ಗುಲ್ಬರ್ಗಾದ ಪುಸ್ತಕ ವಿತರಕ ಪ್ರಭಾಕರ ಕಾಂತ ಅವರಿಗೆ ಗೌರವದ, ಪ್ರೀತಿಯ ಶೃದ್ಧಾಂಜಲಿ

1287416

– ವಿಜಯಕರ್ನಾಟಕ

ವಿಜಯಕರ್ನಾಟಕದಲ್ಲಿ ಗೆಳತಿ ನೀಲಾ ಬರೆದಿದ್ದು ಓದಿ ಆಫಾತವೇ ಆಯಿತು. ಗುಲ್ಬರ್ಗಾದ ಕಾಂತ ಬೆಂಗಳೂರಿನ ನಮಗೂ ಅಚ್ಚು ಮೆಚ್ಚು. ‘ಅಕ್ಕಾ ಆ ಪುಸ್ತಕ ಕಳ್ಸು’ ಅಂತ ಫೋನ್ ಮಾಡುವ ಕಾಂತಾ ಇನ್ನಿಲ್ಲ ಅನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ. ಪುಸ್ತಕ ಪ್ರೀತಿಯನ್ನು ಹಂಚುವ ಕೆಲಸದ ಸಂಗಾತಿಯಾಗಿದ್ದ,  ಲವಲವಿಕೆಯ, ಉತ್ಸಾಹದ ಆಗರವೇ ಆಗಿದ್ದ ಅಪರೂಪದ ಪುಸ್ತಕ ವಿತರಕ ಪ್ರಭಾಕರ ಕಾಂತ ಅವರಿಗೆ ಪುಸ್ತಕ ಪ್ರೀತಿ ಬಳಗದ ಪ್ರೀತಿಯ ಶೃದ್ಧಾಂಜಲಿ.

– ವಿಶಾಲಮತಿ

ಡಾ. ಆರ್. ವಿ. ಭಂಡಾರಿ ಅವರಿಗೆ ಶೃದ್ಧಾಂಜಲಿ

ಬೆಳಕು ಹಂಚಿದ ಬಾಲಕನನ್ನು ಕೆತ್ತಿದ ಡಾ. ಆರ್.ವಿ. ಭಂದಾರಿ ಡಾ ಇನ್ನಿಲ್ಲ. ಅವರ ಕೆಲವು ಕೃತಿಗಳು ಇವು.

ಕಣ್ಣೇಕಟ್ಟೆ ಕಾಡೇಗೂಡೆ (ಕವನ ಸಂಕಲನ)

ಕೊಲೆಗಾರ ಪತ್ತೆಯಾಗಲಿಲ್ಲ (ಕವನ ಸಂಕಲನ)

ಬೆಂಕಿಯ ಮಧ್ಯೆ (ಕಾದಂಬರಿ)

ಬಿರುಗಾಳಿ (ಕಾದಂಬರಿ)

ಗೋಡೆಗಳು ಮತ್ತು ನೆರೆ ಹಾವಳಿ (ಕಾದಂಬರಿ)

ತಲೆಮಾರು (ಕಾದಂಬರಿ)

ಯಾನ ಮತ್ತು ಇತರ ನಾಟಕಗಳು (ಮಕ್ಕಳ ನಾಟಕಗಳು)

ಕೇವಲ ಸಹಿ (ನವ ಸಾಕ್ಷರ ಸಾಹಿತ್ಯ)

ಇಟ್ಟ ಹೆಜ್ಜೆ ಮುಂದಕೆ (ನವ ಸಾಕ್ಷರ ಸಾಹಿತ್ಯ)

ಐದು ಯಕ್ಷಗಾನ ಏಕಾಂಕ ಪ್ರಸಂಗಗಳು (ನವ ಸಾಕ್ಷರ ಸಾಹಿತ್ಯ)

ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ (ಮಕ್ಕಳ ನಾಟಕಗಳು)

ಬೆಳಕಿನೆಡೆಗೆ (13 ಮಕ್ಕಳ ನಾಟಕಗಳು)

ಸುಭಾಶ್ಚಂದ್ರ ಬೋಸ್ (ಜೀವನ ಚರಿತ್ರೆ)

ಆಡು ಬಾ – ಹಾಡು ಬಾ (ಮಕ್ಕಳ ಪದ್ಯ)

ಯಶವಂತನ ಯಶೋಗೀತೆ (ಕಾದಂಬರಿ)

ಸಮಾಜವಾದಿ ವಾಸ್ತವ (ವಿಮರ್ಶೆ)

ವರ್ಣದಿಂದ ವರ್ಗದೆಡೆಗೆ (ವಿಮರ್ಶೆ)

ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್ಷ (ವಿಮರ್ಶೆ)

ಒಳಧ್ವನಿ (ವಿಮರ್ಶೆ)

ಸೆಳಕು (ವಿಮರ್ಶೆ)

ಸಾಹಿತ್ಯ ಮತ್ತು ಪ್ರಭುತ್ವ (ವಿಮರ್ಶೆ)

ಕನ್ನಡದಲ್ಲಿ ಇಂಗ್ಲೀಷ್ ವ್ಯಾಕರಣ

ಹಿರಿಯ ಬಂಡಾಯ ಸಾಹಿತಿ ಆರ್.ವಿ.ಭಂಡಾರಿ ಇನ್ನಿಲ್ಲ.

ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಆರ್.ವಿ.ಭಂಡಾರಿ (72) ದೀರ್ಘಕಾಲದ ಅಸ್ವಸ್ಥತೆಯ ನಂತರ ಶನಿವಾರ ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಪರಿಚಿತರಾಗಿದ್ದ ಇವರು ಬಂಡಾಯ ಸಾಹಿತ್ಯದ ಆರಂಭದ ಚಳುವಳಿಯ ದಿನಗಳಲ್ಲಿ ಅದರ ಮುಂಚೂಣಿಯಲ್ಲಿದ್ದ ಸಾಹಿತಿಗಳಲ್ಲೊಬ್ಬರಾಗಿದ್ದರು.

ಕಣ್ಣೇಕಟ್ಟೆ ಕಾಡೇಗೂಡೆ (ಕವನ ಸಂಕಲನ), ಬೆಂಕಿಯ ಮಧ್ಯೆ, ಬಿರುಗಾಳಿ, ಯಶವಂತನ ಯಶೋಗೀತೆ (ಮೂರೂ ಕಾದಂಬರಿ), ಯಾನ, ಬೆಳಕಿನೆಡೆಗೆ (ಮಕ್ಕಳ ನಾಟಕಗಳು), ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್ಷ (ವೈಚಾರಿಕ ವಿಮರ್ಶಾ ಸಂಕಲನ) ಮೊದಲಾದ ಕೃತಿಗಳನ್ನು ರಚಿಸಿದ್ದ ಭಂಡಾರಿಯವರಿಗೆ 2005ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಲಭಿಸಿತ್ತು. ಅವರು ಜೋಯಿಡಾದಲ್ಲಿ ನಡೆದ 12ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಅವರಿಗೆ ಉಪನ್ಯಾಸಕ ವಿಠ್ಠಲ ಭಂಡಾರಿ, ಕವಯತ್ರಿ ಮಾಧವಿ ಭಂಡಾರಿ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ಅವರ ಊರಾದ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ನಡೆಯಲಿದೆ.

