ಬೆಂಕಿಯಾರಿಸುವ ಹನಿಗಳು – ಸಂವಿಧಾನದ ಕಾಲಾಳಾಗಿ ತೀಸ್ತಾ ನಡೆಸಿದ ಹೋರಾಟಗಳು

ಈ ಪುಸ್ತಕವನ್ನೋದಿ ಬರಹಗಾರರಾದ ವಿನಯಾ ಒಕ್ಕುಂದ ಅವರು ನೀಡಿದ ಅಭಿಪ್ರಾಯ ಇದು.

ನಮಗೆ ಗೊತ್ತು ಎಂದುಕೊಂಡಿರುವ ತೀಸ್ತಾ ಸೆತಲ್ವಾಡ್ ಮತ್ತು ಗುಜರಾತ್ ಮಾದರಿ – ಈ ಎರಡರ ನೋಟಗಳ ಅಂದಾಜನ್ನು ಮೀರಿಸುತ್ತದೆ ಈ ಬರಹ. ಆಳದಾಳದ ಜಟಿಲ ಸಂಘರ್ಷದ ಎದುರು ನಿಲ್ಲಿಸುತ್ತದೆ. ಒಂದು ತಟಕು ಸಂವೇದನೆಯಿರುವ ಜೀವಗಳಿಗೆ “ಹೇಳು, ನೀನೇನು ಮಾಡಬಲ್ಲೆ?” ಎಂದು ಕರುಳು ಜಗ್ಗಿಸಿ ಕೇಳುತ್ತದೆ. ಈ ಓದಿನಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದ್ದುದು ಕಾಡಿಗೆ ಬೆಂಕಿ ಬಿದ್ದಾಗ ಹೊಳೆಯಲ್ಲಿ ಮುಳುಗಿ ಗರಿಯನ್ನು ತೋಯಿಸಿಕೊಂಡು ಬೆಂಕಿಯ ಮೇಲೆ ಕೊಡವಿ ಆರಿಸಲು ಶ್ರಮಿಸಿದ ಪುಟ್ಟ ಗುಬ್ಬಿಯ ಕಥೆ. ಕಡೆಗೂ ಗುಬ್ಬಚ್ಚಿಯ ಛಲ, ನಂಬಿಕೆಗಳಿಗೆ ಗೆಲುವಾಯಿತು. ತೀಸ್ತಾ ಸೆತಲ್ವಾಡ್ ಬರಹದಲ್ಲಿ ತೊಟ್ಟಿಕ್ಕುತ್ತಿರುವುದು, ಕೋಮುವಾದಿ ಬೆಂಕಿಯನ್ನು ಆರಿಸಲು, ಧ್ಯಾನಸ್ಥವಾಗಿ ಹೋರಾಡುತ್ತಿರುವ ಗುಬ್ಬಿಯ ರೆಕ್ಕೆಯಿಂದುದುರಿದ ಹನಿಗಳೇ.

ಪ್ರಗತಿಪರ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ಹಾಗೂ ನ್ಯಾಯಕ್ಕಾಗಿ ಯಾವುದೇ ರಾಜಿ ಇಲ್ಲದೆ ದಿಟ್ಟತನದಿಂದ ಹೋರಾಟ ನಡೆಸುತ್ತಿರುವ ತೀಸ್ತಾ ಅವರು, ತನ್ನ ಜೀವನದಲ್ಲಿ ಸಂವಿಧಾನದ ಕಾಲಾಳಾಗಿ ತಾನು ಗುರುತಿಸಿದ, ದೇಶದಲ್ಲಿ ನಡೆದ ನಡೆಯುತ್ತಿರುವ ಕೆಲವು ಸಂವಿಧಾನವಿರೋಧಿ ಅನ್ಯಾಯಗಳ ಹಿಂದಿನ ಸತ್ಯಗಳನ್ನು ಮತ್ತು ಹೀಗೆ ಅನ್ಯಾಯಕ್ಕೊಳಗಾದವರಿಗೆ ಸಂವಿಧಾನಾತ್ಮಕವಾಗಿ ಸಲ್ಲಬೇಕಾಗಿರುವ ನ್ಯಾಯ ಹಾಗೂ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ತಾನು ನಡೆಸಿದ ಕಾನೂನಾತ್ಮಕ ಹೋರಾಟಗಳ ದಾಖಲಾತಿ ಈ ಪುಸ್ತಕ.

ಒಂದೊಂದು ವಿವರವನ್ನೂ ದಾಖಲಿಸಿರುವ ಈ ರಾಜಕೀಯ ಹೋರಾಟದ ನೆನಪುಗಳ ಪುಸ್ತಕ, ಈಗಿನ ವಿದ್ಯಮಾನಗಳ ವಿಸ್ತೃತ ಹೇಳಿಕೆಯಂತಿದೆ. ವಿಭಿನ್ನ ಹೇಳಿಕೆಗಳು ತೇಲಾಡುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಬಿಚ್ಚಿಡುವ ಇಂತಹ ದಾಖಲೆ ಅಗತ್ಯವಿದೆ. ಇಡೀ ವಿದ್ಯಮಾನವನ್ನು ಸ್ಪಷ್ಟತೆ ಹಾಗೂ ಸಮಗ್ರ ದೃಷ್ಟಿಕೋನದಿಂದ ತೀಸ್ತಾ ಕಟ್ಟಿಕೊಡುತ್ತಾರೆ. ತನ್ನ ಬಗ್ಗೆ ಹರಿಯಬಿಟ್ಟಿರುವ ಸುಳ್ಳು ಆರೋಪಗಳ ಹೊರತಾಗಿಯೂ ಅವರು ತಮ್ಮ ಹೋರಾಟವನ್ನು ಮುಂದುವರೆಸಿ ಸತ್ಯಾಂಶಗಳನ್ನು ಜನರ ಮುಂದಿಡುತ್ತಾರೆ ಎಂಬ ಭರವಸೆ ನನಗಿದೆ. ಇಂತಹವರ ಸಂತತಿ ಹೆಚ್ಚಾಗಲಿ ಎಂದು ಮನಸ್ಸು ಬಯಸುತ್ತದೆ ಎಂದು ಖ್ಯಾತ ಇತಿಹಾಸಕಾರರಾದ ರೋಮಿಲಾ ಥಾಪರ್ ಹೇಳುತ್ತಾರೆ.

ಅನುವಾದಿತ ಬರಹ ಎಂಬುದು ತಿಳಿಯದ ರೀತಿಯಲ್ಲಿ ತೀಸ್ತಾ ಅವರ ಬರಹವನ್ನು ಸತ್ಯಾ ಎಸ್ ಅವರು ಕನ್ನಡ ಭಾಷೆಯಲ್ಲಿ ಇಳಿಸಿದ್ದಾರೆ.

ಶೀರ್ಷಿಕೆ : ಸಂವಿಧಾನದ ಕಾಲಾಳು ತೀಸ್ತಾ ಸೆತಲ್ವಾಡ್ ನೆನಪುಗಳು ಮೂಲ: ತೀಸ್ತಾ ಸೆತಲ್ವಾಡ್  ಅನುವಾದ : ಸತ್ಯಾ ಎಸ್. ಪ್ರಕಾಶನ : ಕ್ರಿಯಾ ಪುಸ್ತಕ  ಬೆಲೆ : ರೂ.210 ಪುಟಗಳು :272 ಪ್ರಕಟಣಾ ವರ್ಷ: 2019 ಪುಸ್ತಕಗಳಿಗಾಗಿ ಸಂಪರ್ಕಿಸಲು : 9902249150

 

ಪುಸ್ತಕ ಪುರಸ್ಕಾರ ಪ್ರಧಾನ ಸಮಾರಂಭಕ್ಕೆ ಆಹ್ವಾನ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2015ನೇ ಸಾಲಿನ ಗೌರವ ಪ್ರಶಸ್ತಿ ಪಡೆದಿರುವ ಪ್ರತಿಷ್ಟಿತ ಅನುವಾದಕರಿಗೆ ಹಾಗೂ 2014ನೇ ಸಾಲಿನ ಶ್ರೇಷ್ಟ ಅನುವಾದಕ್ಕಾಗಿ ಪುರಸ್ಕೃತರಾದವರಿಗೆ ಅಭಿನಂದನೆಗಳು.

