ಹುತಾತ್ಮ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಿಗೆ ಶೃದ್ಧಾಂಜಲಿ ಅರ್ಪಿಸೋಣ

1761 cp heegendaru Bhagat singh mattu Che - front copy1761 cp heegendaru Bhagat singh mattu Che - back copy

ಭಗತ್ ಸಿಂಗ್:
ನಾನು ಒಬ್ಬ ಮನುಷ್ಯ ಮತ್ತು ಮಾನವ ಕುಲವನ್ನು ಬಾಧಿಸುವ ಎಲ್ಲಾ ವಿಚಾರಗಳ ಬಗ್ಗೆಯೂ ನನಗೆ ಕಾಳಜಿಯಿದೆ.
I am a man and all that affects mankind concerns me.
ಚೆ ಗೆವಾರ :
ನಾನು ಒಬ್ಬ ವಿಮೋಚಕನಲ್ಲ, ವಿಮೋಚಕರು ಇರುವುದೂ ಇಲ್ಲ. ಜನ ತಮ್ಮನ್ನು ತಾವೇ ವಿಮೋಚನೆಗೊಳಿಸುತ್ತಾರೆ.
I am not a liberator. Liberators do not exist. The people liberate themselves.

ಶೀರ್ಷಿಕೆ: ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ ಸಂಗ್ರಹ ಅನುವಾದ : ದೀಪ್ತಿ ಬಿ ಪ್ರಕಾಶಕರು:ಚಿಂತನ ಪುಸ್ತಕ ಪುಟಗಳು:50 ಬೆಲೆ:ರೂ.20/- ಮುದ್ರಣ ವರ್ಷ:2011

