
ಉಮರ್ ಖಯ್ಯಾಮನ ರೂಬಾಯತುಗಳನ್ನು ಡಿವಿಜಿ ಕನ್ನಡಕ್ಕೆ ತಂದಿದ್ದರು. ಕೆಲವು ವರುಷಗಳ ಹಿಂದೆ ಶಾ. ಬಾಲೂರಾವ್ ಕೂಡ ಅವನ್ನು ಅನುವಾದಿಸಿದ್ದರು. ಇದೀಗ ಅವು ಜಗದೀಶ್ ಕೊಪ್ಪ ಅನುವಾದದಲ್ಲಿ ಮತ್ತೆ ಕನ್ನಡಕ್ಕೆ ಕಾಲಿಟಿವೆ.
ಖಯ್ಯಾಮ್ ಕವಿತೆಗಳ ಇಂಗ್ಲೀಷ್ ಅನುವಾದಗಳ ಪೈಕಿ ಅತ್ಯುತ್ತಮ ಎಂದು ಕರೆಸಿಕೊಳ್ಳುವುದು ಪಿಟ್ ಜೆರಾಲ್ಡ್ ಅವರ ಭಾಷಾಂತರ. ಡಿ.ವಿ.ಜಿ ಮತ್ತು ಬಾಲೂರಾವ್ ಕೂಡ ಅದನ್ನೇ ಇಟ್ಟುಕೊಂಡು ಕವಿತೆಗಳನ್ನು ಅನುವಾದ ಮಾಡಿದ್ದರು. ಜಗದೀಶ್ ಕೂಡ ಅದನ್ನೇ ಮುಂದಿಟ್ಟುಕೊಂಡಿದ್ದಾರೆ.
There was the Door to which I found no Key;
There was the Veil through which I might not see:
Some little talk awhile of ME and THEE
There was-and then no more of THEE and ME.
ಖಯ್ಯಾಮನ ಈ ಜನಪ್ರಿಯ ರೂಬಾಯತನ್ನು ಡಿವಿಜಿ ಹೀಗೆ ಅನುವಾದಿಸಿದ್ದರು:
ಹಿಂದೊಂದು ಬಾಗಿಲ್; ಆ ಬೀಗಕ್ಕೆ ಕೈ ಕೈಯಿಲ್ಲ.
ಮುಂದೊಂದು ತೆರೆ; ಅದನ್ನೆತ್ತಿ ನೋಡಲಳವಲ್ಲ.
ಈ ಎಡೆಯೊಳೊಂದೆರಡು ದಿನ ನಾನು ನೀನೆಂದು
ಹರಟುವೆವು; ಬಳಿಕಿಲ್ಲ, ನಾನು ನೀನುಗಳು
ಆ ಕಾಲಕ್ಕೊಪ್ಪುವ ಭಾಷೆಗೆ ತಕ್ಕಂತೆ ಡಿವಿಜಿ ಅನುವಾದಿಸಿದ್ದರೆ, ಆಮೇಲೆ ಅದನ್ನು ಶಾ. ಬಾಲೂರಾವ್ ಲಯವನ್ನು ಬಿಟ್ಟು ಅರ್ಥವನ್ನಷ್ಟೇ ಉಳಿಸಿಕೊಂಡು ಕನ್ನಡಕ್ಕೆ ತಂದರು. ಇದೀಗ ಕೊಪ್ಪ ಅವರ ಅನುವಾದ ಹೀಗಿದೆ:
ಸಖಿ, ಅಲ್ಲೊಂದು ಮರವಿರಲಿ
ಆ ಮರದಡಿಯಲ್ಲಿ
ಒಂದಿನಿತು ರೊಟ್ಟಿ
ಬಟ್ಟಲು ತುಂಬ ಮದ್ಯ
ಜೊತೆಗೆ ನೀನು
ನಿನ್ನ ಹಾಡುಗಳ ಅನುರಣಗಳಿರಲಿ
ಇವಿಷ್ಟು ಸಾಕು
ಸ್ವರ್ಗವಾದರೂ ಏಕೆ ಬೇಕು?
ಅನುರಣವೋ ಅನುರಣನವೋ ಎಂಬ ಜಿಜ್ಞಾಸೆ ಹಾಗೇ ಉಳಿದುಕೊಳ್ಳುತ್ತದೆ.
ಶೀರ್ಷಿಕೆ: ಉಮರ್ ಖಯ್ಯಾಮನ ಪದ್ಯಗಳು ಲೇಖಕರು: ಎನ್.ಜಗದೀಶ್ ಕೊಪ್ಪ ಪ್ರಕಾಶಕರು: ಲಡಾಯಿ ಪ್ರಕಾಶನ ಪುಟಗಳು:80 ಬೆಲೆ:ರೂ.50/-
ಕೃಪೆ : ಕನ್ನಡ ಪ್ರಭ
Filed under: ಕಾವ್ಯ-ಕವನ | Tagged: ಉಮರ್ ಖಯ್ಯಾಮನ ಪದ್ಯಗಳು, ಎನ್.ಜಗದೀಶ್ ಕೊಪ್ಪ, ಕನ್ನಡ ಪ್ರಭ, ಲಡಾಯಿ ಪ್ರಕಾಶನ | 2 Comments »