ಕರ್ನಾಟಕದ ಛಾಯಾಗ್ರಾಹಕರಾದ ಎಸ್. ಎಂ. ಜಂಬುಕೇಶ್ವರ ಅವರ ಕುರಿತಂತೆ ಹೊರತರಲಾದ ಅಭಿನಂದನ ಗ್ರಂಥವಿದು. ಛಾಯಾಗ್ರಹಣ ಮಾತ್ರವಲ್ಲ ಜಂಬುಕೇಶ್ವರ ಕಲಾವಿದರೂ ಕೂಡಾ. ಅವರು ಜಲವರ್ಣ, ತೈಲವರ್ಣದಲ್ಲಿ ಚಿತ್ರಗಳನ್ನು ಬಿಡಿಸುವುದರ ಮೂಲಕ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ, ಬಹುಮುಖ್ಯವಾಗಿ ಅವರನ್ನು ಗುರುತಿಸುವುದು ಛಾಯಾಗ್ರಾಹಕರೆಂದೇ.
ಈ ಅಭಿನಂದನ ಗ್ರಂಥದ ಮುಖ್ಯ ಅಂಶ ಜಂಬುಕೇಶ್ವರ ಅವರು ತಮ್ಮ ಬದುಕಿನ ಕುರಿತಂತೆ ವಿವರಗಳನ್ನು ಕೊಡುತ್ತದೆ. ಇದರ ಮುಂದುವರಿಕೆಯಾಗಿ ಅವರ ಪತ್ನಿ, ಮಗ, ಗೆಳೆಯರು, ಆತ್ಮೀಯರು ಬರೆದಿದ್ದಾರೆ. ಇದಲ್ಲದೆ ಜಂಬುಕೇಶ್ವರ ಅವರು ತೆಗೆದ ಅಪರೂಪದ ಛಾಯಾಚಿತ್ರಗಳು ಇವೆ. ಇನ್ನುಳಿದ ಭಾಗಗಳು ಚಿತ್ರಕಲೆ, ಛಾಯಾಚಿತ್ರ, ಪತ್ರಿಕೋದ್ಯಮ ಕುರಿತಂತೆ ಲೇಖನಗಳನ್ನು ಒಳಗೊಂಡಿದೆ. ಇವೆಲ್ಲ ಬರಹಗಳು ಜಂಬುಕೇಶ್ವರ ಅವರ ಆಸಕ್ತಿಯ ಮತ್ತು ಅವರು ಸಾಕಷ್ಟು ಕೆಲಸ ಮಾಡಿದ ಕ್ಷೇತ್ರಗಳಾಗಿವೆ. ಇದರಲ್ಲಿನ ಮುಖ್ಯ ಲೇಖನ `ಛಾಯಾಚಿತ್ರ ಪತ್ರಿಕೋದ್ಯಮ’ (ಟಿ. ಎಸ್. ಸತ್ಯನ್) ಎಂಬುದು. ಇಂಥ ವಿಶೇಷ ಲೇಖನಗಳಿಂದ ಈ ಪುಸ್ತಕ ವ್ಯಕ್ತಿಯೊಬ್ಬನ ಸಾಧನೆಯ ಭಜನೆಯಾಗದೆ ಅರ್ಥಪೂರ್ಣವಾದ ದಾಖಲೆಯಾಗಿದೆ ಎನ್ನಬಹುದು.
ಶೀರ್ಷಿಕೆ: ಬಹುಮುಖಿ (ಎಸ್.ಎಂ.ಜಂಬುಕೇಶ್ವರ ಅಭಿನಂದನಾ ಗ್ರಂಥ) ಪ್ರಧಾನ ಸಂಪಾದಕ: ಜಿ.ಎಸ್.ಭಟ್ಟ ಸಂ:ಎಸ್.ಶಿವಲಿಂಗಪ್ಪ ಪ್ರಕಾಶಕರು: ಅಭಿನಂದನಾ ಸಮಿತಿ, ಸರಸ್ವತಿಪುರಂ, ಮೈಸೂರು ಪುಟಗಳು:323 ಬೆಲೆ:ರೂ.200/-
ಕೃಪೆ : ಪ್ರಜಾವಾಣಿ
Filed under: ಅಭಿನಂದನ ಗ್ರಂಥ | Tagged: ಅಭಿನಂದನಾ ಸಮಿತಿ, ಎಸ್.ಎಂ.ಜಂಬುಕೇಶ್ವರ, ಎಸ್.ಶಿವಲಿಂಗಪ್ಪ, ಜಿ.ಎಸ್.ಭಟ್ಟ, ಪ್ರಜಾವಾಣಿ, ಬಹುಮುಖಿ | Leave a comment »