20160314_161800

मंडॆला, मुक्ति की मशाल् तुम मंडॆला, परचम हो संघर्ष का, शॊषितों के नाखुदा मंडॆला, जिंदगी के तुम् रह्नुमा

युग-युग के सॊए दास अब उठॆ
शॊ़षितॊं के मुक्ति गीत गूंजे
दुनिया के कॊने-कॊने से आवाज़
आयी दॆखो-फासिस्ट बंधन आज टूटे

एकता की लय पे, सागर हिल्लॊर ले
समता की लहर अंगडाई ले
मंडॆला, मुक्ति की मशाल् तुम
मंडॆला, परचम हो संघर्ष का
शॊषितों के नाखुदा मंडॆला
जिंदगी के तुम् रह्नुमा

51FJNhGtyYL._SY344_PJlook-inside-v2,TopRight,1,0_SH20_BO1,204,203,200_

The book that inspired the major new motion picture Mandela: Long Walk to Freedom.

Nelson Mandela is one of the great moral and political leaders of our time: an international hero whose lifelong dedication to the fight against racial oppression in South Africa won him the Nobel Peace Prize and the presidency of his country. Since his triumphant release in 1990 from more than a quarter-century of imprisonment, Mandela has been at the center of the most compelling and inspiring political drama in the world. As president of the African National Congress and head of South Africa’s antiapartheid movement, he was instrumental in moving the nation toward multiracial government and majority rule. He is revered everywhere as a vital force in the fight for human rights and racial equality.

LONG WALK TO FREEDOM is his moving and exhilarating autobiography, destined to take its place among the finest memoirs of history’s greatest figures. Here for the first time, Nelson Rolihlahla Mandela tells the extraordinary story of his life–an epic of struggle, setback, renewed hope, and ultimate triumph.

The famously taciturn South African president reveals much of himself in Long Walk to Freedom. A good deal of this autobiography was written secretly while Mandela was imprisoned for 27 years on Robben Island by South Africa’s apartheid regime. Among the book’s interesting revelations is Mandela’s ambivalence toward his lifetime of devotion to public works. It cost him two marriages and kept him distant from a family life he might otherwise have cherished. Long Walk to Freedom also discloses a strong and generous spirit that refused to be broken under the most trying circumstances–a spirit in which just about everybody can find something to admire.

– ಕೃಪೆ: ಅಮೆಜ಼ೋನ್ ಡಾಟ್ ಕಾಮ್
ಶೀರ್ಷಿಕೆ : Long Walk to Freedom: The Autobiography of Nelson Mandela ಲೇಖಕರು: Nelson Mandela ಪ್ರಕಾಶಕರು :Back Bay Books ಪುಟಗಳು: ಬೆಲೆ: ೧.೪ ಪೌಂಡ್

ಹುತಾತ್ಮ ದಿನದ ಸಂದರ್ಭದಲ್ಲಿ ಅಮರ ಹುತಾತ್ಮ ಭಗತ್ ಸಿಂಗರ ಜೈಲಿನ ದಿನಚರಿ

1931 ರ ಮಾರ್ಚ್ 23. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಭಾರತೀಯರ ಪಾಲಿಗೆ ಅತ್ಯಂತ ದುಃಖದಾಯಕ ದಿನ. ಅಂದು ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳನ್ನು ಬ್ರಿಟಿಷ್ ಸರ್ಕಾರ  ನೇಣಿಗೇರಿಸಿದ ದಿನ. ಇಂದಿಗೂ ಭಗತ್ ಸಿಂಗ್ ಹುತಾತ್ಮನಾಗಿರದಿದ್ದರೆ ಈಗ ಇಷ್ಟು ವರ್ಷದ ಹಿರಿಯರಾಗಿರುತ್ತಿದ್ದರು ಅಯ್ಯೋ, ಆ ದಿನ ಕ್ಯಾಲೆಂಡರಿನಲ್ಲೇ ಇರಬಾರದಿತ್ತು ಎಂದು ದೇಶಭಕ್ತ ಭಾರತೀಯರು (ಹಿರಿಯ ಕಿರಿಯರೆನ್ನದೆ) ಹಂಬಲಿಸುವ ದಿನ. ಅವರ ಬಗ್ಗೆ ನೆನಸುವ ದಿನ. ಇವತ್ತು ಲೆಫ್ಟ್ ವರ್ಡ ಹೊರತಂದಿರುವ The Jail Notebook and Other Writings ಯನ್ನು ಅರ್ಧ ಬೆಲೆಗೆ ಮಾರುತ್ತಿದ್ದಾರೆ.

ಭಗತ್ ಸಿಂಗ್ ತನ್ನ ಕೊನೆಯ ಎರಡು ವರ್ಷಗಳನ್ನು ಜೈಲಿನಲ್ಲಿ ಗಲ್ಲು ಶಿಕ್ಷೆಯನ್ನು ಕಾಯುತ್ತಾ ಕಳೆದಿದ್ದರು. ಈ ಅವಧಿಯಲ್ಲಿ ಹುತಾತ್ಮ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾನೂನು ಸಮರಗಳಲ್ಲಿ ಹೆಚ್ಚು ಪ್ರಚಾರವನ್ನು ಪಡೆದ ಒಂದು ಕಾನೂನು ಸಮರವನ್ನು ನಡೆಸುತ್ತಿದ್ದರು. ಇಷ್ಟೇ ಅಲ್ಲದೆ ನ್ಯಾಯಾಲಯವನ್ನೇ ಮಾದ್ಯಮ ಮಾಡಿಕೊಂಡು ತಮ್ಮ ಕ್ರಾಂತಿಕಾರಿ ಸಂದೇಶಗಳನ್ನು ದೇಶಾದ್ಯಂತ ಪ್ರಚಾರ ಮಾಡಿದರು.

ಅವರ ಹೋರಾಟದ ನಿಜಾಂಶ ತಿಳಿಯದ ಈಗಿನ ಜನತೆ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ಅನ್ಯಾಯವಾಗಿ ನೇಣಿಗೆ ಕೊರಳು ಕೊಟ್ಟರು, ಅವರು ಮನಸ್ಸು ಮಾಡಿದ್ದರೆ ಬದುಕಿರಬಹುದಾಗಿತ್ತು, ಅವರ ಹುತಾತ್ಮರಾಗುವ ನಿರ್ಧಾರ ತಪ್ಪು, ಬದುಕಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಗಿತ್ತು ಎಂದೆಲ್ಲಾ ಹೇಳುತ್ತಾರೆ. ಆದರೆ ಭಗತ್ ಸಿಂಗ್ ಅವರು ಖಂಡಿತವಾಗಿಯು ಸುಮ್ಮನೆ ಹುತಾತ್ಮರಾಗಲಿಲ್ಲ. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಅಲ್ಪಾವಧಿಯ ಜೀವಮಾನದಲ್ಲಿ ಎಷ್ಟು ಸಾಧ್ಯವೋ ಅದಕ್ಕಿಂತ ಹೆಚ್ಚಿನ ಕೊಡುಗೆ ಭಗತ್ ಸಿಂಗ್ ಅವರದಿದೆ. ಅವರು ತಮ್ಮ ನೇಣಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನು ಸಮರ ಮಾಡಿ ಸಮಯ ವ್ಯರ್ಥ ಮಾಡದೇ ಆ ಅಮೂಲ್ಯ ಸಮಯವನ್ನು ದೇಶದ ಜನತೆಗೆ ಬ್ರಿಟೀಷ್ ಸರ್ಕಾರದ ಎಡಬಿಡಂಗಿತನವನ್ನು ಅರಿತುಕೊಳ್ಳುವಂತೆ ಮಾಡಿ ದೇಶದ ಜನತೆ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಜೈಲಿನಲ್ಲಿದ್ದೂ ಪ್ರೇರೇಪಣೆ ನೀಡಿದರು.
ಅಷ್ಟೇ ಅಲ್ಲ ಜೈಲಿನಲ್ಲಿ ಅವರು ನಾಲ್ಕು ಪುಸ್ತಕಗಳನ್ನೂ ಬರೆದಿದ್ದರು. ಆ ಪುಸ್ತಕಗಳು ಜೈಲಿನಿಂದ ಕಷ್ಟಪಟ್ಟು ಹೊರತರಲ್ಪಟ್ಟಿದ್ದರೂ ನಾಶ ಮಾಡಲ್ಪಟ್ಟಿವೆ. ಜೈಲಿನಲ್ಲೇ ಉಳಿದಿದ್ದ ಯುವ ಕ್ರಾಂತಿಕಾರಿಯ ಟಿಪ್ಪಣೆ ಪುಸ್ತಕ ಮಾತ್ರ ನಮಗೀಗ ಲಭ್ಯವಿದೆ.

