗಾಗಿ ಬರೆಯುವುದು ಒಂದು ಮನೋಧರ್ಮ. ಈ ಮನೋಧರ್ಮದ ಕಾರಣಕ್ಕಾಗಿಯೇ ಬರೆದವರು ಮಾತ್ರ ಯಶಸ್ವಿಯಾಗಿದ್ದಾರೆ. ಉದ್ದೇಶಕ್ಕೆ ಬರೆದದ್ದು ಸಾಹಿತ್ಯವೆ? ಈ ನಿಟ್ಟಿನಲ್ಲಿ ರಾಜರತ್ನಂ ಅವರ ಮಕ್ಕಳ ಸೇವೆ/ಮನೋಧರ್ಮ ಅನನ್ಯವಾದದ್ದು. ಮಕ್ಕಳಿಗಾಗಿ ಬರೆದರೆ ತನ್ನ ಕೆಲಸ ಮುಗಿಯಿತು ಎಂದು ಅವರು ಭಾವಿಸಲಿಲ್ಲ. ತಾವೇ ಆ ಪದ್ಯಗಳನ್ನು ಹಾಡುತ್ತಾ, ಹಾಡಿಸುತ್ತಾ ಆಸಕ್ತಿಯನ್ನು ಹುಟ್ಟಿಸಿದರು. ಅವುಗಳನ್ನು ಮಕ್ಕಳಿಗೆ ಕೈಗೆಟುಕುವ ಬೆಲೆಯಲ್ಲಿ ಸ್ವತಃ ತಾವೇ ಪ್ರಕಟಿಸಿದರು. ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಅವರಿಗೆ ಪುಸ್ತಕಗಳ ಬಹುಮಾನ ನೀಡಿದರು. ಆ ಮೂಲಕ ಸಾಹಿತ್ಯಾಸಕ್ತಿಯನ್ನು ಬೆಳೆಸಿದರು.

ಮಕ್ಕಳ ಪುಸ್ತಕಗಳ ಪ್ರಕಟನೆಗೆ ವಿಪುಲ ಅವಕಾಶಗಳಿದ್ದರೂ ಆ ಕಡೆಗೆ ಯಾರೂ ಗಮನಹರಿಸುತ್ತಿಲ್ಲ. ಚಿಲ್ಡ್ರನ್ ಬುಕ್ ಟ್ರಸ್ಟ್‌ನಂಥಾ ಮಕ್ಕಳಿಗಾಗಿಯೇ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶನ ಸಂಸ್ಥೆಗಳು ಕೆಲವೇ ಕೆಲವು. ಎಲ್ಲ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರೇ ಮಕ್ಕಳ ಪುಸ್ತಕಗಳನ್ನೂ ಪ್ರಕಟಿಸುತ್ತಾರೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಮಕ್ಕಳ ಪುಸ್ತಕಗಳನ್ನು ಪ್ರಕಟಿಸುವಾಗ ಅವುಗಳ ಆಕಾರ, ಗಾತ್ರ ಬೇರೆ ಬೇರೆಯದ್ದಾಗಿರಬೇಕಾಗುತ್ತದೆ. ಬಣ್ಣದ ಚಿತ್ರಗಳಿರಬೇಕಾಗುತ್ತದೆ, ವಿಶೇಷವಾದ ಕಾಗದ, ರಟ್ಟು ಮುಂತಾದವನ್ನು ಉಪಯೋಗಿಸಬೇಕಾಗುತ್ತದೆ. ಹೀಗಾಗಿ ಪ್ರಕಟನೆಯ ವೆಚ್ಚ ದುಬಾರಿಯಾಗುತ್ತದೆ. ಇಂಥ ಪುಸ್ತಕಗಳ ಬೆಲೆ ಹೆಚ್ಚಾಗುತ್ತದೆ (ಬೆಲೆ ಹೆಚ್ಚಾದರೆ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಭಾವನೆ). ಹೀಗಾಗಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸುವವರು ಮಾಮೂಲಿ ಪುಸ್ತಕದ ಅಳತೆ ಮತ್ತು ಆಕಾರದಲ್ಲಿ ಪುಸ್ತಕಗಳನ್ನು  ಪ್ರಕಟಿಸುತ್ತಿದ್ದಾರೆ.

