ಉರುಳುವ ಕಲ್ಲಿನ ನೆನಪಿನ ಸುರುಳಿ

ಸ್ವಾತಂತ್ರ್ಯಪೂರ್ವ ಮತ್ತು ನಂತರದ ಕಾಲಘಟ್ಟಗಳಲ್ಲಿ ದೇಶದ ಮಹಿಳಾ ಚಳವಳಿಯ ಸ್ಥಿತ್ಯಂತರಗಳಿಗೆ ನೇರವಾಗಿ ಸಾಕ್ಷಿಯಾದವರಲ್ಲಿ ವೀಣಾ ಮಜುಂದಾರ್ ಪ್ರಮುಖರು. ಸ್ವಾತಂತ್ರ್ಯ ಚಳವಳಿಯಲ್ಲಿ ಗಳಿಸಿದ ಹಕ್ಕುಗಳನ್ನು ಗಟ್ಟಿಗೊಳಿಸಲು ನಡೆದ ಭಾರತದ ಮಹಿಳಾ ಚಳವಳಿಯ ಭಾಗವಾಗಿ ಇದ್ದುಕೊಂಡೇ ಮಹಿಳಾ ಅಧ್ಯಯನದ ಮೂಲಸೆಲೆಯಾಗಿ ಗುರುತಿಸಿಕೊಂಡವರು ಅವರು. ಪಶ್ಚಿಮ ಬಂಗಾಳದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ರಾಜ್ಯಶಾಸ್ತ್ರದ ಅಧ್ಯಾಪಕಿಯಾಗಿ ವೃತ್ತಿಜೀವನ ಆರಂಭಿಸಿ, ಯುಜಿಸಿ ಆಡಳಿತ ಮಂಡಳಿಯಲ್ಲಿ ಉನ್ನತ ಶಿಕ್ಷಣದ ಯೋಜನೆಗಳಿಗೆ ಸಾಂಸ್ಥಿಕ ನೀತಿ ನಿಯಮ ರೂಪಿಸುವ ಅಧಿಕಾರಶಾಹಿಯ ಭಾಗವಾಗುವವರೆಗಿನ ಅವರ ಬದುಕೇ ಮಹಿಳಾ ಅಧ್ಯಯನಾಸಕ್ತರಿಗೆ ಒಂದು ಮಾದರಿಯಾಗಿ ನಿಲ್ಲುತ್ತದೆ.

ಉರುಳುವ ಕಲ್ಲಿನ ನೆನಪಿನ ಸುರುಳಿ ಪುಸ್ತಕ ಮುಖಪುಟ

‘ಭಾರತದ ಮಹಿಳಾ ಚಳವಳಿಯ ದಾಖಲಾತಿದಾರಳು ನಾನು’ ಎಂದು ತಮ್ಮನ್ನು ಕರೆದುಕೊಳ್ಳುವ ವೀಣಾ, ತಮ್ಮ ಬದುಕಿನ ಪುಟಗಳನ್ನು ದಾಖಲಿಸಲು ಮನಸ್ಸು ಮಾಡಿದ್ದು ಮಾತ್ರ ಬದುಕಿನ ಇಳಿಸಂಜೆಯಲ್ಲಿ, ಒಂದು ದಶಕದ ಹಿಂದೆ, 86ನೇ ವಯಸ್ಸಿನಲ್ಲಿ ನಿಧನರಾದ ಅವರು, ಅದಕ್ಕಿಂತ ಕೇವಲ 3 ವರ್ಷಗಳ ಹಿಂದಷ್ಟೇ ಹೊರತಂದ ಆತ್ಮಕಥನ ‘ಮೆಮೊರೀಸ್ ಆಫ್ ಎ ರೋಲಿಂಗ್ ಸ್ಟೋನ್’. ಅದನ್ನೀಗ ‘ಉರುಳುವ ಕಲ್ಲಿನ ನೆನಪಿನ ಸುರುಳಿ’ ಎಂಬ ಹೆಸರಿನಲ್ಲಿ * ಕನ್ನಡಕ್ಕೆ ತಂದಿದ್ದಾರೆ ಸಾಹಿತಿ ಡಾ. ಎನ್. ಗಾಯತ್ರಿ,

ದಶಕಗಳ ಹೋರಾಟದ ಬಳಿಕವೂ ಸಮಾನತೆ ಎಂಬುದು ಮರೀಚಿಕೆಯೇ ಆಗಿರುವ ಈ ಹೊತ್ತಿನಲ್ಲಿ, ಅಂತಹದ್ದೊಂದು ಹೋರಾಟಕ್ಕೆ ಪುನರ್ ಚಾಲನೆ ನೀಡುವ ದಿಸೆಯಲ್ಲಿ ಈ ಪುಸ್ತಕದ ಓದು ಅರ್ಥಪೂರ್ಣ ಎನಿಸುತ್ತದೆ. ಮಹಿಳಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಇರುವ ದಾಖಲೆಗಳ ಕೊರತೆಯನ್ನು ನೀಗಿಸುವ ದೃಷ್ಟಿಯಿಂದಲೂ ಈ ಪುಸ್ತಕ ಸಕಾಲಿಕವಾಗಿದೆ.

ಕೃತಿ: ಉರುಳುವ ಕಲ್ಲಿನ ನೆನಪಿನ ಸುರುಳಿ

ಲೇ: ವೀಣಾ ಮಜುಂದಾರ್

ಅನುವಾದ: ಡಾ.ಎನ್.‌ ಗಾಯಿತ್ರಿ.

ಪುಟ: 268

ಬೆಲೆ; 320/- ರೂ.

ಪ್ರಕಾಶನ: ಕ್ರಿಯಾ ಮಾಧ್ಯಮ ಪ್ರೈ.ಲಿ.

ಪುಸ್ತಕಗಳಿಗೆ ಸಂಪರ್ಕಿಸಿ ಫೋನ್: 9606016471 / 9606016472 / 9606016473

ಪ್ರಜಾವಾಣಿಯಲ್ಲಿನ ಪುಸ್ತಕ ವಿಮರ್ಶೆಗೆ ಲಿಂಕ್‌ ಕ್ಲಿಕ್‌ ಮಾಡಿ

ಜನ ಪ್ರಣಾಳಿಕೆ ಪುಸ್ತಕ ಬಿಡುಗಡೆಯ ಪತ್ರಿಕೆ ವರದಿ

ವಿಶ್ವ ಪುಸ್ತಕ ದಿನದಂದು ಒಂದು ವಿಶ್ವ ವಿಖ್ಯಾತ ಪುಸ್ತಕ `ಬಂಡವಾಳ’ದ ಕುರಿತು

ಶೀರ್ಷಿಕೆ : ಬಂಡವಾಳ – ರಾಜಕೀಯ ಅರ್ಥಶಾಸ್ತ್ರದ ಒಂದು ವಿಮರ್ಶೆ ಪ್ರಕಾಶಕರು : ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕದ ಜಂಟಿ ಪ್ರಕಟಣೆ ಮೂಲ ಲೇಖಕರು : ಕಾರ್ಲ್ ಮಾರ್ಕ್ಸ್ ಅನುವಾದ ಸಂಪಾದಕರು:ವಸಂತರಾಜ ಎನ್.ಕೆ. ಪ್ರಕಟಣಾ ವರ್ಷ:2019 ಪುಸ್ತಕದ ಅಳತೆ:CROWN ¼ ಪುಟಗಳ ಸಂಖ್ಯೆ:706  ಬೆಲೆ: ರೂ.1250/- (ರಟ್ಟು ರಕ್ಷಾಪುಟ) ರೂ.1000 (ಪೇಪರ್ ರಕ್ಷಾಪುಟ)

ವಿ.ಸೂ: ಪ್ರಕಾಶರಿಂದ ಬಂದಿರುವ ಮಾಹಿತಿ ಪ್ರಕಾರ ಇನ್ನು ಒಂದೆರಡು ತಿಂಗಳಲ್ಲಿ ಬಂಡವಾಳ ಸಂಪುಟ 2 ಪ್ರಕಟವಾಗಲಿದೆ.

ಈ 100 ವರ್ಷಗಳ ಕಾಲವೂ ಒಂದು ಕಡೆಗೆ, ಮಾರ್ಕ್ಸ್ರ ‘ಬಂಡವಾಳ’ದ ಅಧ್ಯಯನ ಮತ್ತು ಪ್ರಭಾವ ಜಗತ್ತಿನ ತುಂಬ ಹರಡಿತ್ತು. ಜೊತೆ ಜೊತೆಗೆ ‘ಬಂಡವಾಳದ ಬಡಾಯಿ’ ಸಹ ಜಗತ್ತಿನ ತುಂಬ ನಡೆಯುತ್ತಿತ್ತು. ವಾಸ್ತವದಲ್ಲಿ ಮಾರ್ಕ್ಸ್ ರ ‘ಬಂಡವಾಳ’ದ ಮತ್ತು ‘ಬಂಡವಾಳದ ಬಡಾಯಿ’ ನಡುವೆ ಸತತ ಮುಖಾಮುಖಿ ನಡೆದಿತ್ತು. 1990ರ ದಶಕದ ಆದಿಯಲ್ಲಿ ಸೋವಿಯೆಟ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ದೇಶಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಮರುಸ್ಥಾಪನೆಯ ನಂತರ ಈ ಮುಖಾಮುಖಿ ಇನ್ನಷ್ಟು ತೀವ್ರವಾಗಿದೆ.