ಯುವ ಕ್ರಾಂತಿಕಾರಿಯನ್ನು ಅಧ್ಯಯನ ಮಾಡಲು ಇದೊಂದು ಅದ್ಬುತ ಗ್ರಂಥ.

ಶೀರ್ಷಿಕೆ : The Jail Notebook and Other Writings ಲೇಖಕರು: ಭಗತ್ ಸಿಂಗ್ ಸಂಪಾದಕರು: ಚಮನ್ ಲಾಲ್ ಪ್ರಕಾಶಕರು: ಲೆಫ್ಟ್ ವರ್ಡ ಬೆಲೆ:ರೂ.350 (ಇಂದಿನ ಬೆಲೆ ರೂ.175/- ) ಪುಟಗಳು : 192

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ The Jail Notebook and Other Writings

ಪುಸ್ತಕ ಪ್ರೀತಿಯಲ್ಲಿರುವ ಭಗತ್ ಸಿಂಗ್ ಬಗೆಗಿನ ಇತರ ಪುಸ್ತಕಗಳು

ಹುತಾತ್ಮ ಭಗತ್ ಸಿಂಗರ ಅಲ್ಪಕಾಲದ ಬದುಕಿನ ಅಸಾಮಾನ್ಯ ಹರಹಿನ ಸಂಗ್ರಹರೂಪ

ಮರೆಯಲಾರದ ಮರೆಯಬಾರದ ಚೈತನ್ಯಕ್ಕೆ ನಮನ!

ದಿ ಮಾರ್ಟಿರ್ ಭಗತ್ ಸಿಂಗ್ಸ್ ಎಕ್ಸ್ಪರಿಮೆಂಟ್ಸ್ ಇನ್ ರೆವೆಲ್ಯೂಷನ್

 

ನೈತಿಕ ಅಳುಕಿನೊಂದಿಗೇ. . .


ಶೀರ್ಷಿಕೆ: ಸದ್ಯ ಮತ್ತು ಶಾಶ್ವತ  ಲೇಖಕರು:ಯು. ಆರ್. ಅನಂತಮೂರ್ತಿ  ಪ್ರಕಾಶಕರು: ಅಂಕಿತ ಪ್ರಕಾಶನ  ಪುಟಗಳು:237  ಬೆಲೆ:ರೂ.150/-


ಕೃಪೆ: ದೇಶ ಕಾಲ ವಿಶೇಷ

ಆತ್ಮಕಥೆಯೋ ಕಾದಂಬರಿಯೋ!

ಗಾಂಧಿ ಕ್ಲಾಸ್’ ಕೃತಿಯನ್ನು ಓದಿದ ನಂತರ ನನಗೆ ಬಂದ ಸಂದೇಹ ಇದು: ಕುಂವೀ ಮರೆತು ಆತ್ಮಕತೆಯ ಬದಲಿಗೆ ತಾವು ಬರೆದಿರುವ ಹೊಸ ಕಾದಂಬರಿಯೊಂದನ್ನು ನನಗೆ ಕಳುಹಿಸಿದ್ದಾರೆಯೇ?

ಇಷ್ಟು ರೋಚಕ ನಿರೂಪಣೆ, ಇಷ್ಟು ರಂಜಕ ಹಾಗೂ ಅಸಾಧಾರಣ ಘಟನೆಗಳು ಕಾದಂಬರಿಯಲ್ಲಲ್ಲದೆ ಆತ್ಮಕಥೆಯಲ್ಲಿರಲು ಸಾಧ್ಯವೆ? ಉದಾಹರಣೆಗೆ: ಕೇವಲ ತನ್ನ ಸುಯೋಧನ-ಛಲದಿಂದಾಗಿ ಸಾಕಷ್ಟಿದ್ದ ಸ್ಥಿರ-ಚರಾಸ್ತಿಗಳನ್ನು ಕಳೆದುಕೊಂಡು ಅಹನಹ್ಯನಿಗೆ ಒದ್ದಾಡುವ ಸ್ಥಿತಿಗೆ ಬಂದ `ಹೀರೋ’ ತಂದೆಯ ಮಗನಾಗಿ, ಅನೇಕರ ಸಹಾಯದಿಂದ, ಅತಿ ಕಷ್ಟದಿಂದ ಎಸ್.ಎಸ್.ಎಲ್.ಸಿ. ಪಾಸಾಗಿ ಕೆಲಸವಿಲ್ಲದೆ ಸೈನ್ ಬೋರ್ಡ ಪೇಂಟರ್ ಆಗುವ, ರೈಲ್ವೇ ದಿನಗೂಲಿಯಾಗುವ, ರೈಲ್ವೇ ಪ್ಲಾಟ್ ಫಾರ್ಮನಲ್ಲಿ ಮೂರು ದಿನ ಹಸಿವೆಯಿಂದ ಸಾಯುವ ಸ್ಥಿತಿ ತಲುಪುವ, ಕೊನೆಗೆ ಶತಮಾನದಷ್ಟು ಹಿಂದುಳಿದಿರುವ ಊರೊಂದರಲ್ಲಿ ಶಾಲಾ ಮಾಸ್ತರಾಗುವ, ತಿಂಗಳಿಗೊಂದು ಕೊಲೆಯಾಗುವ ಆ ಕುಗ್ರಾಮದಲ್ಲಿ ಧೈರ್ಯದಿಂದ ದಲಿತರನ್ನು ಶಾಲೆಗೆ ಸೇರಿಸಿಕೊಂಡೂ ಬದುಕಿ ಉಳಿಯುವ, `ಕಪ್ಪು’ ಎಂಬ ತನ್ನ ಮೊದಲ ಕಾದಂಬರಿಯ ಕಾರಣದಿಂದ ಎಂದೋ ಕೊಲೆಯಾಗಬಹುದಾಗಿದ್ದ, ಸಿನೆಮಾ ಪ್ರಪಂಚದಲ್ಲಿ ಎಲ್ಲರಿಂದ ವಂಚಿಸಲ್ಪಡುವ, ಅಕಾಡೆಮಿ ಪ್ರಶಸ್ತಿ ಪಡೆದ `ಅರಮನೆ’ ಕಾದಂಬರಿಯ ಬ್ಲರ್ಬ ತೋರಿಸಿ ಅಮೆರಿಕಾಕ್ಕೆ ವೀಸಾ ಪಡೆಯುವ – ಇಂತ ವ್ಯಕ್ತಿ ಕಥಾ ನಾಯಕನಾಗಿರುವುದು.

ಆ ವ್ಯಕ್ತಿಯೇ ಕವಿಯಾಗಿ, ಸಾಹಿತ್ಯಕ ಕ್ಷೇತ್ರವನ್ನು ಪ್ರವೇಶಿಸಿ, ಅಶ್ವಥ್ ಅವರ ಕೂಗಾಟಕ್ಕೆ ಹೆದರಿ ಒಂದು ರಾತ್ರಿಯಲ್ಲಿ 15 ಹಾಡು ಬರೆದು ಅಗಾಧ ಜನಪ್ರಿಯತೆ ಪಡೆಯುವ, ನೂರಾರು ಕತೆ ಬರೆದು ಸವೆದ ತನ್ನ ನಡುಬೆರಳನ್ನು `ಇದೊಂದು ರೂಪಕ’ ಎಂದು ಅಭಿಮಾನದಿಂದ ತೋರಿಸುವ, ಪ್ರಕಾಶಕರಿಗೆ ಮಾತು ಕೊಟ್ಟಂತೆ ಮೂರು ವಾರಗಳಲ್ಲಿ 600 ಪುಟಗಳ `ಶಾಮಣ್ಣ’ ಎಂಬ ಕಾದಂಬರಿ ಬರೆದು ಪ್ರಸಿದ್ಧನಾದ, `ಅರಮನೆ’ ಎಂಬ 1200 ಪುಟಗಳ ಕಾದಂಬರಿಯನ್ನು 500 ಪುಟಗಳಿಗೆ ತರಲು ಮತ್ತೆ ಮತ್ತೆ ಅದನ್ನು ಮುರಿದು ಕಟ್ಟಿ ಕೊನೆಗೆ ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ, ಈ ಸಾಧನೆಗಳ ನಂತರವೂ ಅಬೋಧ ಬಾಲಕನ ಪ್ರೀತಿ=ವಿಸ್ಮಯತೆಗಳನ್ನು ಉಳಿಸಿಕೊಂಡಿರುವ ಸಾಹಿತಿಯೂ ಆಗಿರುವುದು.