ಪುಸ್ತಕ ಮಾರಾಟ ಜಾಲದ ಸುವ್ಯವಸ್ಥೆಯೇ ಇಲ್ಲವೆಂದಾದರೆ ಮಕ್ಕಳ ಪುಸ್ತಕಗಳ ವಿರತಣೆ ಮತ್ತು ಮಾರಾಟಕ್ಕೆ ಎಲ್ಲಿ ಅವಕಾಶ? ಅಷ್ಟೇ ಅಲ್ಲ; ಮಕ್ಕಳ ಪುಸ್ತಕಗಳು ಬೇರೆ ಬೇರೆ ಆಕಾರದಲ್ಲಿರುವುದರಿಂದ ಅವುಗಳಿಗಾಗಿ ಪ್ರತ್ಯೇಕ ಸ್ಟ್ಯಾಂಡ್‌ಗಳನ್ನು ಮಾಡಿಸಬೇಕಾಗುತ್ತದೆ, ಜೋಡಿಸಬೇಕಾಗುತ್ತದೆ. ಇನ್ನು, ಮಕ್ಕಳು ಇಂಥಾ ಪುಸ್ತಕಗಳನ್ನು ಮುಟ್ಟಲು ಕೆಲ ಮಾರಾಟಗಾರರೂ ಬಿಡುವುದಿಲ್ಲ. ಏನಿದ್ದರೂ ಕಣ್ಣಿನಲ್ಲಿ  ನೋಡಿ ಬೇಕಿದ್ದರೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪುಸ್ತಕ ಹಾಳಾಗುತ್ತದೆಂಬ ಭಯ! ಪುಸ್ತಕವನ್ನು ಮುಟ್ಟಿ ಅದರ ಸುಖವನ್ನು, ಒಳಗಿನ ವಿವರಗಳನ್ನು ನೋಡದೆ ಮಗು ಪುಸ್ತಕವನ್ನು ಹೇಗೆ ಆರಿಸಿಕೊಳ್ಳುತ್ತದೆ. ಅದರ ಬಗೆಗೆ ಪ್ರೀತಿ ಹೇಗೆ ಹುಟ್ಟುತ್ತದೆ? ಕೆಲ ಇಂಗ್ಲಿಷ್ ಪುಸ್ತಕ ಮಾರಾಟ ಮಳಿಗೆಗಳಲ್ಲಿ ವಾರಕ್ಕೊಂದು ಬಾರಿಯಾದರೂ ಮಕ್ಕಳನ್ನೆಲ್ಲ ಸೇರಿಸಿ ತಮಗಿಷ್ಟವಾದ ಪುಸ್ತಕವನ್ನು ಆರಿಸಿಕೊಂಡು ಓದಿಯೋ, ಹಿರಿಯ ಲೇಖಕರಿಂದ ಓದಿಸಿಯೋ, ಕಥೆ ಹೇಳಿಸಿಯೋ ಆಸಕ್ತಿಯನ್ನು ಬೆಳೆಸುತ್ತಾರೆ. ಅಂಥಾ ಪ್ರಯತ್ನವನ್ನು ಕನ್ನಡದಲ್ಲಿ ಮನೋಹರ ಗ್ರಂಥಮಾಲೆ ಮಾಡುತ್ತಿದೆ. ಒಂದು ಶಾಲೆಗೆ ಒಂದೇ ಪುಸ್ತಕದ ಸುಮಾರು 30 ಪ್ರತಿಗಳನ್ನು ಕೊಡುವುದು. ಗ್ರಂಥಾಲಯ ತರಗತಿಯಲ್ಲಿ  ಮಕ್ಕಳು ಆ ಪುಸ್ತಕಗಳನ್ನು ಓದುವುದು. ಆ ಪುಸ್ತಕ ಓದಿದ ನಂತರ ಅವರ ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳುವುದು, ಬರೆಸುವುದು ಮುಂದಿನ ಘಟ್ಟ. (ಇದೇ ರೀತಿಯ ಪ್ರಯೋಗವನ್ನು ಬೆಂಗಳೂರಿನ ಸ್ಮಾರ್ಟ್ ಶಾಲೆಯಲ್ಲಿ ಈ ವರ್ಷದಿಂದ ಅಭಿನವದ ಸಹಯೋಗದಲ್ಲಿ ಪ್ರಯೋಗಕ್ಕೆ ತರಲಾಗುತ್ತಿದೆ). ವಿದೇಶಗಳಲ್ಲಿನ ಶಾಲೆಗಳಲ್ಲಿ ಮಕ್ಕಳು ತಮಗೆ ಬೇಕಾದ ಪುಸ್ತಕಗಳನ್ನು ಮನೆಗೆ ಯಾವುದೇ ಒತ್ತಡವಿಲ್ಲದೆ ಮನೆಗೆ ಒಯ್ಯಬಹುದಂತೆ. ವಾರಾಂತ್ಯಗಳಲ್ಲಿ ಅವರು ಓದಿದ ಪುಸ್ತಕಗಳ ಬಗೆಗೆ ಬರೆದ ಬರವಣಿಗೆಗಳನ್ನು ಆರಿಸಿ ಉತ್ತಮವಾದುವಕ್ಕೆ ಪುಸ್ತಕ ರೂಪದ ಬಹುಮಾನಗಳನ್ನೂ ನೀಡುತ್ತಾರಂತೆ.