‘ಸಮಾಜವಾದ ವ್ಯವಸ್ಥೆ ಬಿದ್ದು ಹೋಗಿದ್ದರಿಂದ, ಬಂಡವಾಳಶಾಹಿ ವ್ಯವಸ್ಥೆಯ ಬಗೆಗಿನ ಮಾರ್ಕ್ಸ್ ಅವರ ವಿಶ್ಲೇಷಣೆ ಸಹ ತಪ್ಪು ಎಂದು ಸಾಬೀತಾಗಿದೆ’ ಎಂಬ ಪ್ರಚಾರ ಜೋರಾಗಿತ್ತು. ಆದರೆ 20ನೇ ಶತಮಾನದ ಕೊನೆಯಲ್ಲಿ ಕಳೆದ ಸಹಸ್ರಮಾನದ (11-20 ನೇ ಶತಮಾನದ ಅವಧಿ) ಹತ್ತು ಶ್ರೇಷ್ಠ ಚಿಂತಕರು ಯಾರು ಎಂದು ಬಿಬಿಸಿ ನಡೆಸಿದ ಆನ್ ಲೈನ್ ಸಮೀಕ್ಷೆಯಲ್ಲಿ ಮಾರ್ಕ್ಸ್ ಮೊದಲ ಸ್ಥಾನದಲ್ಲಿ ಹೊಮ್ಮುವುದನ್ನು ಯಾವ ಪ್ರಚಾರಕ್ಕೂ ತಡೆಯಲಾಗಲಿಲ್ಲ.
ಕಳೆದ ಮೂರು ದಶಕಗಳಲ್ಲಿ ಜಾಗತಿಕವಾಗಿರುವ ಹಣಕಾಸು ಬಂಡವಾಳ ಹಿಂದೆಂದಿಗಿಂತಲೂ ಗಟ್ಟಿ ಸದ್ದು ಮಾಡುತ್ತಿದೆ. ಆದರೆ 2008ರ ಮಹಾ ಬಿಕ್ಕಟ್ಟು ಮತ್ತು ಆ ಮೇಲೆ ಈ ವರೆಗೂ ಬಿಗಡಾಯಿಸಿರುವ ಬಿಕ್ಕಟ್ಟಿನಿಂದ ಚೇತರಿಕೆಯ ಸವಾಲುಗಳು ‘ಬಂಡವಾಳ’ದ ಮಹತ್ವವನ್ನು ಮತ್ತೆ ಹೆಚ್ಚಿಸಿವೆ. ಈ ಮಹಾ ಬಿಕ್ಕಟ್ಟಿನ ಸಂದರ್ಭದಲ್ಲಿ ‘ಬಂಡವಾಳ’ದ ಪ್ರತಿಗಳಿಗೆ ಬೇಡಿಕೆ ಹೆಚ್ಚಿತ್ತು. ಆಗ ನ್ಯೂಯಾರ್ಕ್ ಟೈಮ್ಸ್ ಲೇಖನವೊಂದರಲ್ಲಿ ಮಹಾ ಬಿಕ್ಕಟ್ಟನ್ನು ಅರ್ಥ ಮಾಡಿಕೊಂಡು ಪರಿಹಾರ ಹುಡುಕಬೇಕಾದರೆ ಮಾರ್ಕ್ಸ್ ರ ‘ಬಂಡವಾಳ’ಕ್ಕೆ ಮರಳಬೇಕು ಎಂದಿತ್ತು. ಈ ವರೆಗೆ ಬಂಡವಾಳಶಾಹಿ ಆರ್ಥಿಕದ ಮಾರ್ಕ್ಸ್ ವಾದಿ ವಿಶ್ಲೇಷಣೆಯನ್ನು ನಿರ್ಲಕ್ಷಿಸಿದ್ದ ಅಥವಾ ಹೀಗಳೆಯುತ್ತಿದ್ದ ಹಲವು ಬೂರ್ಜ್ವಾ ಅರ್ಥಶಾಸ್ತ್ರಜ್ಞರು ಬಿಕ್ಕಟ್ಟು ಹೇಗೆ ಉಂಟಾಗುತ್ತದೆ? ಬಿಕ್ಕಟ್ಟನ್ನು ತಾಳಿಕೊಳ್ಳಬಲ್ಲ ಪರಿಹಾರಗಳು ಏನು? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂಬುದಕ್ಕಾಗಿ ‘ಬಂಡವಾಳ’ದ ಅಧ್ಯಯನ ಆರಂಭಿಸಿದ್ದರಂತೆ. ಜರ್ಮನಿಯಲ್ಲಿ 2010ರಲ್ಲಿ ‘ಬಂಡವಾಳ’ದ ಪ್ರತಿಗಳ ಮಾರಾಟ 10 ಪಟ್ಟು ಏರಿತ್ತು. ಹ್ಯಾಂಬರ್ಗಿನಲ್ಲಿ ‘ಬಂಡವಾಳ’ ಸಂಪುಟ 1 ರ ಪ್ರಕಟಣೆಯ 150ನೇ ವಾರ್ಷಿಕದ (ಸೆಪ್ಟೆಂಬರ್ 2017) ಸಂದರ್ಭದಲ್ಲಿ ಅದರ ಇಂದಿನ ಪ್ರಸ್ತುತತೆ ಬಗ್ಗೆ ಜರ್ಮನಿ-ವ್ಯಾಪಿಯಾಗಿ ಸಮೀಕ್ಷೆ ನಡೆಸಲಾಯಿತು. ಆ ಸಮೀಕ್ಷೆಯಲ್ಲಿ ಮೂವರಲ್ಲಿ ಇಬ್ಬರು ‘ಹಿಂದೆAದಿಗಿAತಲೂ ದಾಸ್ ಕ್ಯಾಪಿಟಲ್ ಇಂದು ಪ್ರಸುತ’ ಎಂದು ಅಭಿಪ್ರಾಯ ನೀಡಿದ್ದರು. ಕೇವಲ ಶೇ.6 ಮಾತ್ರ ‘ಇಂದಿಗೆ ದಾಸ್ ಕ್ಯಾಪಿಟಲ್ ಅಪ್ರಸ್ತುತ’ ಎಂದರು.