ಇವೆಲ್ಲವೂ ಒಂದು ರೋಚಕ ಕಾದಂಬರಿಯಲ್ಲಿ ಮಾತ್ರ ಸಾಧ್ಯ: ಅಥವಾ ಸೋಮಶೇಖರ್ ಉರುಫ್ ವೀರಭದ್ರಪ್ಪ ಉರುಫ್ ಕುಂವೀ ಎಂಬ ಅಧ್ಬುತ ಪ್ರತಿಭಾಶಾಲಿಯ ಅಸಾಧಾರಣ ಬದುಕಿನಲ್ಲಿ ಮಾತ್ರ ಸಾಧ್ಯ ಎಂದು ಆಶ್ಚರ್ಯ, ಅಭಿಮಾನ, ಅಸೂಯೆ, ಇತ್ಯಾದಿಗಳೊಡನೆ ಗ್ರಹಿಸುವಲ್ಲಿಗೆ – ಶಂಭೋ ಶಂಕರ ಮಹಾದೇವ.

– ಡಾ. ಸಿ.ಎನ್.ರಾಮಚಂದ್ರನ್
ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಗಾಂಧೀ ಕ್ಲಾಸು (ಕುಂವೀ ಆತ್ಮ ಕಥನ)  ಲೇಖಕರು: ಕುಂವೀ   ಪ್ರಕಾಶನ: ಸಪ್ನ ಬುಕ್ ಹೌಸ್ ಪುಟ:   ಬೆಲೆ:ರೂ.225/-

ಕೃಪೆ: ಅವಧಿ ಬ್ಲಾಗು, ಸಂಯುಕ್ತ ಕರ್ನಾಟಕ

ಒಂದು ಅಸಮಗ್ರ ಆತ್ಮಕಥನ

 

ಹಿರಿಯ ಕವಿ ಜಿ. ಎಸ್. ಶಿವರುದ್ರಪ್ಪ ತಮ್ಮ ಆತ್ಮಕಥೆಯನ್ನು ಪ್ರಕಟಿಸಿದ್ದಾರೆ. ಬಹು ಹಿಂದೆಯೇ ಪ್ರಕಟವಾದ ಈ ಪುಸ್ತಕ ಈಗ ಮೂರನೆಯ ಮುದ್ರಣವನ್ನು ಕಂಡಿದೆ. ಇದನ್ನು ಜಿ. ಎಸ್. ಎಸ್. `ಒಂದು ಅಸಮಗ್ರ ಆತ್ಮಕಥನ’ ಎಂದು ಕರೆದುಕೊಂಡಿದ್ದಾರೆ. ಏಕೆಂದರೆ ಕವಿಗಳೇ ಹೇಳಿಕೊಂಡಂತೆ, `ನನ್ನನ್ನು ಕುರಿತು ನಾನು ನಿಸ್ಸಂಕೋಚವಾಗಿ ಹೇಳಿಕೊಳ್ಳಲಾಗದ ಅನೇಕ ನಿರ್ಬಂಧಗಳಲ್ಲಿ – ಅವು ವೈಯಕ್ತಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಸಾಂಸ್ಕೃತಿಕವಾಗಿರಬಹುದು – ನಾನು ಹಾಗೂ ನನ್ನಂಥವರು ಬದುಕುತ್ತಿದ್ದೇವೆ ಎಂಬ ಕಾರಣದಿಂದ; ಮತ್ತು ಒಬ್ಬ ಸೃಜನಶೀಲ ಲೇಖಕ ವಾಸ್ತವವಾಗಿ ತನ್ನ ಬರಹಗಳಲ್ಲೇ ತನ್ನ ನಿಜವಾದ ಆತ್ಮಕತೆಯನ್ನು ಬರೆದುಕೊಂಡಿರುತ್ತಾನೆ ಎಂದು ನಾನು ತಿಳಿದುಕೊಂಡಿರುವುದರಿಂದ” ಎಂದಿದ್ದಾರೆ.

 ಇದೇನೇ ಇದ್ದರೂ ಕನ್ನಡದಲ್ಲಿ ಆತ್ಮಕಥನಗಳು ಕುತೂಹಲಕಾರಿಯಾದ ಸಾಂಸ್ಕೃತಿಕ ದಾಖಲೆಗಳಾಗಿವೆ. ಅವು ತಮ್ಮ ಆತ್ಮಕಥೆಯನ್ನು ನಿರೂಪಿಸುವುದರೊಂದಿಗೆ ರಾಜಕೀಯವಾದ, ಸಾಮಾಜಿಕವಾದ ಕಥೆಯನ್ನೂ ಏಕಕಾಲದಲ್ಲಿ ಹೇಳುತ್ತಿರುತ್ತವೆ. ಈ ದೃಷ್ಟಿಯಲ್ಲಿ ಜಿ.ಎಸ್.ಎಸ್. ಅವರ ಕುರಿತಂತೆ ಪೂರ್ಣವಾದ ಚಿತ್ರವನ್ನೇನೂ ಕೊಡುವುದಿಲ್ಲ. ಅವೆಲ್ಲ ಚೂರುಪಾರು ಚಿತ್ರಗಳೇ. ಅವನ್ನೆಲ್ಲ ಪೂರ್ಣ ಮಾಡುವಂಥ ಸಮಗ್ರ ಆತ್ಮಕಥೆಯನ್ನು ನಾವು ಜಿ.ಎಸ್.ಎಸ್. ರಿಂದ ನಿರೀಕ್ಷಿಸಬಹುದು.

 ಶೀರ್ಷಿಕೆ: ಚತುರಂಗ (ಒಂದು ಅಸಮಗ್ರ ಆತ್ಮಕಥನ) ಲೇಖಕರು : ಜಿ. ಎಸ್. ಶಿವರುದ್ರಪ್ಪ ಪ್ರಕಾಶಕರು : ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪುಟಗಳು: 87 ಬೆಲೆ: ರೂ. 40/-

ಕೃಪೆ: ಪ್ರಜಾವಾಣಿ

ವಿಮೋಚನೆಯ ಸಮರದ ಅನುಭವ ಮತ್ತು ನೆನಪು

910 cover blog

 ತಮ್ಮ ಹದಿನಾಲ್ಕನೆಯ ವಯಸ್ಸಿಗೇ ಬ್ರಿಟೀಷರ ವಿರುದ್ಧ ಪ್ರತಿಭಟಿಸುವ ಮನೋಭಾವವನ್ನು ಗಟ್ಟಿಗೊಳಿಸಿಕೊಂಡು ಮುಂದಡಿ ಇಟ್ಟ ಮೇಜರ‍್ ಜೈಪಾಲ್ ಸಿಂಗ್ ರವರ ನೆನಪುಗಳನ್ನು ಮಂಡಿಸುವ ಪುಸ್ತಕ `ವಿಮೋಚನೆಯ ಸಮರದಲ್ಲಿ’. ಜೈಪಾಲ್ ಸಿಂಗ್ ರವರು ಉತ್ತರ ಪ್ರದೇಶದವರು. ಅಲ್ಲಿಯ ಮುಜಾಪುರ‍್ ನಗರ ಜಿಲ್ಲೆಯ ಒಂದು ಹಳ್ಳಿಯ ಬಡ ಜಾಟ್ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಜೈಪಾಲ್ ಸಿಂಗ್, ಜಾಟ್ ಜನಾಂಗದ ಹುಮ್ಮಸ್ಸು, ಎದೆಗಾರಿಕೆ, ಆಕ್ರೋಶ, ಮೈಕಟ್ಟನ್ನು ಹಾಗೇ ಸ್ವಾಭಿಮಾನವನ್ನು ಪ್ರತಿಬಿಂಬಿಸುವಂತಿದ್ದರು. ಅವರು ಬೆಳೆಯುತ್ತಾ ಬಂದಂತೆ ಆಗಿನ ದಿನಗಳಲ್ಲಿ ಬ್ರಿಟೀಷರನ್ನು ಬಗ್ಗು ಬಡಿಯಲು ತಮ್ಮದೇ ತಂತ್ರ ಉಪಯೋಗಿಸಿದರು.