ಅಪರೂಪದ ವಿಶಿಷ್ಟ ಪದಕೋಶ

(ಕೃತಿ ಬಿಡುಗಡೆಯ ಸಂದರ್ಭ: ಡಾ.ಗುರುಲಿಂಗ ಕಾಪ್ಸೆ, ಡಾ.ಎಂ.ಜಿ.ನಾಗರಾಜ, ಬಸವಕಲ್ಯಾಣ ತಾಲೂಕಿನ ಹಾರಕೂಡ ಹಿರೇಮಠದ ಶ್ರೀಗಳು, ಮುಂತಾದವರು. ಲೇಖಕ ಡಾ.ಸಂಗಮೇಶ ಸವದತ್ತಿಮಠ ಎಡದಿಂದ ಎರಡನೆಯವರು)
ವರ್ಣನಾತ್ಮಕ ವಚನಪದಕೋಶವು ಕನ್ನಡದಲ್ಲಿ ಒಂದು ಅಪರೂಪದ ವಿಶಿಷ್ಟಕೋಶವಾಗಿದೆ. ಒಂದು ಸಂಕ್ಷಿಪ್ತ ವಿಶ್ವ್ಟಕೋಶವಾಗಿದೆ. ವಚನಗಳಲ್ಲಿನ ಶಬ್ದಗಳಿಗೆ ಸಾಮಾನ್ಯ ನಿಘಂಟುವಿನ ಅರ್ಥ ಎಷ್ಟೋಕಡೆಗೆ ಸಾಕಾಗುವುದಿಲ್ಲ ಅಥವಾ ಹೊಂದುವುದಿಲ್ಲ. ತಾತ್ವಿಕ, ಸಾಂದರ್ಭಿಕ, ಭಾಷಿಕ ಮುಂತಾದವುಗಳ ಹಿನ್ನೆಲೆಯಲ್ಲಿ ವಚನಶಬ್ದಗಳನ್ನು ಅರ್ಥೈಸಬೇಕಾಗುತ್ತದೆ. ವಿಶಿಷ್ಟ ಪದಗಳಿಗೆ ವಿವರಣೆ ಬೇಕಾಗುತ್ತದೆ. ಅವಶ್ಯವಿದ್ದೆಡೆಗಳೆಲ್ಲ ಅಂಥ ವಿವರಣೆಗಳನ್ನು ಒಳಗೊಂಡ ಪದಾರ್ಥಕೋಶ ಇದಾಗಿದೆ. ಪ್ರಾಯಃ ಕನ್ನಡದಲ್ಲೆ ಇದು ಪ್ರಥಮ. ವಿವರಣೆಗಳನ್ನು ಮಾತ್ರ ಒಳಗೊಂಡ ಶಬ್ದಗಳು ಇಲ್ಲಿ ಇವೆಯೆಂತಲ್ಲ, ಸಾಮಾನ್ಯ ಓದುಗ ಅಥವಾ ವಿದ್ಯಾರ್ಥಿ ವಚನಗಳನ್ನು ಓದುವಾಗ ಅವನಿಗೆ ಕಠಿನವೆನಿಸಬಹುದಾದ ಸಾಮಾನ್ಯ ಅರ್ಥವನ್ನು ಒಳಗೊಂಡ ಸಾಮಾನ್ಯಪದಗಳೂ ಇಲ್ಲಿವೆ. ಅಂದರೆ ಬೇರೆ ಬೇರೆ ಮಟ್ಟದ ಓದುಗರಿಗೂ ಅಂದರೆ ಸಾಮಾನ್ಯರಿಂದ ವಿದ್ವಾಂಸರವರೆಗೂ ಉಪಯುಕ್ತವಾಗಬೇಕೆಂಬ ಉದ್ದೇಶದಿಂದ ಈ ಕೋಶವನ್ನು ರಚಿಸಲಾಗಿದೆ.
ಶಬ್ದ ಘಟಕದಲ್ಲಿ ಪರಸ್ಪರ ಹೆಣಿಕೆಗೊಂಡಿರುವ ಬಿಡಿ ರೂಪಕ್ಕಿಂತ ಅದರ ಒಟ್ಟು ಅರ್ಥವನ್ನು ಪರಿಗಣನೆಗೆ ತೆಗೆದುಕೊಂಡು ಅದರಲ್ಲಿ ಸೇರಿರುವ ಎಲ್ಲ ಬಿಡಿಘಟಕಗಳನ್ನೂ ಒಂದೇ ಪದಘಟಕದಲ್ಲಿ ಪರಿಗಣಿಸಿರುವುದು ಇದರ ವೈಶಿಷ್ಟ್ಯ. ಇದರಿಂದ ಪದಘಟಕದ ವ್ಯಾಪ್ತಿ ಒಂದರಿಂದ ಹಲವು ಶಬ್ದ ಸಮೂಹದವರೆಗೂ ವಿಸ್ತಾರಗೊಳ್ಳಬಹುದು. ಇದನ್ನು ಪದಘಟಕವೆನ್ನಬಹುದು. ಹೀಗಾಗಿ ಕೋಶದಲ್ಲಿನ ಎಂಟ್ರಿ ಪದ(ಘಟಕ)ಗಳ ಸಮೂಹಾರ್ಥ ಮಹತ್ವದ್ದೆನಿಸುತ್ತದೆ. ಇಲ್ಲಿ ನಮೂದಾದ ಇಂಥ ಒಟ್ಟು ಪದಘಟಕಗಳ ಸಂಖ್ಯೆ ಒಂಬತ್ತು ಸಾವಿರಕ್ಕೂ ಹೆಚ್ಚು.
ಪ್ರಸ್ತುತ ಕೋಶದ  ಮೊದಲನೆಯ ಭಾಗ ಪದಗಳಿಗೆ ಅರ್ಥ ಮತ್ತು ಅಗತ್ಯವೆನಿಸಿದ ಪದಗಳ ವಿವರಣೆಯನ್ನು ಒಳಗೊಂಡಿದೆ. ಎರಡನೆಯ ಭಾಗದಲ್ಲಿ ವಚನಗಳಲ್ಲಿನ ಕೆಲವು ಆಯ್ದ ವಿಶಿಷ್ಟ ಪದಗಳ ಅರ್ಥವಿವರಣೆ, ವಚನಕಾರರು ಮತ್ತು ಅವರ ವಚನಾಂಕಿತಗಳು, ವಚನಕಾರರ ಇತಿವೃತ್ತಗಳು ಮತ್ತು ವಚನಗಳಲ್ಲಿ ಉಲ್ಲೇಖಿತ  ಕೆಲವು ಸಾಂದರ್ಭಿಕ ಪೌರಾಣಿಕ ಘಟನೆಗಳ ವಿವರಗಳು ಇವೆ.
ಕನ್ನಡದಲ್ಲೆ ಪ್ರಥಮವೆನಿಸಿದ ಅಪರೂಪದ ಈ ಪದಕೋಶವನ್ನು ರಚಿಸಿದ ಕನ್ನಡ ಭಾಷಾವಿಜ್ಞಾನಿ, ಸಂಶೋಧಕರೆಂದು ಹೆಸರುಗಳಿಸಿದ ಡಾ.ಸಂಗಮೇಶ ಸವದತ್ತಿಮಠ ಅವರು ಕನರ್ಾಟಕಮತ್ತು ಗುಲಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು, ಮುಖ್ಯಸ್ಥರು, ಹಾಗೂ ಇತರ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿಯ(2003) ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ Emeritus Professor  ಆಗಿ ಪ್ರಸ್ತುತ ವರ್ಣನಾತ್ಮಕ ವಚನಪದಕೋಶವನ್ನು ರಚಿಸಿದ್ದಾರೆ.
ವರ್ಣನಾತ್ಮಕ ವಚನಪದಕೋಶದ ಪ್ರತಿಗಳು ಬೆಂಗಳೂರು, ಮೈಸೂರು, ಧಾರವಾಡ-ಹುಬ್ಬಳ್ಳಿ, ಮತ್ತು ಗುಲಬರ್ಗಾದಲ್ಲಿರುವ ಪ್ರಮುಖ ಪುಸ್ತಕವ್ಯಾಪಾರಿಗಳಲ್ಲಿ ಮತ್ತು ನವಕರ್ನಾಟಕದ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿವೆ, ಬೆಲೆ.ರೂ.300=00. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: samshodhana_vyasanga@yahoo.com ಅಥವಾ sangamesh.saundattimath@gmail.com  ದೂರವಾಣಿ: (0836)2444400. ಮೊ: 9845273736. 8095236470