ಸಾಮಾನ್ಯವಾಗಿ ಯಾವುದೇ ಸಂಶೋಧನಾ ಪ್ರಕಟಣೆಯ (ಪುಸ್ತಕ ಅಥವಾ ಲೇಖನ) ಹೆಚ್ಚುಗಾರಿಕೆ, ಮಹತ್ವ ಮತ್ತು ಅದಕ್ಕೆ ಸಿಕ್ಕಿರುವ ಮನ್ನಣೆಯನ್ನು, ಅದನ್ನು ಇತರ ಸಂಶೋಧನಾ ಪ್ರಕಟಣೆಗಳು ಎಷ್ಟು ಬಾರಿ ಉಲ್ಲೇಖಿಸಿವೆ ಅಥವಾ ಉದ್ಧರಿಸಿವೆ ಎಂಬುದರ ಮೇಲೆ ಅಳೆಯಲಾಗುತ್ತದೆ. ಈಗ ಹೆಚ್ಚಿನ ಪ್ರಮುಖ (‘ಬಂಡವಾಳ’ದಂತಹ ಹಿಂದಿನ ಶತಮಾನಗಳ ಕ್ಲಾಸಿಕ್ ಗಳನ್ನು ಸೇರಿದಂತೆ) ಸಂಶೋಧನಾ ಪ್ರಕಟಣೆಗಳು ಇಂಟರ್‌ನೆಟ್‌ನಲ್ಲಿ (ಎಲ್ಲವೂ ಉಚಿತವಲ್ಲದಿರಬಹುದು) ಲಭ್ಯವಿದ್ದು, ‘ಗೂಗಲ್ ಸ್ಕಾಲರ್’ ಎಂಬ ವೆಬ್ ಸೇವೆ ಒಂದು ನಿರ್ದಿಷ್ಟ ಸಂಶೋಧನಾ ಪ್ರಕಟಣೆ ಯಾವ ಇತರ ಪ್ರಕಟಣೆಗಳಲ್ಲಿ ಉಲ್ಲೇಖಿತ/ಉದ್ಧೃತವಾಗಿವೆ ಎಂಬ ಪಟ್ಟಿಯನ್ನು ಕೊಡುತ್ತದೆ. 2004ರಿಂದ ಬಳಕೆಯಲ್ಲಿರುವ ‘ಗೂಗಲ್ ಸ್ಕಾಲರ್’ ಕೊಡುವ ಈ ಮಾಹಿತಿಯನ್ನು ಸಂಗ್ರಹಿಸಿ ವಿವಿಧ ಪ್ರಕಟಣೆಗಳನ್ನು ಹೋಲಿಸಬಹುದು. ಮೇ 2016ರಲ್ಲಿ ಇಂತಹ ಒಂದು ಅಧ್ಯಯನವನ್ನು ಕೈಗೊಳ್ಳಲಾಗಿದ್ದು, 1950ಕ್ಕಿಂತ ಮೊದಲು ಪ್ರಕಟವಾದ ಸಮಾಜಶಾಸ್ತ್ರದ ಪುಸ್ತಕಗಳಲ್ಲಿ ‘ದಾಸ್ ಕ್ಯಾಪಿಟಲ್’ ಅತ್ಯಂತ ಹೆಚ್ಚು ಇತರ ಸಮಾಜಶಾಸ್ತ್ರದ ಪ್ರಕಟಣೆಗಳಲ್ಲಿ ಉಲ್ಲೇಖಿತ/ಉದ್ಧೃತವಾಗಿರುವ ಪುಸ್ತಕ ಎಂದು ಗುರುತಿಸಲಾಗಿದೆ. ‘ದಾಸ್ ಕ್ಯಾಪಿಟಲ್’ 40,237 ಇತರ ಸಮಾಜಶಾಸ್ತ್ರದ ಪ್ರಕಟಣೆಗಳಲ್ಲಿ ಉದ್ಧೃತವಾಗಿದೆ. ರಾಜಕೀಯ ಅರ್ಥಶಾಸ್ತçದ ‘ಕ್ಲಾಸಿಕ್’ಗಳು ಎಂದು ಪರಿಗಣಿಸಲಾಗುವ ಆದಂ ಸ್ಮಿತ್ ಅವರ ‘ವೆಲ್ತ್ ಆಫ್ ನೇಶನ್ಸ್’ ಎರಡನೇ ಸ್ಥಾನದಲ್ಲಿ (36,331 ಉಲ್ಲೇಖ/ಉದ್ಧರಣೆಗಳು) ಮತ್ತು ಜಾನ್ ಕೀನ್ಸ್ ಅವರ ‘ಜನರಲ್ ಥಿಯರಿ ಆಫ್ ಎಂಪ್ಲಾಯ್‌ಮೆAಟ್, ಇಂಟರೆಸ್ಟ್ ಅಂಡ್ ಮನಿ’ ಆರನೇ ಸ್ಥಾನದಲ್ಲಿ (29,131 ಉಲ್ಲೇಖ/ಉದ್ಧರಣೆಗಳು) ಇವೆ. ಈ ಅಧ್ಯಯನ ಇಂಟರ್‌ನೆಟ್ ನಲ್ಲಿ ಲಭ್ಯವಿರದ ಪ್ರಕಟಣೆಗಳನ್ನು ಒಳಗೊಳ್ಳುವುದಿಲ್ಲ. ಅವನ್ನು ಒಳಗೊಂಡರೆ ‘ಬಂಡವಾಳ’ದ ಸ್ಕೋರ್ ಇನ್ನೂ ಹೆಚ್ಚಾಗಬಹುದು. ಇವೆಲ್ಲದ್ದರಿಂದ ಪುನಃ ಮಾರ್ಕ್ಸ್ ರ ‘ಬಂಡವಾಳ’ದ ಮಹತ್ವ ಮತ್ತು ಜನಪ್ರಿಯತೆ ಹೆಚ್ಚಿದೆ ಎಂದು ತಿಳಿಯುತ್ತದೆ.


‘ಬಂಡವಾಳ’ ಹೆಚ್ಚು ಕಡಿಮೆ ಎಲ್ಲಾ ಆಧುನಿಕ ಭಾಷೆಗಳಲ್ಲಿ ಅನುವಾದವಾಗಿದೆ. ಮಾರ್ಕ್ಸಿಸ್ಟ್ ಇಂಟರ್ ನೆಟ್ ಆಕರದ (www.marxists.org) ಪ್ರಕಾರ 18 ಭಾಷೆಗಳಲ್ಲಿರುವ ‘ಬಂಡವಾಳ’ ಸಂಪುಟ 1 ರ ಅನುವಾದಗಳು ಇಂಟರ್‌ನೆಟ್ ನಲ್ಲಿ ಲಭ್ಯ ಇವೆ. ಅವುಗಳಲ್ಲಿ 11 ಭಾಷೆಗಳ ಅನುವಾದಗಳು ಅದೇ ಆಕರದಲ್ಲಿವೆ. 2012ರಲ್ಲಿ ಜಪಾನೀ ಭಾ಼ಷೆಯಲ್ಲಿ ‘ಬಂಡವಾಳ’ ವನ್ನು ಕಾಮಿಕ್ಸ್ ರೂಪದಲ್ಲಿ ಪ್ರಕಟಿಸಲಾಗಿದೆ.


ಭಾರತದ ಭಾಷೆಗಳಲ್ಲಿ ‘ಬಂಡವಾಳ’ ಹಿಂದಿ, ಬಂಗಾಳಿ, ಪಂಜಾಬಿ, ಮಲಯಾಳಂ, ತೆಲುಗು, ತಮಿಳು, ಒಡಿಯಾ, ಉರ್ದು ಗಳಲ್ಲಿ ಅನುವಾದವಾಗಿದ್ದು ಪ್ರಕಟವಾಗಿದೆ. ಮರಾಠಿ, ಗುಜರಾತಿ, ಅಸ್ಸಾಮಿ, ಕಾಶ್ಮೀರಿ ಭಾಷೆಗಳ ಅನುವಾದದ ಕುರಿತು ಮಾಹಿತಿ ಸಿಕ್ಕಿಲ್ಲ. ಸಂಪುಟ 1 ರ ಹಿಂದಿ ಅನುವಾದವನ್ನು 1961ರಲ್ಲಿ ಮಾಸ್ಕೋದ ಪ್ರಗತಿ ಪ್ರಕಾಶನ ಮತ್ತು ಪೀಪಲ್ಸ್ ಪಬ್ಲಿಷಿಂಗ್ ಹೌಸ್ ಜಂಟಿಯಾಗಿ ಪ್ರಕಟಿಸಿದವು. ಸಂಪುಟ 2ನ್ನು 1979 ರಲ್ಲಿ ಮತ್ತು ಸಂಪುಟ 3ನ್ನು 1983ರಲ್ಲಿ ಅವೇ ಪ್ರಕಾಶಕರು ಪ್ರಕಟಿಸಿದರು. ಸಂಪುಟ 1 ರ ಅನುವಾದಕರು ಓಂ ಪ್ರಕಾಶ್ ಸಂಗಲ್. ಸಂಪುಟ 2 ರ ಅನುವಾದಕರು ಹಿಂದಿಯ ಪ್ರಸಿದ್ಧ ಲೇಖಕ ರಾಮವಿಲಾಸ ಶರ್ಮ (ಸಂಪಾದಕರು ನರೇಶ್ ವೇದಿ). ಸಂಪುಟ 3 ರ ಅನುವಾದಕರು ನರೇಶ್ ವೇದಿ (ಸಂಪಾದಕರು ಬುದ್ಧಿಪ್ರಸಾದ್ ಭಟ್). ‘ಬಂಡವಾಳ’ ಸಂಪುಟ 1 ರ ಮೊದಲ ಪೂರ್ಣ ಬಂಗಾಳಿ ಅನುವಾದವನ್ನು ಪಿಯೂಶ್ ದಾಸಗುಪ್ತಾ ಅವರು ಮಾಡಿದ್ದು, 1974ರಲ್ಲಿ ಕಲ್ಕತ್ತಾದ ಬಾನಿ ಪ್ರಕಾಶನದಿಂದ ಪ್ರಕಟವಾಗಿತ್ತು. ಎರಡನೇ ಮುದ್ರಣ 1981 ರಲ್ಲಿ, 3ನೇ ಮುದ್ರಣ 1986 ರಲ್ಲಿ ಮತ್ತು 4ನೇ ಮುದ್ರಣ 2009 ರಲ್ಲಿ ಪ್ರಕಟಿತವಾಗಿತ್ತು. ಮಾಸ್ಕೋದ ಪ್ರಗತಿ ಪ್ರಕಾಶನ ಸಹ ಮೊದಲ ಸಂಪುಟವನ್ನು 1988ರಲ್ಲಿ ಎರಡನೇ ಸಂಪುಟವನ್ನು 1989ರಲ್ಲಿ ಮತ್ತು ಸಂಪುಟ-3 ನಂತರ ಪ್ರಕಟವಾಯಿತು. ಎರಡೂ ಬಂಗಾಳಿ ಅನುವಾದದ ಭಾಗಗಳು ಪಿಡಿಎಫ್ ರೂಪದಲ್ಲಿ ನೆಟ್ ನಲ್ಲಿ ಲಭ್ಯ ಇವೆ. ಉರ್ದುವಿನಲ್ಲಿ ಸೈಯದ್ ಮಹಮ್ಮದ್ ತಾಕಿ ಅವರ ಅನುವಾದವನ್ನು 1961ರಲ್ಲಿ ಲಾಹೋರಿನ ದಾರ್-ಉಲ್ ಶೌರ್ ಪ್ರಕಾಶನ ಪ್ರಕಟಿಸಿದೆ. ಅದರ ಹಲವು ಆವೃತ್ತಿಗಳು ಬಂದಿದ್ದು 2011ರಲ್ಲಿ ಇತ್ತೀಚಿನ ಆವೃತ್ತಿ ಪ್ರಕಟವಾಗಿದೆ. ಪಂಜಾಬಿಯಲ್ಲಿ ಸಹ ‘ಬಂಡವಾಳ’ದ ಮೂರು ಸಂಪುಟಗಳು ಪ್ರಕಟವಾಗಿವೆ. ಮೊದಲ ಸಂಪುಟವನ್ನು ದೆಹಲಿಯ ಪ್ರಸಿದ್ಧ ನವಯುಗ ಪ್ರಕಾಶನ 1975ರಲ್ಲಿ ಪ್ರಕಟಿಸಿತು. ‘ಬಂಡವಾಳ’ದ ಅನುವಾದವನ್ನು ನಾಲ್ಕು ಪಂಜಾಬಿ ಲೇಖಕರು – ಗುರುಬಚನ್ ಸಿಂಗ್ ಭುಲ್ಲರ್, ಪ್ಯಾರಾ ಸಿಂಗ್ ಸೆಹ್ರಾಯಿ, ಕರಂಜಿತ್ ಸಿಂಗ್, ಪ್ರೇಮ್ ಸಿಂಗ್ – ನಿರ್ವಹಿಸಿದರು.