ಅಂದರೆ ಬೇರೆಯವರಂತೆ ಹೊರಗಿನಿಂದ ಬ್ರಿಟೀಷರ ವಿರುದ್ಧ ಬಡಿದಾಡದೆ ಅವರ ಸೈನ್ಯವನ್ನೇ ಸೇರಿದರು. ಆದರೆ ಇದು ಅಪಾಯಕಾರಿಯಾಗಿತ್ತು. ಕೊಂಚ ಏರುಪೇರಾದರೂ ಜೈಪಾಲ್ ಗೆ ಮರಣದಂಡನೆಯೇ ಶಿಕ್ಷೆಯಾಗುತ್ತಿತ್ತು. ಆದರೂ ಹಿಂಜರಿಯದೆ ತಮ್ಮ ತಂತ್ರ ಸಫಲಗೊಳಿಸಲು ಶ್ರಮಿಸಿದರು. ಹೀಗೆ ಅವರು ಈ ದಾರಿಯಲ್ಲಿ ಸಾಗುವ ವೇಳೆ ಆದ ಅನುಭವಗಳನ್ನು ಜೈಪಾಲರು ಈ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ಈ ವಿಚಾರಗಳು ಈ ಹಿಂದೆಯೇ `ಐಕ್ಯರಂಗ’ ಎಂಬ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿರುವಂತಹದ್ದು. ಅದು ಹಾಗೇ ಉಳಿದು ಹೋಗದಿರಲೆಂದು ವಿಶ್ವ ಕುಂದಾಪುರರವರು ಎಲ್ಲಾ ಲೇಖನಗಳನ್ನು ಒಂದೆಡೆ ಸೇರಿಸಿ ಈ ಅಮೂಲ್ಯ ಪುಸ್ತಕವನ್ನು ಕನ್ನಡಿಗರಿಗೆ ನೀಡಿದ್ದಾರೆ. ಇಲ್ಲಿ ಎಳೆಎಳೆಯಾಗಿ ಜೈಪಾಲರ ಹೋರಾಟದ ಜೀವನ ಓದುಗರೆದುರಿಗೆ ತೆರೆದುಕೊಳ್ಳುತ್ತದೆ. ಪ್ರಧಾನಿ ಜವಾಹರಲಾಲ್ ನೆಹರೂರವರಿಗೆ ಜೈಪಾಲರು ಬರೆದ ಪತ್ರವೂ ಇದೆ. ಇಲ್ಲಿ ಅವರು ಬ್ರಿಟೀಷರ ವಿರುದ್ಧ ಹೋರಾಡಲು ಮುಂದಾದ ಗಳಿಗೆ, ಕಾರಣ, ರೀತಿಗಳ ಬಗೆಗೆ ಹೇಳಿಕೊಂಡಿದ್ದಾರೆ. ಹಾಗೆಯೇ ಆಗಿನ ಇತರರ ಹೋರಾಟಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಕೇವಲ ಜೈಪಾಲರ ನೆನಪುಗಳಷ್ಟೇ ಇರದೆ, ಅವರೊಂದಿಗೆ ಒಡನಾಡಿದ ಎಲ್. ಬಿ. ಗಂಗಾಧರ ರಾವ್ ರವರ ಅಭಿಪ್ರಾಯ ಲೇಖನವೂ ಇರುವುದು ಉಪಯುಕ್ತವೆನಿಸಿದೆ.

ಮೊದಲ ಅಧ್ಯಾಯ `ನನ್ನ ದೇಶಕ್ಕಾಗಿ ಕರ್ತವ್ಯ ಚ್ಯುತೆ ಎಸಗಿದೆ’ ಯಲ್ಲಿ ಜೈಪಾಲರು ತಮ್ಮ ಭೂಗತ ಜೀವನವನ್ನು ಕೊನೆಗೊಳಿಸಿ ಹೊರಬಂದಾಗ ಜನರು ಅವರಿಗೆ ಸ್ಪಂದಿಸಿದ ರೀತಿಯನ್ನು ಓದುತ್ತಿದ್ದರೆ ಇಂದಿನ ನೀರಸಗೊಂಡಿರುವ ಸಾಮಾಜಿಕ ಪ್ರಜ್ಞೆಯ ಬಗೆಗೆ ಯೋಚಿಸುವಂತಾಗುತ್ತದೆ. ಇಡೀ ಪುಸ್ತಕದಲ್ಲಿ ಬರುವ ಬ್ರಿಟಿಷ್ ಸೈನ್ಯದೊಳಗಿನ ದೇಶಪ್ರೇಮಿ ವಿಭಾಗಗಳನ್ನು ಸಂಘಟಿಸುವಲ್ಲಿ ಅವರು ವಹಿಸಿದ ಅಮೋಘ ಪಾತ್ರದ ಬಗ್ಗೆ ಭಾರತದ ಎಡಪಂಥೀಯ ವಲಯಗಳ ಆಚೆಗೆ ಅಷ್ಟಾಗಿ ತಿಳಿದಿಲ್ಲ” ಎಂಬ ಮಾತು ನಮ್ಮ ದೇಶದ ಸಾಮಾಜಿಕ ಜೀವನ ಎದುರಿಸುತ್ತಿರುವ ವಿಪರ್ಯಾಸದ ಸ್ಥಿತಿಯನ್ನು ಎದುರಿಗೆ ತರುತ್ತದೆ. ಇವತ್ತಿನ ಯುವಜನತೆಗೆ ರಿಯಾಲಿಟಿ ಶೋಗಳ ಸೆಲೆಬ್ರಿಟಿಗಳೇ ಮಾದರಿಯಾಗುತ್ತಿದ್ದಾರೆಯೇ ಹೊರತು ದೇಶದ ಸ್ವಾಭಿಮಾನವನ್ನು ಕಾಪಾಡಲು ಹೋರಾಡಿದವರು ಆದರ್ಶವಾಗುವುದು ಆಗುತ್ತಿಲ್ಲ. ಅಂದರೆ ಅವರಿಗೆ ಈ ಮಹಾನ್ ಹೋರಾಟಗಾರರು ತಲುಪುತ್ತಿಲ್ಲ. ಇಂತಹ ಪುಸ್ತಕಗಳು ಇದೇ ಮಾದರಿಯಲ್ಲಿ ಓದುಗರಿಗೆ ದೊರಕಿದರೆ ಆ ಒಂದು ಕೊರಗು-ಕೊರತೆ ಕೊಂಚಮಟ್ಟಿಗಾದರೂ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ಜೈಪಾಲ್ ಸಿಂಗ್ ಥರದವರು ದೇಶದ ಮಕ್ಕಳಿಗೆ ಆಪ್ತರಾಗಬಲ್ಲರು. ಈ ನಿಟ್ಟಿನಲ್ಲಿ ವಿಮೋಚನೆಯ ಹಾದಿಯಲ್ಲಿ ಒಂದು ಒಳ್ಳೆಯ ಪ್ರಯತ್ನ.