ನಮ್ಮಲ್ಲಿ ಮಕ್ಕಳ ಕಥೆಗಳೆಂದರೆ ಪೌರಾಣಿಕ ಕಥೆಗಳು, ಐತಿಹಾಸಿಕ ಕಥೆಗಳು, ಪುರಾಣಪ್ರಸಿದ್ಧರ ಕಥೆಗಳೆಂದು ಮಾತ್ರ ತಿಳಿಯಲಾಗಿದೆ. ಆದರೆ ನಾವು ದಿನನಿತ್ಯ ನೋಡುವ ಘಟನೆಗಳನ್ನೇ, ವಿವರಗಳನ್ನೇ ಕಥೆಗಳನ್ನಾಗಿ ಹೇಳಿದರೆ ಅವುಗಳ ಬಗೆಗೆ ಆಸಕ್ತಿಯೂ ಹೆಚ್ಚುತ್ತದೆ ಮತ್ತು ದಿನನಿತ್ಯದ ವಿವರಗಳಿಗೆ ಅಪ್‌ಡೇಟ್ ಕೂಡ ಆಗುತ್ತಾರೆ. ಇಂತಹ ಅನೇಕ ಪ್ರಯೋಗಗಳನ್ನು ತೇಜಸ್ವಿಯವರು ಮಾಡಿದರು. ತಮ್ಮ ಮಕ್ಕಳು ಕೇಳಿದ ಪ್ರಶ್ನೆಗಳನ್ನೇ ಆಧಾರವಾಗಿಟ್ಟುಕೊಂಡು, ಅವುಗಳಿಗೆ ರುಚಿಕಟ್ಟಾಗಿ ಕಥಾ ಸ್ವರೂಪದಲ್ಲಿ ವೈಜ್ಞಾನಿಕ ಸಂಗತಿಗಳನ್ನು ಕಟ್ಟಿಕೊಟ್ಟ ಅವರದು ಸ್ತುತ್ಯ ಪ್ರಯೋಗ. ಅದಕ್ಕೆ ಬೇಕಾದ ಚಿತ್ರಗಳನ್ನು ಅವರೇ ವಿನ್ಯಾಸ ಮಾಡಿದ್ದು ಪುಸ್ತಕ ಆಕರ್ಷಕವಾಗಲು ಕಾರಣ.