ಶೀರ್ಷಿಕೆ:ವರ್ಣನಾತ್ಮಕ ವಚನ ಪದಕೋಶ (A Concise Encyclopedic  dictionary of Vachana literature) ಲೇಖಕರು: ಡಾ.ಸಂಗಮೇಶ ಸವದತ್ತಿಮಠ  ಪ್ರಕಾಶನ: ರೂಪರಶ್ಮಿ ಪ್ರಕಾಶನ ಧಾರವಾಡ ಪುಟ:500+ ಬೆಲೆ:ರೂ.300/-

ನೊಬೆಲ್ – ಮಾಹಿತಿ ಕೋಶ

ಮನು ಕುಲಕ್ಕೆ ಸಂದ ಅತ್ಯಮೂಲ್ಯ ಕೊಡುಗೆಗಳಾಗಿ 1901 ರಿಂದ ಭೌತ, ರಸಾಯನ, ವೈದ್ಯ, ಸಾಹಿತ್ಯ ಮತ್ತು ಶಾಂತಿ ನೊಬೆಲ್ ಪುರಸ್ಕಾರಗಳಿಗೆ ಭಾಜನರಾದವರನ್ನು ಹಾಗೂ 1969 ರಿಂದ ಚಲಾವಣೆಗೆ ಬಂದ, ಸ್ವೀಡನ್ನ ಸೆಂಟ್ರಲ್ ಬ್ಯಾಂಕ್ ಅರ್ಥಶಾಸ್ತ್ರ ಸಂಶೋಧನೆಗಳಿಗೆ ನೀಡುವ ಪುರಸ್ಕಾರಕ್ಕೆ (ಇದನ್ನೂ ನೊಬೆಲ್ ಪ್ರಶಸ್ತಿ ಎಂದೇ ಕರೆಯುತ್ತಾರೆ) ಪಾತ್ರರಾದವರ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿದೆ. ಹಾಗೆ 774 ವಿಜ್ಙಾನಿಗಳು, ಸಾಹಿತಿಗಳು, ಶಾಂತಿಪ್ರಿಯರು ಮತ್ತು ಅರ್ಥಶಾಸ್ತ್ರಜ್ಞರು 320 ಪುಟಗಳ ಈ ಪುಸ್ತಕದಲ್ಲಿ ಶೋಭಿಸುತ್ತಾರೆ. (ಅವರ ಛಾಯಾಚಿತ್ರಗಳ ಮುದ್ರಣ ಅಷ್ಟು ಸೊಗಸಾಗಿದೆ.)