ಈ ಪುಸ್ತಕ ಜೈಪಾಲ್ ರ ವೈಯಕ್ತಿಕ ಅನುಭವ, ಅಭಿಪ್ರಾಯಗಳನ್ನು ಹೇಳುವಂತೆಯೇ ಅಂದಿನ ದೇಶದ ಸ್ಥಿತಿಗತಿಗಳನ್ನು ಓದುಗರ ಮನಸ್ಸಿಗೆ ನಾಟಿಸುತ್ತವೆ. ಇಲ್ಲಿಯವರೆಗೂ ದೇಶದ ವಿಭಜನೆಯನ್ನು ಒಂದು ಕೋನದಲ್ಲಿ ನೋಡಿದ್ದವರಿಗೆ ಈ ಪುಸ್ತಕ ಅದರ ಬೇರೊಂದು ಮುಖವನ್ನು ತೋರುತ್ತದೆ. ಬ್ರಿಟಿಷರ ಷಡ್ಯಂತ್ರದೆದುರು ಸಿಡಿದೇಳದ ಕಾಂಗ್ರೆಸ್ ಹೇಗೆ ಗೋಸುಂಬೆತನದಿಂದ ವರ್ತಿಸಿತು ಎಂಬುದರ ಪರಿಚಯ ಇಲ್ಲಾಗುತ್ತದೆ. ಇಂತಹ ಹಲವು ವಿಚಾರಗಳನ್ನು ಜೈಪಾಲರು ಪುಸ್ತಕದುದ್ದಕ್ಕೂ ಹೇಳುತ್ತಲೇ ಆವತ್ತಿನ ದಿನಗಳ ಕುರಿತಾಗಿ ಜನ ತಿಳಿದಿರುವುದನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತಾರೆ. ದೇಶವನ್ನು ಕಾಡುತ್ತಿರುವ ಮೂಲಭೂತವಾದ ಮತ್ತು ಪ್ರತ್ಯೇಕತಾವಾದಗಳು ಬ್ರಿಟಿಷರ ಕುತಂತ್ರದ ಫಲ ಎಂಬುದನ್ನು ಜೈಪಾಲರು ಸ್ಪಷ್ಟವಾಗಿ ಹೇಳುವುದು, ಆ ಸಮಸ್ಯೆಗಳ ಕುರಿತಾಗಿ ಎಚ್ಚೆತ್ತುಕೊಂಡು ಒಂದು ಉತ್ತರ ಕಂಡುಕೊಳ್ಳಲು ಪ್ರೇರಣೆಯಂತಿದೆ.

ಜೈಪಾಲ್ ರವರು ಬ್ರಿಟಿಷರ ವಿರುದ್ಧದ ತಮ್ಮ ಹೋರಾಟದಲ್ಲಿ ಕಂಡ ಪೋರ್ಟ ವಿಲಿಯಂ ಜೈಲುವಾಸದ ಅನುಭವವನ್ನು ಓದಿದ ಕೂಡಲೇ ಕಮ್ಯುನಿಸ್ಟ್ ಪಕ್ಷದ ವಿಚಾರಗಳನ್ನು ಮೆಚ್ಚಿ ಅವರ ಮುಂದಾಳುತನದಲ್ಲಿಯೇ ತೆಲಂಗಾಣ ರೈತರ ಸಶಸ್ತ್ರ ಹೋರಾಟದಲ್ಲಿ ಭಾಗಿಯಾಗಿದ್ದು, ಅಲ್ಲಿ ಅವರು ಆ ಹೋರಾಟಕ್ಕೊಂದು ಕೆಚ್ಚು ತುಂಬಿದ್ದು ತೆಲಂಗಾಣ ಹೋರಾಟಕ್ಕೆ ನೀಡಿದ ಕಾಣಿಕೆ ಏನೆಂಬುದು ಈ ಪುಸ್ತಕ ಕಾಣಿಸುತ್ತದೆ. ಆಪರೇಷನ್ ಅಸೈಲಮ್ ನ ಲೇಖನ ಬ್ರಿಟಿಷರ ಕುತಂತ್ರಗಳನ್ನು ಅನಾವರಣಗೊಳಿಸುತ್ತದೆ. ಬ್ರಿಟಿಷ್ ಸೈನ್ಯದ ಅಧಿಕಾರಿ ಹುದ್ದೆಯಿಂದ ಸಿ.ಪಿ.ಐ.(ಎಂ) ನ ಕೇಂದ್ರ ನಾಯಕತ್ವದವರೆಗಿನ ಜೈಪಾಲ್ ಸಿಂಗ್ ರ ಜೀವನ ಯಾತ್ರೆಯನ್ನು ಹೇಳುತ್ತ ಈ ಕೃತಿ ಭಾರತವನ್ನು ಮತ್ತೊಂದು ದೃಷ್ಟಿಯಲ್ಲಿ ತಿಳಿಯಲಾದರೂ ಓದಲೇಬೇಕಾದಂತಹುದು. – ಎಸ್. ಎನ್.

ಶೀರ್ಷಿಕೆ: ವಿಮೋಚನೆಯ ಸಮರದಲ್ಲಿ – ಮೇಜರ‍್ ಜೈಪಾಲ್ ಸಿಂಗ್ ನೆನಪುಗಳು ಅನುವಾದಕರು: ವಿಶ್ವ ಕುಂದಾಪುರ ಪ್ರಕಾಶನ: ಕ್ರಿಯಾ ಪ್ರಕಾಶನ ಪುಟ: ೧೯೪ ಬೆಲೆ:ರೂ.೮೦/-

ಕೃಪೆ : ಲಂಕೇಶ್ ಪತ್ರಿಕೆ

ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ

scan0040-1

ಮನಸೂರೆ

ಮನಸೂರೆ ಹೋಯಿತೋ

ಹೋ ಇದ್ದಕ್ಕಿದ್ದಂತೆ

ಈ ಗೀತೆ ಹಾಡಿದುದು

ಹೊಸ ಸಪ್ನ ಬಿದ್ದಂತೆ

ಅಂತೆ, ಇಂತೆ, ಎನ್ನುತ್ತಾ

ಮನಮೀರಿ ನಾನಿಂತೆ.

ಕಳಚಿ ಬಿದ್ದಿತು ಗೆಳೆಯ

ಜಗದ ಸಂತೆಯ ಚಿಂತೆ

ಮಲ್ಲಿಕಾರ್ಜುನ ಮನ್ಸೂರರ ಗಾಯನ ಕೇಳಿ ಬೇಂದ್ರೆ ಬರೆದ ಸಾಲುಗಳಿವು. ಈ ಗಾನಜೀವನದ ಮಹೋತ್ಸವದ ಗಳಿಗೆಗಳನ್ನು ಕುರಿತು ಮನ್ಸೂರರು 1983ರಲ್ಲೇ ಬರೆದಿದ್ದರು. ಆ ಅನುಭವದ ಸವಿಬುತ್ತಿಗಂಟಿಗೆ `ನನ್ನ ರಸಯಾತ್ರೆಎಂದು ಹೆಸರಿಟ್ಟಿದ್ದರು. ಅದೀಗ 25 ವರುಷಗಳ ನಂತರ ಮರುಮುದ್ರಣ ಕಾಣುತ್ತಿದೆ.

ಮನ್ಸೂರರನ್ನು ಈ ಕೃತಿ ಬರೆಯುವಂತೆ ಒತ್ತಾಯಿಸಿದವರು ಅನಕೃ. ಆಮೇಲೆ ಪುಲ ದೇಶಪಾಂಡೆ, ರಮೇಶ ನಾಡಕರ್ಣಿ ಮತ್ತು ಬಿಎ ಸನದಿಯವರು ಬೆನ್ನು ಬಿಡದೇ ಕಾಡಿದಾಗ ಹೊರಬಂದದ್ದು `ನನ್ನ ರಸಯಾತ್ರೆಎಂದು ಮನ್ಸೂರರು ಬರೆದುಕೊಂಡಿದ್ದಾರೆ.

ಮನ್ಸೂರರು ವಚನಗಳನ್ನು ಹಾಡುವಂತೆ ಪ್ರೇರೇಪಿಸಿದ್ದು ಅನಕೃ. ಆ ಪುಟ್ಟ ಪ್ರಸಂಗ ಹೀಗೆ:

ಕೃಷ್ಣರಾಯರು ನನ್ನ ಹಾಡನ್ನು ಕೇಳಿ ತುಂಬಾ ಸಂತೋಷಪಟ್ಟರು. ನಮ್ಮ ಸ್ನೇಹ ಬೆಳೆಯಿತು. ಅವರೊಮ್ಮೆ `ನೀವೇಕೆ ವಚನವನ್ನು ಹಾಡುವುದಿಲ್ಲ?’ ಎಂದು ಕೇಳಿದರು ಮತ್ತು ತಾವೇ ಅತ್ತಿಕೊಳ್ಳಗುಡ್ಡದ ಮೇಲೆ `ವಚನದಲ್ಲಿ ನಾಮಾಮೃತ ತುಂಬಿಹಾಡಿ ತೋರಿಸಿದರು.

