ಸಾವರ್ಕರ್ ಕುರಿತಾದ ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ ಕಾರ್ಯಕ್ರಮಕ್ಕೆ ಆಹ್ವಾನ

ತಡಗಡಲೆ ಸುರೇಂದ್ರರಾವ್ ಅನುವಾದಿಸಿದ ಡಾ.ಶಂಸುಲ್ ಇಸ್ಲಾಂ ಬರೆದಿರುವ ವಿ.ಡಿ.ಸಾವರ್ಕರ್ ಕುರಿತಾದ ಪುಸ್ತಕದ ಬಿಡುಗಡೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ತಮಗೆಲ್ಲಾ ಸ್ವಾಗತ.

ಮತೀಯ ಪ್ರಜಾಪ್ರಭುತ್ವ ಮತ್ತು ಸೆಕ್ಯುಲರ್ ಪ್ರಜಾಪ್ರಭುತ್ವ ಅನ್ನುವ ವಿಷಯದ ಮೇಲೆ ವಿಚಾರ ಸಂಕಿರಣದ ಸಂದರ್ಭದಲ್ಲಿ ಡಾ.ಶಂಸುಲ್ ಇಸ್ಲಾಂ ಬರೆದ ತಡಗಡಲೆ ಸುರೇಂದ್ರರಾವ್ ಅನುವಾದಿಸಿದ `ವಿ.ಡಿ.ಸಾವರ್ಕರ್ 7 ಮಿಥ್ಯೆಗಳು’ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸ್ವತಃ ಡಾ.ಶಂಸುಲ್ ಇಸ್ಲಾಂ ಅವರು ತಮ್ಮ ವಿಚಾರ ಮಂಡಿಸಲಿದ್ದಾರೆ.

ತಾವೆಲ್ಲಾ ವಿಚಾರಸಂಕಿರಣದಲ್ಲಿ ಭಾಗವಹಿಸಿ ಈಗಾಗಲೇ ತಿಳಿದಿರುವ ವಿಚಾರಗಳನ್ನು ಮಂಥಿಸಿ ಹೊಸದಾದ ಕೆಲವು ವಿಚಾರಗಳನ್ನು ತಿಳಿದುಕೊಳ್ಳಲು ತಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದಾರೆ `ಕ್ರಿಯಾ ಮಾಧ್ಯಮ ಪ್ರೈ.ಲಿ.’ ಬಳಗ

ಶೀರ್ಷಿಕೆ: ವಿ.ಡಿ.ಸಾವರ್ಕರ್ ಏಳು ಮಿಥ್ಯೆಗಳು; ಲೇಖಕರು:ಡಾ.ಶಂಸುಲ್ ಇಸ್ಲಾಂ; ಅನುವಾದಕರು:ತಡಗಡಲೆ ಸುರೇಂದ್ರರಾವ್; ಪ್ರಕಾಶನ : ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:163 ಬೆಲೆ:ರೂ.180/- ಪ್ರಕಟಣಾ ವರ್ಷ:2023

https://maps.app.goo.gl/7T16A5QSvTbeZ9mh8

ನಿಮ್ಮ ಟಿಪ್ಪಣಿ ಬರೆಯಿರಿ