ರಾಷ್ಟ್ರೋತ್ಥಾನ ಸಾಹಿತ್ಯದವರು ಹೊರತಂದಿರುವ `ಭಾರತ ಭಾರತಿ ಪುಸ್ತಕಗಳ ಸರಣಿ’ ಮಕ್ಕಳಿಗಾಗಿ ಮಾಡಿದ ಪ್ರಯೋಗಗಳಲ್ಲಿ ಒಂದು. ಅವುಗಳ ಆಕಾರ, ಮುಖಪುಟ, ಅಕ್ಷರ ವಿನ್ಯಾಸಗಳು ಮಕ್ಕಳಿಗೆ ಓದುವಿಕೆಯ ರುಚಿಯನ್ನು ತೋರಿಸುವಂಥವು. ಹಿಂದೆ ಸೋವಿಯತ್ ಲ್ಯಾಂಡ್‌ನ ಅನುವಾದಿತ ಪುಸ್ತಕಗಳು ಕೂಡ ಮಕ್ಕಳ ಪುಸ್ತಕ ಹೇಗಿರಬೇಕೆಂಬುದಕ್ಕೆ ಸಾಕ್ಷಿ. ರೊಟ್ಟಿಯ ಬಗೆಗೆ ಕಥೆ ಹೇಳುವ ಪುಸ್ತಕ ರೊಟ್ಟಿಯ ಆಕಾರದಲ್ಲಿಯೇ ಮುದ್ರಣಗೊಂಡಿದ್ದು, ಅದರ ಸ್ಪರ್ಶ ಕೂಡ ಮಕ್ಕಳಿಗೆ ಆಸಕ್ತಿ ಹುಟ್ಟಿಸಲು ಕಾರಣವಾಗುತ್ತಿತ್ತು. ಅವುಗಳಲ್ಲಿದ್ದ ದೊಡ್ಡ ದೊಡ್ಡ ಬಣ್ಣಬಣ್ಣದ ಚಿತ್ರಗಳು ಆಕರ್ಷಿಸುತ್ತಿದ್ದವು. ಈಗ ನವಕರ್ನಾಟಕ ಪ್ರಕಾಶನ ಹೊರತರುತ್ತಿರುವ ಮಕ್ಕಳ ಪುಸ್ತಕಗಳು ಮಕ್ಕಳ ಬೌದ್ಧಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗಿವೆ. ಭಾಷಾ ಬಳಕೆ, ಹವ್ಯಾಸವನ್ನು ರೂಢಿಸಿಕೊಳ್ಳುವ ವಿಧಾನ, ಪರಿಣಾಮಕಾರಿ ಓದು ಹೇಗೆ? ನೀರು, ಶಾಖ ಮುಂತಾದವುಗಳ ಬಗೆಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುವ ಪುಸ್ತಕಗಳ ಜೊತೆಗೆ ಅನೇಕ ಮಕ್ಕಳ ಕಥೆ, ಕಾದಂಬರಿಗಳನ್ನು ಪ್ರಕಟಿಸುತ್ತಿದಾರೆ. ಇನ್ನು ಮಕ್ಕಳಿಗಾಗಿ ಪ್ರಕಟಿಸುತ್ತಿರುವ ಇನ್ನೊಂದು ಸಂಸ್ಥೆ ಸಪ್ನಾ ಬುಕ್ ಹೌಸ್. ದಿವ್ಯದರ್ಶನ ಮಾಲೆ, ಮಹಿಳೆಯರು, ಮುಂತಾದ ಮಾಲಿಕೆಯ ಪುಸ್ತಕಗಳು ಹಿಂದೆ ಐಬಿಎಚ್ ಪ್ರಕಾಶನ ಸಂಸ್ಥೆಯವರು ಹೊರತಂದ ಕರ್ನಾಟಕ ನಾಡು ನುಡಿ ಪರಂಪರೆಯ ಪುಸ್ತಕಗಳನ್ನು ನೆನಪಿಸುತ್ತವೆ.

ನಮಗಿರುವ ಸೌಲಭ್ಯ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಕನ್ನಡದಲ್ಲಿ ಅತ್ಯುತ್ತಮವಾದ ಪುಸ್ತಕಗಳನ್ನು  ಹೊರತರಬಹುದು. ಕರ್ನಾಟಕದಲ್ಲಿ ಸುಮಾರು 70 ಸಾವಿರ ಶಾಲೆಗಳಿವೆಯೆಂಬ ಅಂದಾಜು. ಈ ಶಾಲೆಗಳಿಗೆ ಒಂದೊಂದು ಪುಸ್ತಕವೆಂದರೆ 70 ಸಾವಿರ ಪ್ರತಿಗಳನ್ನು ಪ್ರಕಟಿಸಬಹುದು. ಈ ಶಾಲೆಯಲ್ಲಿರುವ ಮಕ್ಕಳಿಗೊಂದರಂತೆ ಪ್ರಕಟಿಸಿದರೆ ಅದೆಷ್ಟು ಲಕ್ಷ ಪ್ರತಿಗಳು ಮಾರಾಟವಾಗಬೇಕು? ಹೆಚ್ಚು ಪ್ರತಿಗಳನ್ನು ಮುದ್ರಿಸಿದರೆ ಬೆಲೆಯೂ ಕಡಿಮೆಯಾಗುತ್ತದೆ. ಆದರೆ ಈ ಕುರಿತು ಯಾರೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.