ಮಾರ್ಕ್ಸ್ ಅವರ 150ನೇ ಹುಟ್ಟುಹಬ್ಬದಂದು (ಮೇ 5, 1968) ‘ಬಂಡವಾಳ’ದ ಮಲಯಾಳಂ ಅನುವಾದದ ಬಿಡುಗಡೆ ಆಯಿತು. ‘ಬಂಡವಾಳ’ ಸಂಪುಟ 1ರ ತೆಲುಗು ಅನುವಾದ ಸೆಪ್ಟೆಂಬರ್ 1996ರಲ್ಲಿ ಪ್ರಕಟವಾಯಿತು. ಇದರಲ್ಲಿ 5 ಅನುವಾದಕರು ಭಾಗವಹಿಸಿದ್ದು, ಇದು ಮೊದಲಿಗೆ ಮಾಸ್ಕೋದ ಪ್ರಗತಿ ಪ್ರಕಾಶನ ಮತ್ತು ವಿಶಾಲಾಂಧ್ರ ವಿಜ್ಞಾನ ಸಮಿತಿಯ ಜಂಟಿ ಯೋಜನೆಯಾಗಿದ್ದು, ಕೊನೆಗೆ ವಿಶಾಲಾಂಧ್ರ ವಿಜ್ಞಾನ ಸಮಿತಿ ಒಂದೇ ಅದನ್ನು ಪ್ರಕಟಿಸಿತು. ನವೆಂಬರ್ 1998 ಮತ್ತು ಅಕ್ಟೋಬರ್ 2000ದಲ್ಲಿ ‘ಬಂಡವಾಳ’ ಸಂಪುಟ 2 ಮತ್ತು 3 ಅನುಕ್ರಮವಾಗಿ ಪ್ರಕಟವಾದವು. ‘ಬಂಡವಾಳ’ದ ಈ ನೇರ ಅನುವಾದವಲ್ಲದೆ, ‘ಬಂಡವಾಳ’ವನ್ನು ಸರಳವಾಗಿ ವಿವರಿಸುವ ಅರ್ಥೈಸುವ ಪ್ರಸಿದ್ಧ ತೆಲುಗು ಲೇಖಕಿ ರಂಗನಾಯಕಮ್ಮ ಅವರ ನಾಲ್ಕು ಸಂಪುಟಗಳು ಸಹ ‘ಬಂಡವಾಳ’ದ ವಿಶ್ಲೇಷಣೆಗಳನ್ನು ಜನಸಾಮಾನ್ಯರತ್ತ ಒಯ್ಯುವಲ್ಲಿ ದೊಡ್ಡ ಪಾತ್ರ ವಹಿಸಿವೆ. ತಮಿಳು ಅನುವಾದವನ್ನು ಮಾರ್ಕ್ಸ್ ಅವರ 180ನೇ ಹುಟ್ಟುಹಬ್ಬದಂದು (ಮೇ 5, 1998) ಬಿಡುಗಡೆ ಮಾಡಲಾಯಿತು. ತ್ಯಾಗರಾಜನ್ ಎಂಬುವರು ಜೈಲಿನಲ್ಲಿದ್ದಾಗ ಈ ಅನುವಾದವನ್ನು ಮಾಡಿದ್ದು ಆ ಮೇಲೆ ಕೃಷ್ಣಯ್ಯ ಎಂಬುವರು ಅದನ್ನು ಪರಿಷ್ಕರಿಸಿ, ನ್ಯೂ ಸೆಂಚುರಿ ಬುಕ್ ಹೌಸ್ ಅದನ್ನು ಪ್ರಕಟಿಸಿತು. ‘ಬಂಡವಾಳ’ ಸಂಪುಟ 1ರ ಒಡಿಯಾ ಅನುವಾದವನ್ನು ಸೆಪ್ಟೆಂಬರ್ 2010ರಲ್ಲಿ ಒಡಿಶಾ ಲೋಕಶಿಕ್ಷಣ ಟ್ರಸ್ಟ್ ಪ್ರಕಟಿಸಿತು.

ಯಾವ ಆಶೋತ್ತರಗಳು ಮತ್ತು ಪ್ರಶ್ನೆಗಳು ಈ ಚುನಾವಣೆಯಲ್ಲಿ ಮಹತ್ವ ಪಡೆಯಬೇಕಾಗಿದೆ

ಕರ್ನಾಟಕದ ಹದಿನಾರನೇ ವಿಧಾನಸಭೆಯನ್ನು ಆರಿಸುವ ಪ್ರಕ್ರಿಯೆ ಆರಂಭವಾಗಿದೆ. ೧೫ನೇ ವಿಧಾನಸಭೆಯಲ್ಲಿ ಜನಾದೇಶವನ್ನು ಬದಿಗೊತ್ತಿ, ಸರಕಾರಗಳು ರಚನೆಗೊಂಡ ರೀತಿ, ಮತ್ತು ಅದಕ್ಕೆ ತಕ್ಕಂತೆ ಕಳೆದ ಐದು ವರ್ಷಗಳ ಆಳ್ವಿಕೆಯ ಒಟ್ಟು ಸ್ವರೂಪ ಪ್ರಜಾಪ್ರಭುತ್ವವಾದಿಗಳ ವಿಶ್ವಾಸದ ಬುಡವನ್ನೇ ಅಲುಗಾಡಿಸುವಂತಿತ್ತು. ಈಗ ಮತ್ತೆ ಚುನಾವಣಾ ಪ್ರಕ್ರಿಯೆಯಲ್ಲೂ ಅದೇ ಪ್ರವೃತ್ತಿ ಕಾಣಬರುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೂಲತತ್ವವಾದ ಪ್ರಜೆಯೇ ಅಥವ ಜನತೆಯೇ ಸಾರ್ವಭೌಮ ಎಂಬುದನ್ನು ಮತ್ತೆ ಮುನ್ನೆಲೆಗೆ ತರುವುದು ಹೇಗೆ, ಜನರ ಪ್ರಶ್ನೆಗಳು, ಆಶೋತ್ತರಗಳು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಪ್ರಧಾನ ಪಾತ್ರ ವಹಿಸುವಂತೆ ಮಾಡುವುದು ಹೇಗೆ ಎಂದು ರಾಜ್ಯದಲ್ಲಿ ಹಲವಾರು ನಾಗರಿಕ ಗುಂಪುಗಳು ಗಂಭೀರವಾಗಿ ಯೋಚಿಸುತ್ತಿರುವುದು ಭರವಸೆ ಮೂಡಿಸುತ್ತಿರುವ ಸಂಗತಿ.

ಕರ್ನಾಟಕದ ಪ್ರಮುಖ ಜನವಿಭಾಗಗಳ ಯಾವ ಆಶೋತ್ತರಗಳು ಮತ್ತು ಪ್ರಶ್ನೆಗಳು ಈ ಚುನಾವಣೆಯಲ್ಲಿ ಮಹತ್ವ ಪಡೆಯಬೇಕಾಗಿದೆ ಎಂದು ಈ ಪುಸ್ತಕದಲ್ಲಿರುವ ಲೇಖನಗಳಲ್ಲಿ ಆಯಾಯ ಕ್ಷೇತ್ರಗಳ/ಜನವಿಭಾಗಗಳ ಪ್ರಣಾಳಿಕೆಯ ರೂಪದಲ್ಲಿ ಮುಂದಿಟ್ಟಿದ್ದಾರೆ. ಇವುಗಳಲ್ಲಿ `ವಾರ್ತಾ ಭಾರತಿ’ಯಲ್ಲಿ ಈಗಾಗಲೇ ಪ್ರಕಟವಾದದ್ದದ್ದು ಮಾತ್ರವಲ್ಲದೇ ಇನ್ನೂ ಕೆಲವು ಲೇಖನಗಳಿವೆ.

ಇದು ರಾಜ್ಯದ ಪ್ರಜಾಪ್ರಭುತ್ವವನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿರುವ ಕರ್ನಾಟಕದ ಪ್ರಜ್ಞಾಶೀಲ ಮತದಾರರಿಗೆ ವಿಶೇಷ ಕೊಡುಗೆ ಎಂದೇ ಹೇಳಬಹುದು.