ಶಾಲಾ ಕಾಲೇಜುಗಳ ಗ್ರಂಥ ಭಂಡಾರಗಳಲ್ಲಿ ಅಗತ್ಯವಾಗಿ ಇಡಬೇಕಾದ ಪುಸ್ತಕ. ಭೌತ ವಿಜ್ಙಾನ ಹಾಗೂ ಜೀವ ವಿಜ್ಙಾನಗಳ ಪ್ರಶಸ್ತಿ ವಿಜೇತರ ಕುರಿತು ಬರೆಯುವಾಗ ಎಕ್ಸ್ ಕಿರಣ ವಿವರ್ತನೆ, ಸ್ಪಟಿಕ ಸಂರಚನೆ, ರೋಹಿತ, ಪ್ರೋಟೀನ್, ನ್ಯೂಕ್ಲಿಕ್ ಆಮ್ಲ, ಮುಂತಾದ ಪಾರಿಭಾಷಿಕ ಪದಗಳನ್ನು ಬಳಸುವುದರಿಂದ, ಮುನ್ನುಡಿ ಬರೆದಿರುವ ಜನಪ್ರಿಯ ವಿಜ್ಙಾನ ಲೇಖಕ ಅಡ್ಯನಡ್ಕ ಕೃಷ್ಣಭಟ್ ಹೇಳುವಂತೆ ಈ ಕಾರ್ಯಕ್ಷೇತ್ರಗಳ ಬರಿಯ ಸ್ಥೂಲ ತಿಳುವಳಿಕೆ ಪಡಯಲೂ ಸ್ವಲ್ಪಮಟ್ಟಿಗೆ ಓದುಗರ ಪ್ರಯತ್ನ ಬೇಕಾಗುತ್ತದೆ.

ಇದನ್ನು ಗಮನದಲ್ಲಿರಿಸಿಕೊಂಡರೆ ಒಳ್ಳೆಯದು. ಪ್ರಕಾಶನ ಸಂಸ್ಥೆಯ ರಾಜಾರಾಂ `ವರುಷಗಳು ಕಳೆದಂತೆ ನೊಬೆಲ್ ಪಾರಿತೋಷಕಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗುವುದರಿಂದ, ಹೊಸ ಸೇರ್ಪಡೆಗಳನ್ನು ಅನುಬಂಧದ ರೂಪದಲ್ಲಿ ನೀಡುತ್ತಾ ಹೋಗುವುದಾಗಿ ತಿಳಿಸಿದ್ದಾರೆ. ಸ್ವಾಗತಾರ್ಹ

ಶೀರ್ಷಿಕೆ : ನೊಬೆಲ್ ಪುರಸ್ಕೃತರು – ಸಮಗ್ರ ಮಾಹಿತಿ ಕೋಶ ಲೇಖಕರು : ಸಿ. ಆರ್. ಕೃಷ್ಣರಾವ್ ಪ್ರಕಾಶಕರು : ನವ ಕರ್ನಾಟಕ ಪ್ರಕಾಶನ ಪುಟಗಳು : 320 ಬೆಲೆ: ರೂ.400/-

ಕೃಪೆ : ವಿಜಯ ಕರ್ನಾಟಕ