ನಮ್ಮಲ್ಲಿ ಸಾಹಿತ್ಯ ಸಮ್ಮೇಳನ, ಪುಸ್ತಕ ಮೇಳಗಳಿಗೆ ಮಕ್ಕಳನ್ನು ಕರೆದುಕೊಂಡು ಬರುತ್ತಾರಾದರೂ ಅವರಿಗೆ ಬೇಕಾದ ಪುಸ್ತಕವನ್ನು ಕೊಡಿಸುವುದಿಲ್ಲ. ಪೋಷಕರು ತಾವೇ ನಿರ್ಧರಿಸಿದ ಪುಸ್ತಕವನ್ನು ಕೊಡಿಸುವುದೇ ಹೆಚ್ಚು. ಇನ್ನು ಶಾಲಾ ಕಾಲೇಜು ಗ್ರಂಥಾಲಯಗಳಿಗೆ ಪುಸ್ತಕ ಆರಿಸಲು/ಖರೀದಿಸಲು ಬರುವವರೂ ಕೂಡ ಕೇಳುವುದು `ನಮ್ಮ ಮಕ್ಕಳ/ವಿದ್ಯಾರ್ಥಿಗಳ ಪ್ರಾಜೆಕ್ಟ್, ಮನೆಪಾಠಗಳಿಗೆ ಅನುಕೂಲವಾಗುವಂಥ ಪುಸ್ತಕಗಳನ್ನು ಕೊಡಿ’ ಎಂದು. ಇನ್ನು ಪಠ್ಯಪುಸ್ತಕಗಳ ಮಾತಂತೂ ದುರಂತವೇ ಸರಿ. ಬೇರೆ ಬೇರೆ ವ್ಯವಸ್ಥೆಗಳಿಗಾಗಿ ಹಣ ಖರ್ಚು ಮಾಡುವ ಸರ್ಕಾರ ಪಠ್ಯ ಪುಸ್ತಕವನ್ನು ಆಕರ್ಷಕವಾಗಿ ಪ್ರಕಟಿಸಲು ಆಸಕ್ತಿಯನ್ನು ತೋರುವುದಿಲ್ಲ. ಪುಸ್ತಕವೇ ಆಕರ್ಷಕವಾಗಿಲ್ಲದಿದ್ದರೆ ಓದಿನ ರುಚಿ ಮಕ್ಕಳಿಗೆ ಹತ್ತುವುದಾದರೂ ಹೇಗೆ? ಅದಕ್ಕೆ ಬಳಸುವ ಕಾಗದ, ಕಳಾಹೀನ ಚಿತ್ರಗಳು ಪುಸ್ತಕದ್ವೇಷಿಗಳನ್ನಾಗಿಸಿದರೆ ಆಶ್ಚರ್ಯವಿಲ್ಲ.

ಅನೇಕ ಹಬ್ಬಗಳು ಬರುತ್ತವೆ. ಮಕ್ಕಳ ದಿನಾಚರಣೆ, ಶಾಲಾ ವಾರ್ಷಿಕೋತ್ಸವ, ಸ್ವಾತಂತ್ರ್ಯ ದಿನ ಇತ್ಯಾದಿ. ಆ ಸಂದರ್ಭಗಳಲ್ಲೆಲ್ಲ ದೊಡ್ಡವರಿಗಾಗಿ ಬರೆದ ನಾಟಕಗಳನ್ನೋ, ಬರಹಗಳನ್ನೋ ಉರು ಹೊಡೆಸಿ ಪ್ರದರ್ಶಿಸುವ ಸಂಪ್ರದಾಯವೇ ಹೆಚ್ಚು. ಸ್ವಲ್ಪ ಆಸಕ್ತಿ ಇರುವ ಶಿಕ್ಷಕರಾಗಿದ್ದಲ್ಲಿ ಮಕ್ಕಳ ಪಾಠವನ್ನೇ ವಿಸ್ತರಿಸಿ ಅಥವಾ ಅವರ ಭಾವನಾತ್ಮಕ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾದ ನಾಟಕಗಳನ್ನು ಬರೆಯಬಹುದು. ಹೀಗಾದಾಗ ಅಂಥಾ ಬರಹಗಳು ಮಕ್ಕಳೇ ಅಭಿನಯಿಸಲು ಸಾಧ್ಯವಾಗುತ್ತದೆ. ಇದು ಒಂದು ಪ್ರಯೋಗ. ಇಂಥಾ ಅನೇಕ ಅವಕಾಶಗಳಂತೂ ಇದ್ದೇ ಇವೆ. ಪ್ರತಿವರ್ಷ ಶಾಲೆಯ ಗೋಡೆ ಪತ್ರಿಕೆಗಳಲ್ಲಿ, ಶಾಲಾ ಮ್ಯಾಗಝೀನ್‌ಗಳಲ್ಲಿ ಮಕ್ಕಳ ಬರಹಗಳು ಪ್ರಕಟವಾಗುತ್ತವೆಯಾದರೂ ಅವು ಸಂಕಲಿತವಾಗದೇ ಯಾರ ಗಮನಕ್ಕೂ ಬಾರದೆ ಹಾಗೇ ಮರೆಯಾಗಿಬಿಡುತ್ತವೆ. ಇಂಥ ಬರಹಗಳನ್ನು ಗಮನಿಸುವ, ಗುರುತಿಸುವ ಕೆಲಸವನ್ನು ಮಾಡಬೇಕು.