ಶೀರ್ಷಿಕೆ : ಜನಪ್ರಣಾಳಿಕೆ 2023; ಪ್ರಕಾಶಕರು: ಕ್ರಿಯಾ ಮಾಧ್ಯಮ; ಪ್ರಕಟಣಾ ವರ್ಷ:2023; ಲೇಖಕರು: ನಾಡಿನ ಒಬ್ಬ ಪ್ರಮುಖ ಅರ್ಥಶಾಸ್ತçಜ್ಞ ಪ್ರೊ. ಟಿ.ಆರ್.ಚಂದ್ರಶೇಖರ್, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ  ಕೃಷಿ ಆರ್ಥಿಕ ತಜ್ಞ ಡಾ. ಪ್ರಕಾಶ ಕಮ್ಮರಡಿ, ಸಾಂಸ್ಕೃತಿಕ ಚಿಂತಕ ಡಾ.ಪುರುಷೋತ್ತಮ ಬಿಳಿಮಲೆ ಮುಂತಾದವರು. ಪುಟಗಳ ಸಂಖ್ಯೆ:100 ಬೆಲೆ:ರೂ.80/-

ಏಂಗೆಲ್ಸ್ ಚಿಂತನೆಯ ಬೆಳಕಿನಲ್ಲಿ ಮಹಿಳಾ ವಿಮೋಚನೆ ಚರ್ಚಾಗೋಷ್ಟಿಯಲ್ಲಿ ಪುಸ್ತಕ ಬಿಡುಗಡೆ ಏಂಗೆಲ್ಸ್ 200 ಪುಸ್ತಕ ಸರಣಿಯ ಪುಸ್ತಕ ಕುಟುಂಬ ಖಾಸಗಿ ಆಸ್ತಿ ಮತ್ತು ಪ್ರಭುತ್ವ ಇವುಗಳ ಉಗಮ

ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆಯುವ ಚರ್ಚಾಗೋಷ್ಟಿಯಲ್ಲಿ (zoom link ಮೂಲಕವಾದರೂ)

ಭಾಗವಹಿಸಿ

ಈ ಪುಸ್ತಕದ ಬಗ್ಗೆ ಮಹಿಳಾ ಹೋರಾಟಗಾರ್ತಿ, ಲೇಖಕಿ, ಚಿಂತಕಿ ಡಾ. ಎನ್. ಗಾಯತ್ರಿ ಅವರ ಅಭಿಪ್ರಾಯ ಇದು.

ಜಗತ್ತು ಸ್ವೀಕರಿಸಿದ ಮಾರ್ಕ್ಸ್ ವಾದವೆಂಬ ವಿಶಿಷ್ಟ ಲೋಕದೃಷ್ಟಿಗೆ ಕಾರಣಕರ್ತರಾದ ಜೋಡಿ ಪ್ರತಿಭೆಗಳು ಮಾರ್ಕ್ಸ್ ಮತ್ತು ಏಂಗೆಲ್ಸ್. ಇವರಲ್ಲಿ ಏಂಗೆಲ್ಸ್ ಬರೆದ ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ – ಇಡೀ ವಿಶ್ವದ ಮೇಲೆ ಬಹುಮುಖ್ಯ ಪ್ರಭಾವ ಮತ್ತು ಪರಿಣಾಮವನ್ನು ಬೀರಿದ ಕೃತಿ. ಈ ಕೃತಿ ಪ್ರಕಟವಾದಂದಿನಿಂದ ಇಲ್ಲಿಯವರೆಗೆ ಜಗತ್ತಿನ ಜ್ಞಾನ ಪ್ರಪಂಚಕ್ಕೆ ವಿಸ್ತಾರವನ್ನು, ವೈಶಾಲ್ಯತೆಯನ್ನು ನೀಡುತ್ತಲೇ ಬಂದಿದೆ. 1884ರಲ್ಲಿ ಏಂಗೆಲ್ಸ್ ತಮ್ಮ ಮೌಲಿಕ ಕೃತಿಯಾದ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ’ ಕೃತಿಯನ್ನು ರಚಿಸಿದರು. ಮಾನವ ಜನಾಂಗದ ಪ್ರಾಗೈತಿಹಾಸಿಕ ಕಾಲದ ಜೀವನ ವಿಧಾನವನ್ನು ತೆರೆದಿಡುವ ಈ ಗ್ರಂಥವು ಗ್ರೀಸ್, ಐರ್ಲೆಂಡ್ ಮತ್ತು ಜರ್ಮನಿಯ ಪ್ರಾಚೀನ ಸಮಾಜಗಳ ಪರಿಚಯ ಮಾಡಿಕೊಡುತ್ತದೆ. ಆರಂಭಿಕ ಹಂತದ ಸಾಮ್ಯತೆಯ ಸಮಾಜ, ಇವುಗಳ ನಿರ್ದಿಷ್ಟ ಸ್ವರೂಪವನ್ನು ಚರ್ಚಿಸುತ್ತಾ ಕುಟುಂಬದ ಉಗಮವನ್ನು ಏಂಗೆಲ್ಸ್ ಗುರುತಿಸುತ್ತಾರೆ. ಕ್ರಮೇಣ ಬೆಳೆದು ಬಂದ ಸಾಮಾಜಿಕ-ಆರ್ಥಿಕ ಸಂರಚನೆಗಳು ಸಮಾಜವನ್ನು ಒಂದು ಹಂತದಿಂದ ಇನ್ನೊಂದಕ್ಕೆ ಕೊಂಡೊಯ್ಯುತ್ತಿದ್ದಂತೆ ಕುಟುಂಬ, ಖಾಸಗಿ ಆಸ್ತಿಯನ್ನು ಆಧರಿಸಿದ ವರ್ಗ ಸಮಾಜ ಮತ್ತು ಪ್ರಭುತ್ವ ಹುಟ್ಟಿಕೊಳ್ಳುತ್ತವೆ. ಈ ಮೂರು ಘಟಕಗಳಿಗೂ ಇರುವ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಂಡರಷ್ಟೇ ದಮನದ ಸ್ವರೂಪ ಮತ್ತು ಕಾರಣಗಳು ಸ್ಪಷ್ಟವಾಗುತ್ತವೆ.


ಕಾಡು ಮನುಷ್ಯನ ಕಾಲದಿಂದ ನಾಗರಿಕ ಪೂರ್ವ, ನಾಗರಿಕ ಹಂತದ ಕಾಲದವರೆಗೆ ಸಾಗಿರುವ ಮನುಷ್ಯನ ವಿಕಾಸವನ್ನು ಚರ್ಚಿಸುತ್ತ ಮಾನವ ಸಂಸ್ಕೃತಿಯ ಇತಿಹಾಸವನ್ನು ಈ ಕೃತಿ ಬಿಚ್ಚಿಡುತ್ತದೆ. ಸಮಾಜದಲ್ಲಿ ಗಂಡು-ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಈ ಚರಿತ್ರೆಯ ಭಾಗವಾಗಿದೆ. ವಿಶ್ವದ ಹಲವಾರು ಸಮಾಜಗಳಲ್ಲಿ ಕಂಡು ಬಂದ ಬಹುಪತ್ನಿತ್ವ, ಬಹುಪತಿತ್ವದಿಂದ ಏಕಪತಿ-ಪತ್ನಿತ್ವದವರೆಗೆ ಸಾಗಿದ ಸಮಾಜದಲ್ಲಿ ಯಾರು ಯಾರನ್ನು ಮದುವೆಯಾಗುತ್ತಿದ್ದರು, ಎನ್ನುವ ವಿವರಗಳು, ಗೋತ್ರ ವ್ಯವಸ್ಥೆ ಬೆಳೆದು ಬಂದ ರೀತಿ ಮುಂತಾದ ವಿಷಯಗಳನ್ನು ಈ ಕೃತಿ ಸುದೀರ್ಘವಾಗಿ ಚರ್ಚಿಸುತ್ತದೆ. ಗಂಡು-ಹೆಣ್ಣು ಇಬ್ಬರೂ ಸೇರಿ ಕೂಡಿಸುತ್ತಿದ್ದ ಕುಟುಂಬದ ಸಂಪತ್ತು ಗಂಡಸಿನ ಪಾಲಾದದ್ದು ಹೇಗೆ, ವಂಶಾವಳಿಯು ತಾಯಿ ಮತ್ತು ತಂದೆಯ ಮೂಲಕ ಹರಿದು ಬಂದ ವಿನ್ಯಾಸವನ್ನು ಕೂಡ ಚರ್ಚಿಸಲಾಗಿದೆ. ಉತ್ಪಾದನಾ ಶಕ್ತಿಯಲ್ಲಾದ ಬದಲಾವಣೆ ಶ್ರಮ ವಿಭಜನೆಯನ್ನು ಹುಟ್ಟಿ ಹಾಕಿದ್ದು ಮತ್ತು ಅದರಿಂದ ಉಂಟಾದ ವರ್ಗಗಳ ವಿಭಜನೆಯಲ್ಲಿ ಮಹಿಳೆ ಬಹುಮುಖ್ಯ ಶೋಷಿತಳಾದಳು, ಎನ್ನುವುದನ್ನು ಇಲ್ಲಿ ನೋಡಬಹುದು. ಇಂದು ನಾವು ಕಾಣುವ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಪೊಲೀಸ್, ಸೈನಿಕರು – ಎಲ್ಲವುಗಳ ಆವಿರ್ಭಾವಕ್ಕೂ ಒಂದು ಚರಿತ್ರೆಯಿದೆಯೆಂಬುದರ ಪ್ರಾಥಮಿಕ ತಿಳುವಳಿಕೆಯನ್ನು ಮತ್ತು ಅದರ ಬದಲಾವಣೆಯ ಪ್ರಕ್ರಿಯೆಯನ್ನು ಈ ಕೃತಿ ಸಾದರಪಡಿಸುತ್ತದೆ.