ಆರ್.ವಿ.ಭಂಡಾರಿ ಅವರ ನಿಧನಕ್ಕೆ ನಾಟಕ ನಿರ್ದೇಶಕ ಕಿರಣ ಭಟ್ಟ, ಜಿಲ್ಲಾ ಸಾಹಿತ್ಯ ಪರಿಷದ್ ಅಧ್ಯಕ್ಷ ರೋಹಿದಾಸ್ ನಾಯಕ್, ಕಾರ್ಯದರ್ಶಿ ಅರವಿಂದ ಕರ್ಕಿಕೋಡಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಹಾಗೇ ಡಾ.ಭಂಡಾರಿ ಅವರ ನಿಧನಕ್ಕೆ ಚಿಂತಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ವಾರ್ತೆ

ಮರಣಾನಂತರವೂ ವಿಜ್ಞಾನಕ್ಕೆ ಮೀಸಲು ಈ ಜೀವ

ಹೆಸರಾಂತ ವಿಜ್ಞಾನ ಬರಹಗಾರ ಹಾಗೂ ಸಂಗೀತ ವಿಮರ್ಶಕ ಪ್ರೊ.ಜಿ.ಟಿ.ನಾರಾಯಣ ರಾವ್ ಇನ್ನಿಲ್ಲ. 82 ರ ಹರಯದಲ್ಲಿ ಬ್ರೈನ್ ಹ್ಯಾಮರೇಜ್ ನಿಂದ ಸತ್ತ ಇವರು ಜಿ.ಟಿ.ಎನ್. ಎಂದೇ ಪರಿಚಿತರು. ಇದೇ ಜೂನ್ 27ರಂದು ಮರಣಿಸಿದ ಇವರ ಆಸೆಯಂತೆ ಮೃತದೇಹವನ್ನು ಅಧ್ಯಯನಕ್ಕಾಗಿ ಆಸ್ಪತ್ರೆಗೆ ದಾನ ಮಾಡಲಾಯಿತು. ತನ್ನ ಅಪರಕರ್ಮವನ್ನು ಮಾಡಬಾರದೆಂದು ಹೇಳುತ್ತಿದ್ದ ಇವರಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ.

ಬದುಕಿರುವಷ್ಟು ದಿನವೂ ವಿಜ್ಞಾನದ ಪ್ರಚಾರ ಬರಹವನ್ನು ಕೈಗೊಂಡಿದ್ದ ಇವರು ತಮ್ಮ ಸರಳ, ನೇರ ಬದುಕಿನಿಂದ ಆದರ್ಶನೀಯರು.

ಜಗತ್ತಿನ ಎಲ್ಲಾ ಜ್ಞಾನ ನಮಗೆ ಬರಬೇಕು. ಕನ್ನಡದವರಿಗೆ ಸಾದ್ಯವಾದಷ್ಟು ಎಲ್ಲಾ ಜ್ಞಾನವನ್ನು ನಾವು ಕೊಡಬೇಕು. ಅದಕ್ಕಾಗಿ ಕನ್ನಡ ಬೇಕು. ವಿಜ್ಞಾನ ಸೃಷ್ಟಿಯಾಗುವುದು ಕನ್ನಡದಲ್ಲಿಲ್ಲ. ಜ್ಞಾನವನ್ನು ಅರ್ಥಮಾಡಿಕೊಳ್ಳಲು ಇಂಗ್ಲೀಷ್ ಬೇಕು. ಅದನ್ನು ಸಂವಹನ ಮಾಡಲು ಕನ್ನಡ ಬೇಕು ಎನ್ನುವ ಜಿ.ಟಿ.ಎನ್. ಕನ್ನಡದಲ್ಲಿ ಸುಮಾರು 60 ವಿಜ್ಞಾನಕ್ಕೆ ಸಂಬಂಧಿಸಿದಂತೆ ಸುಮಾರು 60 ಪುಸ್ತಕಗಳನ್ನು ಬರೆದಿದ್ದಾರೆ.

ಜಿ.ಟಿ.ಎನ್. ಅವರ ಕೆಲವು ಕೃತಿಗಳ ಪಟ್ಟಿ ಇದು.

ಆತ್ಮಕಥೆ – ಮುಗಿಯದ ಪಯಣ

ನೋಡೋಣ ಬಾರಾ ನಕ್ಷತ್ರ

ನಕ್ಷತ್ರ ವಿಕ್ಷಣೆಗೆ ಮಾರ್ಗದರ್ಶಿ

ಸುಬ್ರಹ್ಮಣ್ಯಂ ಚಂದ್ರಶೇಖರ್

ಕೃಷ್ಣ ವಿವರಗಳು

ಶ್ರುತಗಾನ

ಐನ್ಸ್ಟೈನ್ ಬಾಳಿದರಿಲ್ಲಿ (ವೈಜ್ಞಾನಿಕ ಜೀವನ ಚರಿತ್ರೆ)

ಕುವೆಂಪು ದರ್ಶನ ಸಂದರ್ಶನ

ಕೊಪರ್ನಿಕಸ್ ಕ್ರಾಂತಿ (ಖಗೋಳ ವಿಜ್ಞಾನೇತಿಹಾಸ)

ಜಾತಕ ಮತ್ತು ಭವಿಷ್ಯ (ನಾಳೆಯನ್ನು ಇಂದು ಅರಿಯಬಹುದೇ)

ಧೂಮಕೇತು (ಅದೃಶ್ಯ ಲೋಕದ ಅನಾದಿಕಾಲದ ಅಪೂರ್ವ ಅತಿಥಿ)

ನಕ್ಷತ್ರ ವೀಕ್ಷಣೆ (ಬಾನಿಗೆ ಹಿಡಿದ ನುಡಿ ಚಿತ್ರ ದರ್ಪಣ)

ನವಕರ್ನಾಟಕ ಕನ್ನಡ ವಿಜ್ಞಾನ ಪದ ವಿವರಣ ಕೋಶ (ಪ್ರಧಾನ ಸಂಪಾದಕ)

ವೈಜ್ಞಾನಿಕ ಮನೋಧರ್ಮ

ಸಂಗೀತ ರಸನಿಮಿಷಗಳು(ಕಲಾವಿದರ ಜತೆಗಿನ ಒಡನಾಟದ ಅನುಭವ ಕಥನ)

ಸಪ್ತಸಾಗರದಾಚೆಯೆಲ್ಲೋ (ಚಂದ್ರಶೇಖರ ದರ್ಶನ ಸಂವಾದ)

ಸುಬ್ರಹ್ಮಣ್ಯ ಚಂದ್ರಶೇಖರ (ವೈಜ್ಞಾನಿಕ ಜೀವನ ಚರಿತ್ರೆ)

ಸೈನ್ಟಿಫಿಕ್ ಟೆಂಪರ್

ವಿದ್ ದಿ ಗ್ರೇಟ್ ಮೈಂಡ್ (ರಾಮಾನುಜನ್, ರಾಮನ್, ಚಂದ್ರಶೇಖರ್……)

ಮನರಂಜನೆ, ಸೃಜನಶೀಲತೆಗಾಗಿ ಸಾಹಿತ್ಯ ಕನ್ನಡ, ಜ್ಞಾನವಾಹಿನಿಯಾಗಿ ವಿಜ್ಞಾನ ಕನ್ನಡ, ವಾಸ್ತವ ವಹಿವಾಟುಗಳಿಗೆ (ವಾಣಿಜ್ಯಕ್ಕಾಗಿ) ಉಪಯುಕ್ತ ಕನ್ನಡ ಅನ್ನುವುದೊಂದು ಬೆಳವಣಿಗೆ ಆದರೆ ಅಲ್ಲಿಗೆ ಕನ್ನಡ ಭಾಷೆಯ ಸಂಪೂರ್ಣ ಸಾಧ್ಯತೆಯನ್ನು ಸ್ವೀಕಾರ ಮಾಡಬಹುದು ಎನ್ನುತ್ತಾರೆ ಜಿ.ಟಿ.ಎನ್. ಅವರ ಆಶಯವನ್ನು ಬೆನ್ನಿಗೇರಿಸಿ ಮುಂದುವರೆಯುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು.

ಹೆಚ್ಚಿನ ವಿವರಕ್ಕೆ ಸಂಪದವನ್ನು ಸಂಪರ್ಕಿಸಿ http://sampada.net/podcasts/8/G-T-Narayana-Rao