“ನಾನು ಹೇಳುವುದೆಲ್ಲವೂ ನನ್ನ ಪಕ್ಷದ ನಿಲುವುಗಳು” ಎನ್ನುವ ಧ್ಯೇಯವಾಕ್ಯದ ವಿಶಿಷ್ಟ ರಾಜಕಾರಣಿ ನಮ್ಮ ಕಾಮ್ರೇಡ್ ಶ್ರೀರಾಮರೆಡ್ಡಿ

“ನಾನು ಹೇಳುವುದೆಲ್ಲವೂ ನನ್ನ ಪಕ್ಷದ ನಿಲುವುಗಳು, ಜನರ ವಿಚಾರದಲ್ಲಿ ರಾಜಕಾರಣಿಗೆ ವೈಯಕ್ತಿಕ ನಿಲುವು-ಪಕ್ಷದ ನಿಲುವು ಎಂಬ ಇಬ್ಬಂದಿತನ ಇರಕೂಡದು” ಎಂದು ನಂಬಿದ ರಾಜಕಾರಣಿ ಕಾಮ್ರೇಡ್ ಜಿ.ವಿ. ಶ್ರೀರಾಮರೆಡ್ಡಿ ಯವರು 1994 ಮತ್ತು 2004ರಲ್ಲಿ ಹೀಗೆ ಎರಡು ಬಾರಿ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ಬಾಗೇಪಲ್ಲಿಯಿಂದ ಚುನಾಯಿತರಾಗಿ ಶಾಸಕರಾಗಿದ್ದರು.
ವಿಧಾನಸಭೆಯಲ್ಲಿ ಶ್ರೀರಾಮರೆಡ್ಡಿಯವರು ಮಾತಿಗೆ ನಿಂತರೆಂದರೆ ಇಡೀ ಅಸೆಂಬ್ಲಿಯಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತಿತ್ತು. ಕೇವಲ ತನ್ನ ಕ್ಷೇತ್ರವಲ್ಲದೆ ಇಡೀ ರಾಜ್ಯವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ಶ್ರೀರಾಮರೆಡ್ಡಿಯವರ ವಿದ್ವತ್ತು, ಜನಪರ ಕಾಳಜಿ, ಹಣಕಾಸು, ರಾಜಕೀಯ, ಸಿದ್ದಾಂತದ ಬಗೆಗಿನ ಮಾಹಿತಿಗೆ ಇಡೀ ಸದನ ಕಣ್ಣು ಕಿವಿಗೊಟ್ಟು ಕೇಳಿಸಿಕೊಳ್ಳುತ್ತಿತ್ತು. ಶ್ರೀರಾಮರೆಡ್ಡಿಯವರು ಮಾತನಾಡುತ್ತಿದ್ದಾಗ ಯಾವುದಾದರೂ ಶಾಸಕರು ಮಧ್ಯೆ ಮಾತನಾಡಿದರೆ ಸಭಾಧ್ಯಕ್ಷರು ಅಂತಹ ಶಾಸಕರನ್ನು ಬೈದು ಕುಳ್ಳಿರಿಸಿದ್ದೂ ಇದೆ. ಶ್ರೀರಾಮ ರೆಡ್ಡಿಯವರು ವಿಧಾನಸಭೆಯಲ್ಲಿ ಮಾತನಾಡಿರುವ ದಾಖಲೆಗಳನ್ನು ತೆಗೆದು ನೋಡಿದಾಗ ಈ ಎಲ್ಲಾ ಅಂಶಗಳು ತಿಳಿದುಬರುತ್ತದೆ ಎನ್ನುತ್ತಾರೆ ಪುಸ್ತಕದ ಸಂಪಾದಕರು.
ವಿಧಾನಸಭೆಯಲ್ಲಿ ಮಾತನಾಡುವ ಶೈಲಿಯ ಜತೆಜತೆಗೆ ಇವರ ಕಾರ್ಯವೈಖರಿಯೂ ವಿಶಿಷ್ಟವಾದದ್ದು.
ಉಡುಪಿಯ ಮಣಿಪಾಲ ಕಾಲೇಜಿನಲ್ಲಿ ಓದುತ್ತಿದ್ದ ಮೆಡಿಕಲ್ ವಿದ್ಯಾರ್ಥಿಯನ್ನು ಅಪಹರಿಸಿದ್ದ ಕಿಡಿಗೇಡಿಗಳು ಅತ್ಯಾಚಾರ ಮಾಡಿದ್ದರು. ಕರಾವಳಿಯ ಶಾಸಕರಿಗೆ ಗೊತ್ತಾಗುವ ಮೊದಲೇ ಮಾಜಿ ಶಾಸಕ ಶ್ರೀರಾಮ ರೆಡ್ಡಿಯಲ್ಲಿ ಉಡುಪಿಯಲ್ಲಿದ್ದರು. ನೇರವಾಗಿ ಮಣಿಪಾಲ ಆಸ್ಪತ್ರೆಗೆ ತೆರಳಿದವರೇ, ಆಡಳಿತ ಮಂಡಳಿಯಿಂದ ಸ್ಪಷ್ಟನೆ ಕೇಳಿದರು. ಆ ಬಳಿಕ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಶ್ರೀರಾಮ ರೆಡ್ಡಿಯವರು ಅಲ್ಲೇ ಹೊರಗಡೆ ಸಿಪಿಐ(ಎಂ) ಪಕ್ಷದ ನಾಯಕರ ಜೊತೆ ಮಾತನಾಡಿ ಮಂಗಳೂರು ಉಡುಪಿಯಲ್ಲಿ ಪ್ರತಿಭಟನೆ ನಡೆಸುವಂತೆ ಸೂಚಿಸಿದರು. ಆಡಳಿತ ಮತ್ತು ವಿಪಕ್ಷಗಳಿಗೆ ವಿಷಯವೇನೆಂದು ಗೊತ್ತಾಗುವಷ್ಟರಲ್ಲಿ ಆರೋಪಿಗಳ ಬಂಧನವಾಗಿತ್ತು.
ಇಂತಹ ಗುಣಲಕ್ಷಣದ ಮಾಜಿ ಶಾಸಕ, ಸಿಪಿಐ(ಎಂ) ಮಾಜಿ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿಯವರು ಸದನದಲ್ಲಿ ಮಾತನಾಡಿದ ದಾಖಲೆಗಳಿಂದ ಆಯ್ದ ಭಾಷಣಗಳ ಸಂಗ್ರಹ ಈ ಪುಸ್ತಕ.
ಪುಸ್ತಕ ಖರೀದಿಸಲು 9902249150 ಗೆ ಮೆಸೇಜ್ ಮಾಡಿ.
ಶೀರ್ಷಿಕೆ : ಸದನದಲ್ಲಿ ಶ್ರೀರಾಮರೆಡ್ಡಿ; ಸಂಪಾದಕರು:ನವೀನ್ ಸೂರಿಂಜೆ; ಪ್ರಕಟಣೆ:ಅಭಿರುಚಿ ಪ್ರಕಾಶನ; ಪ್ರಕಟಣಾ ವರ್ಷ:2022; ಪುಟಗಳು:184; ಬೆಲೆ:ರೂ.200
Filed under: ಬಿಡುಗಡೆ, ವ್ಯಕ್ತಿ ಚಿತ್ರಣ | Tagged: ಜಿ.ವಿ.ಶ್ರೀರಾಮರೆಡ್ಡಿ, ಬಾಗೇಪಲ್ಲಿ, ಶಾಸಕರು, ಸಿಪಿಐ(ಎಂ) |
ನಿಮ್ಮದೊಂದು ಉತ್ತರ