ಇಂದು ನಮ್ಮೆಲ್ಲರ ಬದುಕು ಸಂಕಷ್ಟದಲ್ಲಿದೆ. ಸಮಷ್ಠಿ ಹಿತವು ಗೌಣವಾಗಿ, ವ್ಯಕ್ತಿಹಿತವು ಮೇಲುಗೈಯ್ಯಾಗಿ, ಹಿರಿದು ತಿನ್ನುವುದೇ ಈ ಯುಗದ ಮೌಲ್ಯವಾಗಿರುವ ಸಂದರ್ಭದಲ್ಲಿ ‘ಹೆಣ್ಣು’ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಭೋಗದ ವಸ್ತುವಾಗಿದ್ದಾಳೆ; ಪುರುಷನ ಆಸ್ತಿಯಾಗಿ, ಕೌಟುಂಬಿಕ ದೌರ್ಜನ್ಯದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾಳೆ. ಕುಟುಂಬದೊಳಗಿನ ಅಧಿಕಾರದ ಅಸಮತೋಲನ ಸಂಬಂಧಗಳು, ಆಸ್ತಿರಹಿತ ಹೆಣ್ಣಿನ ನೋವಿಗೆ ಕಾರಣವಾಗಿವೆ. ವಿವಾಹದ ಚೌಕಟ್ಟು ವಿಸ್ತರಿಸಿದೆ. ವಿಭಿನ್ನ ಲಿಂಗಗಳ ಪರಿಕಲ್ಪನೆ ಬದಲಾಗಿದೆ. ಸಲಿಂಗಿಗಳು ಮತ್ತು ತೃತೀಯ ಲಿಂಗಿಗಳ ಜೀವನ ವಿನ್ಯಾಸಗಳು ನಮ್ಮ ಕಣ್ಣ ಮುಂದಿದೆ. ಈ ಎಲ್ಲ ಅಂಶಗಳನ್ನು ಪ್ರತಿಫಲಿಸುವ ಮತ್ತು ನಿಯಂತ್ರಿಸುವ ಪುರುಷಾಧಿಪತ್ಯದ ಪ್ರಭುತ್ವ, ಸಮಾನತೆಯ ಮಾನವೀಯ ಸಮಾಜವನ್ನು ಕನಸಿನ ಗಂಟಾಗಿಸಿದೆ. ಏಕ ಸಂಸ್ಕೃತಿಯ ದಂಡವನ್ನು ಬಹುಜನರ ಮೇಲೆ ಹೇರಲಾಗುತ್ತಿರುವ ಇಂದಿನ ಭಾರತದ ಸಂದರ್ಭದಲ್ಲಿಯಂತೂ ‘ಸಂಸ್ಕೃತಿ’ಯ ಅಪವ್ಯಾಖ್ಯಾನ ಅಮಾನುಷವಾಗಿ ನಡೆದಿದೆ. ಸಂಸ್ಕೃತಿಯೆಂಬುದು ನಿಂತ ನೀರಲ್ಲ, ಅದು ಕಾಲದ ಪ್ರವಾಹದಲ್ಲಿ ಹಲವಾರು ಸ್ಥಿತ್ಯಂತರ ಹೊಂದಿ ಬದಲಾಗಿದೆ ಮತ್ತು ಅದನ್ನು ಗಮನಿಸಿ, ಗುರುತಿಸಿದಾಗ ಮಾತ್ರ ಸಮಾಜದ ಅನಿಷ್ಟಗಳ ವಿರುದ್ಧ ಹೋರಾಡಲು ಸಾಧ್ಯ, ಎಂಬ ತಿಳುವಳಿಕೆಯ ಅಗತ್ಯ ಜರೂರಾಗಿ ಬೇಕಿದೆ. ಇಂತಹ ಅರಿವನ್ನು ಉಂಟು ಮಾಡುವ ಏಂಗೆಲ್ಸ್ ರ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ’ ಕೃತಿಯ ಓದು ಇಂದಿನ ವರ್ತಮಾನದ ಅಗತ್ಯವೂ ಹೌದು.


ಕುಟುಂಬ ಸಮಾಜದ ಅತಿ ಮುಖ್ಯ ಘಟಕ. ಅದು ಹೆಣ್ಣಿನ ವಿಷಯದಲ್ಲಿ ಬಹು ಮುಖ್ಯ ಶೋಷಕ ಯಂತ್ರವಾಗಿದೆ. ಹೆಣ್ಣು ತನ್ನ ಶೋಷಣೆಯ ವಿರುದ್ಧ ಹೋರಾಡಲು ಅದರ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶೋಷಣೆಯ ಚರಿತ್ರೆಯನ್ನು ವಿವರಿಸುವ ಈ ಕೃತಿ ತಮ್ಮ ದಮನದ ವಿರುದ್ಧ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಕೈ ದೀವಿಗೆಯಾಗಿದೆ.


ಇದರ ಕನ್ನಡ ಅನುವಾದಗಳು ಈಗಾಗಲೇ ಒಂದೆರಡು ಬಂದಿದ್ದರೂ, ಈ ಅನುವಾದ ಅತ್ಯಂತ ಸರಳವಾದ ಭಾಷೆಯಲ್ಲಿ ಓದಲು ಮತ್ತು ತಿಳಿಯಲು ಅನುಕೂಲಕರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕದ ಮೊದಲಿಗೆ, ಅನುವಾದಕಿಯು ಬರೆದಿರುವ ದೀರ್ಘ ಮುನ್ನುಡಿಯು ಪುಸ್ತಕದ ಸಾರ ಸರ್ವಸ್ವವನ್ನು ಒಂದೆಡೆ ಹಿಡಿದಿಟ್ಟಿದೆ. ನಾಲ್ಕು ದಶಕಗಳಿಂದ ಕರ್ನಾಟಕದ ಮಹಿಳಾ ಚಳುವಳಿಯಲ್ಲಿ ತೊಡಗಿಕೊಂಡಿರುವ ಜಯಲಕ್ಷ್ಮಿಯವರು ಈ ಕೃತಿಯ ಪ್ರಸ್ತುತತೆಯನ್ನು ಇಂದಿನ ನಮ್ಮ ದೇಶದ ಪರಿಸ್ಥಿತಿಯ ಹಿನ್ನೆಲೆಯಲ್ಲಿಟ್ಟು ವಿವರಿಸಿದ್ದಾರೆ. ಅದಕ್ಕಾಗಿ ಅನುವಾದಕಿಯು ಅಭಿನಂದನಾರ್ಹರು. ಇಂತಹ ಅಗತ್ಯವಾದ ಪುಸ್ತಕದ ಯೋಜನೆಯನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿರಿಸಿರುವ ನವಕರ್ನಾಟಕ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮದವರಿಗೆ ಮನಃಪೂರ್ವಕ ವಂದನೆಗಳು.

ಡಾ. ಎನ್. ಗಾಯತ್ರಿ

ಲು-ಷುನ್ ಕತೆಗಳು – ಪುಸ್ತಕ ಪ್ರೀತಿ ತಿಂಗಳ ಮಾತುಕತೆಯ ಇಂದಿನ ಪುಸ್ತಕ

ಸ್ಥಳ: ಕ್ರಿಯಾ ಮಾಧ್ಯಮ ಪುಸ್ತಕ ಮಳಿಗೆ, (#70, ಸುಬ್ಬರಾಮಚೆಟ್ಟಿ ರಸ್ತೆ, ನೆಟ್ಟಕಲ್ಲಪ್ಪ ಸರ್ಕಲ್, ಬಸವನಗುಡಿ, ಬೆಂಗಳೂರು)

ZOOM ಮೂಲಕವೂ ಭಾಗವಹಿಸಬಹುದು Meeting ID : 83381253910 Password  : 537316

`ನನ್ನ ದೂರು ಕೇಳಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸ್ವಾಗತ

ವಿಚಾರಸಂಕಿರಣ ಮತ್ತು `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕ ಬಿಡುಗಡೆಗೆ ಆಹ್ವಾನ

ಹೆಸರಾಂತ ಸಾಹಿತಿ ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ `ಕರಾವಳಿಯ ಕೋಮುಹಿಂಸೆಯ ಹಿಂದಿರುವ ನೈಜ ಕೈಗಳ ಅನಾವರಣ' ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿರುವ ವಿಚಾರಸಂಕಿರಣದಲ್ಲಿ,

