ಮೈಸೂರು ಹುಲಿ ಟಿಪ್ಪುಸುಲ್ತಾನ್ ನಿಜವಾಗಿಯೂ ಹೀರೋ ಎಂದು ಸಾಬೀತುಪಡಿಸುವ ಲಾವಣಿಗಳ ಪುಸ್ತಕರೂಪದ ಬಿಡುಗಡೆಗೆ ಸ್ವಾಗತ.

ಇತ್ತೀಚೆಗೆ ನಮ್ಮ ಎಳೆವಯಸ್ಸಿನ `Hero’ ಮೈಸೂರು ಹುಲಿ ಟಿಪ್ಪು ಸುಲ್ತಾನನನ್ನು `Zero’ ಮಾಡುವಲ್ಲಿ ಸತತ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನದಲ್ಲಿ ಅವರು ಸ್ವಲ್ಪ ಮಟ್ಟಿಗೆ ಯಶಸ್ಸೂ ಕಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾನು ನಮ್ಮ ಹೀರೋ ಪರವಾಗಿ ಮಾತನಾಡಲು proof ಇರಬೇಕಲ್ಲಾ. ಆ proof ನಮಗೆ ಇಲ್ಲಿ ಸಿಗುತ್ತದೆ.

ನಮ್ಮ ಹೀರೋ ನಿಜವಾಗಿಯೂ ಹೀರೋನೇ ಅಂತ ಸಾಬೀತುಪಡಿಸುವ ಈ ಲಾವಣಿಗಳನ್ನು ಜನಸಾಮಾನ್ಯರ ನಡುವೆ ಪ್ರಚಾರ ಮಾಡುವ ಕರ್ತವ್ಯ ನಮ್ಮದು.

ಈ ಸಂಕಲನವನ್ನು ಪ್ರಕಟಿಸಿ ನಾವು ನಮ್ಮ ಕರ್ತವ್ಯವನ್ನು ಸ್ವಲ್ಪಮಟ್ಟಿಗೆ ನಿರ್ವಹಿಸಿದ್ದೇನೆ. ಇನ್ನು ಈ ವಿಷಯವನ್ನು ಜನರ ಮಧ್ಯೆ ಪ್ರಚಾರ ಪಡಿಸುವ ಕರ್ತವ್ಯದಲ್ಲಿ ನಮ್ಮ ಜತೆಗೆ ಕೈಗೂಡಿಸಿ, ಪುಸ್ತಕವನ್ನು ಕೊಂಡು ಓದಿ ಇತರರಿಂದಲೂ ಓದಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ.

ಮೈಸೂರು ಹುಲಿಯ ಮುಖಕ್ಕೆ ಮಸಿ ಬಳಿಯಲು ಪ್ರಯತ್ನಿಸುವವರು ಆಯೋಜಿಸಿರುವ ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿರೋಧ ಒಡ್ಡಲು ಆಯೋಜಿಸಿರುವ ಜನಸಾಹಿತ್ಯ ಸಮ್ಮೇಳನದಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿದೆ.

-ವಿಶಾಲಮತಿ (ಕ್ರಿಯಾ ಮಾಧ್ಯಮ ಪ್ರೈ.ಲಿ. ಪರವಾಗಿ)

ಶೀರ್ಷಿಕೆ:ಧೀರ ಟಿಪ್ಪುವಿನ ಲಾವಣಿಗಳು ಸಂಪಾದಕರು: ಲಿಂಗದೇವರು ಹಳೆಮನೆ ಪ್ರಕಟಣೆ:ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:80 ಬೆಲೆ:ರೂ80/-

ಮೊದಲ ಪ್ರಕಟಣಾ ವರ್ಷ 2003 ಎರಡನೇ ಪ್ರಕಟಣಾ ವರ್ಷ 2023

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: