ಹಾಡೇನಪ್ಪ ನಾ ಹಾಡೇನ ಹಾಲಿನಂಥ ನನ ದೇವರನ

scan0046-2

ಜಾನಪದ ವಿದ್ವಾಂಸರಾದ ಶಿವಾನಂದ ಗುಬ್ಬಣ್ಣನವರು ಸಂಗ್ರಹಿಸಿದ ಡೊಳ್ಳಿನ ಪದಗಳ ಸಂಗ್ರಹವಿದು. ಉತ್ತರ ಕನರ್ಾಟಕದ ಜನಪದ ಪ್ರಕಾರಗಳಲ್ಲಿ ಡೊಳ್ಳಿನ ಹಾಡಿನ ಹಿನ್ನೆಲೆ, ಸಂದರ್ಭ ಇದೆಲ್ಲದರ ಸಹಿತ ಇಲ್ಲಿ ಕೊಡಲಾಗಿದೆ.

ಮೂಲತಃ ಡೊಳ್ಳಿನ ಹಾಡುಗಳು ಹಾಲುಮತ ಸಂಪ್ರದಾಯಕ್ಕೆ ಸೇರಿದವು. ಬಳಿಕ ಅವು ಶೈವ, ವೈದಿಕ ಸಂಪ್ರದಾಯಗಳನ್ನೂ ಹಾದು ಬಂದಿವೆ. ಇಲ್ಲಿ ಸಂಗ್ರಹಕಾರರು ಕುರುಬರ ಮೂಲ ಅವರ ಪೂರ್ತಿಯಾದ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಕೊಟ್ಟಿದ್ದಾರೆ. ಹೀಗಾಗಿ ಅವು ಹೆಚ್ಚು ಅರ್ಥಪೂರ್ಣ ಎನ್ನಿಸುತ್ತವೆ.

ಇಲ್ಲಿರುವ `ಜಾರತನಎಂಬ ಡೊಳ್ಳಿನ ಪದವು ಒಂದು ಹಾದರದ ಕಥೆಯನ್ನು ನಿರೂಪಿಸುತ್ತದೆ. `ಕುಂದೂರ ಲಕ್ಷ್ಮಣನ ಹೆಂಡತಿಯ ಹಾದರದ ಕಥೆಯನ್ನು ನಿರೂಪಿಸುತ್ತದೆ. `ಕುಂದೂರ ಲಕ್ಷ್ಮಣನ ಹೆಂಡತಿಯ ಹಾದರದ ಕಥೆಯಿದು. ಗಂಡ ದಂಡಿಗೆ ಹೋದಾಗ ಊರ ಸಾಹುಕಾರನೊಂದಿಗಿನ ಸಲ್ಲಾಪವೇ ಹೆಂಡತಿಗೆ ಮುಳುವಾಗುತ್ತದೆ. ಹೆಂಡತಿಯ ನಡತೆಯ ಬಗ್ಗೆ ಗೊತ್ತಾಗಿ ಅವಳನ್ನು, ಸಾಹುಕಾರನನ್ನು ಕೊಲ್ಲುವುದನ್ನು ಈ ಡೊಳ್ಳಿನ ಪದ ನಿರೂಪಿಸುತ್ತದೆ. ತಪ್ಪು ಮಾಡಿದ ಹೆಂಡತಿಯನ್ನು ಕೊಲ್ಲುವ ಜಾನಪದ ಆಶಯ ಈ ಡೊಳ್ಳಿನ ಪದದಲ್ಲೂ ಇದೆ. ಇಂಥ ಕೆಲವು ಡೊಳ್ಳಿನ ಪದಗಳ ಸಂಗ್ರಹವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು.