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು `ಕೋಮು ಹಿಂಸೆಯ ಹಿಂದಿನ ರಾಜಕಾರಣ' ಎಂಬ ವಿಷಯದ ಮೇಲೆ ತಮ್ಮ ವಿಚಾರ ಮಂಡನೆ ಮಾಡಿದರೆ ನಿವೃತ್ತ ಸಹಾಯಕ ಪೋಲಿಸ್ ಕಮಿಷನರ್ ಬಿ.ಕೆ.ಶಿವರಾಂ ಅವರು `ಮತೀಯವಾದ ಮತ್ತು ಪ್ರಭುತ್ವ’ ಎಂಬ ವಿಷಯದ ಮೇಲೆ ತಮ್ಮ ವಿಚಾರವನ್ನು ಮಂಡನೆ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ದಿಟ್ಟ ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ `ನೇತ್ರಾವತಿಯಲ್ಲಿ ನೆತ್ತರು – ಕರಾವಳಿಯ ಕೋಮು ಹಿಂಸೆಯ ನೈಜ ಪ್ರಕರಣಗಳು’ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಕೋಮು ಹಿಂಸಾಚಾರದಲ್ಲಿ ತಂದೆಯನ್ನು ಕಳೆದುಕೊಂಡ ಮಹಮ್ಮದ್ ಶಹೀದ್ ಅವರು ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಮತ್ತು ಚಿಂತಕರಾದ ಕೆ. ಷರೀಫಾ, ಹಿರಿಯ ಹೋರಾಟಗಾರರೂ ಚಿಂತಕರೂ ಆಗಿರುವ ಮಾವಳ್ಳಿ ಶಂಕರ್ ಹಾಗೂ ಲೇಖಕ ನವೀನ್ ಸೂರಿಂಜೆ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ದಿನಾಂಕ 19.06.2022 ಭಾನುವಾರದಂದು ಬೆಳಿಗ್ಗೆ 10:30ಕ್ಕೆ ಬಾಪೂ ಸಂಭಾಂಗಣ, ಗಾಂಧೀಭವನ, ಕುಮಾರಕೃಪಾ ರಸ್ತೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.

ತಾವೆಲ್ಲರೂ ಈ ವಿಚಾರ ಸಂಕಿರಣಕ್ಕೆ ಬಂದು `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕವನ್ನು ಖರೀದಿಸಿ ಓದಿ ಅಭಿಪ್ರಾಯ ತಿಳಿಸಿರಿ.

ಹಿಂದುತ್ವ ರಾಜಕೀಯಕ್ಕೆ ಮನಸ್ಸು ಕೊಟ್ಟವರೂ ಸೇರಿದಂತೆ ಎಲ್ಲಾ ನಾಗರಿಕರೂ ಓದಬೇಕಾದ ಪುಸ್ತಕ ನೇತ್ರಾವತಿಯಲ್ಲಿ ನೆತ್ತರು

ಶೀರ್ಷಿಕೆ : ನೇತ್ರಾವತಿಯಲ್ಲಿ ನೆತ್ತರು ಲೇಖಕರು:ನವೀನ್ ಸೂರಿಂಜೆ ಪ್ರಕಾಶಕರು: ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:184 ಬೆಲೆ:ರೂ.185 ಪ್ರಕಟಣಾ ವರ್ಷ:2022

ಪತ್ರಕರ್ತ ನವೀನ್ ಸೂರಿಂಜೆ ಯವರ “ನೇತ್ರಾವತಿಯಲ್ಲಿ ನೆತ್ತರು” ಪುಸ್ತಕದ ಕುರಿತು ಹಿರಿಯ ಚಿಂತಕ ಕೆ ಫಣಿರಾಜ್ ಬರೆಯುತ್ತಾರೆ…

ಹಿಂದುತ್ವವಾದಿ ಫ್ಯಾಸಿಸ್ಟ್ ರಾಜಕೀಯವನ್ನು ವಿರೋಧಿಸಲು, ನಾವು ನಮ್ಮ ಬದುಕಿನ ವಿವೇಕ ವಿವೇಚನೆಗಳನ್ನು ಎಚ್ಚರದಲ್ಲಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಫ್ಯಾಸಿಸ್ಟ್ ಹಿಂಸಾ ಕೃತ್ಯಗಳ ಸ್ವರೂಪವನ್ನು ಅರಿಸುವ ವಾಸ್ತವಿಕ ವಿದ್ಯಮಾನಗಳ ನಿರೂಪಣೆಗಳೂ ಅಗತ್ಯ.
ಯುವ ಮಾಧ್ಯಮ ವರದಿಗಾರರಾಗಿ ಕರಾವಳಿಯಲ್ಲಿ ಧೀರ್ಘ ಕಾಲ ಚುರುಕಿನ ತನಿಖ ವರದಿಗಳನ್ನು ಪ್ರಕಟಿಸಿದ ನವೀನ್ ಸೂರಿಂಜೆಯವರು ತಮ್ಮ ವೃತ್ತಿ ಅನುಭವವನ್ನು ಕಡೆದು ಕಟ್ಟಿರುವ ಬರಹಗಳ ಸಂಕಲನವಿದು. ಸರಳವೂ ತೀಷ್ಣವೂ ಆದ ಈ ಬರಹಗಳನ್ನು ಅಗತ್ಯವಾಗಿ (ಹಿಂದುತ್ವ ರಾಜಕೀಯಕ್ಕೆ ಮನಸ್ಸು ಕೊಟ್ಟವರೂ ಸೇರಿದಂತೆ) ಎಲ್ಲಾ ನಾಗರಿಕರೂ ಓದಬೇಕಾದ ಬರಹಗಳಿವು.
ಹಿಂದುತ್ವ ಮತೀಯವಾದ ಕಾರ್ಯಚರಣೆಯ ವಿಧಾನಗಳ ಬಗ್ಗೆ ಬೆಳಕು ಚೆಲ್ಲುವುದು ಮಾತ್ರವಲ್ಲದೆ, ಬಡತನದ ಬವಣೆಗಳನ್ನೂ, (ಆರೋಪಕ್ಕೆ ತುತ್ತಾಗಿ ಸ್ವತಃ ಜೈಲುವಾಸ ಅನುಭಿವಿಸಿರುವವರಾಗಿ) ಮಂಗಳೂರು ಜೈಲೊಳಗಿನ ಮಾನವ ಗತಿಯ ಕಥನಗಳನ್ನು ಬಹಳ ಅಂತಃಕರಣದಲ್ಲಿ ನವೀನ್ ನಿರೂಪಿಸಿರುವರು. ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ.

ಕೊಂಡು, ಓದಿ.

  • ಕೆ.ಫಣಿರಾಜ್
    ಹಿರಿಯ ಚಿಂತಕ

“ಮಹಾಭಾರತ : ಭೂಮಕಾವ್ಯ ಮತ್ತು ಭಾರತರಾಷ್ಟ್ರ” ಪುಸ್ತಕ ಬಿಡುಗಡೆ

ಬಿಡುಗಡೆ : ಪ್ರೊ.ಸಿ.ಎನ್.ರಾಮಚಂದ್ರನ್ ಸಂವಾದದಲ್ಲಿ : ಪ್ರೊ.ಗಣೇಶ ದೇವಿ, ಡಾ.ಎಂ.ಜಿ.ಹೆಗಡೆ
ಸ್ಥಳ :
ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್.ಕಾಲೊನಿ 3ನೆಯ ಮುಖ್ಯ ರಸ್ತೆ, ಬೆಂಗಳೂರು
ದಿನ/ಸಮಯ :
ಮಾರ್ಚ್ 19, 2022 ಶನಿವಾರ ಸಂಜೆ 4.30


