ಕನ್ನಡಕ್ಕೆ ಪ್ರಪ್ರಥಮ ಬಾರಿ ಸಿನೆಮಾ ಕುರಿತ ಪುಸ್ತಕಕ್ಕೆ ಸ್ವರ್ಣಕಮಲ

ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಯೊಂದಕ್ಕೆ ಪ್ರಪ್ರಥಮವಾಗಿ ಸ್ವರ್ಣಕಮಲ ಬಂದಿದೆ. ಸಿನೆಮಾ ಕುರಿತ ಈ ಪುಸ್ತಕಕ್ಕೆ 57ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳಲ್ಲಿ ಸಿನೆಮಾ ಕುರಿತಾದ ಪುಸ್ತಕ “ಸಿನೆಮಾ ಯಾನ” ಎಂಬ ಕನ್ನಡ ಕೃತಿಗೆ ಸಂದಿದೆ. ಇದರ ಲೇಖಕರು ಡಾ. ಕೆ. ಪುಟ್ಟಸ್ವಾಮಿ  ಅವರಿಗೆ ನಮ್ಮ ಅಭಿನಂದನೆಗಳು. ಆನ್ ಲೈನ್ ಕನ್ನಡ ನ್ಯೂಸ್ ವೆಬ್ ಸೈಟ್ ವಿಕ್ರಾಂತ ಕರ್ನಾಟಕ ದಲ್ಲಿ ಬಂದ ಅಂಕಣ ಬರಹವನ್ನು ಪುಸ್ತಕ ರೂಪಕ್ಕೆ ತಂದದ್ದು ಹಸಿರು ಪ್ರಕಾಶನ. ಹೆಚ್ಚಿನ ವಿವರಗಳಿಗೆ ಇದು ‘ಯಾನ’ ಕ್ಕೆ ಭೇಟಿ ಕೊಡಿ

ಶೀರ್ಷಿಕೆ: ಸಿನೆಮಾ ಯಾನ ಲೇಖಕರು:ಡಾ. ಕೆ. ಪುಟ್ಟಸ್ವಾಮಿ ಪ್ರಕಾಶಕರು:ಹಸಿರು ಪ್ರಕಾಶನ ಪುಟ:     ಬೆಲೆ:ರೂ.360/-

ಕರ್ಕಿ ಮೇಳ ಶುರುವಾಗಿದ್ದು ಸುಮಾರು 1800 ರಲ್ಲಿ

scan00011

ಈ ಪುಸ್ತಕ ನಾರಾಯಣ ಮಧ್ಯಸ್ಥ ಅವರ ಅಧ್ಯಯನದ ಫಲವಾಗಿದೆ. ಅವರು ಉತ್ತರ ಕನ್ನಡದ ಹೊನ್ನಾವರದ ಕರ್ಕಿ ಯಕ್ಷಗಾನ ಮೇಳದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಎಂದಿನ ಅಕಡಮಿಕ್ ಅಧ್ಯಯನದ ಕ್ರಮವನ್ನು ಅನುಸರಿಸಿರುವ ಮಧ್ಯಸ್ಥರು ಮೊದಲ ಮೂರು ಅಧ್ಯಾಯಗಳನ್ನು ಅಧ್ಯಯನದ ಉದ್ದೇಶ, ವ್ಯಾಪ್ತಿ, ಯಕ್ಷಗಾನದ ಹಿನ್ನೆಲೆಗೆ ಮೀಸಲಾಗಿರಿಸಿದ್ದಾರೆ.

ಉತ್ತರ ಕನ್ನಡ ತಿಟ್ಟಿನ ಪರಂಪರೆ ಪ್ರಸಂಗ, ಬಣ್ಣಗಾರಿಕೆ, ನೃತ್ಯಾಭಿನಯ, ಮುದ್ರೆಗಳ ಬಳಕೆ, ಹಿಮ್ಮೇಳಗಳ ವಿಶೇಷತೆಯಿಂದಾಗಿ ಪಡುವಲಪಾಯ ಯಕ್ಷಗಾನದಲ್ಲಿ ತನ್ನದೇ ಆದ ಪರಂಪರೆ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿದೆ – ಎಂದು ಗುರುತಿಸುತ್ತಾರೆ ಲೇಖಕರು. ಈ ಪರಂಪರೆಯ ಮೊದಲ ಮೇಳ ಕರ್ಕಿಯ ಹಾಸ್ಯಗಾರ ಮೇಳ. ಕರ್ಕಿ ಮೇಳ ಶುರುವಾಗಿದ್ದು ಸುಮಾರು 1800 ರಲ್ಲಿ. ಎರಡು ಶತಮಾನಕ್ಕೂ ಹೆಚ್ಚು ಕಾಲ ನಡೆದುಬಂದ ದಾಖಲೆ ಅದರದ್ದು. ನಡುವೆ ಈ ಮೇಳ ಬಡೋದೆಯ ಸಂಸ್ಥಾನದ ಮೆಚ್ಚುಗೆಗೂ ಪಾತ್ರವಾಗಿತ್ತಲ್ಲದೆ, ಹನ್ನೆರಡು ನೂರು ರೂಪಾಯಿಯ ವರುಷಾಸನವು ಅದಕ್ಕೆ ಸಿಗುತ್ತಿತ್ತು. ಒಂಬತ್ತು ತಲೆಮಾರುಗಳ ಕಾಲ ನಡೆಸಿಕೊಂಡು ಬಂದ ಅಪರೂಪದ ಮೇಳ ಇದು. ಅದು ಯಕ್ಷಗಾನದ ಇತಿಹಾಸದ ಸಂದರ್ಭದಲ್ಲಿ ವಿಶೇಷವಾದ ದಾಖಲೆ. ಆದರೆ ಈ ಮೇಳಕ್ಕೆ ಪ್ರಸಾದಿತ ಯಕ್ಷಗಾನ ಮಂಡಳಿ ಕರ್ಕಿ  ಎಂಬ ಹೆಸರು ಬಂದಿದ್ದು 1942ರಲ್ಲಿ. ಈ ನಡುವೆ ಕ್ರಿಯಾಶೀಲವಾಗಿಲ್ಲದ ಕಾಲವೂ ಇತ್ತು.