ಹೀಗೆ ನೆನಪಿಸಿಕೊಳ್ಳುತ್ತಾ ಮನ್ಸೂರರು ಬರೆಯುತ್ತಾರೆ, `ನನಗೆ ಇದುವರೆಗೆ ಸಿಕ್ಕ ಶ್ರೇಯದಲ್ಲಿ ನನ್ನ ಸಾಧನೆಯಷ್ಟೇ ಗೆಳೆಯರ ಸ್ನೇಹ ಸೌಹಾರ್ದಗಳ ಪಾಲೂ ಉಂಟು.

ಹಿರಿಯ ಗಾಯಕನ ಜೀವನಕತೆಯನ್ನು ಓದುತ್ತಾ ನಮ್ಮ ಜೀವನಪ್ರೀತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ `ನನ್ನ ರಸಯಾತ್ರೆಉದಾಹರಣೆ.

ಶೀರ್ಷಿಕೆ: ನನ್ನ ರಸಯಾತ್ರೆ ಲೇಖಕರು: ಮಲ್ಲಿಕಾರ್ಜುನ ಮನ್ಸೂರ್ ಪ್ರಕಾಶಕರು: ಅಭಿನವ ಪುಟಗಳು:120 ಬೆಲೆ:ರೂ.60/-

ಕೃಪೆ : ಕನ್ನಡ ಪ್ರಭ

ಗುಲಾಮ ಪದ್ಧತಿಯ ವಿರುದ್ಧ ಸೆಣಸಿದ ಕಪ್ಪು ಮಹಿಳೆಯರ ಆತ್ಮಕತೆಗಳು

ಗುಲಾಮ ಪದ್ಧತಿಯ ವಿರುದ್ಧ ಸೆಣಸಿದ ಕಪ್ಪು ಮಹಿಳೆಯರ ಆತ್ಮಕಥೆಗಳ ಸಂಕಲನವೇ ಕಪ್ಪು ಹಕ್ಕಿಯ ಬೆಳಕಿನ ಹಾಡುಪುಸ್ತಕ. ಇಲ್ಲಿನ ಆತ್ಮಕಥೆಗಳನ್ನು ಎಂ.ಆರ್. ಕಮಲ ಕನ್ನಡಕ್ಕೆ ಅನುವಾದಿಸಿದ್ದಾರೆ. ಗುಲಾಮಗಿರಿಯ ಇತಿಹಾಸ, ಅಂದಿನ ರಾಜಕೀಯ ಸನ್ನಿವೇಶ, ಗುಲಾಮರ ಆತ್ಮಕಥೆಗಳನ್ನು ಒಳಗೊಂಡಿರುವ ಪುಸ್ತಕವೊಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲಬಾರಿಯಾಗಿದೆ. ಇಲ್ಲಿ ಅನುವಾದಿಸಲಾದ ಎಲ್ಲ ಆತ್ಮಕಥೆಗಳು ಹೆಣ್ಣುಮಕ್ಕಳದು ಅನ್ನುವುದು ಈ ಪುಸ್ತಕದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.

ಕಪ್ಪು ಜನಾಂಗ ಸೃಷ್ಟಿಸಿರುವ ಆತ್ಮಕಥೆಗಳು ಐತಿಹಾಸಿಕ ಮಹತ್ವ ಪಡೆದ ಸಾಹಿತ್ಯ-ಸಮಾಜಶಾಸ್ತ್ರೀಯ-ಸಾಂಸ್ಕೃತಿಕ ಸಂವಾದಿ ದಾಖಲೆಗಳಾಗಿವೆ. ಬಿಡುಗಡೆಗಾಗಿ ಅವರು ನಡೆಸಿದ ಹೋರಾಟ ಆ ಜನಾಂಗದ ಕೆಚ್ಚೆದೆಯನ್ನು ಹೇಳುತ್ತಲೇ, ಯುರೋಪಿಯನ್ನರ ನಯ ವಂಚಕತನದ ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ.

ಹಾಗೆ ನೋಡಿದರೆ, ಮೌಖಿಕವಾದುದನ್ನು ಬಿಟ್ಟರೆ, ಲಿಖಿತ ಸಾಹಿತ್ಯ ಪರಂಪರೆಯಾಗಲಿ, ಶಿಕ್ಷಣವಾಗಲೀ ಇಲ್ಲದ ಕಪ್ಪು ಜನಾಂಗ ಇಂಗ್ಲಿಷ್ ಭಾಷೆಯನ್ನು ಕಲಿತು ತಂಡೋಪತಂಡವಾಗಿ, ಅದರಲ್ಲೂ ಮಹಿಳೆಯರು, ಆತ್ಮಕಥೆ, ಕಾವ್ಯ, ಪ್ರಬಂಧ, ಕಾದಂಬರಿ ಹೀಗೆ ವಿವಿಧ ಪ್ರಕಾರಗಳಲ್ಲಿ ತಮ್ಮ ಅಭಿವ್ಯಕ್ತಿಯನ್ನು ಸಾಧಿಸಲು ಆರಂಭಿಸಿದ್ದು ಒಂದು ಆಧುನಿಕ ಭಾಷಾ ವಿಸ್ಮಯವಾಗಿದೆ.

ಈ ಬರವಣಿಗೆಯ ಪ್ರಕ್ರಿಯೆಯು ಮನುಷ್ಯರು-ಮನುಷ್ಯರನ್ನು ಶೋಷಿಸುವ ವ್ಯವಸ್ಥೆಯ ಕುರಿತು, ಬಿಡುಗಡೆಯ ಕುರಿತು, ಮುಂದುವರಿದ ಜನಾಂಗಗಳು ಒಂದು ಜನಾಂಗಕ್ಕೆ ತಿರಸ್ಕರಿಸಿದ ಮಾನವ ಹಕ್ಕುಗಳ ಕುರಿತು ಸಾರ್ವಜನಿಕವಾಗಿ ಹೊಸ ಸಂವಾದ-ಚರ್ಚೆ ಆರಂಭವಾಗುವಂತೆ ಮಾಡಿತು. ಮಾತ್ರವಲ್ಲ, ಹೊಸ ಸಮಾಜದಲ್ಲಿ ಬದುಕಿನ ಬೇರೆ ಬೇರೆ ನೆಲೆಗಳಲ್ಲಿ ಆ ಜನಾಂಗ ತಲೆಯೆತ್ತಿ ನಿಲ್ಲಲು ಅಗತ್ಯವಾಗುವ ಆತ್ಮವಿಶ್ವಾಸವನ್ನು ತುಂಬಿತು.

ಆದರೆ, ಇದಕ್ಕಾಗಿ ಅವರು ಮುನ್ನೂರು ವರ್ಷಗಳ ಕಾಲ ನಿರಂತರವಾಗಿ ಕೊಂಚವೂ ವಿಶ್ರಾಂತಿಸದೆ ಬಡಿದಾಡಬೇಕಾಯಿತು. ಅಸ್ತಿತ್ವ ಮತ್ತು ಬದುಕಿಗಾಗಿ ಸಾರ್ವಜನಿಕವಾಗಿ ಹೋರಾಡುವಾಗಲೂ ಕಪ್ಪು ಜನಾಂಗ ತಮ್ಮ ತಾಳ್ಮೆ, ವಿವೇಕ, ಮಾನವೀಯ ಅನುಕಂಪ ಮತ್ತು ಸ್ಥೈರ್ಯಗಳನ್ನು ಕಳೆದುಕೊಳ್ಳದಿರುವುದು ಅದರ ಬಹು ದೊಡ್ಡ ಗುಣವಾಗಿದೆ. ಈ ಬಗೆಯ ಮಾನವೀಯ ಅಂಶಗಳ ಖಜಾನೆಯನ್ನೇ ತಮ್ಮ ನಿರೂಪಣೆಯಲ್ಲಿಟ್ಟುಕೊಂಡಿರುತ್ತಿದ್ದ ಆತ್ಮಕಥೆಗಳು ಪ್ರಕಟವಾದದ್ದೇ ಸಾವಿರ ಸಾವಿರಗಟ್ಟಲೆ ಪ್ರತಿಗಳು ಸಭೆ-ಸಮಾರಂಭ, ಪ್ರತಿಭಟನಾ ಮೆರವಣಿಗೆಗಳಲ್ಲಿ ಮಾರಾಟವಾಗುತ್ತಿದ್ದವು.

ಇಲ್ಲಿ ನಾಲ್ಕು ಆತ್ಮಕಥೆ ಮತ್ತು ಒಂದು ಆತ್ಮಚರಿತ್ರೆಯನ್ನು ಆಯ್ದು, ಸಂಗ್ರಹಿಸಿ ಅನುವಾದಿಸಲಾಗಿದೆ. ಹಾಗೆ ಆರಿಸುವಾಗ ಐತಿಹಾಸಿಕ ಮಹತ್ವದೊಂದಿಗೆ ವೈವಿಧ್ಯವನ್ನು ಮಾನದಂಡವಾಗಿ ಬಳಸಲಾಗಿದೆ. ಈ ಎಲ್ಲ ಮಹಿಳೆಯರು ಬಿಡುಗಡೆಗಾಗಿ ಹೋರಾಡಿ, ಸ್ವಾತಂತ್ರ್ಯ ಪಡೆದು ತಾವು ಬದುಕಿರುವಾಗಲೇ ತಮ್ಮ ಸಾಧನೆ-ಸೇವೆಗಳ ಮೂಲಕ ಜನಾನುರಾಗಿಗಳಾದವರು. ಮೊದಲ ಆತ್ಮಕಥೆಯ ನಾಯಕಿ ಎಲಿಜಬೆತ್, ಲಿಂಕನ್ ಕುಟುಂಬಕ್ಕೆ ತುಂಬ ಹತ್ತಿರವಾಗಿದ್ದವಳು. ಲಿಂಕನ್ ರ ಪತ್ನಿ ಮೇರಿಯ ಆತ್ಮಸಖಿಯಾಗಿದ್ದವಳು. ಆದರೆ, ಈ ಎಲ್ಲವನ್ನೂ ಅವಳು ಪಡೆದದ್ದು ತನ್ನ ಪ್ರತಿಭೆಯ ಮೂಲಕ ಎನ್ನುವುದು ಗಮನಾರ್ಹ ವಿಷಯವಾಗಿದೆ. ಇನ್ನುಳಿದ ನಾಲ್ವರು ಕೂಡ ಬೇರೆ ಬೇರೆ ಕಾರಣಗಳಿಗೆ ಮುಖ್ಯರಾದವರೇ.

ಗುಲಾಮಗಿರಿಯ ದುಃಖ ಸಾವಿನ ದುಃಖಕ್ಕಿಂತಲೂ ಮಿಗಿಲು.

ಗಂಡನ ಸಾವು, ಶವ ಸಂಸ್ಕಾರದ ವಿಷಯ ತಿಳಿದು ತೀವ್ರವಾಗಿ ದುಃಖಿಸುತ್ತಿದ್ದ ಮಗಳಿಗೆ ತಾಯಿಯ ಮಾತು:

`ನೋಡು, ನನ್ನ ಗಂಡನನ್ನು ದಕ್ಷಿಣಕ್ಕೆ ಮಾರಿದರು. ಅವನು ಬದುಕಿದ್ದಾನೋ ಸತ್ತಿದ್ದಾನೋ ಅದೂ ನನಗೆ ಗೊತ್ತಿಲ್ಲ. ಸಂತೋಷದಿಂದ ಇದ್ದಾನೋ, ಚಾವಟಿ ಏಟು ತಿಂದುಕೊಂಡು ಇದ್ದಾನೋ, ಹಸಿವಿನ ಸಂಕಟದಿಂದ ಸಾಯ್ತಾ ಇದ್ದಾನೋ ಯಾವುದೊಂದೂ ಗೊತ್ತಿಲ್ಲ. ಆದ್ರೆ ಮಗಳೆ, ನಿನ್ನ ಗಂಡ ಸತ್ತು ಸ್ವರ್ಗದಲ್ಲಿದ್ದಾನೆ!

ಕರಿಯರ ಜೀವನ್ಮುಖಿ ನಿಲುವಿಗೆ ಒಂದು ಉದಾಹರಣೆ.

`ಅಪ್ಪನನ್ನು ದಕ್ಷಿಣದವರಿಗೆ ಮಾರಿದಾಗಲೇ ಮಕ್ಕಳನ್ನು ಗುಲಾಮಗಿರಿಯ ಬಂಧನದಿಂದ ಬಿಡುಗಡೆಗೊಳಿಸುವ ನಿರ್ಧಾರವನ್ನು ಅವ್ವ ಮಾಡಿದ್ದಳು. ಸ್ವತಂತ್ರವಾಗಿ ಉಸಿರಾಡುವುದನ್ನು ಕಲಿಯಬೇಕೆಂದು ನಮ್ಮಿಬ್ಬರಿಗೂ ಬೋಧೆ ಮಾಡುತ್ತಿದ್ದಳು. ಅಕ್ಕ ನ್ಯಾನ್ಸಿಯ ಪಲಾಯನದ ಕತೆ ಯಜಮಾನನಿಂದ ಕೇಳಿದಾಗ ಅವ್ವ ಹೊರಗೆ ಕೋಪಗೊಂಡಂತೆ ನಟಿಸಿದರೂ ಮನಸ್ಸಿನಲ್ಲಿ ನೂರು ಬಾರಿಯಾದರೂ ದೇವರಿಗೆ ವಂದಿಸಿರಬೇಕು. ಮುಖವಾಡದ ಮರೆಯಲ್ಲಿ ಎಷ್ಟೆಲ್ಲ ನೋವು, ಸಂತಸ, ವಿಷಾದ, ಕಳವಳ ಈ ಗುಲಾಮರಿಗೆ! ಅವ್ವ ಮನೆಗೆ ಬಂದ ತಕ್ಷಣ ಚಪ್ಪಾಳೆ ತಟ್ಟಿ ಕುಣಿಯಲಾರಂಭಿಸಿದಳು. ಕತ್ತನ್ನು ಅತ್ತಿತ್ತ ಅಲುಗಾಡಿಸುತ್ತಾ ನರ್ತಿಸುತ್ತಿದ್ದ ಅವ್ವನ ಕಂಠದಿಂದ ಸುಮಧುರ ಹಾಡು ತೇಲಿ ಬರುತ್ತಿತ್ತು. ಪುಟ್ಟ ಹುಡುಗಿಯಾಗಿದ್ದ ನಾನು ಮೋಡಿಗೊಳಗಾದವಳಂತಿದ್ದೆ

ಹೀಗೆ ಕಪ್ಪು ಜನಾಂಗದ ನೋವುಗಳನ್ನು ಒಳಗೊಂಡ ಈ ಪುಸ್ತಕ ಗುಲಾಮ ಇತಿಹಾಸದ ಬಗ್ಗೆ ತಿಳುವಳಿಕೆ ಇಲ್ಲದವರಿಗಾಗಿ ಮಹತ್ವದ ಮಾಹಿತಿಯನ್ನೂ ಒಳಗೊಂಡಿದೆ.

ವಿಶಾಲಮತಿ (ಪುಸ್ತಕದ ಮುನ್ನುಡಿ ಮತ್ತು ಬೆನ್ನುಡಿಯ ಸಹಾಯದಿಂದ)

ಶೀರ್ಷಿಕೆ : ಕಪ್ಪು ಹಕ್ಕಿಯ ಬೆಳಕಿನ ಹಾಡು ಅನುವಾದ ಎಂ ಆರ್ ಕಮಲ ಪ್ರಕಾಶಕರು : ಕಥನ ಪ್ರಕಾಶನ ಪುಟಗಳು : 192 ಬೆಲೆ: ರೂ.75/-