ಶೀರ್ಷಿಕೆ: ಹಾಡೇನಪ್ಪ ನಾ ಹಾಡೇನ ಹಾಲಿನಂಥ ನನ ದೇವರನ ಲೇಖಕರು: ಡಾ.ಶಿವಾನಂದ ಗುಬ್ಬಣ್ಣವರ ಪ್ರಕಾಶಕರು: ಶಿವಾನಂದ ಗುಬ್ಬಣವರ ಪುಟಗಳು:578 ಬೆಲೆ:ರೂ.300/-

ಕೃಪೆ : ಪ್ರಜಾವಾಣಿ

ಮುಂಡ ಜಾನಪದ ಗೀತಾ ಸಾಹಿತ್ಯ

ಮೂಲ ಲೇಖಕರಾದ ವಕೀಲ ಶರತ್ ಚಂದ್ರ ಅವರು ಮುಂಡ ಬುಡಕಟ್ಟಿನ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ. 1912 ರಲ್ಲಿ ಪುರಾಣ-ಇತಿಹಾಸಗಳ ಆಧಾರದೊಂದಿಗೆ ಹೋಲಿಸಿ, ಅವರು ಇಂಗ್ಲೀಷಿನಲ್ಲಿ ರಚಿಸಿದ ಜನಪದ ಗೀತ ಸಾಹಿತ್ಯ `ಮುಂಡ ಮತ್ತು ಅವರ ದೇಶ‘. ಭೂ ಮಾಲಿಕರ ಆಕ್ರಮಣಗಳಿಗೆ ಸಿಕ್ಕಿ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದ ಮುಂಡ ಜನರಿಗೆ ನ್ಯಾಯ ದೊರಕಿಸುವಲ್ಲಿ ಇದು ಸಹಕರಿಸಿತ್ತು.

ಈ ಜನಪದ ಸಾಹಿತ್ಯವನ್ನು ಪೊ. ಚಂದ್ರಪ್ಪ ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮುಂಡ ಜನರ ಸಂಗೀತ ಮತ್ತು ಪ್ರೀತಿ, ಸೌಂದರ್ಯ ಪ್ರಜ್ಞೆ, ಆತ್ಮೀಯತೆ, ಬದುಕಿನ ಬಗೆಗಿನ ಉತ್ಕಟತೆಯನ್ನು ಗೀತೆಗಳ ಮೂಲಕ ಪರಿಚಯಿಸಿದ್ದಾರೆ.

ಬುಡಕಟ್ಟಿನ ಅಧ್ಯಯನ ಎನ್ನುವುದು ಕೇವಲ ಭೌದ್ಧಿಕ ಕುತೂಹಲವಾಗದೆ ತಮ್ಮ ಅನನ್ಯತೆಯ ಪ್ರತೀಕವೆಂದು ಭಾವಿಸಿದ ಗೆಳೆಯ ಚಂದ್ರಪ್ಪ ಅವರು ಮುಂಡರ ಮೌಖಿಕ ಅಭಿವ್ಯಕ್ತಿಯನ್ನು ಅನುಭವಿಸಿ ಅನುವಾದಿಸಿದಂತಿದೆ. ಗೀತೆಗಳಲ್ಲಿ ಕಾವ್ಯ ಸೌಂದರ್ಯವಿದೆ. ಸಾಹಿತ್ಯಿಕ ಮೌಲ್ಯವಿದೆ” ಎಂದು ಚಕ್ಕೆರೆ ಶಿವಶಂಕರ್ ಮುನ್ನುಡಿದಿದ್ದಾರೆ.

ಶೀರ್ಷಿಕೆ : ಮುಂಡ ಮತ್ತು ಮುಂಡಾಲಾ (ಜಾನಪದ ಸಾಹಿತ್ಯ) ಲೇಖಕರು : ಶರತ್ ಚಂದ್ರ ಅನುವಾದ: ಪ್ರೊ. ಎನ್. ಚಂದ್ರಪ್ಪ

ಪ್ರಕಾಶಕರು : ಮುಂಡ ಪ್ರಕಾಶನ ಪುಟಗಳು : ಬೆಲೆ:

ಕೃಪೆ : ಸಂಯುಕ್ತ ಕರ್ನಾಟಕ