ಇಂಥ ಕುತೂಹಲಕಾರಿಯಾದ ಹಾಗೂ ಮೇಳಕ್ಕೆ ಸಂಬಂಧಿಸಿದ ಹಲವಾರು ವಿವರಗಳನ್ನು ಇಲ್ಲಿ ಕೊಟ್ಟಿದ್ದಾರೆ ನಾರಾಯಣ ಮಧ್ಯಸ್ಥ. ಇಲ್ಲಿ ವಿವರಗಳು ಮಾತ್ರ ಇರುವುದರಿಂದ ಮೇಳದ ಬಗ್ಗೆ ಒಂದು ಸ್ಥೂಲ ಚಿತ್ರವನ್ನು ಗ್ರಹಿಸುವುದು ಕಷ್ಟವಾಗುತ್ತದೆ. ಅದಕ್ಕೊಂದು ಸುಸಂಗತ ನಿರೂಪಣೆ ಇದ್ದರೆ ಬರವಣಿಗೆ ಕಳೆಕಟ್ಟುತ್ತಿತ್ತು. ಆದರೂ ಯಕ್ಷಗಾನದ ಬಗ್ಗೆ ಕುತೂಹಲ ಇರುವವರಿಗೆ ಇದೊಂದು ಆಕರವಾಗುವುದರಲ್ಲಿ ಸಂದೇಹವಿಲ್ಲ.

ಶೀರ್ಷಿಕೆ: ಕರ್ಕಿ ಹಾಸ್ಯಗಾರ ಮೇಳ ಸಂಪ್ರದಾಯ ಮತ್ತು ಪ್ರಯೋಗಶೀಲತೆ ಲೇಖಕರು: ಡಾ.ನಾರಾಯಣ ಮಧ್ಯಸ್ಥ ಪ್ರಕಾಶಕರು: ಬಂಡಾರ ಪ್ರಕಾಶನ, ಮಸ್ಕಿ, ರಾಯಚೂರು ಜಿಲ್ಲೆ  ಪುಟಗಳು:176 ಬೆಲೆ :ರೂ.150/-

ಕೃಪೆ: ಪ್ರಜಾವಾಣಿ

ಬೆಳ್ಳಿ ತೆರೆ ಬೆಳಗಿದವರು

ಚಿತ್ರರಂಗದ ಆಕರ ಗ್ರಂಥ

ಕನ್ನಡ ಚಿತ್ರರಂಗಕ್ಕಾಗಿ ದುಡಿದವರ ಕುರಿತ ಮಾಹಿತಿಗಳು ಈ ಪುಸ್ತಕದಲ್ಲಿದೆ. ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ದುಡಿದ ಕಲಾವಿದರು, ತಂತ್ರಜ್ಞರ ಪರಿಚಯವನ್ನು ಸಂಕ್ಷಿಪ್ತವಾಗಿ ಈ ಕೃತಿ ನೀಡುತ್ತದೆ.

`ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ವಿವರ ಕಟ್ಟುತ್ತಾ ಹೋಗುವ ಈ ಲೇಖನಗಳನ್ನು ಒಂದು ಒಳ್ಳೆಯ ಆಕರ ಸಾಮಾಗ್ರಿಯಾಗಿ ನೋಡಬಹುದು. ಲೇಖಕನ ವೈಯಕ್ತಿಕ ಅನಿಸಿಕೆಗಳನ್ನು ಇಲ್ಲಿ ಸೇರಿಸಿಲ್ಲವಾದ್ದರಿಂದ ವಿಷಯದ ಮೇಲ್ಮೈ ದಾಟಿ ಒಳನುಗ್ಗಿ ನೋಡುವವರಿಗೆ ಸ್ವಲ್ಪ ನಿರಾಶೆಯಾಗಬಹುದು. ಆದರೆ ಒಂದು ವಿಷಯ ಸೂಚಿ ಗ್ರಂಥ ಏನನ್ನು ಸಾಧಿಸಲು ಹೊರಟಿರುತ್ತದೆ ಅದು ಇಲ್ಲಿ ಪೂರ್ಣಗೊಂಡಿದೆ. ಎಂದು ಮುನ್ನುಡಿಯಲ್ಲಿ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ

ಲೇಖಕರು : ಅ. ನಾ. ಪ್ರಹ್ಲಾದ್ ರಾವ್

ಪ್ರಕಾಶಕರು : ಸಾಹಿತ್ಯ ಪ್ರಕಾಶನ

ಪುಟಗಳು : 250

ಬೆಲೆ: ರೂ.100.00

ಕೃಪೆ : ಸುಧಾ