ನಮ್ಮ ಮಕ್ಕಳಿಗೆ ಹವ್ಯಾಸಗಳೆಂದರೆ ಟೀವಿ ನೋಡುವುದು, ಆಟವಾಡುವುದು ಎಂದಾಗಿಬಿಟ್ಟಿದೆ. ಪುಸ್ತಕಗಳನ್ನು ಓದುವುದು ಒಳ್ಳೆಯ ಹವ್ಯಾಸವೆಂಬುದನ್ನು ಮನದಟ್ಟುಮಾಡಿಕೊಡಬೇಕಿದೆ. ಹೀಗಾದಲ್ಲಿ ಮಾತ್ರ ಪುಸ್ತಕಗಳ ಮೂಲಕ ಸಂಸ್ಕೃತಿಯನ್ನು ಅರಿಯುವ ಕೆಲಸ ಮುಂದೆ ಸಾಗುತ್ತದೆ.

ಕೃಪೆ : ಪ್ರಜಾವಾಣಿ ಸಾಪ್ತಾಹಿಕ ಪುರವಣಿ – 14.11.2010

ಪುಸ್ತಕ ಬಿಡುಗಡೆ

ನಗುವು ಸಹಜದ ಧರ್ಮ

ಶೀರ್ಷಿಕೆ:ಜಗವೆಲ್ಲ ನಗುತಿರಲಿ ಲೇಖಕರು:ಶೈಲಾ ಛಬ್ಬಿ ಸಂಪಾದಕರು:ಅವನಿ ರಸಿಕರ ರಂಗ ಪ್ರಕಾಶನ ಪುಟ:126 ಬೆಲೆ:80 ಪ್ರಕಟಣೆ:2010

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನವ ಉದಾರವಾದಿ ವರಸೆ ಭಾಷೆ ಮತ್ತು ಆ ಭಾಷೆಯನ್ನಾಡುವ ಜನರನ್ನು ತಮ್ಮ ನಿರ್ದಿಷ್ಟವಾದ ಅನುಭವ ಜಗತ್ತಿಗೆ ಮತ್ತೆ ಮತ್ತೆ ತಳ್ಳುತ್ತಿರುತ್ತದೆ. ಈ ಮೂಲಕ ಮಾರುಕ್ಟ್ಟೆ ತನ್ನ ವಿಶ್ವಸ್ಥ ಸ್ವರೂಪವನ್ನು ಸಾಧಿಸುತ್ತದೆ ಮತ್ತು ನಮ್ಮನ್ನು ಅದರೊಳಗೆ ಸೇರಿಯೂ ಸೇರದಂಥ `ಪ್ರತ್ಯೇಕತೆ’ಯನ್ನು ಉಳಿಸಿಕೊಳ್ಳುತ್ತಿರುತ್ತದೆ. ಇದು ಲಾಭಕೋರತನವನ್ನು ಪುಸಲಾಯಿಸುವ ನುರಿತ ಚೇಷ್ಟೆ. ಆದರೆ ಇಲ್ಲಿ ಆಡುಮಾತಿನ ವರಸೆಯತ್ತ ಬರಹ ದಾಪುಗಾಲಿಟ್ಟು, ಬರಹದ ಮೂಲಕ ಭಾಷೆಯನ್ನು ಪ್ರಮಾಣೀಕರಿಸಿರುವ ಬಗೆಯನ್ನು ನಾವು ಗಮನಿಸಲೇ ಬೇಕು. ಆದರೆ ಹಾಗೆ ಮಾಡುವಾಗ ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯ ಅವಕಾಶಗಳನ್ನು ಮರೆಯಬಾರದಷ್ಟೆ.
ಶೀರ್ಷಿಕೆ: ಸಾಹಿತ್ಯ ಮತ್ತು ಸಾಹಿತ್ಯದಾಚೆಗೆ ಲೇಖಕರು: ಆರ‍್. ಚಲಪತಿ ಪ್ರಕಾಶಕರು:ಸಖಿ ಪ್ರಕಾಶನ ಪುಟ:110 ಬೆಲೆ:ರೂ.60/-