ಮಹಾಭಾರತದ ಕತೆಗಳು, ಪಾತ್ರಗಳು ಮತ್ತು ಸನ್ನಿವೇಶಗಳು ಭಾರತೀಯರ ಜೀವನದ ಅವಿಭಾಜ್ಯ ಅಂಗ. ಭೀಷ್ಮನ ಪ್ರತಿಜ್ಞೆ, ಕರ್ಣ-ದುರ್ಯೋಧನರ ಸ್ನೇಹ, ಏಕಲವ್ಯನ ಗುರುದಕ್ಷಿಣೆ, ಉತ್ತರ ಕುಮಾರನ ಹೇಡಿತನ, ದ್ರೌಪದಿಯ ಛಲ ಇತ್ಯಾದಿ – ನಮ್ಮ ಬದುಕಿಕ ಹಲವು ಸನ್ನಿವೇಶಗಳಿಗೆ, ವ್ಯಕ್ತಿಗಳಿಗೆ, ಅವರ ವರ್ತನೆಗಳಿಗೆ ಪ್ರತಿಮೆಗಳಾಗಿ ಬಿಟ್ಟಿವೆ. ನಮ್ಮ ದಿನ ನಿತ್ಯದ ಮಾತುಗಳಲ್ಲಿ ಮೂಡಿ ಬರುತ್ತವೆ. ಕಾವ್ಯ, ಕತೆ-ಕಾದಂಬರಿ, ನೃತ್ಯ, ನೃತ್ಯನಾಟಕ, ಸಿನೆಮಾ, ಟಿವಿ, ಕಾಮಿಕ್ಸ್ ಹೀಗೆ ಎಲ್ಲಾ ಪ್ರಕಾರಗಳಲ್ಲೂ ಅವು ಮರು ಹುಟ್ಟು ಪಡೆಯುತ್ತಲೇ ಇವೆ. ಜಾತಿ, ಬುಡಕಟ್ಟು, ಭಾಷೆ, ಮತಧರ್ಮ, ಸಂಸ್ಕೃತಿ, ತಾತ್ವಿಕತೆ ಗಳ ಅಗಾಧ ವೈವಿಧ್ಯತೆಗಳೂ ಕಂದಕಗಳೂ ಇರುವ ಭಾರತದ ಜನರಲ್ಲಿ ಮಹಾಭಾರತದ ಇಂತಹ ಸರ್ವವ್ಯಾಪಿ ಕಾಲಾತೀತ ಜನಪ್ರಿಯತೆಗೆ ಕಾರಣವೇನು? ಮಹಾಭಾರತ ಎಂದಿಗೂ ಇಂದಿಗೂ ಎಲ್ಲರಿಗೂ ಸಲ್ಲುವುದು ಏಕೆ? ಎಂಬ ಸರಳ ಪ್ರಶ್ನೆಗಳಿಗೆ ಉತ್ತರ ಮಾತ್ರ ಬಹಳ ಸಂಕೀರ್ಣವಾದುದು. ಇಂತಹ ಪ್ರಶ್ನೆಗಳನ್ನು ಉತ್ತರಿಸಲು ಸಾಹಿತ್ಯ, ಭಾಷಾಶಾಸ್ತ್ರ, ಇತಿಹಾಸ, ರಾಜಕಾರಣ, ಸಮಾಜಶಾಸ್ತ್ರ, ಸಂಸ್ಕೃತಿ ಗಳ ಆಳವಾದ ಅರಿವು ಬೇಕು. ಮಹಾಭಾರತದ ಕುರಿತು ಬಂದ ಅಸಂಖ್ಯ ಅರ್ಥೈಸುವಿಕೆ, ಭಾಷ್ಯಗಳ ಅಧ್ಯಯನವೂ ಬೇಕು.

ಇವೆಲ್ಲವೂ ಇರುವ ದೇಶದ ಪ್ರಸಿದ್ಧ ಚಿಂತಕ ಪ್ರೊ. ಗಣೇಶ ದೇವಿ ಅವರು ಈ ಅತ್ಯಂತ ಪ್ರಸ್ತುತವಾದ ಪ್ರಶ್ನೆಗಳನ್ನು ಎತ್ತಿಕೊಂಡು ಇತ್ತೀಚೆಗೆ ‘ಮಹಾಭಾರತ – ದಿ ಎಪಿಕ್ ಎಂಡ್ ನೇಶನ್’ ಎಂಬ ಪುಸ್ತಕವನ್ನು ಬರೆದು ಕಳೆದ ತಿಂಗಳಲ್ಲಷ್ಟೇ ಪ್ರಕಟವಾಗಿದೆ. ಸಮಗ್ರ ಮಹಾಭಾರತವನ್ನು ಅಖಂಡವಾಗಿ ಗ್ರಹಿಸಿದ ರಾಜಶೇಖರ, ಅಭಿನವಗುಪ್ತ, ಅರವಿಂದರು ಮೊದಲಾದವರಿರುವ ಪೌರ್ವಾತ್ಯ ಮಹಾಭಾರತ ವ್ಯಾಖ್ಯಾನ ಪರಂಪರೆಯನ್ನು ಗಣೇಶ ದೇವಿ ಅವರು ಮತ್ತೆ ಮತ್ತೆ ಆವಾಹಿಸುತ್ತಾರೆಯಷ್ಟೇ ಅಲ್ಲ, ಅದರ ತೀರ್ಮಾನಗಳನ್ನು ಸ್ವೀಕರಿಸುತ್ತಾರೆ; ಆ ಚಿಂತನ ಕ್ರಮದಲ್ಲೇ ಮತ್ತಷ್ಟು ಮುಂದೆ ಸಾಗಿ ಸಮಕಾಲೀನ ಭಾರತಕ್ಕೆ ಪ್ರಸ್ತುತವಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹವಣಿಸುತ್ತಾರೆ.

ವಸಾಹತುಶಾಹಿಯ ಪರಿಣಾಮವಾಗಿ ಭಾರತೀಯ ಸಮಾಜದಲ್ಲಿ ಸಾಂಸ್ಕೃತಿಕ ವಿಸ್ಮೃತಿ, ಪ್ರಾಚೀನ ಭವ್ಯತೆಯ ಭ್ರಮೆಗೂ ದೇಶೀ ಪರಂಪರೆಗಳ ಯಥಾರ್ಥ ಅರಿವಿನ ಕೊರತೆಗೂ ಕಾರಣವಾಗಿದೆ. ಸದ್ಯ ಮುನ್ನೆಲೆಗೆ ಬರಲು ಹಪಹಪಿಸುತ್ತಿರುವ ಮತ್ತು ಅಧಿಕೃತಗೊಳ್ಳಲು ಎಲ್ಲಾ ಉಪಕರಣಗಳನ್ನೂ ಬಳಸುತ್ತಿರುವ ರಾಷ್ಟ್ರ, ಚರಿತ್ರೆ ಮತ್ತು ಸಮಾಜದ ಕಲ್ಪನೆಗಳು ರಾಷ್ಟ್ರೀಯ ಕಾವ್ಯವೆಂದು ಮನ್ನಣೆ ಪಡೆದಿರುವ ಮಹಾಭಾರತಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಎನ್ನುವುದು ದೇವಿಯವರ ಮಹಾಭಾರತ ವ್ಯಾಖಾನದ ಕೇಂದ್ರ ಗ್ರಹೀತಗಳಲ್ಲೊಂದು. ಅಂದರೆ ವಸಾಹತುಶಾಹಿ ವಿಕಲ್ಪಗಳಿಗೆ ನೇತುಬಿದ್ದಿರುವ ವರ್ತಮಾನದ ರಾಜಕೀಯಕ್ಕೆ ಪರಂಪರೆಯ ವಿವೇಕವನ್ನು ನೆನಪಿಸುವ ಉದ್ದೇಶದ ಕೃತಿಯಿದು.

ಇಂಗ್ಲಿಷ್ ಮೂಲದ ಜತೆಗೆ ಭಾರತದ ಎಲ್ಲ ಭಾಷೆಗಳಲ್ಲಿ ಈ ಪುಸ್ತಕ ಬೇಗನೇ ಬರಬೇಕು ಎಂಬುದು ದೇವಿ ಅವರ ಕನಸಾಗಿತ್ತು. ಅವರ ಆಯ್ದ ಬರಹಗಳ (ಪ್ರೊ. ರಾಜೇಂದ್ರ ಚೆನ್ನಿ ಅವರ ಮಾತುಗಳಲ್ಲಿ) ‘ಮಾಂತ್ರಿಕ ಅನುವಾದ’ ಮಾಡಿದ ಡಾ.ಎಂ.ಜಿ ಹೆಗಡೆ ಅದನ್ನು “ಮಹಾಭಾರತ : ಭೂಮಕಾವ್ಯ ಮತ್ತು ಭಾರತರಾಷ್ಟç” ಎಂಬ ಅಪ್ಪಟ ಕನ್ನಡದ ಕೃತಿಯಾಗಿಸಿದ್ದಾರೆ. ಈ ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ.
ಈ ಪುಸ್ತಕವನ್ನು ಖ್ಯಾತ ವಿಮರ್ಶಕ. ಚಿಂತಕ ಪ್ರೊ.ಸಿ.ಎನ್.ರಾಮಚಂದ್ರನ್ ಅವರು ಇದೇ ಶನಿವಾರ ಮಾರ್ಚ್ 19ರಂದು ಬಿಡುಗಡೆ ಮಾಡಿ, ಅದರ ವಿಮರ್ಶಾತ್ಮಕ ಪರಿಚಯ ಮಾಡಿಕೊಡಲಿದ್ದಾರೆ.

ಈ ಸಮಾರಂಭ ಬೆಂಗಳೂರಿನ ಎನ್.ಆರ್.ಕಾಲೊನಿಯ 3ನೆಯ ಮುಖ್ಯ ರಸ್ತೆಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ಅಂದು ಪುಸ್ತಕ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಪ್ರೊ. ಗಣೇಶ ದೇವಿ, ಡಾ.ಎಂ.ಜಿ ಹೆಗಡೆ ಯವರು ಉಪಸ್ಥಿತರಿದ್ದು ಸಂವಾದದಲ್ಲಿ ಭಾಗವಹಿಸುತ್ತಾರೆ.

ಮರುದಿನ (ಮಾರ್ಚ್ 20, 11.30 ಬೆಳಿಗ್ಗೆ) ರಂಗಶಂಕರದಲ್ಲಿ Celebrating Books ಕಾರ್ಯಕ್ರಮದ ಭಾಗವಾಗಿ ಈ ಪುಸ್ತಕದ ಕುರಿತು ಸಂವಾದವಿರುತ್ತದೆ. ಅಲ್ಲೂ ಈ ಪುಸ್ತಕ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ.