
ಹೆಸರಾಂತ ಸಾಹಿತಿ ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ `ಕರಾವಳಿಯ ಕೋಮುಹಿಂಸೆಯ ಹಿಂದಿರುವ ನೈಜ ಕೈಗಳ ಅನಾವರಣ'
ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿರುವ ವಿಚಾರಸಂಕಿರಣದಲ್ಲಿ,
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು `ಕೋಮು ಹಿಂಸೆಯ ಹಿಂದಿನ ರಾಜಕಾರಣ' ಎಂಬ ವಿಷಯದ ಮೇಲೆ ತಮ್ಮ ವಿಚಾರ ಮಂಡನೆ ಮಾಡಿದರೆ ನಿವೃತ್ತ ಸಹಾಯಕ ಪೋಲಿಸ್ ಕಮಿಷನರ್ ಬಿ.ಕೆ.ಶಿವರಾಂ ಅವರು
`ಮತೀಯವಾದ ಮತ್ತು ಪ್ರಭುತ್ವ’ ಎಂಬ ವಿಷಯದ ಮೇಲೆ ತಮ್ಮ ವಿಚಾರವನ್ನು ಮಂಡನೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ದಿಟ್ಟ ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ `ನೇತ್ರಾವತಿಯಲ್ಲಿ ನೆತ್ತರು – ಕರಾವಳಿಯ ಕೋಮು ಹಿಂಸೆಯ ನೈಜ ಪ್ರಕರಣಗಳು’ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಕೋಮು ಹಿಂಸಾಚಾರದಲ್ಲಿ ತಂದೆಯನ್ನು ಕಳೆದುಕೊಂಡ ಮಹಮ್ಮದ್ ಶಹೀದ್ ಅವರು ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಮತ್ತು ಚಿಂತಕರಾದ ಕೆ. ಷರೀಫಾ, ಹಿರಿಯ ಹೋರಾಟಗಾರರೂ ಚಿಂತಕರೂ ಆಗಿರುವ ಮಾವಳ್ಳಿ ಶಂಕರ್ ಹಾಗೂ ಲೇಖಕ ನವೀನ್ ಸೂರಿಂಜೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ದಿನಾಂಕ 19.06.2022 ಭಾನುವಾರದಂದು ಬೆಳಿಗ್ಗೆ 10:30ಕ್ಕೆ ಬಾಪೂ ಸಂಭಾಂಗಣ, ಗಾಂಧೀಭವನ, ಕುಮಾರಕೃಪಾ ರಸ್ತೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
ತಾವೆಲ್ಲರೂ ಈ ವಿಚಾರ ಸಂಕಿರಣಕ್ಕೆ ಬಂದು `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕವನ್ನು ಖರೀದಿಸಿ ಓದಿ ಅಭಿಪ್ರಾಯ ತಿಳಿಸಿರಿ.
Filed under: Uncategorized | Leave a comment »